Ugadi 2026
ಯುಗಾದಿ ಎಂಬುದು ಹಿಂದೂ ಕ್ಯಾಲೆಂಡರ್ (ಚಾಂದ್ರಮಾನ ಪಂಚಾಂಗ) ಪ್ರಕಾರ ಹೊಸ ವರ್ಷ ಆರಂಭದ ದಿನ. ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ಸಾನ್ಯವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿ ಆಚರಣೆ ಮಾಡಲಾಗುತ್ತದೆ. ಇದು ಪ್ರಮುಖ ಹಿಂದೂ ಹಬ್ಬವಾಗಿದ್ದು, ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಬರುತ್ತದೆ. ‘ಯುಗಾದಿ’ ಎಂಬ ಹೆಸರು ಸಂಸ್ಕೃತ ಪದಗಳಾದ ‘ಯುಗ’ ಮತ್ತು ‘ ಆದಿ (ಆರಂಭ)’ ದಿಂದ ಬಂದಿದೆ, ಇದು ಹೊಸ ಯುಗದ ಆರಂಭ ಅಥವಾ ಹೊಸದರ ಆರಂಭ ಎಂಬುದನ್ನು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಹೊಸ ಸಂವತ್ಸರದ ಆರಂಭವೇ ಯುಗಾದಿ. ಕರ್ನಾಟಕದಲ್ಲಿ ಬೇವು-ಬೆಲ್ಲ ಹಂಚುವ ಮೂಲಕ ಯುಗಾದಿಯ ಆಚರಣೆ ಚಾಲ್ತಿಯಲ್ಲಿದೆ. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಈ ಹಬ್ಬವನ್ನು ಗುಡಿ ಪಾಡ್ವ ಎಂದು ಕರೆಯಲಾಗುತ್ತದೆ. ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸೌರಮಾನ ಯುಗಾದಿ ಆಚರಣೆಯಲ್ಲಿದ್ದು, ವಿಷು ಹಬ್ಬ ಎಂದು ಆಚರಿಸಲಾಗುತ್ತದೆ.
Ugadi 2026: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಹಿಂದೂ ನಂಬಿಕೆಯಂತೆ ಇದು ಸೃಷ್ಟಿಯ ಆರಂಭ ಹಾಗೂ ಹೊಸ ವರ್ಷದ ದಿನ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ, ತೋರಣ ಕಟ್ಟಿ, ಅಭ್ಯಂಜನ ಸ್ನಾನ ಮಾಡಿ, ದೈವಿಕ ಆರಾಧನೆ ಮಾಡುವುದು ಶುಭ. ಸಾಲ ಮಾಡುವುದು, ಜಗಳ, ಮಾಂಸಾಹಾರ ತ್ಯಜಿಸಿ. ಬೇವು-ಬೆಲ್ಲ ಸವಿಯುವ ಮೂಲಕ ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸಿ.
- Akshatha Vorkady
- Updated on: Mar 12, 2026
- 12:40 pm
Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
2026ರ ಯುಗಾದಿಯ ಪರಾಭವನಾಮ ಸಂವತ್ಸರದಲ್ಲಿ ಮೀನ ರಾಶಿಯವರಿಗೆ ಡಾ. ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ಶನಿ ಸಾಡೇ ಸಾತಿಯ ಮಧ್ಯಭಾಗದಲ್ಲಿದ್ದರೂ ಆತಂಕಪಡುವ ಅಗತ್ಯವಿಲ್ಲ. ಆರ್ಥಿಕ ಪ್ರಗತಿ, ಉದ್ಯೋಗ ಯೋಗವಿದ್ದರೂ ಮಕ್ಕಳ ಚಿಂತೆ, ಅಪವಾದಗಳ ಕುರಿತು ಎಚ್ಚರವಿರಬೇಕು. ಶ್ರೀರಾಮ ಮಂತ್ರ ಜಪ ಮತ್ತು ದಾನ ಧರ್ಮಗಳಿಂದ ಶುಭ ಫಲಗಳ ನಿರೀಕ್ಷೆ ಇದೆ.
