AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ

Dino Buzzati: ಕೌಂಟರಿನಲ್ಲಿ ಈ ಸಂಪುಟಕ್ಕೆ ಬೆಲೆ ತೆತ್ತು ಈಚೆ ಬರುವಾಗ ಏನನ್ನೋ ಕದ್ದುಕೊಂಡು ಬಂದ ಭಾವನೆ. ಈಗಲೂ ನನಗೆ ಆ ಭಾವನೆಯಿಂದ ಪೂರ್ತಿ ಹೊರಬರುವುದು ಸಾಧ್ಯವಾಗಿಲ್ಲ.

Literature: ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ
ಇಟಾಲಿಯನ್ ಲೇಖಕ ದೀನೊ ಬುತ್ಸಾತಿ ಮತ್ತು ಕನ್ನಡದ ವಿಮರ್ಶಕ ನರೇಂದ್ರ ಪೈ
Follow us
ಶ್ರೀದೇವಿ ಕಳಸದ
|

Updated on:Mar 15, 2022 | 3:56 PM

ದೀನೊ ಬುತ್ಸಾತಿ | Dino Buzzati 1906-1972): ಆಮೇಲೊಂದು ದಿನ, Nebraskaದ Omahaಕ್ಕೆ ಸಾಹಿತ್ಯಿಕ ಸಮಾರಂಭದಲ್ಲಿ ಭಾಗವಹಿಸಲು ಭೇಟಿಕೊಟ್ಟಿದ್ದ ಸಂದರ್ಭದಲ್ಲಿ Jackson Street Booksellers ನಲ್ಲಿ ಹೀಗೇ ಪುಸ್ತಕಗಳನ್ನು ನೋಡುತ್ತಿದ್ದಾಗ, ಅಲ್ಲಿತ್ತು ಅದು! ಅಚ್ಚಕೆಂಪು ಹೊದಿಕೆಯ, ಅದರ ಹಿಡಿಕೆಭಾಗದ ಉದ್ದಕ್ಕೂ ಕಪ್ಪುಬಿಳುಪು ಅಕ್ಷರಗಳಲ್ಲಿ ಹೆಸರು ಬರೆದುಕೊಂಡಿದ್ದ, ಉಳಿದ ಹಲವಾರು ಅಪರೂಪದ ಮತ್ತು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಅಕ್ಷರಮಾಲೆಯ ಅನುಸಾರ ಕ್ರಮಬದ್ಧವಾಗಿ ಜೋಡಿಸಿಡಲಾದ ಶೆಲ್ಫ್‌ನಲ್ಲಿ ‘ಮೂಲಬೆಲೆಯ ಅರ್ಧ ಬೆಲೆಗೆ, ಅಂದರೆ ಐದು ಡಾಲರಿಗೆ’ ಎಂದು ಹೇಳುತ್ತ ಕುಳಿತಿತ್ತು! ನನ್ನ ಬದುಕಿನಲ್ಲೇ ಇದು ಅತ್ಯಂತ ಸಂಭ್ರಮಾತಿರೇಕದ ಅಚ್ಚರಿ ಕೊಟ್ಟ ಏಕೈಕ ಪುಸ್ತಕದಂಗಡಿಯಾಗಿ ನೆನಪಿನಲ್ಲುಳಿದಿದೆ. ಕೌಂಟರಿನಲ್ಲಿ ಈ ಸಂಪುಟಕ್ಕೆ ಬೆಲೆ ತೆತ್ತು ಈಚೆ ಬರುವಾಗ ಏನನ್ನೋ ಕದ್ದುಕೊಂಡು ಬಂದ ಭಾವನೆ ಕಾಡುತ್ತಿತ್ತು. ಈಗಲೂ ನನಗೆ ಆ ಭಾವನೆಯಿಂದ ಪೂರ್ತಿ ಹೊರಬರುವುದು ಸಾಧ್ಯವಾಗಿಲ್ಲ. ಅಷ್ಟೊಂದು ದೀರ್ಘಕಾಲದ ನಿರಂತರ ನಿರಾಶೆಯ ಹುಡುಕಾಟ, ನಿರೀಕ್ಷೆಗಳ ಬಳಿಕ ಅಷ್ಟೊಂದು ಕಡಿಮೆ ಬೆಲೆಗೆ ಅದನ್ನು ಪಡೆದುಕೊಂಡಿದ್ದು ಹೀಗೆ ಆ ಭಾವದಿಂದ ತಪ್ಪಿಸಿಕೊಳ್ಳಲು ಆಗದೇ ಹೋಗಿದ್ದಕ್ಕೆ ಕಾರಣ. ಅನುವಾದ : ನರೇಂದ್ರ ಪೈ, ವಿಮರ್ಶಕ (Narendra Pai)

ಇದು, Kevin Brockmeier ಎಂಬಾತ ದೀನೊ ಬುತ್ಸಾತಿಯ ಪುಸ್ತಕ Catastrophe ಗೆ ಬರೆದ ಪ್ರಸ್ತಾವನೆ:

(ಭಾಗ 3)

ಆ ರಾತ್ರಿ, ನನ್ನ ರೂಮಿನಲ್ಲಿ ನಾನೊಬ್ಬನೇ ಕುಳಿತು ಆ ಅಪರೂಪದ ಪುಸ್ತಕದ ಹಾಳೆಗಳನ್ನು ತೆರೆದೆ. ಒಳಗಡೆ, Something Beginning with L ಎಂಬ ಹೆಸರಿನ ಕತೆಯ ಪುಟದಲ್ಲಿ ಬುಕ್‍ಮಾರ್ಕ್ ಇಟ್ಟ ತೆರದಲ್ಲಿ ಒಂದು ರಸೀತಿ ಇತ್ತು, ಶನಿವಾರ, ದಿನಾಂಕ ಆಗಸ್ಟ್ 31, 1991, ಸಂಜೆ 5 ಗಂಟೆ 15 ನಿಮಿಷಕ್ಕೆ ಖರೀದಿಸಿದ ಕುರುಹಾಗಿ ನಾಲ್ಕು ಡಾಲರ್, ಮುವ್ವತ್ತಾರು ಸೆಂಟ್ಸ್‌ಗಳಿಗೆ ಬರೆದ ರಸೀತಿ. ( ಅವು ನನ್ನ ಕಾಲೇಜಿನ ಆರಂಭಿಕ ದಿನಗಳು. ನನಗಾಗ ಯಾರೆಂದರೆ ಯಾರೂ ಗೊತ್ತಿರಲಿಲ್ಲ. ಆ ದಿನ ಸಂಜೆ ಐದೂಕಾಲಿಗೆ ಬಹುಶಃ ರೂಮಿನಲ್ಲಿ ನಾನೊಬ್ಬನೇ ಹಾಸುಗೆಯ ಮೇಲೆ ಮಕಾಡೆ ಬಿದ್ದುಕೊಂಡು ಊರಿಗೆ ಹೋಗಿದ್ದ ರೂಮ್‌ಮೇಟ್‌ನಿಂದಾಗಿ ನನಗೆ ಅನಾಯಾಸ ದಕ್ಕಿದ ಏಕಾಂತವನ್ನು ಬಳಸಿಕೊಂಡು ಇಯರ್‌ಫೋನ್ ಇಲ್ಲದೇ ರೆಕಾರ್ಡರ್ ಕೇಳುತ್ತಿದ್ದೆ. ನೇರ ಕೆಫಟೇರಿಯಾಕ್ಕೆ ಹೋಗಿ ಸಿಕ್ಕಿದ್ದರಲ್ಲಿ ದೊಡ್ಡಪಾಲು ಎತ್ತಿಕೊಂಡು ಸಂಜೆಯ ಪೂರ್ಣಲಾಭ ಎತ್ತಲೇ ಅಥವಾ ಇನ್ನೂ ಅರ್ಧಗಂಟೆ ತಡೆದು ಹೊರಡಲೇ ಎಂದು ಯೋಚಿಸುತ್ತಿದ್ದಿರಬೇಕು.) ರಸೀತಿಯ ಬೆನ್ನ ಮೇಲೆ, ಹುಡುಗಿಯದೇ ಇರಬೇಕೆಂದು ಅನಿಸುವ ಕೈಬರಹದಲ್ಲಿ ಒಂದು ಕವನವಾಗಿರಬಹುದಾದ, ಅಥವಾ ಯಾವುದೋ ಒಂದು ಕತೆಯ ಮೇಲಿನ ಟಿಪ್ಪಣಿಗಳಾಗಿರಬಹುದಾದ ಕೆಲವೊಂದು ಶಬ್ದಗಳಿದ್ದವು:

