AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ ಉದ್ಯೋಗಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸ್ಥಳದಲ್ಲಿ ಸಿಕ್ಕ ನೋಟ್​​ನಲ್ಲಿ ಐಪಿಎಸ್​ ಅಧಿಕಾರಿ ಹೆಸರು !

ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್​ ಆಗಿ ಬ್ಯಾಂಕ್​ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್​ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್​​​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್​ ಆಗಿದ್ದರು.

ಬ್ಯಾಂಕ್​ ಉದ್ಯೋಗಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸ್ಥಳದಲ್ಲಿ ಸಿಕ್ಕ ನೋಟ್​​ನಲ್ಲಿ ಐಪಿಎಸ್​ ಅಧಿಕಾರಿ ಹೆಸರು !
ಸಾಂಕೇತಿಕ ಚಿತ್ರ
TV9 Web
| Edited By: |

Updated on: Oct 31, 2021 | 3:42 PM

Share

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬ್ಯಾಂಕ್​​ವೊಂದರ ಮಹಿಳಾ ಉದ್ಯೋಗಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೀಗ ಸೋಷಿಯಲ್​ ಮೀಡಿಯಾದಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಆಕೆಯ ಸಾವಿಗೆ ನ್ಯಾಯ ಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಅಯೋಧ್ಯೆಯಲ್ಲಿರುವ ಪಂಜಾಬ್​ ನ್ಯಾಶನಲ್​ ಬ್ಯಾಂಕ್​​​ ಶಾಖೆಯ ಉದ್ಯೋಗಿ ಶ್ರದ್ಧಾ ಗುಪ್ತಾ(32) ಎಂಬುವರು ತಮ್ಮ ಮನೆಯಲ್ಲಿ ಅಕ್ಟೋಬರ್​ 30ರಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ, ಆಕೆಯ ಕಾಲು ನೆಲಕ್ಕೆ ತಾಗುವಂತೆ ಇದ್ದು ಬಾಗಿದೆ. ಹಾಗಾಗಿ ಕೊಲೆ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಪೋಸ್ಟ್​ ಮಾರ್ಟಮ್​ ವರದಿ ಬಂದ ನಂತರವಷ್ಟೇ ಮುಂದಿನ ಮಾಹಿತಿ ನೀಡುವುದಾಗಿಯೂ ಹೇಳಿದ್ದಾರೆ.

