AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಳಗೆ ಚಪ್ಪಲಿ ಧರಿಸಬಾರದು; ಸಂಪ್ರದಾಯಕ್ಕೆ ಇಂಬು ನೀಡಿದ ವೈಜ್ಞಾನಿಕ ಕಾರಣ

ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯೊಳಗೆ ಧರಿಸುವುದರಿಂದ ಮನೆ ಮಲಿನವಾಗುತ್ತದೆ. ಮನೆಯ ನೆಲ ಗಲೀಜಾಗುತ್ತದೆ. ಚಪ್ಪಲಿಗೆ ತಾಗಿರುವ ಮಣ್ಣು, ನೀರು, ಸಗಣಿಯಂತಹ ವಸ್ತುಗಳಿಂದ ಮನೆ ಅಶುಚಿಗೊಳ್ಳುತ್ತವೆ. ಇದು ಬಹು ಬೇಗನೇ ಅನಾರೋಗ್ಯ ತಂದೊಡ್ಡುತ್ತದೆ.

ಮನೆಯೊಳಗೆ ಚಪ್ಪಲಿ ಧರಿಸಬಾರದು;  ಸಂಪ್ರದಾಯಕ್ಕೆ ಇಂಬು ನೀಡಿದ ವೈಜ್ಞಾನಿಕ ಕಾರಣ
ಸಾಂಕೇತಿಕ ಚಿತ್ರ
Follow us
guruganesh bhat
| Updated By: Skanda

Updated on: Jun 02, 2021 | 7:44 AM

ಏನು ಇರದಿದ್ದರೂ ಸರಿ, ಆರೋಗ್ಯ ಇದ್ದರೆ ಸಾಕು ಎನ್ನುವ ಕಾಲ ಇದು. ಆರೋಗ್ಯ ಕಾಪಾಡಿಕೊಳ್ಳುವ ಎಲ್ಲಾ ಮಾರ್ಗಗಳನ್ನೂ ಪ್ರತಿದಿನ ಅನುಸರಿಸುವ ರೂಢಿ ಬಹುತೇಕ ಎಲ್ಲರಲ್ಲೂ ಇರುತ್ತದೆ. ಸ್ವಚ್ಛತೆ, ಪೌಷ್ಠಿಕ ಆಹಾರ, ನಿದ್ರೆ ಮುಂತಾದ ಅಂಶಗಳನ್ನು ಪಾಲಿಸಿಯೇ ಪಾಲಿಸುತ್ತೇವೆ ನಾವು. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವುದೆಲ್ಲವೂ ನಮ್ಮ ಸಂಸ್ಕೃತಿಯೇ ಆಗಿದೆ. ಇಂತಹುದೇ ಒಂದು ಆಚರಣೆ ಚಪ್ಪಲಿಯನ್ನು ಮನೆಯ ಆಚೆಯೇ ಇಡುವುದು. ಮನೆಯೊಳಗೆ ಪ್ರತ್ಯೇಕ ಸ್ಲಿಪರ್ ಹಾಕಿಕೊಳ್ಳುವುದು. ಅಂದಹಾಗೆ ನಿಮಗೆ ಗೊತ್ತೇ? ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯಲ್ಲಿ ಬಳಸದಿರುವ ಹಿಂದೆ ವೈಜ್ಞಾನಿಕ ಕಾರಣವೂ ಇದೆ.

ಹೊರಜಗತ್ತಿನಲ್ಲಿ, ಅಂದರೆ ರಸ್ತೆ, ಕಚೇರಿ, ಬಸ್ ಸ್ಟಾಂಡ್ ಮುಂತಾದೆಡೆ ಬಳಸುವ ಚಪ್ಪಲಿಗಳಲ್ಲಿ ಧೂಳು, ಕಸ ಕಡ್ಡಿ, ಕೊಳಚೆಗಳಂತಹ ಕಲ್ಮಶಗಳು ಸೇರಿರುತ್ತವೆ. ಇಂತಹ ಕಲ್ಮಶದಿಂದ ರೋಗ ರುಚಿನ ಉಂಟುಮಾಡುವ ರೋಗಕಾರಕಗಳು ಮನೆ ಸೇರುವ ಸಂಭವವಿದೆ. ಅಲ್ಲದೇ ಕೊಳಚೆಯಲ್ಲಿ ಇರಬಹುದಾದ ಬ್ಯಾಕ್ಟೀರಿಯಾಗಳು ಮನೆ ಸೇರುವ ಸಂಭವವೂ ಚಪ್ಪಲಿಗಳಿಂದ ಇದೆ. ಹೀಗಾಗಿ ಮನೆಯ ಹೊರಗೇ ಚಪ್ಪಲಿಗಳನ್ನು ಇಡುವುದು ಅತ್ಯಂತ ಉತ್ತಮವಾದದ್ದು ಎನ್ನುತ್ತದೆ ವಿಜ್ಞಾನ.