ಬೆನ್ನು ಹಾಕಿದ ಶಬ್ದವಿಲ್ಲದ ನೋಟ ದೂರದಿಂದ ಅವಳ ಮಾತುಗಳು ಅಂತರ ಆದಾಗ್ಯೂ ಮೌನ

ಇದನ್ನೂ ಓದಿ, ಭಾಗ 1 : Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ

Kannada Critic Narendra Pai Translated Dino Buzzati’s books

ಬುತ್ಸಾತಿ ಕೃತಿಗಳು

ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ. ಮನೆಗೆ ಮರಳುತ್ತ ವಿಮಾನದಲ್ಲಿಯೇ ಕತೆಗಳನ್ನೆಲ್ಲ ಓದುವೆ ಎಂದುಕೊಂಡು ಸ್ವಸ್ಥ ಮಲಗಿಬಿಟ್ಟೆ. Catastrophe ಏನೂ ದೊಡ್ಡ ಸಂಕಲನವಲ್ಲ. ಆದರೆ ಸಂಕಲನದ ಕತೆಗಳು ಹೀಗೆ ಓದಿ ಮುಗಿಸಿದ್ದೇ ಹಾಗೆ ಮುಗಿದು ಹೋಗುವಂಥವಲ್ಲ. ಪರಿಣಾಮದಲ್ಲಿ ಅವು ಅಲ್ಪಾಯುವಲ್ಲ. ಅವುಗಳ ಸಂಕ್ಷಿಪ್ತ ಗಾತ್ರವೇ ಅವುಗಳ ಸಾಂದ್ರ ಗಟ್ಟಿಗತನವನ್ನು ಕುರಿತು ಹೇಳುವಂತಿವೆಯೇ ಹೊರತು ಈಗ, ಇಲ್ಲಿ, ಈ ಕ್ಷಣಕ್ಕೆ ಮಾತ್ರ ಸಲ್ಲುವ ಗುಣವನ್ನಲ್ಲ. ನನ್ನ ವಿಮಾನ ನೆಲ ಸ್ಪರ್ಶಿಸುವುದಕ್ಕೂ ಮೊದಲೇ ನಾನು ಕೊನೆಯ ಪುಟವನ್ನು ತಲುಪಿದ್ದೆ. ಅವುಗಳಲ್ಲಿನ ಅತ್ಯುತ್ತಮ ಕತೆಗಳಲ್ಲಿ ಬುತ್ಸಾತಿಯ ಸಾರ್ವಕಾಲಿಕ ಶ್ರೇಷ್ಠ ಕತೆಗಳಾದ The Colomber, The Falling Girl ಮತ್ತು The Time Machine ಸೇರಿದ್ದು ಅವೆಲ್ಲವೂ ನನ್ನ ಖಾಸಗಿ ಆರಾಧನೆಯ ಮರೆಯಬಾರದ ಸಣ್ಣಕತೆಗಳ ಸಂಪುಟವನ್ನು ಅದಾಗಲೇ ಅಲಂಕರಿಸಿಬಿಟ್ಟಿದ್ದವು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Literature: ಆತನ ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೂ ನೂರಾರು ಡಾಲರ್, ಆದರೆ ಕೆಲ ಕ್ಷಣಗಳಲ್ಲೇ ಅಲಭ್ಯ!

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/narendra-pai

Published On - 3:05 pm, Tue, 15 March 22

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​