AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women‘s Day 2022: ‘ನಂಬಿಕೆ ಬಾರದೆ ಜವಾಬ್ದಾರಿ ಹೇಗೆ ತಗೋಳೋದು?’ 

Hampi Express : ಆ ನಂಬರ್‌ ಟ್ರ್ಯೂ ಕಾಲರ್​ನಲ್ಲಿ ‘ಭಾವನಾʼ ಅಂತ ಬಂತು, ಅದಕ್ಕೆ ತನ್ನ ತಂಗಿ ಹೆಸರೆಂದು ಹೇಳಿದಳು. ಆದರೆ ಆಕಡೆಯಿಂದ ಯಾರೂ ಆ ಕಾಲ್​ನ ರಿಸೀವ್‌ ಮಾಡಲಿಲ್ಲ. ಮತ್ತೆ ಅದೆ ಅನುಮಾನ! ಇದೊಂದು ಲೂಪ್‌ ಇರಬಹುದಾ?

Women‘s Day 2022: ‘ನಂಬಿಕೆ ಬಾರದೆ ಜವಾಬ್ದಾರಿ ಹೇಗೆ ತಗೋಳೋದು?’ 
ಪ್ರಾತಿನಿಧಿಕ ಚಿತ್ರ, ಸೌಜನ್ಯ : ಡಾ. ನಿಸರ್ಗ | ಲೇಖಕಿ: ಡಾ. ಜ್ಯೋತಿ ಸಾಮಂತ್ರಿ
ಶ್ರೀದೇವಿ ಕಳಸದ
|

Updated on:Mar 08, 2022 | 4:01 PM

Share

Women’s Day 2022 : ಅಷ್ಟರಲ್ಲಾಗಲೇ, ಸ್ಟೇಷನ್​ನ ಪೇದೆಗಳಿಂದ ವಿಷಯ ತಿಳಿದ ಮತ್ತೊಬ್ಬ ಪೊಲೀಸ್, ನಮ್ಮ ಮುಂದೆ ಮೂರುನಾಲ್ಕು ಸಲ ಓಡಾಡಿ, ಇವಳೇ ಎಂಬುದನ್ನ ಖಾತ್ರಿಪಡಿಸಿಕೊಂಡು ಬಂದು ನಮ್ಮನ್ನು ವಿಚಾರಿಸಿದರು. ಅವಳನ್ನು ಕುರಿತು ಕೆಲವು ಪ್ರಶ್ನೆಗಳನ್ನು ಕೇಳುತ್ತ ನನ್ನ ಬಗ್ಗೆಯೂ ಕೇಳಿದರು. ಅದಕ್ಕೆ ಆಕೆ, ‘ನನ್ನ ಫ್ರೆಂಡ್’ ಎಂದುಬಿಟ್ಟಳು. ಹೆಸರು? ಎಂದು ಕೇಳಿದಾಗ, ತುಸು ಯೋಚಿಸಿ ಭಾವನಾ ಎಂದಳು. ಆಗ ಪೊಲೀಸ್, ನನ್ನ ಬಗ್ಗೆ ಹೆಚ್ಚು ವಿಚಾರಿಸದೆ, ನಾನು ಯಾವ ಊರಿಗೆ ಹೊರಟಿದ್ದೇನೆ ಎಂದಷ್ಟೇ ಕೇಳಿ ಹೊರಟರು. ನಾನು ಎದ್ದವಳೇ ಅವರನ್ನೇ ಹಿಂಬಾಲಿಸಿದೆ. ಅವರನ್ನು ತಡೆದು, ಸೂಕ್ಷ್ಮವಾಗಿ ಎಲ್ಲ ವಿಚಾರವನ್ನೂ ತಿಳಿಸಿದೆ. ಅಷ್ಟೇ ಅಲ್ಲ, ನನಗಿನ್ನೂ ಆ ಹುಡುಗಿಯ ಮೇಲೆ ನಂಬಿಕೆ ಬಾರದ ಕಾರಣ ಬೇರೆ ಎಲ್ಲಾದರೂ ಅವಳಿಗೆ ಸೀಟ್‌ ವ್ಯವಸ್ಥೆ ಮಾಡಿಕೊಡಬಹುದಾ ಎಂದು ಕೇಳಿದೆ. ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr. Jyothi Samantri

*

(ಭಾಗ 2)

ನಾನು: ನಿಮ್‌ ಹಸ್ಬೆಂಡ್‌ ಏನ್‌ ಮಾಡ್ತಾರೆ, ಅವರ ಹೆಸರು? ಅವಳು: ಅದೆಲ್ಲ ಕೇಳ್ಬೇಡಿ. ನಾನು: ನೋಡಿ, ನೀವ್‌ ಏನು ಹೇಳಿಲ್ಲ ಅಂದ್ರೆ ನಿಮ್ಮನ್ನ ನಂಬೋದಾದ್ರು ಹೇಗೆ? ಈಗಿನ ಕಾಲದಲ್ಲಿ ಸುಳ್ಳು ಹೇಳಿ ಮೋಸ ಮಾಡೋರೇ ಜಾಸ್ತಿ, ಅಂಥದ್ರಲ್ಲಿ, ಬರಿ ಹೀಗಾಯ್ತು ಅಂತ ಹೇಳಿದ್ರೆ ಹೇಗೆ? ಈ ಥರ ಹತ್ತು ಕಥೆ ಹೇಳ್ಬಹುದು. ಅವಳು: ನಿಜ ನಿಜ… ನಂಬೇಡಿ. ಆದ್ರೆ, ನಾನ್ ಹೇಳೋ ಪರಿಸ್ಥಿತೀಲಿ ಇಲ್ವಲ್ಲ. ಅದೆಲ್ಲ ಅವ್ರಿಗೆ ಗೊತ್ತಾದ್ರೆ ನಮ್ಮಪ್ಪ ಅಮ್ಮನ್‌ ದೂರ್ತಾರೆ, ಅವ್ರಿಗೆ ಅವಮಾನ ಮಾಡ್ತಾರೆ. ನಾನು: ನಾನು ಅದನ್ನೆಲ್ಲ ಯಾರಿಗೆ ಹೇಳಳಿ? ನಿಮ್‌ ಮೇಲೆ ನಂಬಿಕೆ ಬಂದ್ರೆ ಏನಾದ್ರೂ ಸಹಾಯ ಮಾಡ್ಬಹುದು, ನನ್‌ ಜಾಗದಲ್ಲಿ ನೀವಿದ್ದಿದ್ರೆ ಏನ್‌ ಮಾಡ್ತಿದ್ರಿ? ಸುಮ್ನೆ ನಾನ್ಯಾಕೆ ರಿಸ್ಕ್‌ ತಗೊಳ್ಳಿ?

