AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ಆತನ ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೂ ನೂರಾರು ಡಾಲರ್, ಆದರೆ ಕೆಲ ಕ್ಷಣಗಳಲ್ಲೇ ಅಲಭ್ಯ!

Dino Buzzati : ಹಲವು ಬಾರಿ ನನ್ನ ಕೈಗೆಟಕುವ ಬೆಲೆಗೆ ಈ ಪುಸ್ತಕ ಕಾಣಿಸಿಕೊಂಡಾಗಲೆಲ್ಲ ಆರ್ಡರ್ ಮಾಡುತ್ತಿದ್ದೆ, ತಿಂಗಳ ಕಾಲ ಹಾದಿ ಕಾಯುತ್ತ ಕೂರುತ್ತಿದ್ದೆ. ಪದೇಪದೆ ಬೆನ್ನುಬೆನ್ನಿಗೆ ಅದು ನನ್ನತನಕ ತಲುಪಲು ನಿರಾಕರಿಸುತ್ತಲೇ ಇತ್ತು.

Literature: ಆತನ ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೂ ನೂರಾರು ಡಾಲರ್, ಆದರೆ ಕೆಲ ಕ್ಷಣಗಳಲ್ಲೇ ಅಲಭ್ಯ!
ಇಟಾಲಿಯನ್ ಲೇಖಕ ದೀನೊ ಬುತ್ಸಾತಿ ಮತ್ತು ಕನ್ನಡದ ವಿಮರ್ಶಕ ನರೇಂದ್ರ ಪೈ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Mar 15, 2022 | 3:56 PM

Share

ದೀನೊ ಬುತ್ಸಾತಿ | Dino Buzzati 1906-1972) : ಅದೆಲ್ಲ ಹೀಗೆ ಆಯ್ತು. The Tartar Steppe ಓದಿ ಮುಗಿಸಿದ್ದೇ ಬುತ್ಸಾತಿ ಬರೆದ ಎಲ್ಲವನ್ನೂ (ಇಂಗ್ಲೀಷಿನಲ್ಲಿ ಲಭ್ಯವಿರುವ) ಓದಲೇಬೇಕೆಂದು ತೀರ್ಮಾನಿಸಿಬಿಟ್ಟೆ. ಆಗ ಅವನ ಸಚಿತ್ರ ಮಕ್ಕಳ ಕಾದಂಬರಿ, The Bear’s Famous Invasion of Sicily ಹೊಸದಾಗಿ ಅಚ್ಚಿನಲ್ಲಿತ್ತು. ಅದಕ್ಕೆ Lemony Snicket ಬರೆದ ವಿವರವಾದ ಪ್ರಸ್ತಾವನೆಯೂ ಜೊತೆಗಿತ್ತು. ಕಾದಂಬರಿಯ ಅದ್ಭುತರಮ್ಯವೂ ವೈನೋದಿಕವೂ ಆದ ಧಾಟಿಗೆ ಅತ್ಯಂತ ಸೂಕ್ತವಾದ ಧ್ವನಿಯಲ್ಲಿಯೇ ನಾಗರಿಕತೆ ಎಂಬುದು ವನಗಿರಿಕಂದರತನಕ್ಕೆ ಒಡ್ಡುವ ಅಪಾಯಗಳ ಕುರಿತು, ಅಥವಾ ಸ್ವಲ್ಪ ಸ್ಥೂಲವಾಗಿ ಹೇಳುವುದಾದರೆ ಮಾನವೀಯತೆ ಎಂಬುದು ವನ್ಯ ಸ್ವಾಭಾವಿಕತೆಗೆ ಒಡ್ಡುವ ಅಪಾಯಗಳ ಕುರಿತು ಇರುವ ಲವಲವಿಕೆಯ, ಅಸಂಗತ-ಭ್ರಾಮಕ ಧಾಟಿಯ ಟಿಪ್ಪಣಿಯದು. Snicketನ ಸ್ವಂತ ಕಾದಂಬರಿಗಳಲ್ಲಿಯೇ ಕಾಣಸಿಗದ ನುಡಿಕಟ್ಟಿನ ಟಿಪ್ಪಣಿ. ಇದರ ಬೆನ್ನಹಿಂದೆಯೇ ಬುತ್ಸಾತಿಯ ಚಿತ್ರಕಥಾ ಕಾದಂಬರಿ, ನಾದದೇವತೆಯ ಪುರಾಣದ ಮೇಲಿನ ಭರ್ಜರಿ ಸವಾರಿಯಂತಿರುವ Poem Strip, ಇದರಲ್ಲಿ ಬುತ್ಸಾತಿ ಸ್ವತಃ ಭೂಗತ ಜಗತ್ತಿನ ಗುಪ್ತದ್ವಾರದಲ್ಲಿ ಸಿಗರೇಟ್ ಎಳೆವ ಒಬ್ಬ ಕಾವಲುಗಾರನ ಪಾತ್ರದಲ್ಲಿ ಚಿಕ್ಕ ಪಾತ್ರವಹಿಸುತ್ತಾನೆ. ಅನುವಾದ : ನರೇಂದ್ರ ಪೈ, ವಿಮರ್ಶಕ (Narendra Pai)

