AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಟ್ರಕ್​ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನು ಒಡೆದು ದಾಂಧಲೆ; ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ

ಈ ಟ್ರಕ್​ಗಳು ಕರೀಂಗಂಜ್​ನಿಂದ ಮಿಜೋರಾಂಗೆ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ಕಚಾರ್​ನ ಭಾಗಾ ಬಜಾರ್​​ ಪ್ರದೇಶಕ್ಕೆ ಹೋಗುತ್ತಿದ್ದಂತೆ ಅಲ್ಲಿ ಕೆಲವರು ಟ್ರಕ್​ಗಳನ್ನು ತಡೆದಿದ್ದಾರೆ.

4 ಟ್ರಕ್​ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನು ಒಡೆದು ದಾಂಧಲೆ; ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ
ಅಸ್ಸಾಂನ ಕಚಾರ್​ನಲ್ಲಿ ಟ್ರಕ್​ ಧ್ವಂಸ ಆಗಿರುವುದು
TV9 Web
| Edited By: |

Updated on:Aug 07, 2021 | 4:29 PM

Share

ಅಸ್ಸಾಂ-ಮಿಜೋರಾಂ ಗಡಿ(Assam-Mizoram Border )ಯಲ್ಲಿ ತುಸು ಕಡಿಮೆಯಾಗಿದ್ದ ಉಗದ್ವಿಗ್ನತೆ ಶುಕ್ರವಾರ ರಾತ್ರಿಯಿಂದ ಮತ್ತೆ ಹೆಚ್ಚಾಗಿದೆ. ಮಿಜೋರಾಂನ ನಾಲ್ಕು ಟ್ರಕ್​ಗಳನ್ನು ಅಸ್ಸಾಂನ ಕಚಾರ್(Cachar District)​ ಜಿಲ್ಲೆಯಲ್ಲಿ ಧ್ವಂಸಗೊಳಿಸಲಾಗಿದ್ದು, ಅದರ ಬೆನ್ನಲ್ಲೇ ಮತ್ತೆ ಗಡಿಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಅಸ್ಸಾಂ ಸರ್ಕಾರ ವಿಧಿಸಿದ್ದ ಪ್ರಯಾಣ ಸಲಹಾ ನೋಟಿಸ್​​​ನ್ನು ಹಿಂಪಡೆದು, ಮಿಜೋರಾಂನಿಂದ ಬರುವ ಸರಕು ವಾಹನಗಳಿಗೆ ಯಾವುದೇ ಅಡಚಣೆ ಉಂಟು ಮಾಡದಂತೆ ಸ್ಥಳೀಯರಿಗೆ ಸೂಚನೆ ನೀಡಿದ್ದಾಗ್ಯೂ, ಕಚಾರ್​ ಜಿಲ್ಲೆಯಲ್ಲಿ ಮಿಜೋರಾಂಗೆ ಸೇರಿದ್ದ ನಾಲ್ಕು ಟ್ರಕ್​ಗಳನ್ನು ಧ್ವಂಸ ಮಾಡಲಾಗಿದೆ.

ಈ ಟ್ರಕ್​ಗಳು ಕರೀಂಗಂಜ್​ನಿಂದ ಮಿಜೋರಾಂಗೆ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ಕಚಾರ್​ನ ಭಾಗಾ ಬಜಾರ್​​ ಪ್ರದೇಶಕ್ಕೆ ಹೋಗುತ್ತಿದ್ದಂತೆ ಅಲ್ಲಿ ಕೆಲವರು ಟ್ರಕ್​ಗಳನ್ನು ತಡೆದಿದ್ದಾರೆ. ನೀವು ಎಲ್ಲಿಂದ ಬಂದಿದ್ದೀರಿ ಎಂದು ಟ್ರಕ್​ ಚಾಲಕರನ್ನು ಪ್ರಶ್ನಿಸಿದ್ದಾರೆ. ಮಿಜೋರಾಂನಿಂದ ಎಂದು ಹೇಳುತ್ತಿದ್ದಂತೆ, ಟ್ರಕ್​ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನೆಲ್ಲ ರಸ್ತೆಯ ಮೇಲೆ ಬಿಸಾಕಿ, ದಾಂಧಲೆ ಎಬ್ಬಿಸಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಜು.26ರಂದು ಮೊದಲು ಎರಡೂ ರಾಜ್ಯಗಳ ನಡುವೆ ಹಿಂಸಾಚಾರ ಶುರುವಾಯಿತು. ಈ ಸಂಘರ್ಷದಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು, ಓರ್ವ ನಾಗರಿಕ ಸೇರಿ 7 ಜನರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಗಸ್ಟ್​ 5ರಂದು ಅಸ್ಸಾಂ ಸಚಿವರಾದ ಅತುಲ್ ಬೋರಾ ಮತ್ತು ಅಶೋಕ್​ ಸಿಂಘಲ್​ ಐಜ್ವಾಲಕ್ಕೆ ಭೇಟಿ ನೀಡಿ, ಮಿಜೋರಾಂ ಸಚಿವರ ಬಳಿ ಪ್ರಸಕ್ತ ವಿಚಾರದ ಕುರಿತು ಚರ್ಚಿಸಿದ್ದರು. ಅಲ್ಲಿಂದ ಸ್ವಲ್ಪ ಉದ್ವಿಗ್ನತೆಯೂ ನಿಯಂತ್ರಣದಲ್ಲಿತ್ತು.

ಇದನ್ನೂ ಓದಿ: ಗಡಿ ವಿವಾದ ಚರ್ಚೆಗೆಂದು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿ ಸಭೆ: ಸಮಿತಿ ವರದಿ ಸಲ್ಲಿಕೆ ಶೀಘ್ರ

Explainer ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷದಲ್ಲಿ 6 ಪೊಲೀಸರು ಬಲಿ, 80ಕ್ಕೂ ಹೆಚ್ಚು ಮಂದಿಗೆ ಗಾಯ; ಏನಿದು ಗಡಿ ವಿವಾದ?

4 truck carrying Egg to mizoram vandalised in Assam

Published On - 4:24 pm, Sat, 7 August 21

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’