AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rose Day 2022: ರೋಸ್ ಡೇ ಮಹತ್ವ ಗೊತ್ತಾ? ಪ್ರೇಮಿಸುವ ಮುನ್ನ ತಿಳಿದುಬಿಡಿ

Valentine’s Week 2022: ಇಂದು ಫೆ.7 ರೋಸ್​ ಡೇ ವ್ಯಾಲೆಂಟೈನ್ಸ್​ ವಾರದ ಮೊದಲ ದಿನ. ಪ್ರೇಮಿಗೊಂದು ಕೆಂಗುಲಾಬಿ ನೀಡಿ ಮನದ ತುಡಿತಗಳನ್ನು ಹಂಚಿಕೊಳ್ಳುವ ವಿಶೇಷ ದಿನ.

Rose Day 2022: ರೋಸ್ ಡೇ ಮಹತ್ವ ಗೊತ್ತಾ? ಪ್ರೇಮಿಸುವ ಮುನ್ನ ತಿಳಿದುಬಿಡಿ
ರೋಸ್​ ಡೇ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Feb 08, 2022 | 1:16 PM

Share

ಇಂದು ಫೆ.7 ರೋಸ್​ ಡೇ (Rose Day). ವ್ಯಾಲೆಂಟೈನ್ಸ್​ ವಾರದ (Valentine’s week) ಮೊದಲ ದಿನ. ಪ್ರೇಮಿಗೊಂದು ಕೆಂಗುಲಾಬಿ ನೀಡಿ ಮನದ ತುಡಿತಗಳನ್ನು ಹಂಚಿಕೊಳ್ಳುವ ವಿಶೇಷ ದಿನ. ಪ್ರೀತಿ ಆರಂಭಕ್ಕೆ, ಆರಂಭವಾದ ಪ್ರೀತಿಗೊಂದು ಹೊಸ ಖುಷಿ ನೀಡುವ ದಿನ ಈ ರೋಸ್​ ಡೇ. ಪ್ರೀತಿ ಎಂದರೆ ಅದು ಪದಗಳಿಗೆ ನಿಲುಕದ್ದು, ಮನಸ್ಸು, ಭಾವನೆಗಳ ಸಮ್ಮಿಲನ.  ದೀರ್ಘಾಕಾಲದ ತಪಸ್ಸು, ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಅದ್ಭುತ ಶಕ್ತಿ. ಈ ಸುಂದರ ಅನುಭೂತಿ ನೀಡುವ  ಪ್ರೀತಿಗೆ ಒಂದು ದಿನ ಮೀಸಲಿಡಲೇಬೇಕು ಅಲ್ವಾ. ಹೌದು ಪ್ರೀತಿಯ ಉತ್ಸವ ನಡೆಸಲು ಒಂದು ದಿನ ಪೂರ್ತಿ ವಾರವನ್ನು ಮೀಸಲಿಡಲಾಗಿದೆ ಅದನ್ನೇ ವ್ಯಾಲೆಂಟೈನ್ಸ್​ ವೀಕ್​ ಎಂದು ಕರೆಯುತ್ತಾರೆ. ಅದರಲ್ಲಿ ಮೊದಲ ದಿನವೇ ರೋಸ್​ ಡೇ. ಅದೆಷ್ಟೋ ಮುನಿಸು, ಅದೆಷ್ಟೋ ತಪ್ಪುಕಲ್ಪನೆಗಳು ಪ್ರೀತಿಯಿಂದ ನೀಡುವ ಒಂದು ಗುಲಾಬಿ ಹೂವಿನಿಂದ ನಿವಾರಣೆಯಾಗುತ್ತದೆ. ಹಾಗಾದರೆ ಗುಲಾಬಿ ಹೂವಿಗೂ ಎಷ್ಟು ಶಕ್ತಿ ಇದೆ ಅಲ್ವಾ? ಅದಕ್ಕೆಂದೇ ವ್ಯಾಲೆಂಟೈನ್ಸ್​ ವಾರದ ಮೊದಲ ದಿನ ರೋಸ್​ ಡೇ ಆಚರಿಸುತ್ತಾರೆ. ಅದೇ ಇಂದು ಆಚರಿಸುವ ರೋಸ್​ ಡೇ. ಪ್ರೀತಿ ಪಾತ್ರರಿಗೆ  ಗುಲಾಬಿ ಹೂವು ನೀಡಿ ಹೊಸ ಉಲ್ಲಾಸ  ನೀಡುವ ದಿನ. ಪ್ರೀತಿ ಗುಲಾಬಿಯಂತೆ. ಗುಲಾಬಿಯ ಮೃದುತ್ವ, ಸೌಂದರ್ಯದಂತೆ ಪ್ರೀತಿಯೂ ಕೂಡ ಗುಲಾಬಿಯ ಪಕಳೆಯಂತೆ ಹಂತಹಂತವಾಗಿ ಅರಳಿ ಸುಂದರ ಅನುಭವವನ್ನು ನೀಡುತ್ತದೆ.

