AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s day : ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ

Valentine's day : ನಮ್ಮ ಬಸವನಗುಡಿ ಬ್ರಾಂಚ್ ನ ನಿಷ್ಠಾವಂತ ಉದ್ಯೋಗಿ ಶ್ಯಾಮ್ ರವರು ಆಕ್ಸಿಡೆಂಟ್‌ನಿಂದಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ" ಎಂದು ಹೇಳಿ ಅವರ ಕೈಯಲ್ಲಿದ್ದ ದಿನಪತ್ರಿಕೆಯೊಂದನ್ನು ತೋರಿಸಿದರು. ಅಡಿಯಿಂದ ಮುಡಿಯವರೆಗಿನ ನನ್ನ ರಕ್ತಸಂಚಾರ ನಿಂತಂತೆ ಭಾಸವಾಯ್ತು. ಯಾರಲ್ಲಿ ನನ್ನ ಪ್ರೇಮನಿವೇದನೆ ಮಾಡಬೇಕೇಂದುಕೊಂಡಿದ್ದೆನೋ ಅದೇ ವ್ಯಕ್ತಿಯ ಫೋಟೋವನ್ನು ನಾನು ಕಂಡದ್ದು. ಸತ್ಯವನ್ನು ಅರಗಿಸಿಕೊಳ್ಳಲಾಗದೆಯೇ ಅಲ್ಲಿಯೇ ಕುಸಿದು ಬಿದ್ದೆ. ಪ್ರೀತಿಯ ಸಂಕೇತವಾಗಿ ಅವನಿಗೆ ಮದುವೆಯ ಮಾಲೆ ಹಾಕಬೇಕಾಗಿದ್ದ ನಾನು, ಅವನ ಶವಕ್ಕೆ ಮಾಲೆ ಹಾಕುವ ಸ್ಥಿತಿಗೆ ತಲುಪಿದ್ದೆ. ಕೊನೆಗೂ ಹೇಳಲಾಗದೆಯೇ ಅವನೊಂದಿಗೇ ಸತ್ತುಹೋದ ಈ ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ.

Valentine's day : ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 14, 2022 | 8:37 AM

Share

ಯಾಕಾದರೂ ಈ ಸೋಮವಾರ ಎನ್ನುವುದು ಬರುತ್ತೋ ಎಂದು ಮನಸ್ಸಿನಲ್ಲಿಯೇ ಶಾಪ ಹಾಕಿಕೊಳ್ಳುತ್ತ ಎದ್ದೇಳುವಷ್ಟರಲ್ಲಿ ಬೆಳಿಗ್ಗೆ 6.30 ಆಗಿತ್ತು. ಎಂದಿನ ದಿನಚರಿಯನ್ನೆಲ್ಲ ಮುಗಿಸಿ ಆಫೀಸಿಗೆ ಹೊರಡಲು ತಯಾರಾದೆ. ತಂದೆ ಇಲ್ಲದ ಕಾರಣ ಮನೆಯ ಹಿರಿಮಗಳಾದ ನನಗೆ ಜವಾಬ್ದಾರಿಯ ಮೂಟೆ ಚಿಕ್ಕ ವಯಸ್ಸಿಗೆ ಹೆಗಲೇರಿತ್ತು. ನನ್ನ ಆಸೆ ಕನಸೆಲ್ಲವನ್ನು ಎಂದು ಸಾಕಾರಗೊಳಿಸಿಕೊಳ್ಳುತ್ತೇನೊ ಎಂದು ಯೋಚಿಸುತ್ತಲೇ ನನ್ನ ಮಾಮೂಲಿ ಬಸ್‌ಸ್ಟಾಂಡ್‌ಗೆ ಬಂದು ತಲುಪಿದೆ. ಬೆಂಗಳೂರಿನ ಟ್ರಾಫಿಕ್, ಜನರ ಗೌಜು ಈ ಎಲ್ಲದರ ನಡುವೆಯೂ ನನ್ನ ಮನಸ್ಸು ನಿಶ್ಯಬ್ಧಕ್ಕೆ ಜಾರಿತು. ಜವಾಬ್ದಾರಿಗಳ ಹೊರೆಯಲ್ಲಿ ನನ್ನ ಜೀವನದ ಸುಂದರ ಕ್ಷಣಗಳನ್ನು ಅನುಭವಿಸಲೇ ಇಲ್ಲವಲ್ಲ ಎನ್ನುವುದು ಮನಸ್ಸಿನ ಆಳದಲ್ಲಿ ಕೆದಕಿ-ಕೆದಕಿ ನೋವುಂಟುಮಾಡಲಾರಂಭಿಸಿತು. ಏನಾದರೇನು ಇದೇ ನನ್ನ ಜೀವನದ ನೈಜತೆ ಎಂದು ಅರಿತು ಸುಮ್ಮನೆ ಬಸ್ಸಿನ ದಾರಿಯ ಕಡೆ ಗಮನಹರಿಸಿದೆ. ನನ್ನ ಎದುರು ಬದಿಯ ಬಸ್‌ಸ್ಟಾಂಡ್ ನಲ್ಲಿ ಕಣ್ಣುಹಾಯಿಸಿದರೆ, ಕಂಡದ್ದು ಹತ್ತಾರು ಜನರ ಮಧ್ಯೆಯೂ ಒಬ್ಬನೇ ಗೋಚರಿಸುವಂತಹ ನೀಳ ಕಾಯ, ಗುಂಗುರು ಕೂದಲು, ಯಾವುದೇ ಗಡಿಬಿಡಿಯಿಲ್ಲದೆ ಶಾಂತಚಿತ್ತದಿಂದ ಬಸ್ಸಿಗಾಗಿ ಕಾಯುತ್ತಿದ್ದ ಒಬ್ಬ ಯುವಕ. ಅದೇನೋ ಹೇಳ್ತಾರಲ್ಲ ಲವ್-ಎಟ್-ಫಸ್ಟ್ಸೈಟ್ ಅಂತ ಅದು ನನಗೆ ಅಂದೇ ಆಯಿತು. ಮತ್ತೆ-ಮತ್ತೆ ಅವನನ್ನೇ ನೋಡಬೇಕೆಂಬ ಹಂಬಲ, ಎಷ್ಟು ಬಾರಿ ತಿರುಗಿ ನೋಡಿದರೂ ಕಣ್ಣಿಗೆ ಹಬ್ಬದಂತೆ ಕಾಣುತ್ತಿದ್ದ. ನನ್ನ ಎಲ್ಲ ಚಿಂತೆಯನ್ನು ಅರೆಕ್ಷಣದಲ್ಲಿ ದೂರ ಮಾಡಿಸಿದ ಅವನ ಆಕಾರವೇ ಅಂತದ್ದು. ಯಾರನ್ನು ಬೇಕಾದರು ಸೆಳೆಯುವಂತದ್ದು.

