AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day: ಸ್ತನ ಕ್ಯಾನ್ಸರ್​ಗೆ ತುತ್ತಾಗಿಯೂ ಜೀವನೋತ್ಸಾಹ ಉಳಿಸಿಕೊಂಡ ಪತ್ನಿಯ ಪಯಣವನ್ನು ಹಂಚಿಕೊಂಡ ಝೆರೋಧಾ ಸಿಇಒ ನಿತಿನ್​ ಕಾಮತ್​

ಮಹಿಳಾ ದಿನ ಹಿನ್ನಲೆಯಲ್ಲಿ ಬ್ರೋಕರೇಜ್​ ಕಂಪನಿ ಝರೋದ ಸಿಇಒ ನಿತಿನ್​ ಕಾಮತ್​ ಪತ್ನಿಯ ಕ್ಯಾನ್ಸರ್ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ತಮ್ಮ ಪತ್ನಿ ಸೀಮಾ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಯನ್ನು ಎದುರಿಸಿ ಬದುಕುತ್ತಿರುವ ಕುರಿತು ಅವರೇ ಬರೆದ ಬ್ಲಾಗ್​ ಲಿಂಕ್​ ಹಂಚಿಕೊಂಡಿದ್ದಾರೆ.

Women’s Day: ಸ್ತನ ಕ್ಯಾನ್ಸರ್​ಗೆ ತುತ್ತಾಗಿಯೂ ಜೀವನೋತ್ಸಾಹ ಉಳಿಸಿಕೊಂಡ ಪತ್ನಿಯ ಪಯಣವನ್ನು ಹಂಚಿಕೊಂಡ ಝೆರೋಧಾ ಸಿಇಒ ನಿತಿನ್​ ಕಾಮತ್​
ಝೆರೋಧ ಸಿಇಒ ನಿತಿನ್​ ಕಾಮತ್​ ಮತ್ತು ಪತ್ನಿ ಸೀಮಾ
TV9 Web
| Updated By: Pavitra Bhat Jigalemane|

Updated on:Mar 08, 2022 | 12:44 PM

Share

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ (International Women’s Day). ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ, ಕುಗ್ಗದೆ ನಡೆಯುವ ಹೆಣ್ಣು ಭೂಮಿಯ ಮೇಲಿನ ಅದ್ಭುತ ಶಕ್ತಿಗಳಲ್ಲಿ ಒಂದು. ಅದೆಷ್ಟೋ ಮಹಿಳೆಯರು ಇಂದಿಗೂ ಸಾಧನೆಗೈದರೂ ಎಲೆಮರೆಕಾಯಿಯಂತೆ ಇದ್ದು, ಬದುಕಿನ ಹೊಡೆತಗಳನ್ನು ಎದುರಿಸಿ ಮಾದರಿಯಾಗಿದ್ದಾರೆ. ಮಹಿಳಾ ದಿನ ಹಿನ್ನಲೆಯಲ್ಲಿ ಬ್ರೋಕರೇಜ್​ ಕಂಪನಿ ಝೆರೋಧ ಸಿಇಒ ನಿತಿನ್​ ಕಾಮತ್​ ಪತ್ನಿಯ ಕ್ಯಾನ್ಸರ್ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಮತ್​ ಅವರು ಟ್ವಿಟರ್​ನಲ್ಲಿ ತಮ್ಮ ಪತ್ನಿ ಸೀಮಾ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಯನ್ನು ಎದುರಿಸಿ ಬದುಕುತ್ತಿರುವ ಕುರಿತು ಅವರೇ ಬರೆದ ಬ್ಲಾಗ್​ ಲಿಂಕ್​ ಹಂಚಿಕೊಂಡಿದ್ದು. ನನ್ನ ಪತ್ನಿ ಸೀಮಾ ಕಳೆದ ನವೆಂಬರ್‌ನಲ್ಲಿ ಸ್ತನ ಕ್ಯಾನ್ಸರ್​ಗೆ ತುತ್ತಾಗಿದ್ದಾರೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯ ವಿಮೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಜಾಗೃತಿ ಮೂಡಿಸಲು ಅವರು ತಮ್ಮ ಕ್ಯಾನ್ಸರ್​ನಿಂದ ಪಟ್ಟ ಪಾಡು ಮತ್ತು ಕಲಿತ ಪಾಠಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ . ಮಹಿಳಾ ದಿನಾಚರಣೆಯ ಶುಭಾಶಯಗಳು. ಎಂದು ಕಾಮತ್ ಅವರು ಬ್ಲಾಗ್ ಪುಟದ ಲಿಂಕ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ, ಅಲ್ಲಿ ಸೀಮಾ ಅವರು ತಮ್ಮ ಕ್ಯಾನ್ಸರ್ ಪ್ರಯಾಣವನ್ನು ವಿವರವಾಗಿ ವಿವರಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸೀಮಾ ಅವರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಈಗಾಗಲೇ ಎರಡು ಕಿಮೊಥೆರಪಿ ಸೆಷನ್‌ಗಳನ್ನು ಹೊಂದಿದ್ದಾರೆ. ಇದು 2ನೇ ಹಂತದ ಕ್ಯಾನ್ಸರ್ ಆಗಿದೆ.