ಆಗ ಆಕೆ ನನ್ನ ಮೊಬೈಲ್‌ ತಗೊಂಡು ಒಂದ್‌ ನಂಬರ್‌ ಡಯಲ್‌ ಮಾಡಿ ಕೊಟ್ಟಳು.

ಅವಳು: ನಮ್ಮಮ್ಮನ ನಂಬರ್‌, ಅವ್ರತ್ರ ನನ್‌ ತಂಗಿ ನಂಬರ್‌ ಇಸ್ಕೊಂಡ್‌ ಮಾತಾಡಿ, ಅವಳೇ ನಿಮಗೆ ಎಲ್ಲ ಹೇಳ್ತಾಳೆ.

ಆ ನಂಬರ್‌ ಟ್ರ್ಯೂ ಕಾಲರ್​ನಲ್ಲಿ ‘ಭಾವನಾʼ ಅಂತ ಬಂತು, ಅದಕ್ಕೆ ತನ್ನ ತಂಗಿ ಹೆಸರೆಂದು ಹೇಳಿದಳು. ಆದರೆ ಆಕಡೆಯಿಂದ ಯಾರೂ ಆ ಕಾಲ್​ನ ರಿಸೀವ್‌ ಮಾಡಲಿಲ್ಲ. ಮತ್ತೆ ಅದೆ ಅನುಮಾನ! ಇದೊಂದು ಲೂಪ್‌ ಇರಬಹುದಾ?

ಇದನ್ನೂ ಓದಿ : No Delete Option: ‘ಯಾವಳೇ ಅವಳು ಅಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಗೆ!’ ವಾರ್ಡನ್ ರೌದ್ರಾವತಾರ

ಪೇದೆ ಮತ್ತೆ ಬಂದು, “ಎಸ್‌ 4 ನಲ್ಲಿ 2 ಸೀಟ್‌ ಖಾಲಿ ಇವೆ, ನೀವ್‌ ಅಲ್ಲಿ ಹೋಗ್ಬಹುದು” ಎಂದ.

ನಾನು: ಅವರು ಮಾತ್ರ ಹೋಗ್ತಾರೆ, ನಾನು ಇಲ್ಲೆ ಇರ್ತೀನಿ. ಅವಳು: ಪ್ಲೀಸ್‌, ನಾನು ಕೂಡ ಇಲ್ಲೇ ಇರ್ತೀನಿ. ಹೀಗೆ ಒಂದ್‌ ಮೂಲೇಲಿ ಕೂತ್ಕೊತೀನಿ, ನೀವ್‌ ಮಲ್ಕೊಳಿ. ನಾನು: ಬೇಡ, ಸುಸ್ತಾಗಿದ್ದೀರಿ, ಆರಾಮಾಗಿ ನಿದ್ದೆ ಮಾಡಿ, ನಾಳೆ ಬೆಳಿಗ್ಗೆ ಮಾತಾಡುವಾ.

ಅವಳು ಅಸಹಾಯಕಳಂತೆ ಮೌನ ವಹಿಸಿದಳು.

ಪೇದೆ: ನಿಮ್‌ ಫ್ರೆಂಡ್‌ ಅಂತೀರಾ, ಜೊತಿಗಿರಿ, ಅವರಿಗೂ ಒಂದ್‌ ಧೈರ್ಯ ಇರುತ್ತೆ. ನಾನು: ನಂಬಿಕೆ ಬಾರದೆ ಜವಾಬ್ದಾರಿ ಹೇಗ್‌ ಸರ್‌ ತಗೋಳೋದು? ಪೇದೆ: ನಿಮ್ಮಿಷ್ಟ.

ಹೋಗುವ ಮುಂಚೆ ಅವಳು, “ಬೆಳಿಗ್ಗೆ ಆ ನಂಬರ್​ಗೆ ಫೋನ್‌ ಮಾಡಿ ತಂಗಿ ನಂಬರ್‌ ತಗೊಳ್ಳಿ, ಅವ್ಳ ಜೊತೆ ಮಾತಾಡಿ ನಂಬಿಕೆ ಬಂದ್ರೆ ನಾನ್‌ ಇರೋ ಕಡೆ ಬನ್ನಿ ಇಲ್ಲಾಂದ್ರೆ ಬೇಡ. ತುಂಬಾ ಥ್ಯಾಂಕ್ಸ್”‌ ಎಂದಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Women’s Day 2022: ‘ತಾಳೀಗೀಳಿ ಎಲ್ಲ ಒಡವೇನೂ ಅವನ ಮುಖಕ್ಕೆ ಎಸೆದು ಬಂದುಬಿಟ್ಟೆ’

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/dr-jyothi-samantri

Published On - 12:42 pm, Tue, 8 March 22

Follow Us
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು