AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗೆ ಸಿಕ್ಕ ಲಾಕೆಟ್ ನುಂಗಿದ 6 ತಿಂಗಳ ಮಗು.. ಆಮೇಲೆ ಅದನ್ನು ಹೊರತೆಗೆದಿದ್ದು ಹೇಗೆ ಗೊತ್ತಾ!?

ವೈದ್ಯರು ಮಗುವನ್ನು ಸ್ಕ್ಯಾನ್ ಮಾಡಿದ್ದು, ಹೊಟ್ಟೆಯಲ್ಲಿ ಲಾಕೆಟ್ ಪತ್ತೆಯಾಗಿದೆ. ಆದರೆ ಮಗುವಿನ ಹೊಟ್ಟೆಯಿಂದ ಲಾಕೆಟ್ ತೆಗೆಯುವುದು ಹೇಗೆ ಎಂಬುದು ಹರಸಾಹಸವಾಗಿತ್ತು. ಹೇಳೀಕೇಳೀ ಅದು ಎಳೆಯ ಮಗು. ಅದು ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಡುತ್ತದಾ ಎಂದೂ ವೈದ್ಯರು ಅನುಮಾನ/ ಆತಂಕ ವ್ಯಕ್ತಪಡಿಸಿದ್ದಾರೆ.

ಕೈಗೆ ಸಿಕ್ಕ ಲಾಕೆಟ್ ನುಂಗಿದ 6 ತಿಂಗಳ ಮಗು.. ಆಮೇಲೆ ಅದನ್ನು ಹೊರತೆಗೆದಿದ್ದು ಹೇಗೆ ಗೊತ್ತಾ!?
ಕೈಗೆ ಸಿಕ್ಕ ಲಾಕೆಟ್ ನುಂಗಿದ 6 ತಿಂಗಳ ಮಗು.. ಆಮೇಲೆ ಅದನ್ನು ಹೊರತೆಗೆದಿದ್ದು ಹೇಗೆ ಗೊತ್ತಾ!?
ಸಾಧು ಶ್ರೀನಾಥ್​
|

Updated on: Jan 09, 2024 | 2:00 PM

Share

ಸಾಮಾನ್ಯವಾಗಿ ಹೆಚ್ಚಿನ ಮಕ್ಕಳು ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕಿಕೊಂಡು ನುಂಗುತ್ತಾರೆ. ನುಂಗಿದ್ದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಆರು ತಿಂಗಳ ಬಾಲಕಿಯೊಬ್ಬಳು ಲಾಕೆಟ್ ನುಂಗಿದ್ದಾಳೆ.. ಆದರೆ ಶಸ್ತ್ರಚಿಕಿತ್ಸೆ ಮಾಡದೆ ಮಗುವನ್ನು ಸುರಕ್ಷಿತವಾಗಿಸಿ, ಲಾಕೆಟ್ ಹೊರತೆಗೆದಿದ್ದಾರೆ. ವಿವರಗಳಿಗೆ ಹೋದರೆ..

ನಲ್ಗೊಂಡ ಜಿಲ್ಲೆ ನಕ್ರೇಕಲ್ ಮಂಡಲದ ತಾಟಿಕಲ್ ಗ್ರಾಮದ ಮೊಗಿಲಿ ಈಯಮ್ಮ ಮತ್ತು ಭಾಸ್ಕರ್ ದಂಪತಿಗೆ ಚಾರ್ವಿಕಾ ಎಂಬ ಆರು ತಿಂಗಳ ಹೆಣ್ಣು ಮಗುವಿದೆ. ಮಗುವನ್ನು ಕೆಳಗೆ ಮಲಗಿಸಿದ್ದಾಗ, ಅವಳು ಕೈಗೆ ಸಿಕ್ಕ ಲಾಕೆಟ್‌ನೊಂದಿಗೆ ಆಟವಾಡಿದ್ದಾಳೆ. ಆದರೆ ಸ್ವಲ್ಪ ಸಮಯದಲ್ಲಿ ತಾಯಿ ಅಡುಗೆ ಮನೆಗೆ ಹೋದಾಗ ಚಾರ್ವಿಕಾ ಅಳುವುದನ್ನು ಕೇಳಿಸಿದೆ. ಮಗು ಯಾಕೆ ಅಳುತ್ತಿದ್ದಾಳೆ ಎಂದು ತಾಯಿ ಪರಿಶೀಲಿಸಿದಾಗ ಮಗುವಿನ ಕೈಯಲ್ಲಿ ಇರಬೇಕಾದ ಲಾಕೆಟ್ ಕಂಡುಬಂದಿಲ್ಲ. ಅದರಿಂದ ಮಗು ಲಾಕೆಟ್ ನುಂಗಿರಬಹುದೆಂದು ಶಂಕಿಸಿ ತಕ್ಷಣವೇ ನಲ್ಗೊಂಡ ಆರ್.ಕೆ. ಆಸ್ಪತ್ರೆಗೆ ಕರೆತಂದಿದ್ದಾರೆ.

