Viral News: ಗರ್ಭಿಣಿಯಾಗಿದ್ದಾಗಲೇ ಮತ್ತೆ ಗರ್ಭ ಧರಿಸಿದ ಮಹಿಳೆ; ಹೇಗಿದು ಅಂತೀರಾ?

ಒಂದು ಮಗುವಿನ ಗರ್ಭ ಧರಿಸಿದ 1 ವಾರದ ನಂತರ ಮತ್ತೊಂದು ಮಗುವಿನ ಗರ್ಭ ಧರಿಸಿರುವ ಆ ಮಹಿಳೆ ಎರಡೂ ಮಕ್ಕಳಿಗೆ ಒಟ್ಟಿಗೇ ಜನ್ಮ ನೀಡಿದ್ದಾಳೆ. ಈ ಅಪರೂಪದ ಪ್ರಕ್ರಿಯೆಯನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ.

Viral News: ಗರ್ಭಿಣಿಯಾಗಿದ್ದಾಗಲೇ ಮತ್ತೆ ಗರ್ಭ ಧರಿಸಿದ ಮಹಿಳೆ; ಹೇಗಿದು ಅಂತೀರಾ?
ಒಂದೇ ದಿನ ಜನಿಸಿದ ಮಕ್ಕಳು
Follow us
| Updated By: ಸುಷ್ಮಾ ಚಕ್ರೆ

Updated on: Mar 02, 2022 | 8:41 PM

ನಮ್ಮ ಸುತ್ತಮುತ್ತಲೂ ಅದೆಷ್ಟೋ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಮ್ಮೆ ಗರ್ಭಿಣಿಯಾದ ಮಹಿಳೆ (Pregnant Woman) ಮಗುವನ್ನು ಹೆರುವ ಮೊದಲೇ ಮತ್ತೊಮ್ಮೆ ಗರ್ಭ ಧರಿಸುವ ವಿಚಿತ್ರ ನಡೆಯುತ್ತದೆ ಎಂದು ನಿಮಗೆ ಗೊತ್ತಾ? ಅದು ಸಾಧ್ಯವಾ? ಖಂಡಿತವಾಗಿಯೂ ಇದು ಸಾಧ್ಯ. ಏಕೆಂದರೆ ಈ ರೀತಿಯ ಒಂದು ಘಟನೆ ಕೆಲವು ದಿನಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕೇವಲ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಗರ್ಭ ಧರಿಸಿದ ಮಹಿಳೆ ಇದೀಗ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತಿದ್ದಾಳೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಪ್ಯಾಬ್ಲೋದ ಒಡಾಲಿಸ್ ಮತ್ತು ಆಂಟೋನಿಯೊ ಮಾರ್ಟಿನೆಜ್ ದಂಪತಿ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಒಡಾಲಿಸ್ ಅವರಿಗೆ ಈ ಹಿಂದೆ ಗರ್ಭಪಾತ ಉಂಟಾಗಿತ್ತು. ಆದರೆ, ನವೆಂಬರ್ 2020ರಲ್ಲಿ ಮತ್ತೆ ಗರ್ಭ ಧರಿಸಿದ್ದರು.  25 ವರ್ಷ ವಯಸ್ಸಿನ ಆ ಮಹಿಳೆಗೆ ತನ್ನ ಮೊದಲ ಸ್ಕ್ಯಾನ್‌ನಲ್ಲಿ ತನ್ನ ಹೊಟ್ಟೆಯಲ್ಲಿ ಎರಡು ಶಿಶುಗಳು ಇರುವುದು ಗೊತ್ತಾಯಿತು. ಆದರೆ, ಆಕೆ ಒಂದು ವಾರದ ಅಂತರದಲ್ಲಿ ಎರಡು ಬಾರಿ ಗರ್ಭ ಧರಿಸಿದ್ದಳು. ಆ ಎರಡು ಮಕ್ಕಳ ನಡುವೆ 1 ವಾರದ ಅಂತರವಿತ್ತು.

ಇಬ್ಬರು ಮಕ್ಕಳೊಂದಿಗೆ ಪೋಷಕರು

ಇದೊಂದು ಬಹಳ ಅಪರೂಪದ ಘಟನೆ ಎಂದು ವೈದ್ಯರು ಕೂಡ ಹೇಳಿದ್ದರು. ಒಂದು ಮಗುವಿನ ಗರ್ಭ ಧರಿಸಿದ 1 ವಾರದ ನಂತರ ಮತ್ತೊಂದು ಮಗುವಿನ ಗರ್ಭ ಧರಿಸಿರುವ ಆ ಮಹಿಳೆ ಎರಡೂ ಮಕ್ಕಳಿಗೆ ಒಟ್ಟಿಗೇ ಜನ್ಮ ನೀಡಿದ್ದಾಳೆ. ಈ ಅಪರೂಪದ ಪ್ರಕ್ರಿಯೆಯನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ. ಇದೀಗ ಹುಟ್ಟಿರುವ ಎರಡೂ ಮಕ್ಕಳು ಒಂದೇ ರೀತಿ ಇವೆ. ಆದರೆ, ಒಂದು ಮಗುವಿಗೆ 1 ವಾರ ಕಡಿಮೆ ವಯಸ್ಸಾಗಿದೆ. ಕಳೆದ ವರ್ಷ ಆಗಸ್ಟ್ 10ರಂದು ಎರಡೂ ಶಿಶುಗಳು ಜನಿಸಿವೆ. ಇವರಿಬ್ಬರನ್ನು ಅವಳಿ ಮಕ್ಕಳು ಎಂದು ಕರೆಯಲು ಸಾಧ್ಯವಾಗದಿದ್ದರೂ ಅವಳಿ ಮಕ್ಕಳ ಗುಂಪಿಗೆ ಸೇರಿವೆ.

ಇದನ್ನೂ ಓದಿ: Viral News: ಗಾಳಿಯ ರಭಸಕ್ಕೆ ತಲೆ ಮೇಲಿಂದ ಹಾರಿ ಹೋಯ್ತು ವಿಗ್; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

Viral News: ವಧು-ವರರ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಮದುವೆ ಮಂಟಪದಿಂದ ಹಣ, ಒಡವೆ ಕದ್ದ ಕಳ್ಳ!

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