ಸೂಸೈಡ್​​ ನೋಟ್​​ನಲ್ಲಿ ಐಪಿಎಸ್​ ಅಧಿಕಾರಿ ಹೆಸರು ಈ ಪ್ರಕರಣ ಬಹುಮುಖ್ಯ ಎನ್ನಿಸಿಕೊಳ್ಳಲು ಕಾರಣ ಶ್ರದ್ಧಾ ಗುಪ್ತಾ ಮೃತಪಟ್ಟ ಜಾಗದಲ್ಲಿ ಸಿಕ್ಕ ಒಂದು ಬರಹ. ಒಂದು ಚಿಕ್ಕ ಕಾಗದದಲ್ಲಿ ಅವರು ಸೂಸೈಡ್ ನೋಟ್​ ಬರೆದಿದ್ದಾರೆ. ಅದರಲ್ಲಿ ಈ ಹಿಂದೆ ಅಯೋಧ್ಯೆಯಲ್ಲಿ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ (SSP)ಯಾಗಿದ್ದ ಆಶೀಶ್​ ತಿವಾರಿ ಎಂಬುವರು ಹೆಸರು, ಆಕೆಯ ಮಾಜಿ ಪ್ರಿಯಕರ ವಿವೇಕ್​ ಗುಪ್ತಾ ಮತ್ತು ಫೈಜಾಬಾದ್​​ನಲ್ಲಿ ಪೊಲೀಸ್ ಆಗಿರುವ ಅನಿಲ್​ ರಾವತ್​ ಎಂಬುವರ ಹೆಸರು ಉಲ್ಲೇಖವಿದೆ. ಆದರೆ ಈ ಮೂವರ ವಿರುದ್ಧ ಮಾಡಿದ ಆರೋಪ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹಾಲಿನವನೇ ಎಚ್ಚರಿಸಿದ್ದು ಶ್ರದ್ಧಾ ಗುಪ್ತಾ 2015ರಲ್ಲಿ ಕ್ಲರ್ಕ್​ ಆಗಿ ಬ್ಯಾಂಕ್​ಗೆ ಸೇರ್ಪಡೆಯಾಗಿದ್ದರು. ಆದರೆ ನಂತರ ಡಿಪಾರ್ಟಮೆಂಟಲ್​ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆದಿದ್ದರು. 2018ರಿಂದಲೂ ಫೈಜಾಬಾದ್​​​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಂತೂ ಡೆಪ್ಯೂಟಿ ಮ್ಯಾನೇಜರ್​ ಆಗಿದ್ದರು. ಮೂಲತಃ ಲಖನೌದ ರಾಜಾಜಿಪುರಂನವರಾದ ಅವರು ಅವಿವಾಹಿತರು. ಬ್ಯಾಂಕ್​ ಶಾಖೆಯಿದ್ದಲ್ಲೇ ಮನೆ ಮಾಡಿದ್ದ ಅವರು ಆಗಾಗ ತಮ್ಮ ಮನೆಗೆ ಭೇಟಿ ಕೊಡುತ್ತಿದ್ದರು. ಶನಿವಾರ ಫೈಜಾಬಾದ್​​ನಲ್ಲಿರುವ ಅವರ ಮನೆಗೆ ಮುಂಜಾನೆ ಹಾಲು ಕೊಡುವವ ಬಂದಿದ್ದ. ಮೂರ್ನಾಲ್ಕು ಬಾರಿ ಬಾಗಿಲು ಬಡಿದಾಗಲೂ ಯಾರೂ ತೆರೆಯಲಿಲ್ಲ. ಅದನ್ನು ಆತ ಮನೆಯ ಮಾಲೀಕನಿಗೆ ತಿಳಿಸಿದ. ಬಾಗಿಲು ಒಡೆದು ನೋಡಿದಾಗ ಶ್ರದ್ಧಾ ಗುಪ್ತಾ ಹೆಣ ಕಂಡಿತ್ತು ಎಂದು  ಸ್ಥಳೀಯ ಪೊಲೀಸ್ ಅಧಿಕಾರಿ ಶೈಲೇಶ್​ ಪಾಂಡೆ ವಿವರಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​  ಶ್ರದ್ಧಾ ಗುಪ್ತಾ ಸಾವಿನ ಬೆನ್ನಲ್ಲೇ ಆಕೆಯ ಕೆಲ ಸಹೋದ್ಯೋಗಿಗಳು ಟ್ವಿಟರ್​​ನಲ್ಲಿ ವಿಷಯ ಪೋಸ್ಟ್ ಮಾಡಿದರು ಶ್ರದ್ಧಾ ಸಾವಿಗೆ ನ್ಯಾಯ ಬೇಕು ಎಂಬಂಥ ಪೋಸ್ಟರ್​​ಗಳನ್ನು ನೋಡಿದ ಹಲವರು ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಈಕೆಯ ಸಾವಿನಲ್ಲಿ ಒಬ್ಬ ಐಪಿಎಸ್ ಅಧಿಕಾರಿಯ ಹೆಸರೂ ಕೇಳುತ್ತಿದೆ. ಕೂಡಲೇ ತನಿಖೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.  #JusticeForShraddha ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಗುತ್ತಿದೆ.

 ಇದನ್ನೂ ಓದಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಮೃತ್ಯು; ಹೊಳೆಗೆ ಜಾರಿಬಿದ್ದು ದುರ್ಘಟನೆ

Rajya Sabha Bypolls: ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