- Akshatha Vorkady
- Updated on: Mar 11, 2026
- 4:33 pm
Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
2026ರ ಪರಾಭವನಾಮ ಸಂವತ್ಸರದ ಯುಗಾದಿ ಕುಂಭ ರಾಶಿಯವರಿಗೆ ಉತ್ಸಾಹ ಮತ್ತು ಪ್ರಗತಿಯ ವರ್ಷವಾಗಲಿದೆ ಎಂದು ಡಾ. ಬಸವರಾಜ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸಾಡೆ ಸಾತಿಯ ಕೊನೆಯ ಭಾಗದಲ್ಲಿದ್ದರೂ, ಈ ವರ್ಷದಲ್ಲಿ ಕುಟುಂಬ ಪ್ರಗತಿ, ಆರ್ಥಿಕ ಸುಧಾರಣೆ, ಹೊಸ ಉದ್ಯೋಗಾವಕಾಶಗಳು ಹಾಗೂ ವಿವಾಹ ಯೋಗ ಪ್ರಬಲವಾಗಿವೆ. ಕೆಲವು ಸಣ್ಣ ಆತಂಕಗಳಿದ್ದರೂ, ಶೇ. 70 ಶುಭ ಫಲಗಳಿರುವುದು ವಿಶೇಷ.
- Akshatha Vorkady
- Updated on: Mar 11, 2026
- 3:48 pm
Ugadi Horoscope 2026: ಯುಗಾದಿ ಬಳಿಕ ಈ ರಾಶಿಗೆ ಕೀರ್ತಿ, ಪ್ರತಿಷ್ಠೆ ಮತ್ತು ಅನಿರೀಕ್ಷಿತ ಧನಲಾಭ ಪ್ರಾಪ್ತಿ
2026ರ ಯುಗಾದಿ ಧನುಸ್ಸು ರಾಶಿಯವರಿಗೆ ಶುಭಕರವಾಗಿದ್ದು, ಆದಾಯದಲ್ಲಿ 14 ಪಟ್ಟು ಹೆಚ್ಚಳ ಹಾಗೂ ಉತ್ತಮ ಆರ್ಥಿಕ ಪ್ರಗತಿಯಾಗಲಿದೆ. ಸಂಬಂಧಗಳಲ್ಲಿ ಎಚ್ಚರಿಕೆ ಅಗತ್ಯವಿದ್ದರೂ, ಕೀರ್ತಿ, ಪ್ರತಿಷ್ಠೆ ಮತ್ತು ಅನಿರೀಕ್ಷಿತ ಧನಲಾಭ ಪ್ರಾಪ್ತಿಯಾಗಲಿದೆ. ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಗುತ್ತಿಗೆದಾರರಿಗೆ ವಿಶೇಷ ಲಾಭ. ಗಣೇಶನ ಆರಾಧನೆ ಮತ್ತು ವಿಷ್ಣು ಸಹಸ್ರನಾಮ ಜಪಿಸುವುದರಿಂದ ಹೆಚ್ಚಿನ ಶುಭ ಫಲಗಳನ್ನು ಪಡೆಯಬಹುದು ಎಂದು ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ.
- Akshatha Vorkady
- Updated on: Mar 12, 2026
- 12:26 pm
Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
2026ರ ಪರಾಭವನಾಮ ಸಂವತ್ಸರದ ಯುಗಾದಿಯಲ್ಲಿ ವೃಶ್ಚಿಕ ರಾಶಿಯವರಿಗೆ ಡಾ. ಬಸವರಾಜ ಗುರೂಜಿ ಉತ್ತಮ ಫಲಗಳನ್ನು ಭವಿಷ್ಯ ನುಡಿದಿದ್ದಾರೆ. ಗುರುಬಲದಿಂದ ವೃತ್ತಿ, ಆರ್ಥಿಕ ಸ್ಥಿತಿ ಹಾಗೂ ಕೌಟುಂಬಿಕ ಜೀವನದಲ್ಲಿ ಪ್ರಗತಿ ನಿರೀಕ್ಷಿಸಲಾಗಿದೆ. ವ್ಯಾಪಾರ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಾಕ್ಪಾಟ್ ಯೋಗವಿದ್ದು, ವರ್ಷದ ಒಟ್ಟಾರೆ ಫಲವು ಶೇ. 75ರಷ್ಟು ಶುಭಕರವಾಗಿದೆ.
- Akshatha Vorkady
- Updated on: Mar 10, 2026
- 3:54 pm
Ugadi Horoscope 2026: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ
ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರ ಪರಾಭವನಾಮ ಸಂವತ್ಸರ ಮೇಷ ರಾಶಿಯವರಿಗೆ ಬಹಳ ಅನುಕೂಲಕರವಾಗಿದೆ. ಆರ್ಥಿಕವಾಗಿ ಉತ್ತಮವಾಗಿದ್ದು, ಹೊಸ ವ್ಯಾಪಾರ ಮತ್ತು ಆಸ್ತಿ ಯೋಗವಿದೆ. ಆದರೂ ಆರೋಗ್ಯದ ಬಗ್ಗೆ ಎಚ್ಚರಿಕೆ ಹಾಗೂ ಸಂಬಂಧಗಳಲ್ಲಿ ಜಾಗ್ರತೆ ಅಗತ್ಯ. ರಾಶ್ಯಾಧಿಪತಿಯಾದ ಕುಜನು ರಾಜ ಮತ್ತು ಮಂತ್ರಿಯಾಗಿರುವುದರಿಂದ ಸಾಕಷ್ಟು ಅದೃಷ್ಟಗಳು ಕೂಡಿಬರಲಿವೆ.
- Akshatha Vorkady
- Updated on: Mar 8, 2026
- 5:06 pm
Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಸಿಂಹ ರಾಶಿಗೆ ಈ ವರ್ಷ ಹೇಗಿರಲಿದೆ?
ಡಾ. ಬಸವರಾಜ ಗುರೂಜಿಯವರು 2026ರ ಯುಗಾದಿಯ ಸಿಂಹ ರಾಶಿ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವರ್ಷದಲ್ಲಿ ಗ್ರಹ ಸಂಚಾರ, ಆದಾಯ-ಖರ್ಚು, ಆರೋಗ್ಯ, ಶಿಕ್ಷಣ, ವೃತ್ತಿ, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿ ಕುರಿತು ಮಾಹಿತಿ ನೀಡಲಾಗಿದೆ. ಅಷ್ಟಮ ಶನಿಯ ಪ್ರಭಾವ, ಮಕ್ಕಳ ಯೋಗ, ಮಹಿಳೆಯರಿಗೆ ಅದೃಷ್ಟ ಹಾಗೂ ಕೆಲವು ನಿರ್ದಿಷ್ಟ ಪರಿಹಾರಗಳ ಬಗ್ಗೆಯೂ ವಿವರ ನೀಡಲಾಗಿದೆ.
- Akshatha Vorkady
- Updated on: Mar 8, 2026
- 1:16 pm
Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಕಟಕ ರಾಶಿಗೆ ಈ ವರ್ಷ ಹೇಗಿರಲಿದೆ?