ಹೀಗೆ ನೋಡು-ನೋಡುತ್ತಿದ್ದಂತೆ ನನ್ನ ನೋಟಕ್ಕೆ ಗೋಡೆ ಎಂಬಂತೆ ಅವನ ಬಸ್ ಬಂದು ನಿಂತಿತು. ಅವನು ಹತ್ತಿ ಹೊರಟೇ ಹೋದ. ಅವನಾವ ಯೋಚನೆಯಲ್ಲಿದ್ದನೋ ನನಗದು ತಿಳಿಯದು. ಆದರೆ ಅಂದಿನಿಂದ ಮಾತ್ರ ನನ್ನ ಯೋಚನೆ ಕೇವಲ ಅವನೆಡೆಗೆ ಇತ್ತು. ಸದಾ ನಾಲ್ಕು ಗೆರೆ ಬೀಳುತ್ತಿದ್ದ ನನ್ನ ಹಣೆಯಲ್ಲಿ ಅವನ ನೋಡಿದ ದಿನದಿಂದ ಮಂದಹಾಸ ಎನ್ನುವುದು ಮುಖವನ್ನೇ ಆವರಿಸಿಕೊಂಡಿತ್ತು. ಸೋಮವಾರ ಯಾಕಾಗುತ್ತದೋ ಎಂದು ಶಪಿಸುತ್ತಿದ್ದ ನನಗೆ ಸೋಮವಾರ ಯಾವಾಗಾಗುತ್ತದೋ ಎಂದು ಜಪಿಸುವ ದಿನಗಳು ಪ್ರಾರಂಭವಾದವು. ಅವನನ್ನು ನಿಂತಲ್ಲಿಯೇ ನೋಡುವುದು, ಅವನ ಬರುವಿಕೆಗೆ ರ‍್ಧಗಂಟೆ ಮುಂಚೆಯೇ ಹೋಗಿ ನಿಲ್ಲುವುದು, ಅವನನ್ನು ಮಾತನಾಡಿಸಲೇಬೇಕೆಂದು ಹೊರಟು ನಿಲ್ಲುವುದು, ಆಮೇಲೆ ಧರ‍್ಯ ಸಾಲದೇ ಹಿಂದಿರುಗುವುದು. ಹೀಗೆ ಇದು ನನ್ನ ದಿನಚರಿಯಾಗಿಹೋಗಿತ್ತು.