ರೋಸ್​ ಡೇ ಯ ಇತಿಹಾಸವೇನು?: ರೋಸ್​ಡೇಗೂ ಒಂದು ಪುಟ್ಟ ಇತಿಹಾಸವಿದೆ. ಪ್ರೀತಿಯ ಸಂಕೇತವಾದ ಗುಲಾಬಿಯನ್ನು ವಿಕ್ಟೋರಿಯನ್ನರು ಹೆಚ್ಚು ಬಳಸುತ್ತಿದ್ದರು. ಪ್ರೀತಿಯ ಭಾಗವಾಗಿ ಪ್ರೇಮಿಗಳು ಪರಸ್ಪರ ಗುಲಾಬಿಯನ್ನು ಬದಲಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ರೋಮನ್​ ಸಂಸ್ಕೃತಿಯಲ್ಲಿ ಈ ರೋಸ್​ ಡೇಯನ್ನು ಪ್ರೀತಿಯ ಕತೆಗಳಲ್ಲಿ ಕೇಳಿಬರುವ ವ್ಯಕ್ತಿತ್ವಗಳಾದ ಆಂಟೋನಿ ಮತ್ತು ಕ್ಲಿಯೋಪಾತ್ರ  ಒಂದೇ ರೂಮಿನಲ್ಲಿ ಗುಲಾಬಿ ಹೂವುಗಳ ನಡುವೆ ಇದ್ದರು. ಇವರ ಪ್ರೀತಿಯ ಸಂಕೇತವಾಗಿ ರೋಸ್​ ಡೇ ಆಚರಿಸಲಾಗುತ್ತದೆ ಎಂದು ನಂಬಲಾಗುತ್ತದೆ.

ಸಂತೋಷ, ಸೌಂದರ್ಯ, ಖುಷಿ, ಸೊಬಗು ಮತ್ತು ವಿವರಿಸಲಾಗದ ಪ್ರೀತಿಯನ್ನು ಪ್ರಚೋದಿಸುವ ಗುಣ ಗುಲಾಬಿಯಲ್ಲಿದೆ. ಗುಲಾಬಿ ತಾಜಾತನ, ಮುಗ್ಧತೆ, ವಾತ್ಸಲ್ಯವನ್ನು ಸಂಕೇತಿಸುತ್ತದೆ ಜತೆಗೆ ಗುಲಾಬಿ ಹೂವು  ಆಳವಾದ ಭಾವನೆಗಳನ್ನು ತಿಳಿಸುತ್ತದೆ. ಹೀಗಾಗಿಯೇ ವ್ಯಾಲೆಂಟೈನ್ಸ್​ ವೀಕ್​ನ ಮೊದಲ ದಿನದಂದು ಪ್ರೀತಿಯ ಹುಡುಗ/ಹುಡುಗಿಗೆ ಮನದ ಭಾವನೆಗಳನ್ನು ತಿಳಿಸಲು ಗುಲಾಬಿಯನ್ನು ನೀಡುತ್ತಾರೆ.

ಗುಲಾಬಿಯಲ್ಲಿಯೂ ಹಲವು ಬಣ್ಣಗಳಿವೆ. ಪ್ರತೀ ಬಣ್ಣದ ಗುಲಾಬಿಗೂ ಅದರದೇ ಆದ ಅರ್ಥವಿದೆ ಹಾಗಾದರೆ ಯಾವ ಬಣ್ಣದ ಗುಲಾಬಿಗೆ ಯಾವ ಅರ್ಥ ತಿಳಿಯೋಣ ಬನ್ನಿ:

ಕೆಂಪು ಗುಲಾಬಿ: ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಅಂತಹವರಿಗೆ ಕೆಂಪು ಗುಲಾಬಿ ನೀಡಿ. ಕೆಂಗುಲಾಬಿ ಪ್ರೀತಿಯ ಸಂಕೇತ. ಹೀಗಾಗಿ ಕೆಂಪು ಗುಲಾಬಿ ನೀಡಿ ಒಂದು ಲವ್​ ಯೂ ಹೇಳಿಬಿಡಿ.