2026ರ ಪರಾಭವ ನಾಮ ಸಂವತ್ಸರದಲ್ಲಿ ಕಟಕ ರಾಶಿಯವರಿಗೆ ಗುರು, ಶನಿ, ರಾಹು, ಕೇತು ಗ್ರಹಗಳ ಸಂಚಾರ ಪ್ರಭಾವ ಬೀರಲಿದೆ. ಆದಾಯ ಉತ್ತಮವಾಗಿದ್ದರೂ, ಸ್ವಲ್ಪ ಹೋರಾಟದ ಬದುಕು ಎದುರಾಗಲಿದೆ. ಮಹಿಳೆಯರು, ರೈತರು, ಸಣ್ಣ ವ್ಯಾಪಾರಿಗಳಿಗೆ ಶುಭಫಲಗಳಿದ್ದು, ಶಿವಾರಾಧನೆ ಮತ್ತು ಸೇವಾ ಕಾರ್ಯಗಳು ಉತ್ತಮ ಪರಿಹಾರಗಳಾಗಿವೆ.
- Akshatha Vorkady
- Updated on: Mar 8, 2026
- 1:09 pm
Aquarius Ugadi Horoscope 2025: ಕುಂಭ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ವಿಶ್ವಾವಸು ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
- Swathi NK
- Updated on: Apr 1, 2025
- 2:27 pm
Capricorn Ugadi Horoscope 2025: ಮಕರ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
2025ರ ಮಾರ್ಚ್ 30ರ ಭಾನುವಾರದ ದಿನ ಚಾಂದ್ರಮಾನ ಯುಗಾದಿ. ವಿಶ್ವಾವಸು ಸಂವತ್ಸರ ಶುರುವಾಗುವ ದಿನ ಇದಾಗಿರುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ನೀಡಲಾಗಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
- Swathi NK
- Updated on: Apr 1, 2025
- 1:02 pm
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನಿನ್ನೆ(ಮಾರ್ಚ್ 30) ಹಿಂದೂಗಳ ಹೊಸ ವರ್ಷ ಯುಗಾದಿ ಮುಗಿದಿದೆ. ಇದರ ಬೆನ್ನಲ್ಲೆ ಇಂದು(ಮಾರ್ಚ್ 31) ಮುಸ್ಲಿಮರು ಪವಿತ್ರ ಹಬ್ಬ ರಂಜಾನ್ ಇದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮುಸ್ಲಿಂ ಸಮುದಾಯದವರು ಬೆಳಗ್ಗೆಯೇ ಪ್ರಾರ್ಥನೆ ಮಾಡಿ ಸಿಹಿ ಅಡುಗೆ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದರ ಮಧ್ಯೆ ಕೆಲ ಮುಸ್ಲಿಂ ಯುವಕರು ದೇವಾಲಯದಲ್ಲಿ ಭಕ್ತಿಗೀತೆಯ ಸೌಂಡ್ ಕಡಿಮೆ ಮಾಡುವಂತೆ ಅವಾಜ್ ಹಾಕಿರುವ ಘಟನೆ ನಡೆದಿದೆ.
- Ramesh B Jawalagera
- Updated on: Mar 31, 2025
- 5:25 pm
ಕರ್ನಾಟಕದಲ್ಲಿ ಯುಗಾದಿಯಂದೇ ದುರಂತಗಳ ಸಾಲು: 8 ಜನರು ದುರ್ಮರಣ, ಕಣ್ಣೀರಿಟ್ಟ ಸಂಬಂಧಿಕರು
ನಿನ್ನೆಯ ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಕರ್ನಾಟಕದಲ್ಲಿ ಭೀಕರ ದುರಂತಗಳು ಸಂಭವಿಸಿವೆ. ನದಿಗಳಲ್ಲಿ ಮುಳುಗಿ ಮೂವರು ಬಾಲಕರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳಲ್ಲಿಯೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸದ್ಯ ಹಬ್ಬದ ಸಂಭ್ರಮದಲ್ಲಿದ್ದ ಜಾಗದಲ್ಲಿ ಸೂತಕ ಛಾಯೆ ಆವರಿಸಿದೆ.
- Vinayak Hanamant Gurav
- Updated on: Mar 31, 2025
- 10:25 am