Music : ‘ನಾಕುತಂತಿಯ ಮಿಡಿತ’ ಹಿಂದೂಸ್ತಾನಿ ಗಾಯಕಿ ಶ್ರೀಮತಿದೇವಿಯವರ ಅಂಕಣ ನಾಳೆಯಿಂದ ಆರಂಭ

Writing : ‘ಈ ಅಭಿವ್ಯಕ್ತಿಯಲ್ಲಿ ಭಾಷೆ, ಕಲ್ಪನೆ ಇವುಗಳೆಲ್ಲವೂ ಸೇರಿ ವಿಷಯದ ನಿರೂಪಣೆ ಸುಂದರವಾಗಿ ಸಾಗಿದರೂ ಅದು ಸಂಗೀತವನ್ನು ಕೇಳಿ ಪಡೆಯುವ ಅನುಭವದಿಂದ ಮಾರು ದೂರವಿರುವುದಂತೂ ನಿಜ. ಹಾಗಿದ್ದರೂ ನಾನೇಕೆ ಬರೆಯುತ್ತಿದ್ದೇನೆ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡೆ.’ ಶ್ರೀಮತಿದೇವಿ

Music : ‘ನಾಕುತಂತಿಯ ಮಿಡಿತ’ ಹಿಂದೂಸ್ತಾನಿ ಗಾಯಕಿ ಶ್ರೀಮತಿದೇವಿಯವರ ಅಂಕಣ ನಾಳೆಯಿಂದ ಆರಂಭ
Follow us
|

Updated on:Jan 05, 2022 | 4:36 PM

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ | Naakutantiya Midita : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಶ್ರೀಮತಿದೇವಿ (Shrimathi Devi) ಮೈಸೂರಿನಲ್ಲಿ ನೆಲೆಸಿರುವ ಗ್ವಾಲಿಯರ್ ಘರಾಣಾ ಗಾಯಕಿ. ಪಂ. ಚಂದ್ರಶೇಖರ ಪುರಾಣಿಕಮಠ, ಪಂ. ನಾರಾಯಣ ಪಂಡಿತ್, ವಿ. ಪದ್ಮಾ ತಲವಾಲ್ಕರ್, ಪಂ. ವ್ಯಾಸಮೂರ್ತಿ ಕಟ್ಟಿ, ಪಂ. ರವಿಕಿರಣ ಮಣಿಪಾಲ ಇವರಲ್ಲಿ ಸಂಗೀತಾಭ್ಯಾಸ ಮಾಡಿದ್ದು, ಪ್ರಸ್ತುತ ಮುಂಬೈನ ವಿ. ಅಪೂರ್ವ ಗೋಖಲೆಯವರಲ್ಲಿ ಕಲಿಕೆ ಮುಂದುವರಿಸಿದ್ಧಾರೆ. ಮೈಸೂರು ಆಕಾಶವಾಣಿಯ ಶಾಸ್ತ್ರೀಯ ಮತ್ತು ಸುಗಮ ಸಂಗೀತ ವಿಭಾಗದಲ್ಲಿ ಬಿ ಹೈ ಗ್ರೇಡ್ ಕಲಾವಿದರಾಗಿದ್ದಾರೆ. ಮಿರಜಿನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ ಅಲಂಕಾರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಉಡುಪಿಯ ನಾದರಂಜಿನಿ ಮೆಮೊರಿಯಲ್ ಟ್ರಸ್ಟ್​ನಡಿ ‘ನಾದಪ್ರಿಯ ಪಂಡಿತ್ ನಾರಾಯಣ ಪಂಡಿತ್ ಬಂದಿಶ್ ಪ್ರಾಜೆಕ್ಟ್’ಗಾಗಿ ಗುರು ನಾರಾಯಣ ಅವರು ರಚಿಸಿದ 100 ಬಂದಿಶ್​ಗಳಲ್ಲಿ 92 ಬಂದಿಶ್​ಗಳನ್ನು ಹಾಡಿ ಅಂತರ್ಜಾಲದಲ್ಲಿ ದಾಖಲಿಸಿದ್ದಾರೆ. ದೇಶವಿದೇಶಗಳಲ್ಲಿ ನೂರಾರು ಕಛೇರಿಗಳನ್ನು ನೀಡಿದ ಇವರು ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ ಗಾಗಿ ಇವರು ಪ್ರಾರಂಭಿಸುತ್ತಿರುವ ಅಂಕಣ ‘ನಾಕುತಂತಿಯ ಮಿಡಿತ’ ನಾಳೆಯಿಂದ (ಗುರುವಾರ) ಶುರುವಾಗಲಿದ್ದು, ಮುನ್ನಾದಿನ ಅಂಕಣದ ಆಶಯ ನಿಮ್ಮ ಓದಿಗೆ.    