ಹಳದಿ ಗುಲಾಬಿ: ಹಳದಿ ಗುಲಾಬಿ ಸ್ನೇಹದ ಸಂಕೇತ. ನಿಮ್ಮ ಬೆಸ್ಟ್​ ಪ್ರೆಂಡ್​ಗೆ ನೀವು ಹಳದಿ ಗುಲಾಬಿ ನೀಡಿ ರೋಸ್​​ ಡೇಯ ವಿಶ್​​ ಮಾಡಬಹುದು. ಅಲ್ಲದೆ ನಿಮ್ಮ ಬಾಳಿನಲ್ಲಿ ಸ್ನೇಹಿತನಾ/ಳಾಗಿ, ಸಂಗಾತಿಯಾಗಿರುವ ವ್ಯಕ್ತಿಗೂ ಹಳದಿ ಗುಲಾಬಿ ನೀಡಿ ಶುಭಕೋರಬಹುದು.

ಬಿಳಿ ಗುಲಾಬಿ: ಶಾಂತತೆ, ಶುದ್ಧತೆಯ ಪ್ರತಿರೂಪ ಬಿಳಿ ಗುಲಾಬಿ.  ನಿಮ್ಮ ಪ್ರೀತಿ ಪಾತ್ರರಿಗೆ ಬಿಳಿಗುಲಾಬಿಯನ್ನು ಒಂದು ಕೆಂಗುಲಾಬಿಯನ್ನು ಸೇರಿಸಿ ನೀಡಿ. ಆಗ ಅಪ್ಪಟ, ಶುದ್ಧ ಪ್ರೀತಿಯ ಸಂಕೆತವಾಗಿರುತ್ತದೆ.

ಪಿಂಕ್​ ಅಥವಾ ಬೇಬಿ ಪಿಂಕ್​ ಗುಲಾಬಿ: ಪಿಂಕ್​ ಅಥವಾ ಬೇಬಿ ಬಿಂಕ್​ ಗುಲಾಬಿ ಹೆಣ್ಣು ಮಕ್ಕಳ ನೆಚ್ಚಿನ ಬಣ್ಣ. ಹೀಗಾಗಿ ನಿಮ್ಮ ಪ್ರೀತಿಯ ಪಾರ್ಟನರ್​ಗೆ ಒಂದು ಪಿಂಕ್​ಗುಲಾಬಿ ನೀಡಿ, ಭಾವನೆ ಹಂಚಿಕೊಳ್ಳಿ. ಒಟ್ಟಿನಲ್ಲಿ ನಿಮ್ಮ ಪ್ರೇಮಿಗೆ ಪ್ರೀತಿಯೊಂದ ನೀಡುವ ಗುಲಾಬಿ ನಿಮ್ಮ ರೋಸ್​ ಡೇಯನ್ನು ಪರಿಪೂರ್ಣಗೊಳಿಸುತ್ತದೆ.

ರೋಸ್​ ಡೇಯನ್ನು ನೀವು ವಿಭಿನ್ನವಾಗಿ ಆಚರಿಸಬಹುದು. ಸಂಗಾತಿಯ ದಿನವನ್ನು ಗುಲಾಬಿ ಹೂ ನೀಡುವ ಮೂಲಕ ಆರಂಭಿಸಿ. ಪ್ರತೀ ಕಲಸ ಮಾಡುವಾಗಲೂ ಒಂದೊಂದು ಹೂವು ನೀಡಿ ಸರ್ಫೈಸ್​ ನೀಡಿ. ಇದರಿಂದ ನಿಮ್ಮ ಮನದಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳಬಹುದು. ಪರಿಪೂರ್ಣ ರೋಸ್​​ಡೇಯನ್ನು ಆಚರಿಸಬಹುದು.

ಇದನ್ನೂ ಒದಿ:

Valentine’s Week List 2022: ಪ್ರೇಮಿಗಳ ವಾರದಲ್ಲಿ ಯಾವ ದಿನ ಯಾವುದಕ್ಕೆ ಮೀಸಲು ಗೊತ್ತಾ?ಇಲ್ಲಿದೆ ಮಾಹಿತಿ

Published On - 9:55 am, Mon, 7 February 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್