ಗ್ಯಾಸ್ಟ್ರೋಲಾಜಿಸ್ಟ್ ಡಾ. ಕೀರ್ತಿ ರೆಡ್ಡಿ ಮಗುವನ್ನು ಸ್ಕ್ಯಾನ್ ಮಾಡಿದ್ದು, ಆಕೆಯ ಹೊಟ್ಟೆಯಲ್ಲಿ ಲಾಕೆಟ್ ಪತ್ತೆಯಾಗಿದೆ. ಆದರೆ ಮಗುವಿನ ಹೊಟ್ಟೆಯಿಂದ ಲಾಕೆಟ್ ತೆಗೆಯುವುದು ಹೇಗೆ ಎಂಬುದು ಹರಸಾಹಸವಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ಲಾಕೆಟ್ ತೆಗೆಯಲು ಯೋಚಿಸಲಾಗಿತ್ತು. ಹೇಳೀಕೇಳೀ ಅದು ಎಳೆಯ ಮಗು. ಅದು ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಡುತ್ತಾದಾ ಎಂದು ವೈದ್ಯರು ಅನುಮಾನ/ ಆತಂಕ ವ್ಯಕ್ತಪಡಿಸಿದ್ದಾರೆ.

Also Read: ಮನೆಯಲ್ಲಿ ಹೇಳದೆ ಕೇಳದೆ ತಮಿಳುನಾಡಿನ 3 ಶಾಲಾ ಬಾಲಕಿಯರು ಕೊರಿಯಾಗೆ ಹೊರಟು ನಿಂತರು! ಯಾಕೆ? ಆ ಮೇಲೆ ಏನಾಯಿತು?

ಡಾ. ಕೀರ್ತಿ ರೆಡ್ಡಿ ಅವರು ಯಾವುದೇ ಶಸ್ತ್ರಚಿಕಿತ್ಸೆ ನಡೆಸದೆ ಎಂಡೋಸ್ಕೋಪ್ ಮೂಲಕ ಮಗುವಿನ ಹೊಟ್ಟೆಯಿಂದ ಲಾಕೆಟ್ ಅನ್ನು ಜಾಣ್ಮೆಯಿಂದ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಇಲ್ಲದೆ ಎಂಡೋಸ್ಕೋಪಿ ಮೂಲಕ ಆರು ತಿಂಗಳ ಮಗುವಿನ ಹೊಟ್ಟೆಯಿಂದ ಲಾಕೆಟ್ ತೆಗೆಯುವುದು ಅಪರೂಪ ಎನ್ನುತ್ತಾರೆ ಡಾ. ಕೀರ್ತಿ ರೆಡ್ಡಿ. ಮಗು ಈಗ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ಹೊಟ್ಟೆಯಲ್ಲಿದ್ದ ಲಾಕೆಟ್ ತೆಗೆದು ತಮ್ಮ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ ವೈದ್ಯರಿಗೆ ಮಗುವಿನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ… ಮನೆಯಲ್ಲಿ ಮಗು ಇರುವಾಗ ಸದಾ ಮೈಯೆಲ್ಲಾ ಕಣ್ಣಾಗಿಸಿಕೊಂಡು ಜೋಪಾನ ಮಾಡುವ ಗುರುತರ ಜವಾಬ್ದಾರಿ ಪಾಲಕರದ್ದಾಗಿರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?