ಸಂಗೀತದ ಬಗ್ಗೆ ಬರೆಯುವುದು ಹಾಡುವುದಕ್ಕಿಂತ ಕಷ್ಟದ ಸಂಗತಿ. ಅದೆಷ್ಟೋ ವರ್ಷಗಳ ಹಿಂದೆ ಪ್ಲೇಟೋ ಹೇಳಿದ ‘ಕಲೆ ಎಂಬುದು ಅನುಕರಣೆಯ ಅನುಕರಣೆ. ಆದ್ದರಿಂದ ಇದು ಅಖಂಡ ಸತ್ಯದಿಂದ ಎರಡು ಪಟ್ಟು ದೂರವಾದದ್ದು’ ಎಂಬ ಮಾತು ಇಲ್ಲಿ ನೆನಪಾಗುತ್ತದೆ. ಇದನ್ನೇ ಅನ್ವಯಿಸಿಕೊಂಡು ಹೇಳುವುದಾದರೆ, ಸಂಗೀತದಲ್ಲಿ, ಸಂಗೀತದ ಪ್ರಸ್ತುತಿ ಮತ್ತು ಅದನ್ನು ಕೇಳಿ ಅನುಭವಿಸುವುದು ಪ್ರಾಥಮಿಕ ಮತ್ತು ಆದ್ಯ ಅನುಭವ ಎನಿಸಿದರೆ, ಪಡೆದ ಅನುಭವದ ಆಧಾರದಲ್ಲಿ ಅದನ್ನು ಅಕ್ಷರ ರೂಪಕ್ಕೆ ಇಳಿಸುವುದು ಎರಡನೆಯ ಹಂತದ ಅನುಭವ ಎನಿಸಿಕೊಳ್ಳುತ್ತದೆ. ಈ ಅಭಿವ್ಯಕ್ತಿಯಲ್ಲಿ ಭಾಷೆ, ಕಲ್ಪನೆ ಇವುಗಳೆಲ್ಲವೂ ಸೇರಿ ವಿಷಯದ ನಿರೂಪಣೆ ಸುಂದರವಾಗಿ ಸಾಗಿದರೂ ಅದು ಸಂಗೀತವನ್ನು ಕೇಳಿ ಪಡೆಯುವ ಅನುಭವದಿಂದ ಮಾರು ದೂರವಿರುವುದಂತೂ ನಿಜ. ಹಾಗಿದ್ದರೂ ನಾನೇಕೆ ಬರೆಯುತ್ತಿದ್ದೇನೆ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡೆ.

Naakutantiya Midita Column by Hindustani Classical Vocalist Shrimathidevi from Mysore

ಶ್ರೀಮತಿದೇವಿ

‘ಒಂದೇ ರಾಗವನ್ನು ನೂರಾರು ಕಲಾವಿದರು ಹಾಗೂ ಒಬ್ಬ ಕಲಾವಿದ/ಕಲಾವಿದೆ ನೂರು ಬಾರಿ ಒಂದೇ ರಾಗವನ್ನು ಯಾಕೆ ಮತ್ತು ಹೇಗೆ ಹಾಡುತ್ತಾರೆ’ ಎನ್ನುವುದನ್ನು ಯೋಚಿಸಿದಾಗ ಅಲ್ಲಿ ಅವರು ರಾಗವನ್ನು ಮಂಡಿಸಲು ಅಥವಾ ತನ್ನ ವಿದ್ವತ್ ಪ್ರದರ್ಶನಕ್ಕೆ ಕುಳಿತಿರುವುದಿಲ್ಲ. ಬದಲಾಗಿ ಈ ರಾಗದಲ್ಲಿನ ತಮ್ಮ ಅನುಭವವನ್ನು, ತಾವು ಕಂಡುಕೊಂಡ ಭಾವವನ್ನು, ಪ್ರತಿಬಾರಿಯೂ ಗೋಚರಿಸುವ ಹೊಸ ರೂಪವನ್ನು, ಈ ಕ್ಷಣ ತಮಗೆ ಒಲಿದಷ್ಟು ಹಾಡಿ ಸಂತೋಷ ಪಡುವ/ಮತ್ತೊಬ್ಬರೊಂದಿಗೆ ಹಂಚಿಕೊಂಡು ಖುಷಿಪಡಿಸುವ ಗುರಿ ಹೊಂದಿರುತ್ತಾರೆ ಎಂಬ ಉತ್ತರ ನನಗೆ ಸಿಕ್ಕಿತು. ಮತ್ತು ಅದೇ ಭಾವ, ಆಸೆ, ನಿರೀಕ್ಷೆ ಈ ಲೇಖನಗಳದ್ದು.

ಹಿಂದೂಸ್ತಾನಿ ಸಂಗೀತ ಕಲಿಯಬೇಕೆಂಬ ಆಸೆ ಹೊತ್ತು ದಕ್ಷಿಣ ಕನ್ನಡದ ಮೂಡುಬಿದ್ರೆಯಿಂದ ಧಾರವಾಡಕ್ಕೆ ಹೋಗಿ ಅಲ್ಲಿ ಎದುರಾದ ಪ್ರತಿ ಕ್ಷಣವನ್ನು ಸಂಗೀತದೊಂದಿಗೇ ಕಳೆದ ನನಗೆ ಸಂಗೀತವನ್ನು ಧಾರವಾಡದಿಂದ ಪ್ರತ್ಯೇಕಿಸಿ ನೋಡುವುದು ಸಾಧ್ಯವಾಗಿಲ್ಲ. ಆ ಎಲ್ಲಾ ನೆನಪುಗಳ ಸಂಚಯವನ್ನು ಸಂಚಿಕೆಯಾಗಿ ಇದೀಗ ನಿಮ್ಮೊಂದಿಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಂಚಿಕೊಳ್ಳಲಿದ್ದೇನೆ.

*

ಶ್ರೀಮತಿದೇವಿ ಬರೆದ ಈ ಬರಹವನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ : ಹಡಗು ದಡ ಮುಟ್ಟಿತೇ ಎಂದು ಕೇಳುವವರು ದಾರಿಯ ಬಗ್ಗೆ ಯೋಚಿಸಲಾರರು

Published On - 4:26 pm, Wed, 5 January 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