AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸಮಸ್ಯೆಗಳಿಗೆ ಅಮೃತ ಈ ಅಮೃತ ಬಳ್ಳಿ!

ಪ್ರಕೃತಿಯು ನಮಗೆ ನೈಸರ್ಗಿಕವಾಗಿ ರೋಗವನ್ನು ಶಮನ ಮಾಡುವ ಗುಣ ಹೊಂದಿರುವ ಸಸ್ಯಗಳನ್ನು ನೀಡಿವೆ. ಹೀಗಾಗಿ ನಮ್ಮ ಸುತ್ತಮುತ್ತಲಿನಲ್ಲಿರುವ ಮರ, ಗಿಡ, ಸಸ್ಯಗಳು ರೋಗ ನಿರೋಧಕಗುಣವನ್ನು ಹೊಂದಿದ್ದು, ಅಂತಹ ಸಸ್ಯದ ಸಾಲಿಗೆ ಅಮೃತ ಬಳ್ಳಿ ಕೂಡ ಸೇರುತ್ತವೆ. ಅಮೃತಬಳ್ಳಿಯ ಎಲೆ, ಕಾಂಡ, ಬೇರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಅಮೃತ ಬಳ್ಳಿಯಿಂದ ತಯಾರಿಸಿದ ಮನೆ ಮದ್ದು ನಾನಾ ರೋಗಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಅಮೃತ ಈ ಅಮೃತ ಬಳ್ಳಿ!
ಸಾಯಿನಂದಾ
| Edited By: |

Updated on: Jan 31, 2024 | 1:57 PM

Share

ಮನೆಯಂಗಳದಲ್ಲಿ ಬೆಳೆಯಬಹುದಾದ ಔಷಧೀಯ ಬಳ್ಳಿಗಳಲ್ಲಿ ಅಮೃತ ಬಳ್ಳಿ ಕೂಡ ಒಂದು. ಆಯುರ್ವೇದದಲ್ಲಿ ಈ ಅಮೃತ ಬಳ್ಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಇದರಲ್ಲಿ ಎಲೆ, ಕಾಂಡ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ. ಈ ಬಳ್ಳಿಯು ಕಹಿ ಹಾಗೂ ಒಗರು ರಸವನ್ನು ಹೊಂದಿದ್ದು, ಆರೋಗ್ಯ ಸಮಸ್ಯೆಗಳಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ಹಳ್ಳಿಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿಯಿಂದ ಮನೆ ಮದ್ದನ್ನು ತಯಾರಿಸಿ ಬಳಸಲಾಗುತ್ತದೆ.

ಅಮೃತ ಬಳ್ಳಿಯ ವಿವಿಧ ಮನೆ ಮದ್ದುಗಳು

* ಒಂದು ಹಿಡಿ ಅಮೃತಬಳ್ಳಿಯನ್ನು ಜಜ್ಜಿ ರಸ ತೆಗೆದು, ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಈ ನೀರು ಕುದಿದು ಒಂದು ಲೋಟಕ್ಕೆ ಇಳಿದ ಮೇಲೆ ಅದನ್ನು ಶೋಧಿಸಿ ದಿನಕ್ಕೆ ಮೂರು ಬಾರಿ ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಜ್ವರ ನಿವಾರಣೆಯಾಗುತ್ತದೆ.

* ಅಮೃತ ಬಳ್ಳಿಯ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಕಷಾಯ ಮಾಡಿ ದಿನಕ್ಕೆರಡು ಬಾರಿ ಕುಡಿದರೆ ಬೆನ್ನುನೋವು ಕಡಿಮೆಯಾಗುತ್ತದೆ.

* ಎರಡು ಚಮಚ ಅಮೃತಬಳ್ಳಿಯ ಚೂರ್ಣಕ್ಕೆ, ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ತಯಾರಿಸಿ, ಪ್ರತಿದಿನ ಎರಡು ಹೊತ್ತು ಕುಡಿದರೆ ಕೀಲು ನೋವು ಗುಣಮುಖವಾಗುತ್ತದೆ.

* ಒಂದು ಹಿಡಿ ಅಮೃತ ಬಳ್ಳಿಯನ್ನು 2 ಲೋಟ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಅರ್ಧ ಚಮಚ ಗುಗ್ಗುಳವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಸಂಧಿವಾತ ನಿವಾರಣೆಯಾಗುತ್ತದೆ.