ಹೀಗಿರುವಾಗ ನನ್ನ ಹುಟ್ಟುಹಬ್ಬದಂದು ಏನಾದರಾಗಲಿ ಇವನನ್ನು ಮಾತನಾಡಿಸಿಯೇ ಸಿದ್ಧ ಎಂದುಕೊಂಡು ದೌಡಾಯಿಸಿ ಬಸ್‌ಸ್ಟಾಂಡ್ ಗೆ ಹೋದರೆ ಅಲ್ಲಿ ನನ್ನ ಆಸೆ ಹುಸಿಯಾಗಿತ್ತು. ನನ್ನ ಮನದರಸ ಆ ದಿನ ಬರಲೇ ಇಲ್ಲ. ನನ್ನ ಮನಸ್ಸಿನ ಸಂಕಟವನ್ನು ಯಾರಲ್ಲಿಯೂ ಹೇಳಲಾಗದೆ ನನ್ನ ಆಫೀಸಿನ ಕಡೆಗೆ ಪಯಣ ಬೆಳೆಸಿ, ಮರುದಿನ ಅವನ ಆಗಮನಕ್ಕೆ ಕಾದು ನಿಂತೆ. ಮತ್ತದೇ ಶೂನ್ಯ ಭಾವ. ಆ ದಿನವೂ ಅವನು ಬರಲೇ ಇಲ್ಲ. ‘ಎಲ್ಲದರೂ ಹೋಗಿರಬೇಕು, ಏನಾದರೂ ಕೆಲಸವಿರಬೇಕು’ ಎಂದು ನನ್ನನು ನಾನೇ ಸಮಾಧಾನ ಪಡಿಸಿಕೊಂಡರೂ, ಏನೋ ಒಂದು ರೀತಿಯ ಅಳಕು ಮನಸ್ಸಿನಾಳದಲ್ಲಿ.

ಹಾಗೆ ಸುಧಾರಿಸಿಕೊಂಡು ಆಫೀಸಿಗೆ ಹೋದರೆ ಅಲ್ಲಿ ನೀರವ ಮೌನ, ಅಲ್ಲಿ ಇಲ್ಲಿ ಗುಸು ಗುಸು ಮಾತು. ನಾನು ಏನಾಯಿತೆಂದು ನನ್ನ ಸಹೋದ್ಯೋಗಿಯ ಬಳಿ ಕೇಳಿದೆ. ಅದಕ್ಕವರು, ” ನಮ್ಮ ಬಸವನಗುಡಿ ಬ್ರಾಂಚ್ ನ ನಿಷ್ಠಾವಂತ ಉದ್ಯೋಗಿ ಶ್ಯಾಮ್ ರವರು ಆಕ್ಸಿಡೆಂಟ್‌ನಿಂದಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ” ಎಂದು ಹೇಳಿ ಅವರ ಕೈಯಲ್ಲಿದ್ದ ದಿನಪತ್ರಿಕೆಯೊಂದನ್ನು ತೋರಿಸಿದರು. ಅಡಿಯಿಂದ ಮುಡಿಯವರೆಗಿನ ನನ್ನ ರಕ್ತಸಂಚಾರ ನಿಂತಂತೆ ಭಾಸವಾಯ್ತು. ಯಾರಲ್ಲಿ ನನ್ನ ಪ್ರೇಮನಿವೇದನೆ ಮಾಡಬೇಕೇಂದುಕೊಂಡಿದ್ದೆನೋ ಅದೇ ವ್ಯಕ್ತಿಯ ಫೋಟೋವನ್ನು ನಾನು ಕಂಡದ್ದು. ಸತ್ಯವನ್ನು ಅರಗಿಸಿಕೊಳ್ಳಲಾಗದೆಯೇ ಅಲ್ಲಿಯೇ ಕುಸಿದು ಬಿದ್ದೆ. ಪ್ರೀತಿಯ ಸಂಕೇತವಾಗಿ ಅವನಿಗೆ ಮದುವೆಯ ಮಾಲೆ ಹಾಕಬೇಕಾಗಿದ್ದ ನಾನು, ಅವನ ಶವಕ್ಕೆ ಮಾಲೆ ಹಾಕುವ ಸ್ಥಿತಿಗೆ ತಲುಪಿದ್ದೆ. ಕೊನೆಗೂ ಹೇಳಲಾಗದೆಯೇ ಅವನೊಂದಿಗೇ ಸತ್ತುಹೋದ ಈ ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ.

ಭಾರತಿ ಹೆಗಡೆ

ಶಿರಸಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