AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ದೆಹಲಿಗೂ ಹೋಗಬಲ್ಲೆ: ಕಂಗನಾ ಲೇವಡಿಗೆ 73ರ ಹರೆಯದ ಹೋರಾಟಗಾರ್ತಿಯ ತಿರುಗೇಟು

'₹100 ಕೊಟ್ಟರೆ ಇವರು ಪ್ರತಿಭಟನೆಗೆ ಬರ್ತಾರೆ ಎಂದು ನಟಿಯೊಬ್ಬರು ನನ್ನ ಬಗ್ಗೆ ಬರೆದಿದದ್ದರಂತೆ. ಆಕೆ ನನ್ನ ಮನೆಗೆ ಬಂದು ನೋಡಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ಆಕೆಗೆ ಗೊತ್ತಿಲ್ಲ’.

ನಾನು ದೆಹಲಿಗೂ ಹೋಗಬಲ್ಲೆ: ಕಂಗನಾ ಲೇವಡಿಗೆ 73ರ ಹರೆಯದ ಹೋರಾಟಗಾರ್ತಿಯ ತಿರುಗೇಟು
ನಟಿ ಕಂಗನಾ ರನೌತ್ ಮತ್ತು ರೈತ ಮಹಿಳೆ ಮೊಹಿಂದರ್ ಕೌರ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 02, 2020 | 12:08 PM

Share

ಲುಧಿಯಾನ: ‘ಶಾಹೀನ್‌ಬಾಗ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಜ್ಜಿ ಈಗ ರೈತರ ಪ್ರತಿಭಟನೆಯಲ್ಲಿಯೂ ಇದ್ದಾರೆ. ₹100 ಕೊಟ್ಟರೆ ಇವರು ಪ್ರತಿಭಟನೆಗೆ ಬರುತ್ತಾರೆ’

– ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಅಜ್ಜಿಯೊಬ್ಬರ ಫೋಟೊ ಶೇರ್ ಮಾಡಿ ನಟಿ ಕಂಗನಾ ರನೌತ್ ಈ ರೀತಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ನಲ್ಲಿ ಹೇಳಿರುವುದು ಸುಳ್ಳು ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡ ನಂತರ ಕಂಗನಾ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಅಂದಹಾಗೆ ಕಂಗನಾ ಅವರ ಟ್ವೀಟ್ ಮೂಲಕ ಸುದ್ದಿಯಾದ ಆ ಹಿರಿಯ ಮಹಿಳೆಯ ಹೆಸರು ಮೊಹಿಂದರ್ ಕೌರ್. ವಯಸ್ಸು 73. ಬಟಿಂಡಾದ ಬಹಾದವುರ್‌ಗಡ್ ಜಾಂದಿಯನ್ ಗ್ರಾಮದ ನಿವಾಸಿ ಮೊಹಿಂದರ್ ಕೌರ್ ಅವರಿಗೆ 13 ಎಕರೆ ಜಮೀನು ಇದೆ. ಪತಿ ಅಸ್ತಮಾ ರೋಗ ಪೀಡಿತರಾದ ನಂತರ ಆ ಜಮೀನಿನ ಜವಾಬ್ದಾರಿ ವಹಿಸಿರುವವರು ಮೊಹಿಂದರ್.

‘₹100 ಕೊಟ್ಟರೆ ಇವರು ಪ್ರತಿಭಟನೆಗೆ ಬರ್ತಾರೆ ಎಂದು ನಟಿಯೊಬ್ಬರು ನನ್ನ ಬಗ್ಗೆ ಬರೆದಿದದ್ದರಂತೆ. ಆಕೆ ನನ್ನ ಮನೆಗೆ ಬಂದು ನೋಡಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ಆಕೆಗೆ ಗೊತ್ತಿಲ್ಲ. ಆದರೆ ನಾನು ₹100 ಲಭ್ಯ ಎಂದು ಆಕೆ ಹೇಳುತ್ತಿದ್ದಾಳೆ. ನನಗೆ ಮೂವರು ಹೆಣ್ಣು ಮಕ್ಕಳು. ಮೂವರಿಗೂ ಮದುವೆಯಾಗಿದೆ. ನನ್ನ ಮಗ, ಸೊಸೆ ಮತ್ತು ಅವರ ಮಕ್ಕಳು ನನ್ನ ಜತೆ ವಾಸಿಸುತ್ತಿದ್ದಾರೆ. ನಾನು ಬತ್ತ ಬೆಳೆಯುತ್ತೇನೆ. ಈಗಲೂ ಹತ್ತಿಗಿಡದಿಂದ ಹತ್ತಿ ಕೊಯ್ಯುತ್ತೇನೆ. ನಮ್ಮ ಕುಟುಂಬಕ್ಕೆ ಅಗತ್ಯವಿರುವ ತರಕಾರಿಗಳನ್ನು ನಾವೆೇ ಬೆಳೆಸುತ್ತೇವೆ. ಈಗ ಕೃಷಿ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ನಾನು ರೈತರ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವುದು. ನಾನೂ ರೈತ ಮಹಿಳೆ. ಪೆಟ್ರೋಲ್ ಬಂಕ್‌ಗಳ ಮುಂದೆಯೂ ನಾವು ಧರಣಿ ಸತ್ಯಾಗ್ರಹ ಮಾಡುತ್ತೇವೆ’ ಅಂತಾರೆ ಈ ಅಜ್ಜಿ.

ಢಬ್‌ವಲಿ ಗಡಿಭಾಗದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿಯೂ ಭಾಗಿಯಾಗಲು ಮೊಹಿಂದರ್ ಬಂದಿದ್ದರು. ಆದರೆ ಮೆರವಣಿಗೆ ನಡೆಸಬೇಕಾಗಿ ಬಂದಿದ್ದರಿಂದ ಆಕೆಯನ್ನು ವಾಪಸ್ ಕಳುಹಿಸಿದೆವು. ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ಆಕೆ ಹಟ ಹಿಡಿದಿದ್ದರು ಎಂದು ಭಾರತೀಯ ಕಿಸಾನ್ ಸಂಘಟನೆಯ ಬ್ಲಾಕ್ ಅಧ್ಯಕ್ಷ ಧರಂಪಾಲ್ ಹೇಳುತ್ತಾರೆ.

ಈಗಲೂ ನಾನು ದೆಹಲಿಗೆ ಹೋಗಬಲ್ಲೆ, ನನ್ನಲ್ಲಿ ಆ ಹುರುಪು ಇದೆ. ರೈತರ ಹೋರಾಟಗಳಲ್ಲಿ ಭಾಗವಹಿಸಲು ನಾನು ಉತ್ಸುಕಳಾಗಿದ್ದೇನೆ ಅಂತಾರೆ ಮೊಹಿಂದರ್ ಕೌರ್.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