* ಅಮೃತಬಳ್ಳಿಯನ್ನು ಜಜ್ಜಿ ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದು ಅರ್ಧ ಲೋಟಕ್ಕೆ ಇಳಿದ ಮೇಲೆ ಅದಕ್ಕೆ ಅರ್ಧಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಸಂಧಿವಾತ, ಕಾಲು ನೋವು ನಿವಾರಣೆಯಾಗುತ್ತದೆ.

* ಮೂರು ಚಮಚದಷ್ಟು ಅಮೃತಬಳ್ಳಿ ರಸಕ್ಕೆ ಒಂದು ಚಮಚ ತುಪ್ಪ ಸೇರಿಸಿ ಸೇವಿಸಿದರೆ ಸಂಧಿವಾತ ದೂರವಾಗುತ್ತದೆ.

* ಅಮೃತ ಬಳ್ಳಿಯ ಪುಡಿ ಒಣಶುಂಠಿಯ ಪುಡಿ ಮತ್ತು ಹಿಪ್ಪಲಿಯ ಪುಡಿಯನ್ನು ಬೆರೆಸಿ ಕುದಿಸಬೇಕು. ಆ ಬಳಿಕ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ಅಗ್ನಿಮಾಂದ್ಯ ಸಮಸ್ಯೆಯು ನಿವಾರಣೆಯಾಗುತ್ತದೆ.

* ಒಂದು ಹೊತ್ತಿಗೆ ಮೂರು ಚಮಚ ಅಮೃತಬಳ್ಳಿ ರಸವನ್ನು ದಿನವೂ ಸೇವಿಸುತ್ತಾ ಇದ್ದರೆ ಕುಷ್ಠ ರೋಗವು ನಿವಾರಣೆಯಾಗುತ್ತದೆ.

* ಅಮೃತಬಳ್ಳಿಯ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ತಲೆ ನೋವಿನ ಸಮಸ್ಯೆಯು ದೂರವಾಗುತ್ತದೆ.

* ಅಮೃತ ಬಳ್ಳಿ ಚೂರ್ಣ ಮತ್ತು ಒಂದೆಲಗದ ಚೂರ್ಣಗಳನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಬೇಕು. ಈ ನೀರನ್ನು ದಿನಕ್ಕೆರಡು ಬಾರಿ ಒಂದು ತಿಂಗಳ ಕಾಲ ಕುಡಿದರೆ ಮಾನಸಿಕ ಉದ್ವೇಗವು ಕಡಿಮೆಯಾಗುತ್ತದೆ.

* ಅಮೃತಬಳ್ಳಿಯ ರಸ, ಗೋಧಿ ಹುಲ್ಲಿನ ಜ್ಯೂಸ್, ತುಳಸಿ ಎಲೆಯ ರಸ, ಬೇವಿನ ಎಲೆ ರಸ ಇವುಗಳನ್ನು ಸೇರಿಸಿ ದಿನಕ್ಕೆ ಮೂರು ಸಲದಂತೆ ಒಂದು ತಿಂಗಳ ಕಾಲ ಸೇವಿಸಿದರೆ ಕ್ಯಾನ್ಸರ್ ರೋಗ ವಾಸಿಯಾಗುತ್ತದೆ.

ಇದನ್ನೂ ಓದಿ: ತಲೆ ಹೊಟ್ಟಿನಿಂದಾಗಿ ಕಿರಿಕಿರಿ ಅನುಭವಿಸುತ್ತಿದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್

* ಅರ್ಧ ಬಟ್ಟಲು ಹಾಲಿಗೆ ಅರ್ಧ ಚಮಚ ಅಮೃತಬಳ್ಳಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಕಣ್ಣು ಹುರಿ ಸಮಸ್ಯೆಯು ಶಮನವಾಗುತ್ತದೆ.

* ಎರಡು ಚಮಚ ಅಮೃತಬಳ್ಳಿ ರಸಕ್ಕೆ ಅರ್ಧ ಚಮಚ ತ್ರಿಫಲಾ ಚೂರ್ಣವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

* ಒಂದು ಚಮಚ ಅಮೃತಬಳ್ಳಿ ರಸಕ್ಕೆ ಅರ್ಧ ಚಮಚ ಹಸುವಿನ ತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಅತಿ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