ಇದು, Kevin Brockmeier ಎಂಬಾತ ದೀನೊ ಬುತ್ಸಾತಿಯ ಪುಸ್ತಕ Catastrophe ಗೆ ಬರೆದ ಪ್ರಸ್ತಾವನೆ:

(ಭಾಗ 2)

ಎರಡೂ ಪುಸ್ತಕಗಳು ನಿಜಕ್ಕೂ ದೊಡ್ಡ ನಿಧಿಯಿದ್ದಂತೆ. ಆನಂತರ ದಶಕಗಳ ಹಿಂದಿನ ಇಂಗ್ಲೀಷಿನಲ್ಲಿರುವ ಬುತ್ಸಾತಿಯ ಆರು ಸಂಪುಟಗಳು; ಅವನ ಕತೆಗಳ, ಕೆಲವೊಮ್ಮೆ ಭಯಭೀತಗೊಳಿಸುವ, ಕೆಲವೊಮ್ಮೆ ಚಲನೆಯೇ ಇಲ್ಲದ ಕಥಾನಕ ಎನಿಸುವ, ಸದಾ ಸಂಭ್ರಾಂತಗೊಳಿಸುವಷ್ಟು ಮಾಯಕತೆಯ ಕಥಾಸಂಕಲನಗಳಾದ Restless Nights ಮತ್ತು The Siren. ನೋವಿನಲೆಯಲ್ಲೆ ತೇಲುವ ಪ್ರೇಮದ ಅಮಲಿನಲ್ಲಿರುವ ಆತ್ಮಚರಿತ್ರಾತ್ಮಕ ಕಾದಂಬರಿ A Love Story. ವಯಸ್ಕ ಬುತ್ಸಾತಿಯ ತೀರ ಎಳೆಯ ವಯಸ್ಸಿನ ಪತ್ನಿಯೊಂದಿಗಿನ ಒಡನಾಟದ ಕಥಾನಕವಿದು. ಕೃತಕ ಬೌದ್ಧಿಕತೆ ಮತ್ತು ಡಿಜಿಟಲ್ ಆವಿರ್ಭವದ ವೈಜ್ಞಾನಿಕ ವಿಶ್ಲೇಷಣೆಯ Larger than Life. ಅವನ ಕ್ಲಾಸಿಕ್ ವೃತ್ತಿಪರತೆಯ ಪತ್ರಕರ್ತನ ನೆಲೆಯ, ಮೂಲತಃ ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಅವನು ದುಡಿದ Milanese ಸುದ್ದಿಪತ್ರಿಕೆಗೆ ಕಂತುಗಳಲ್ಲಿ ಬರೆದ The Giro d’Italia:Coppi Versus Bartali at the 1949 Tour of Italy.

ಇದಾದ ಮೇಲೆ ಈ Catastrophe. 1965ರಲ್ಲಿ Calder and Boyars ಪ್ರಕಟಿಸಿದರು ಎನ್ನಲಾದ, 1981ರಲ್ಲಿ Calder ರಿಂದ ಪುನರ್‌ ಮುದ್ರಣಗೊಂಡಿತು ಎನ್ನಲಾದ ಈ ನಿರ್ದಿಷ್ಟ ಸಂಪುಟವನ್ನು ದಕ್ಕಿಸಿಕೊಳ್ಳಲು ನಾನು ಮಾಡಿದ ಪ್ರತಿಯೊಂದು ಪ್ರಯತ್ನವೂ ವಿಫಲವಾಗಿದೆ. ಹೆಚ್ಚು ಬಳಸದ ಸೆಕೆಂಡ್ ಹ್ಯಾಂಡ್ ಪುಸ್ತಕ ಕೂಡ ಹಲವು ನೂರು ಡಾಲರುಗಳ ಬೆಲೆಗೆ ಕಾಣಿಸಿಕೊಂಡರೂ ಕ್ಷಣಾರ್ಧದಲ್ಲಿ ಸದ್ಯ ಅಲಭ್ಯ ಎನಿಸಿಕೊಂಡು ಬಿಡುತ್ತಿತ್ತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಯಾವದರಲ್ಲಿಯೂ ನಿನ್ನ ಜೀವ ಇಡಬ್ಯಾಡ ಬೇಟ್ಯಾ ’

Kannada Critic Narendra Pai Translated Dino Buzzati’s books

ಬುತ್ಸಾತಿ ಕೃತಿಗಳು

ಒಂದೆರಡು ಬಾರಿಯಲ್ಲ, ಹಲವು ಹತ್ತು ಬಾರಿ ನನ್ನ ಕೈಗೆಟಕುವ ಬೆಲೆಗೆ ಈ ಪುಸ್ತಕ ಕಾಣಿಸಿಕೊಂಡಾಗಲೆಲ್ಲ ನಾನದನ್ನು ಆರ್ಡರ್ ಮಾಡುತ್ತಿದ್ದೆ ಮತ್ತು ವಾರಗಟ್ಟಲೆ, ಕೆಲವೊಮ್ಮೆ ತಿಂಗಳ ಕಾಲ ಅದರ ಹಾದಿ ಕಾಯುತ್ತ ಕೂರುತ್ತಿದ್ದೆ ಮತ್ತು ಪದೇಪದೇ, ಬೆನ್ನುಬೆನ್ನಿಗೆ ಅದು ನನ್ನ ತನಕ ತಲುಪಲು ನಿರಾಕರಿಸುತ್ತಲೇ ಇತ್ತು. ಪ್ರತಿಬಾರಿ ನಾನು ಕೈಚಾಚಿದಷ್ಟೂ ಹಣ್ಣು ನನ್ನ ಎಟುಕಿಗೆ ಸಿಗದಷ್ಟು ಮೇಲಕ್ಕೇರುತ್ತಿತ್ತು.

ಪ್ರತಿಬಾರಿ ನಾನು ಬೊಗಸೆಯೊಡ್ಡಿದಷ್ಟೂ ನೀರು ಕೈಚೆಲ್ಲಿಹೋಗುತ್ತಿತ್ತು. ಅಷ್ಟೇನೂ ಪ್ರಚಾರದಲ್ಲಿಲ್ಲದ ಮತ್ತು ಸಾಮಾನ್ಯವಾಗಿ ಅವಗಣಿಸಲ್ಪಟ್ಟ ಒಬ್ಬ ಬರಹಗಾರನ ಯಾವುದಾದರೂ ಪುಸ್ತಕವನ್ನು ಸಂಪಾದಿಸುವುದೆಂದರೆ ಈ ದಿನಗಳಲ್ಲಿ ಹೀಗೆಯೇ, ವಿಪರೀತ ಕಷ್ಟದ ಕೆಲಸವಾಗುತ್ತಿದೆ. ಎಂದಾದರೂ ಈ ಪುಸ್ತಕದ ಮೇಲೆ ನಾನು ನನ್ನ ಕೈಯಿಟ್ಟೇನೆಂಬ ನಂಬುಗೆಯೇ ನನಗೆ ಹೊರಟುಹೋಯ್ತು. ಹಾಗೆ ಅನುಮಾನಿಸುವುದೆಂದರೆ, ನಿಜಾರ್ಥದಲ್ಲಿ ಅಂಥ ಒಂದು ಪುಸ್ತಕವೇ ಇಲ್ಲ ಎಂದಂತೆ. ಅಂಥ ಒಂದು ಪುಸ್ತಕ ನಿಜಕ್ಕೂ ಇದ್ದಿದ್ದೇ ಇಲ್ಲ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 1 : Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ 

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/narendra-pai

Published On - 2:25 pm, Tue, 15 March 22

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