ಹೊರಗೆ ಬಳಸುವ ಚಪ್ಪಲಿಗಳನ್ನು ಮನೆಯೊಳಗೆ ಧರಿಸುವುದರಿಂದ ಮನೆ ಮಲಿನವಾಗುತ್ತದೆ. ಮನೆಯ ನೆಲ ಗಲೀಜಾಗುತ್ತದೆ. ಚಪ್ಪಲಿಗೆ ತಾಗಿರುವ ಮಣ್ಣು, ನೀರು, ಸಗಣಿಯಂತಹ ವಸ್ತುಗಳಿಂದ ಮನೆ ಅಶುಚಿಗೊಳ್ಳುತ್ತವೆ. ಇದು ಬಹು ಬೇಗನೇ ಅನಾರೋಗ್ಯ ತಂದೊಡ್ಡುತ್ತದೆ. ಹೀಗಾಗಿ ಮನೆಯೊಳಗೆ ಹೊರಗೆ ಬಳಸುವ ಚಪ್ಪಲಿ ಧರಿಸಬಾರದು ಎಂದು ಸಂಶೋಧನೆಗಳು ತಿಳಿಸಿವೆ. ಹಿಂದಿನಿಂದ ಪಾಲಿಸುವ ಸಂಪ್ರದಾಯಕ್ಕೆ ಈ ಸಂಶೋಧನೆ ಇನ್ನಷ್ಟು ಇಂಬು ಕೊಟ್ಟಂತಾಗಿದೆ.

ಹಾಗಾದರೆ ಏನು ಮಾಡಬಹುದು? ಮನೆಯ ಹೊರಗೇ ಚಪ್ಪಲಿ ಇರಿಸುವುದು ರೂಢಿ ಮಾಡಿಕೊಳ್ಳಿ. ನೆಂಟರು, ಗೆಳೆಯರು ಬಂದಾಗಲೂ ಇದೇ ನಿಯಮ ಪಾಲಿಸಿ. ಮನೆಯ ಹೊರಗೆ ಚಪ್ಪಲಿ ಇರಿಸುವ ಜಾಗವನ್ನು ಗುರುತಿಸಿ. ಇಂಥದ್ದೇ ಸ್ಥಳದಲ್ಲಿ ಚಪ್ಪಲಿ ಇರಿಸಬೇಕು ಎಂಬ ನಿಯಮ ಮಾಡಿ ಮನೆಯ ಎಲ್ಲರಿಗೂ ತಿಳಿಸಿ. ಮನೆ ಪ್ರವೇಶಿಸುವ ಬಾಗಿಲಿನ ಮುಂದೆ ಒಂದು ಮ್ಯಾಟ್ ಹಾಕಿ. ಮ್ಯಾಟ್​ಗೆ ಕಾಲನ್ನು ಒರೆಸಿಕೊಂಡೇ ಹೊರಗಿನಿಂದ ಬರುವವರು ಮನೆಯನ್ನು ಪ್ರವೇಶಿಸುವಂತೆ ತಿಳಿಸಿ.

ಇಂತಹ ಕೆಲವು ಸರಳ ಸೂತ್ರಗಳ ಮೂಲಕವೂ ನೀವು ನಿಮ್ಮ ಆರೋಗ್ಯದ ರಕ್ಷಕರಾಗಬಹುದು. ಎಷ್ಟೋ ಹಣ ವ್ಯರ್ಥ ಮಾಡಿ ಆಸ್ಪತ್ರೆಗೆ ಅಲೆಯುವುದಕ್ಕಿಂತ ಇಂತಹ ಸೂತ್ರಗಳು ಸುಲಭವಲ್ಲವೇ?

ಇದನ್ನೂ ಓದಿ: ದೇಶ ಮತ್ತು ರಾಜ್ಯದಲ್ಲಿ ಕೊವಿಡ್​ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ

990 ರೂ. ಬೆಲೆಯ ಡಿಆರ್‌ಡಿಒದ ಆಂಟಿ-ಕೊವಿಡ್ ಔಷಧವನ್ನು ಯಾರೆಲ್ಲ ಬಳಸಬಹುದು? ಇಲ್ಲದೆ ವಿವರ

(Why footwear must keep outside the house where is the scientific reasons)

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು