ಲಾರಿ ಪಲ್ಟಿಯಾಗಿ 4 ಕಾರ್ಮಿಕರ ಸಾವು, 7 ಮಂದಿಗೆ ಗಾಯ

ಹೈದರಾಬಾದ್: ಕಾರ್ಮಿಕರಿದ್ದ ಲಾರಿ‌ ಪಲ್ಟಿಯಾಗಿ ಸ್ಥಳದಲ್ಲೆ 4 ಕಾರ್ಮಿಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆ ಚಿಕಟಾಯಪಾಲೆಂ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಕಾರ್ಮಿಕರ ಸಾವಾಗಿದ್ದು, 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲೋಡ್ ತುಂಬಿದ ಲಾರಿ ಕೆರೆಯ ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಪರಿಣಾಮ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಲಾರಿಯಲ್ಲಿ 11 ಜನ ಕಾರ್ಮಿಕರಿದ್ದರು ಎನ್ನಲಾಗಿದೆ. ಈ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಜನ‌ ಕಾರ್ಮಿಕರಿಗೆ ಸಣ್ಣ ಪುಟ್ಟ […]

ಲಾರಿ ಪಲ್ಟಿಯಾಗಿ 4 ಕಾರ್ಮಿಕರ ಸಾವು, 7 ಮಂದಿಗೆ ಗಾಯ
ಆಯೇಷಾ ಬಾನು

Updated on: Jul 16, 2020 | 7:00 AM

ಹೈದರಾಬಾದ್: ಕಾರ್ಮಿಕರಿದ್ದ ಲಾರಿ‌ ಪಲ್ಟಿಯಾಗಿ ಸ್ಥಳದಲ್ಲೆ 4 ಕಾರ್ಮಿಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆ ಚಿಕಟಾಯಪಾಲೆಂ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಕಾರ್ಮಿಕರ ಸಾವಾಗಿದ್ದು, 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲೋಡ್ ತುಂಬಿದ ಲಾರಿ ಕೆರೆಯ ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಪರಿಣಾಮ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಲಾರಿಯಲ್ಲಿ 11 ಜನ ಕಾರ್ಮಿಕರಿದ್ದರು ಎನ್ನಲಾಗಿದೆ.

ಈ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಜನ‌ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮೃತರನ್ನು ರಂಗಾರೆಡ್ಡಿ‌ ಜಿಲ್ಲೆಯ ಅಂಬೋತುಲಾ ತಾಂಡಾಗೆ ಸೇರಿದ ಅಂಬೋತು ಹರ್ಯಾ, ಅಂಬೋತು ಗೋವಿಂದರ್, ಅಂಬೋತು ಮಧು, ರಾಟ್ಲ ದೂತಿಯಾ ಎಂದು‌ ಗುರುತಿಸಲಾಗಿದೆ. ತೌರೌರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Loading...
Unable to load recommendations.
Follow Us