AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Best Friends Day 2021: ನೋವಲ್ಲೂ ಜತೆಗಿರುವ ಉತ್ತಮ ಸ್ನೇಹಿತರನ್ನು ನೆನೆಯಿರಿ

ನಾವು ಖುಷಿಯಲ್ಲಿದ್ದಾಗ ಎಲ್ಲರೂ ನಮ್ಮ ಜತೆ ಇರುತ್ತಾರೆ. ಆದರೆ ನಾವು ನೋವಿನಲ್ಲಿರುವಾಗಲೂ ನಮ್ಮ ಜತೆ ಇರುವವರು ನಿಜವಾದ ಸ್ನೇಹಿತರಾಗಿರುತ್ತಾರೆ. ಅಂತವರ ಜತೆ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಕಳೆಯಬೇಕು.

National Best Friends Day 2021: ನೋವಲ್ಲೂ ಜತೆಗಿರುವ ಉತ್ತಮ ಸ್ನೇಹಿತರನ್ನು ನೆನೆಯಿರಿ
ಪ್ರಾತಿನಿಧಿಕ ಚಿತ್ರ
preethi shettigar
| Edited By: |

Updated on: Jun 08, 2021 | 10:20 AM

Share

ಸ್ನೇಹಿತನಿಲ್ಲದ ಜೀವನ ಬಾನಿಲ್ಲದ ಚಂದಿರನಿದ್ದಂತೆ ಎಂಬ ಮಾತಿದೆ. ಅದು ನೂರಕ್ಕೆ ನೂರು ನಿಜ. ಬಾಲ್ಯದಿಂದ ಹಿಡಿದು ಮುಪ್ಪಿನವರೆಗೂ ಒಬ್ಬ ಸ್ನೇಹಿತ ಬೇಕು. ಗೆಳೆಯ-ಗೆಳತಿ ಎನ್ನುವ ಸಂಬಂಧಗಳ ಅರಿವಿರದವರು ಬಹುಷಃ ಜೀವನದಲ್ಲಿ ಅದೆಷ್ಟೋ ಸುಂದರ ಸನ್ನಿವೇಶಗಳನ್ನು ಕಳೆದುಕೊಂಡಿರುತ್ತಾರೆ. ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡುವುದರಿಂದ ಹಿಡಿದು, ಪರೀಕ್ಷೆ ಹಿಂದಿನ ದಿನ ನೋಡ್ಸ್ ಕೊಡುವ, ಪ್ರೀತಿಯ ನಿವೇದನೆ ಮಾಡಲು ಬೆನ್ನಿಗೆ ಕಾವಾಲಾಗಿ ನಿಲ್ಲುವ, ತುಂಟಾಟ ಮಾಡಿ ಸಿಕ್ಕಿ ಹಾಕಿಕೊಂಡಾಗ ನೆನಪಾಗುವ ಗೆಳೆಯರು ನಿಜಕ್ಕೂ ಸದಾ ಜತೆಗಿರಬೇಕು. ಜೀವನದಲ್ಲಿನ ಅದೆಷ್ಟೋ ಘಟನೆಗಳನ್ನು ಪೋಷಕರಲ್ಲಿ ಹೇಳಲು ಮುಜುಗರ ಭಾವ ಕಾಡುತ್ತದೆ. ಆದರೆ ಸ್ನೇಹಿತರಲ್ಲಿ ಯಾವ ಅಡ್ಡಿ, ಆತಂಕ ಇರುವುದಿಲ್ಲ. ಇಂತಹ ಉತ್ತಮ ಸ್ನೇಹಿತರನ್ನು ನೆನೆಸಿಕೊಳ್ಳಲು ಪ್ರತಿ ವರ್ಷ ಜೂನ್ 8 ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.

