ಆಟೋ ಚಾಲಕನ ಖಾತೆಗೆ ತಪ್ಪಾಗಿ 9,000 ಕೋಟಿ ರೂ. ಹಾಕಿದ ಬ್ಯಾಂಕ್, ಮುಂದೇನಾಯ್ತು?

ತಮಿಳುನಾಡಿನ ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್‌ಕುಮಾರ್ ಎಂಬ ಆಟೋ ಚಾಲಕನ ಖಾತೆಗೆ ಬ್ಯಾಂಕ್​​ನಿಂದ 9,000 ಕೋಟಿ ರೂ. ಬಂದಿದೆ. ಹಣ ಕ್ರೆಡಿಟ್​​ ಆಗಿರುವ ಬಗ್ಗೆ ಆತನ ಫೋನ್​​ಗೆ ಎಸ್‌ಎಂಎಸ್ ಬಂದಿದೆ. ಮೊದಲು ಈ ಸಂದೇಶವನ್ನು ಫೇಕ್​​​ಎಂದುಕೊಂಡಿದ್ದರು, ಆದರೆ ಬ್ಯಾಂಕ್​​ ಖಾತೆಯನ್ನು ಪರಿಶೀಲಿಸಿದಾಗ ಗಾಬರಿಯಾಗಿದ್ದಾರೆ.

ಆಟೋ ಚಾಲಕನ ಖಾತೆಗೆ ತಪ್ಪಾಗಿ 9,000 ಕೋಟಿ ರೂ. ಹಾಕಿದ ಬ್ಯಾಂಕ್, ಮುಂದೇನಾಯ್ತು?
ಸಾಂದರ್ಭಿಕ ಚಿತ್ರ

Updated on: Sep 21, 2023 | 3:46 PM

ಚೆನ್ನೈ, ಸೆ.21: ಡಿಜಿಟಲ್.. ಡಿಜಿಟಲ್​​ ಎಂದು ಹೆಚ್ಚಾಗಿ ಅದಕ್ಕೆ ಒಗ್ಗಿಕೊಂಡರೆ ಇಂತಹ ಘಟನೆಗಳು ಆಗುವುದು ಖಂಡಿತ. ಬ್ಯಾಂಕ್​​(Bank) ಎಡವಟ್ಟಿನಿಂದ ವ್ಯಕ್ತಿಯೊಬ್ಬರ ಖಾತೆಗೆ 9,000 ಕೋಟಿ ರೂ. ತಪ್ಪಾಗಿ ಜಮೆಯಾಗಿದೆ. ತಮಿಳುನಾಡಿನ ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್‌ಕುಮಾರ್ ಎಂಬ ಆಟೋ ಚಾಲಕನ ಖಾತೆಗೆ ಬ್ಯಾಂಕ್​​ನಿಂದ 9,000 ಕೋಟಿ ರೂ. ಬಂದಿದೆ. ಹಣ ಕ್ರೆಡಿಟ್​​ ಆಗಿರುವ ಬಗ್ಗೆ ಆತನ ಫೋನ್​​ಗೆ ಎಸ್‌ಎಂಎಸ್ ಬಂದಿದೆ. ಮೊದಲು ಈ ಸಂದೇಶವನ್ನು ಫೇಕ್​​​ಎಂದುಕೊಂಡಿದ್ದರು, ಆದರೆ ಬ್ಯಾಂಕ್​​ ಖಾತೆಯನ್ನು ಪರಿಶೀಲಿಸಿದಾಗ ಗಾಬರಿಯಾಗಿದ್ದಾರೆ.

ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್​​ನಿಂದ ಆಟೋ ಚಾಲಕನ ಖಾತೆಗೆ 9,000 ಕೋಟಿ ರೂಪಾಯಿ ಜಮಾ ಮಾಡಿರುವ ಸಂದೇಶವನ್ನು ಕಳುಹಿಸಿದ್ದಾರೆ. ಈ ಹಣ ಬರುವ ಮೊದಲು ಆತನ ಖಾತೆಯಲ್ಲಿ 105 ರೂ. ಮಾತ್ರ ಇತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

9,000 ಕೋಟಿ ರೂಪಾಯಿ ಜಮಾಯಾದ 30 ನಿಮಿಷದಲ್ಲಿ ಮತ್ತೆ ಆ ಹಣವನ್ನು ಹಿಂಪಡೆದಿದ್ದಾರೆ. ಆದರೆ ಆಟೋ ಚಾಲಕ 9,000 ಕೋಟಿಯಲ್ಲಿ 21 ಸಾವಿರ ರೂ.ವನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾರೆ. ಮರುದಿನ ಬೆಳಿಗ್ಗೆ ಬ್ಯಾಂಕ್ ಅಧಿಕಾರಿಗಳು ಬಂದು ತಪ್ಪಾಗಿ ಬಂದಿರುವ ಹಣದ ಬಗ್ಗೆ ತಿಳಿಸಿದ್ದಾರೆ. ಖರ್ಚು ಮಾಡಿದ ಹಣವನ್ನು ಹಿಂಪಡೆಯದಂತೆ ರಾಜ್‌ಕುಮಾರ್‌ ಮನವಿ ಮಾಡಿದ್ದಾರೆ. ಬಳಿಕ ಎರಡು ಕಡೆ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us