Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ

ಪ್ರತಿಯೊಂದು ಹಬ್ಬಕ್ಕೂ ಕೂಡ ಸಿಹಿ ತಿನಿಸು ಇರಲೇಬೇಕು. ಅದರಲ್ಲೂ ಯುಗಾದಿ ಹಬ್ಬಕ್ಕೆ ಹೋಳಿಗೆ (ಒಬ್ಬಟ್ಟು) ಬೇಕೇಬೇಕು. ಹೆಚ್ಚಿನವರು ಹಬ್ಬದ ಗಡಿಬಿಡಿಯಲ್ಲಿ ಟೈಮ್‌ ಇಲ್ಲ ಅನ್ನೋ ಕಾರಣಕ್ಕೆ ರೆಡಿಮೆಡ್‌ ಹೋಳಿಗೆಯನ್ನು ಖರೀದಿ ಮಾಡುತ್ತಾರೆ. ಇದರ ಬದಲು ಒಂಚೂರು ಟೈಮ್‌ ಮಾಡ್ಕೊಂಡು ಮನೆಯಲ್ಲಿಯೇ ರುಚಿಕರ ಮತ್ತು ಆರೋಗ್ಯಕರವಾದ ಗೋಧಿ ಹಿಟ್ಟಿನ ಕಾಯಿ ಒಬ್ಬಟ್ಟು ತಯಾರಿಸಬಹುದು. ಹೆಲ್ತಿ ಕಾಯಿ ಹೋಳಿಗೆಯ ಈ ಸಿಂಪಲ್‌ ರೆಸಿಪಿ ಇಲ್ಲಿದೆ.

Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ
ಕಾಯಿ ಒಬ್ಬಟ್ಟು
Image Credit source: Social Media

Updated on: Mar 18, 2026 | 5:02 PM

ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ.  ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ ಮಾಡಲಾಗಿತ್ತದೆ.  ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಆರೋಗ್ಯಕರ ರೀತಿಯಲ್ಲಿ ಒಬ್ಬಟ್ಟು ಮಾಡಬೇಕು ಅಂತಿದ್ರೆ,  ಕಾಯಿ ಒಬ್ಬಟ್ಟನ್ನು ತಯಾರಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ.

ಯುಗಾದಿ ಹಬ್ಬಕ್ಕೆ ಮಾಡಿ ಕಾಯಿ ಒಬ್ಬಟ್ಟು:

ಯುಗಾದಿ ಹಬ್ಬದಂದು ಬೇವು ಬೆಲ್ಲ ಎಷ್ಟು ಮುಖ್ಯವೋ ಒಬ್ಬಟ್ಟು ಕೂಡ ಅಷ್ಟೇ ಮುಖ್ಯ. ಈ ಬಾರಿಯ ಹಬ್ಬಕ್ಕೆ ಮೈದಾ ಹಿಟ್ಟನ್ನು ಬಳಸಿ ಹೋಳಿಗೆ ತಯಾರಿಸುವ ಬದಲು, ಗೋಧಿ ಹಿಟ್ಟಿನಿಂದ ಆರೋಗ್ಯಕರ ಕಾಯಿ ಒಬ್ಬಟ್ಟನ್ನು ತಯಾರಿಸಿ. ಈ ಹೆಲ್ತಿ ರೆಸಿಪಿಯನ್ನು poojaga_food ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಕಾಯಿ ಒಬ್ಬಟ್ಟು ಮಾಡಲು ಬೇಕಾಗಿರುವ ಸಾಮಾಗ್ರಿಗಳು:

1 ½ ಕಪ್‌ ಗೋಧಿ ಹಿಟ್ಟು, ಅರಶಿನ, ಉಪ್ಪು, ಎಣ್ಣೆ, 1 ½ ಕಪ್‌ ಬೆಲ್ಲ, 2 ½ ಕಪ್‌ ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ, ವೈಜ್ಞಾನಿಕ ಮಹತ್ವವೇನು?

ಕಾಯಿ ಒಬ್ಬಟ್ಟು ಮಾಡುವ ವಿಧಾನ:

  • ಒಂದು ಪಾತ್ರೆಗೆ ಗೋಧಿ ಹಿಟ್ಟು, ಸ್ವಲ್ಪ ಅರಶಿನ ಪುಡಿ, ಉಪ್ಪು, ತುಪ್ಪ ಹಾಕಿ ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಮೃದುವಾದ ಕಣಕ ತಯಾರಿಸಿ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ 1 ರಿಂದ 2 ಗಂಟೆಗಳ ಕಾಲ ನೆನೆಸಿಡಿ.
  • ನಂತರ ಮಿಕ್ಸಿ ಜಾರ್‌ಗೆ ಬೆಲ್ಲ, ತೆಂಗಿನಕಾಯಿ ತುರಿಯನ್ನು ಹಾಕಿ ಈ ಮಿಶ್ರಣವನ್ನು ರುಬ್ಬಿಕೊಳ್ಳಿ.
  • ಬಳಿಕ ಒಲೆಯ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ತುಪ್ಪ ಸೇರಿಸಿ, ಪಾತ್ರ ಕಾದ ಬಳಿಕ ರುಬ್ಬಿಟ್ಟ ಬೆಲ್ಲ ತೆಂಗಿನಕಾಯಿ ಹೂರಣ ಮಿಶ್ರಣವನ್ನು ಸೇರಿಸಿ ಹುರಿಯಿರಿ, ಕೊನೆಯಲ್ಲಿ ಸ್ಪಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿ ಉಂಡೆ ಕಟ್ಟಿಕೊಳ್ಳಿ.
  • ಈಗ ಮೊದಲೇ ತಯಾರಿಸಿಟ್ಟ ಗೋಧಿ ಹಿಟ್ಟಿನ ಕಣಕವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಹೂರಣವನ್ನು ತುಂಬಿಸಿ, ಹೋಳಿಗೆ ಮಿಶ್ರಣವನ್ನು ಚೆನ್ನಾಗಿ ತಟ್ಟಿಕೊಳ್ಳಿ.
  • ಕೊನೆಯಲ್ಲಿ ಒಂದು ತವಾಗೆ ತುಪ್ಪನ್ನು ಸೇರಿಸಿ ತಯಾರಾದ ಹೋಳಿಗೆಯನ್ನು ಬೇಯಿಸಿದರೆ, ರುಚಿಕರ, ಆರೋಗ್ಯಕರ ಒಬ್ಬಟ್ಟು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us