ಬ್ಲಾಗ್​ನಲ್ಲಿ ಸೀಮಾ  ಕ್ಯಾನ್ಸರ್​ ದಿನಗಳ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ,  ನಾನು ಆರೋಗ್ಯವಂತ ವ್ಯಕ್ತಿಯೇ ಆಗಿದ್ದೆ. ಆದರೂ ಕ್ಯಾನ್ಸರ್​ಗೆ ತುತ್ತಾದೆ. ನಾನು ಅತಿಯಾಗಿ ಯಾರೊಂದಿಗೂ ಬೆರೆಯುವುದಿಲ್ಲ, ಅತ್ಯುತ್ತಮ ವೈದ್ಯರನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ ಎಲ್ಲಾ ಪರೀಕ್ಷೆಗಳನ್ನು ನಡೆಸುತ್ತಿರುವಾಗ ನಾನು ಅರಿತುಕೊಂಡೆ, ಬಹುಶಃ ನಾನು ಅದರ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಮಾನಸಿಕ ಅಸ್ವಸ್ಥತೆಯಂತೆ ಕ್ಯಾನ್ಸರ್ ಕೂಡ ನಮ್ಮ ದೇಶದಲ್ಲಿ ನಿಷೇಧವಾಗಿದೆ. ನನ್ನ ತಂದೆ ಆರ್ಮಿಯಲ್ಲಿ ಕೆಲಸಮಾಡುತ್ತಿದ್ದರು. ನನ್ನ ಪತಿಯನ್ನು ಸಿಂಗಾಪುರದಲ್ಲಿ ಮೊದಲು ಭೇಟಿಯಾದೆ. 2015ರಲ್ಲಿ ಮಗ ಜನಿಸಿದನು. ನಂತರದ ದಿನಗಳಲ್ಲಿ ಸ್ತನದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳತೊಡಗಿದವು. ವೈದ್ಯಕೀಯ ಪರೀಕ್ಷೆಗಳ ಬಳಿಕ ಸ್ತನ ಕ್ಯಾನ್ಸರ್​ ಇರುವುದು ಪತ್ತೆಯಾಯಿತು. ಭಾರತದಲ್ಲಿಯೇ ಕ್ಯಾನ್ಸರ್​ಗೆ ಕಾಮತ್​ ಉತ್ತಮ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು ಕ್ಯಾನ್ಸರ್​ ನೀಡಿದ ಎರಡು ದೊಡ್ಡ ಶಾಕ್​ಗಳೆಂದರೆ, ಮೊದಲನೆಯದು ಶಸ್ತ್ರಚಿಕಿತ್ಸೆಯ ನಂತರ ಸನ್ನಿಹಿತವಾದ ಸ್ತನಛೇದನ, ಎರಡನೆಯದು ಕೀಮೋಥೆರಪಿ ನಂತರ ಕೂದಲು ಉದುರುವಿಕೆ. ಶಸ್ತ್ರಚಿಕಿತ್ಸೆಯ ನಂತರ, ತ್ಯಾಜ್ಯ ದ್ರವಗಳನ್ನು ಸಂಗ್ರಹಿಸಲು ಪೈಪ್‌ಗಳನ್ನು ಅಳವಡಿಸಬೇಕಾಗಿತ್ತು.ಪ್ರತೀ 3 ವಾರಗಳಿಗೊಮ್ಮೆ ಪೈಪ್​ಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿತ್ತು. ಕಿಮೋ ಥೆರಪಿಗೂ ಮೊದಲು ಎಡ ಭುಜದಲ್ಲಿ ಔಷಧಿಯಲ್ಲಿ ಹಾಕಲು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಕೀಮೋ ಥೆರಪಿ ಆಗಿ ವಾರದ ನಂತರ ಸ್ನಾಯುಗಳ ನೊವು, ಅಶಕ್ತತೆ, ಡೈರಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದವು. ಸೀಮಾ ಮತ್ತು ನಿತಿನ್​ ಇಬ್ಬರೂ ತಲೆಯ ಮೇಲಿನ ಕೂದಲನ್ನು ತೆಗೆಸಿಕೊಂಡಿದ್ದಾರೆ.

ಕೊನೆಯಲ್ಲಿ ಅವರು ಕಲಿಕೆಯ ಅನುಭವವನ್ನು ಹಂಚಿಕೊಂಡಿದ್ದು, ಉತ್ತಮ ಆರೋಗ್ಯ ವಿಮಾ ಪಾಲಿಸಿ, ನಿಯಮಿತ ಆರೋಗ್ಯ ತಪಾಸಣೆಗಳ ಪ್ರಾಮುಖ್ಯತೆಯ ಬಗ್ಗೆ ಗಮನ ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ:

Women’s Day: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು

Published On - 12:41 pm, Tue, 8 March 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್