ಪ್ರತಿಯೊಬ್ಬರೂ ಹೊಂದಿರುವ ಉತ್ತಮ ಸ್ನೇಹಿತರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿದಿನ ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೂ ಸಹ, ನಿಮ್ಮ ಮನಸ್ಸಿಗೆ ಹತ್ತಿರದ ಗೆಳೆಯರು ಅಗತ್ಯವಿರುವಾಗ ಖಂಡಿತಾ ಜತೆಗಿರುತ್ತಾರೆ. ಕೊರೊನಾ ಸೋಂಕು ಹೆಚ್ಚಿರುವ ಈ ಕಾಲಘಟ್ಟದಲ್ಲಿ ಸ್ನೇಹಿತರನ್ನು ಭೇಟಿ ಮಾಡಿ ಶುಭಾಶಯ ತಿಳಿಸುವುದು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ನೆಚ್ಚಿನ ಸ್ನೇಹಿತರ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದು. ಕರೆ ಮಾಡಿ ಶುಭಾಶಯ ತಿಳಿಸಬಹುದು ಮತ್ತು ಎಂದಿಗೂ ಹೇಳಲಾಗದ ಕೆಲವೊಂದಿಷ್ಟು ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಬಹದು.

ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಇತಿಹಾಸ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು 1935, ಜೂನ್ 8 ರಂದು ಮೊದಲ ಬಾರಿಗೆ ಆಚರಣೆಗೆ ತರಲಾಯಿತು. ಅಂದಿನಿಂದ ಪ್ರತಿ ವರ್ಷ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಜೂನ್ 8 ರಂದು ಆಚರಿಸಲಾಗುತ್ತಿದೆ. ಕಾಲಾನಂತರದಲ್ಲಿ, ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವು ಅನೇಕ ದೇಶಗಳಲ್ಲಿ ಆಚರಣೆಗೆ ಬಂತು. ಈ ಆಚರಣೆಯೂ ಯುವಕರಲ್ಲಿ ಹೆಚ್ಚು ಮನ್ನಣೆ ಪಡೆಯಿತು. ಈ ದಿನದಂದು ವಿಶೇಷವಾಗಿ ಪಾರ್ಟಿ , ಕೆಕ್ ಕಟ್ಟಿಂಗ್ ಮಾಡಿ ತಮ್ಮ ನೆಚ್ಚಿನ ಸ್ನೇಹಿತರಿಗೆ ಶುಭಾಶಯ ಕೋರುವುದು ಆರಂಭವಾಯಿತು.

ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಮಹತ್ವ ಜೀವನದಲ್ಲಿ ನಮ್ಮ ಜತೆಗಿರುವ ಉತ್ತಮ ಸ್ನೇಹಿತರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಒಂದು ದಿನ ಬೇಕಾಗಾಗಿಲ್ಲ. ಆದರೆ ಇಂತಹದ್ದೇ ದಿನ ಎಂದು ಮೀಸಲಿಟ್ಟಾಗ ಆ ದಿನ ಸ್ನೇಹಕ್ಕೆ ಒಂದು ಮಹತ್ವದ ಬೆಸುಗೆಯಾಗುತ್ತದೆ. ಹೀಗಾಗಿ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ನಾವು ಖುಷಿಯಲ್ಲಿದ್ದಾಗ ಎಲ್ಲರೂ ನಮ್ಮ ಜತೆ ಇರುತ್ತಾರೆ. ಆದರೆ ನಾವು ನೋವಿನಲ್ಲಿರುವಾಗಲೂ ನಮ್ಮ ಜತೆ ಇರುವವರು ನಿಜವಾದ ಸ್ನೇಹಿತರಾಗಿರುತ್ತಾರೆ. ಅಂತವರ ಜತೆ ಈ ದಿನ ಕಳೆಯಬೇಕು. ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದಂದು ಉಡುಗೊರೆ ನೀಡಿ ಖುಷಿ ಪಡಿಸಬಹುದು ಮತ್ತು ಮನದಲ್ಲಿನ ಭಾವನೆಗಳ ಬಗ್ಗೆ ಸ್ನೇಹಿತರ ಜತೆ ಪರಸ್ಪರ ಹಂಚಿಕೊಳ್ಳಬಹುದು.

ಇದನ್ನೂ ಓದಿ:

World Oceans Day 2021: ಸಮುದ್ರಕ್ಕೆ ಪ್ರವಾಸ ಹೋಗುವುದು ಬಲು ಇಷ್ಟ ಎನ್ನುವವರು ಸಾಗರದ ಕಾಳಜಿಯ ಬಗ್ಗೆಯೂ ಗಮನಹರಿಸಿ

ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್