AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಮಾಡಿದ ಅನ್ನ ಎಸೆಯುವ ಮುನ್ನ ಒಮ್ಮೆ ಯೋಚಿಸಿ; ತಂಗಳನ್ನದಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ

Leftover Rice Benefits: ರಾತ್ರಿ 100 ಗ್ರಾಂ ಬೇಯಿಸಿದ ಅನ್ನದಲ್ಲಿ 3.4 ಮಿಲಿಗ್ರಾಂ ಕಬ್ಬಿಣವಿದೆ. ವಿಟಮಿನ್ ಬಿ 6 ಮತ್ತು ಬಿ 12 ಕೂಡ ಹೆಚ್ಚು ಲಭ್ಯವಿದೆ. ಅದೇ ಅನ್ನವನ್ನು ಬೆಳ್ಳಿಗೆ ತಿನ್ನುವುದರಿಂದ ದೇಹವು ಸುಲಭವಾಗಿ ಶಕ್ತಿಯನ್ನು ಪಡೆಯುತ್ತದೆ.

ನಿನ್ನೆ ಮಾಡಿದ ಅನ್ನ ಎಸೆಯುವ ಮುನ್ನ ಒಮ್ಮೆ ಯೋಚಿಸಿ; ತಂಗಳನ್ನದಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Aug 30, 2021 | 6:44 AM

Share

ನಿನ್ನೆ ಮಾಡಿದ ಅನ್ನವನ್ನು ಬೆಳಿಗ್ಗೆ ಸೇವಿಸುವುದು ಅಥವಾ ಅದನ್ನು ಮರುದಿನ ಊಟ ಮಾಡುವ ಅಭ್ಯಾಸ ಹಲವರಲ್ಲಿ ಇದೆ. ಆದರೆ ಈ ರೀತಿ ನಿನ್ನೆ ಮಾಡಿದ ಅನ್ನ ಸೇವನೆಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಹೌದು ನಿನ್ನೆ ಮಾಡಿದ ಅನ್ನ ಸೇವನೆಯಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಆದಾಗ್ಯೂ ಕೆಲವರಿಗೆ ಈ ಅನ್ನ ತಿನ್ನಲು ಇಷ್ಟವಿಲ್ಲ. ಆದರೆ ಇದರ ಪೌಷ್ಠಿಕಾಂಶದ ಮೌಲ್ಯ ತಿಳಿದ ನಂತರ, ಈ ನಿರ್ಧಾರವನ್ನು ಬದಲಾಯಿಸಬಹುದು. ಅಮೆರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್ ನಿನ್ನೆ ಮಾಡಿದ ಅನ್ನದ ಅಥವಾ ತಂಗಳನ್ನದ ಪ್ರಯೋಜನಗಳನ್ನು ಅಧ್ಯಯನ ಮಾಡಿದೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.

ಸಾಮಾನ್ಯವಾಗಿ ಅನ್ನ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಸೂಕ್ಷ್ಮ ಪೋಷಕಾಂಶಗಳ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ನಿನ್ನೆ ಮಾಡಿದ ಅನ್ನ ಪೋಷಕಾಂಶಗಳ ಹೆಚ್ಚಿನ ಅಂಶಗಳನ್ನು ಒಳಗೊಂಡಿದೆ. ಉದಾಹರಣೆಗೆ, ರಾತ್ರಿ 100 ಗ್ರಾಂ ಬೇಯಿಸಿದ ಅನ್ನದಲ್ಲಿ 3.4 ಮಿಲಿಗ್ರಾಂ ಕಬ್ಬಿಣವಿದೆ. ವಿಟಮಿನ್ ಬಿ 6 ಮತ್ತು ಬಿ 12 ಕೂಡ ಹೆಚ್ಚು ಲಭ್ಯವಿದೆ. ಅದೇ ಅನ್ನವನ್ನು ಬೆಳ್ಳಿಗೆ ತಿನ್ನುವುದರಿಂದ ದೇಹವು ಸುಲಭವಾಗಿ ಶಕ್ತಿಯನ್ನು ಪಡೆಯುತ್ತದೆ. ಅಲ್ಲದೆ ದೇಹವು ಸಾಕಷ್ಟು ಬ್ಯಾಕ್ಟೀರಿಯಾದಿಂದ ಮುಕ್ತಿ ಪಡೆಯುತ್ತದೆ.

ಮಲಬದ್ಧತೆ ಕಡಿಮೆಯಾಗುತ್ತದೆ ಫೈಬರ್ ಹೆಚ್ಚಾಗುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ರಕ್ತದೊತ್ತಡ (ಬಿಪಿ) ನಿಯಂತ್ರಣದಲ್ಲಿರುತ್ತದೆ. ನಿನ್ನೆ ಮಾಡಿದ ಅನ್ನ ಸೇವನೆಯಿಂದ ಆತಂಕ, ಖಿನ್ನತೆ, ಒತ್ತಡವೂ ಕೂಡ ದೂರವಾಗುತ್ತದೆ.

ಕರುಳಿನಲ್ಲಿ ಹುಣ್ಣುಗಳಿದ್ದರೆ ಅಲ್ಲೇ ಕುಗ್ಗುತ್ತದೆ ನಿನ್ನೆ ಮಾಡಿದ ಅನ್ನ ಸೇವನೆಯಿಂದ ದೇಹವು ದೀರ್ಘಕಾಲ ಉಲ್ಲಾಸಿತವಾಗಿರುತ್ತದೆ. ಇದು ಹೊಟ್ಟೆಯಿಂದ ಅಲರ್ಜಿ ಮತ್ತು ಕಲ್ಮಶಗಳನ್ನು ಸಹ ತೆಗೆದುಹಾಕುತ್ತದೆ. ಕರುಳಿನಲ್ಲಿ ಹುಣ್ಣುಗಳಿದ್ದರೂ ಅವು ಕುಗ್ಗುತ್ತವೆ. ಬೆಳೆಯುತ್ತಿರುವ ಮಕ್ಕಳಿಗೆ ನಿನ್ನೆ ಮಾಡಿದ ಅನ್ನ ಉತ್ತಮ ಪೋಷಣೆಯಾಗಿದೆ.

ತೂಕ ಇಳಿಕೆಗೆ ಸಹಕಾರಿ ನಿನ್ನೆ ಅನ್ನವು ತೂಕ ಹೆಚ್ಚಾಗಲು ತೆಳ್ಳಗಿರುವವರಿಗೆ ಮತ್ತು ಬೊಜ್ಜು ಇರುವವರಿಗೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಬೊಜ್ಜು ಇರುವವರು ನಿನ್ನೆ ಮಾಡಿದ ಅನ್ನವನ್ನು ಇವತ್ತು ಸೇವಿಸುವುದರಿಂದ ಕ್ರಮೇಣ ಕೊಬ್ಬನ್ನು ಕಳೆದುಕೊಳ್ಳಬಹುದು.

ಇದನ್ನೂ ಓದಿ: Egg shells benefits: ಮೊಟ್ಟೆಯ ಸಿಪ್ಪೆಗಳನ್ನು ಎಸೆಯುತ್ತಿದ್ದೀರಾ? ಹಾಗಿದ್ದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

Desi Chutney: ಈ ಆರು ಪದಾರ್ಥಗಳಿಂದ ತಯಾರಿಸಿದ ಚಟ್ನಿ ರುಚಿಗೆ ತಕ್ಕಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