AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ ಮದುವೆಯಾಗಿಲ್ಲ ಒಂಟಿಯಾಗಿದ್ದೇನೆ ಎಂದು ಬೇಸರ ಪಡಬೇಡಿ ಈ ಸುದ್ದಿ ಓದಿ

ಯಾರನ್ನಾದರೂ ಪ್ರೀತಿಸುವುದು ಹಾಗೂ ಅವರೊಂದಿಗೆ ರಿಲೇಷನ್​ಶಿಪ್​ನಲ್ಲಿರುವುದು ಸಾಮಾನ್ಯ, ಕೆಲವರು ಪ್ರೀತಿಸುತ್ತಾರೆ ಆದರೆ ಮನಸ್ಸನ್ನು ಗೆಲ್ಲಲಾಗದೆ ಸೋತು ಬಿಡುತ್ತಾರೆ,

ಇನ್ನೂ ಮದುವೆಯಾಗಿಲ್ಲ ಒಂಟಿಯಾಗಿದ್ದೇನೆ ಎಂದು ಬೇಸರ ಪಡಬೇಡಿ ಈ ಸುದ್ದಿ ಓದಿ
Relationship
TV9 Web
| Updated By: ನಯನಾ ರಾಜೀವ್|

Updated on: Aug 26, 2022 | 2:28 PM

Share

ಪ್ರೀತಿ, ಮದುವೆ, ಸಂಸಾರ, ಜವಾಬ್ದಾರಿ ಇವೆಲ್ಲವೂ ನಮ್ಮ ಜೀವನದ ಹಂತಗಳು ಇವ್ಯಾವುದರಿಂದಲೂ ನೀವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಯಾರನ್ನಾದರೂ ಪ್ರೀತಿಸುವುದು ಹಾಗೂ ಅವರೊಂದಿಗೆ ರಿಲೇಷನ್​ಶಿಪ್​ನಲ್ಲಿರುವುದು ಸಾಮಾನ್ಯ, ಕೆಲವರು ಪ್ರೀತಿಸುತ್ತಾರೆ ಆದರೆ ಮನಸ್ಸನ್ನು ಗೆಲ್ಲಲಾಗದೆ ಸೋತು ಬಿಡುತ್ತಾರೆ.

ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಪ್ರೀತಿ ಹುಟ್ಟುತ್ತದೆ ಕೆಲವರು ಆತ/ ಆಕೆಯ ಬಳಿ ಹೇಳಿಕೊಳ್ಳುತ್ತಾರೆ, ಕೆಲವು ಸಕ್ಸಸ್ ಆಗುತ್ತೆ ಇನ್ನೂ ಕೆಲವು ಪ್ರೀತಿಗಳು ನೆಲಕಚ್ಚುತ್ತೆ. ಆದರೆ ಅದೇ ಪ್ರೀತಿಯ ಕೊರಗಿನಲ್ಲಿರುವವರು ಕೆಲವೇ ಕೆಲವು ಮಂದಿ, ಎಲ್ಲವನ್ನೂ ಮರೆತು ಜೀವನದಲ್ಲಿ ಮುಂದೆ ಸಾಗುವವರು ಬಹಳ ಮಂದಿ. ಇದೆಲ್ಲವೂ ಜೀವನದ ಒಂದು ಭಾಗವಷ್ಟೇ.

ಎಲ್ಲರೂ ಕೈಕೈ ಹಿಡಿದು ಸುತ್ತಾಡುವಾಗ ನನಗೂ ಒಂದು ಸಂಗಾತಿ ಇರಬಾರದಿತ್ತೇ ಎಂದು ಮನಸ್ಸಿನಲ್ಲೇ ಅಂದುಕೊಳ್ಳುವುದು ಸಹಜ, ಆದರೆ ಬೇಸರ ಪಡಬೇಡಿ, ಮದುವೆಯಾಗದೆ ಒಂಟಿಯಾಗಿರುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಇನ್‌ಸೈಡರ್‌ ವೆಬ್‌ಸೈಟ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಒಂಟಿಯಾಗಿರುವವರು ತಮಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತಾರೆ, ಸಂಬಂಧ ಅಥವಾ ಮದುವೆಯ ನಂತರ, ಜನರು ತಮ್ಮ ಸಂಗಾತಿಗೆ ಸಮಯವನ್ನು ನೀಡಬೇಕು. ಅಂತಹ ಪರಿಸ್ಥಿತಿಯಲ್ಲಿ, ಅನೇಕರು ಕೆಲಸ ಮತ್ತು ಸಂಬಂಧಗಳನ್ನು ಎರಡನ್ನೂ ಒಟ್ಟಾಗಿ ನೋಡಿಕೊಳ್ಳುವಾಗ ತಮಗಾಗಿ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಮನರಂಜನೆಯೆಂಬುದನ್ನೇ ಮರೆತುಬಿಡುತ್ತಾರೆ, ಆದರೆ ಒಂಟಿಯಾಗಿರುವವರು ತಮಗಾಗಿ ಹೆಚ್ಚು ಸಮಯವನ್ನು ಮೀಸಲಿಡಬಹುದು, ಜೀವನವನ್ನು ಆನಂದಿಸಬಹುದು.

ಮದುವೆ ಅಥವಾ ರಿಲೇಷನ್​ಶಿಪ್​ನಲ್ಲಿರುವವರಿಗೆ ಜವಾಬ್ದಾರಿ ಹೆಚ್ಚುತ್ತಲೇ ಇರುತ್ತದೆ

ಕಚೇರಿ, ಮನೆ, ಕುಟುಂಬದ ಜವಾಬ್ದಾರಿಗಳು ಹೆಚ್ಚಾದ ನಂತರ ಒತ್ತಡವೂ ಹೆಚ್ಚುತ್ತದೆ. ಆದರೆ ಬ್ಯಾಚ್ಯುಲರ್ಸ್ ಜೀವನ ಹಾಗಿರುವುದಿಲ್ಲ, ಯಾವುದೇ ಒತ್ತಡವಿರುವುದಿಲ್ಲ, ಸ್ನೇಹಿತರೊಂದಿಗೆ ಊರು ಊರು ಸುತ್ತಿದರೂ ಯಾವುದೇ ನಿರ್ಬಂಧವಿರುವುದಿಲ್ಲ, ಅದಕ್ಕೂ ಮಿಗಿಲಾಗಿ ಕಮಿಟ್​ಮೆಂಟ್ಸ್​ ಇರುವುದಿಲ್ಲ.

ಸಂಗಾತಿಗೆ ಸಮಯ ನೀಡಲು ಆಗುವುದೇ ಇಲ್ಲ ಕೆಲಸದ ಒತ್ತಡದಿಂದಾಗಿ ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ, ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಾಮಾನ್ಯ. ಒತ್ತಡವು ನಿದ್ರೆಯ ಮೇಲೆ ಹೆಚ್ಚಿನ ಪರಿಣಾಮವನ್ನು ನೀಡುತ್ತದೆ. ಅದರಿಂದ ಮಾನಸಿಕ ಹಾಗೂ ದೈಹಿಕವಾಗಿ ಘಾಸಿಗೊಳ್ಳುವಿರಿ.

ಒಂಟಿಯಾಗಿರುವವರು ವೃತ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಒಂಟಿಯಾಗಿರುವವರು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಇದು ವೃತ್ತಿ ಬೆಳವಣಿಗೆಗೆ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