AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ ‘ಪ್ರೇಮ ಪತ್ರ’ ಎಂದ ಆಮ್ ಆದ್ಮಿ ಪಕ್ಷ 

Raghav Chadha: ಬಿಜೆಪಿಗೆ ಒಂದು ಸಂಘಟನೆಯನ್ನು "ಚುನಾವಣೆ ಮೂಲಕ ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೆ, ಅದು "ಅಲ್ಲಿರುವ ನಾಯಕರನ್ನು ನಿರ್ಮೂಲನೆ ಮಾಡುತ್ತದೆ. ನಿಮ್ಮ ತತ್ವವು ಕೆಲಸ ಮಾಡುವುದಿಲ್ಲ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ. ನರೇಂದ್ರ ಮೋದಿ ಎಎಪಿಯ ಯಶಸ್ಸಿಗೆ ಹೆದರುತ್ತಾರೆ, ಅದಕ್ಕಾಗಿಯೇ ಅವರು ಎಎಪಿಯನ್ನು ಹಿಂಸಿಸಲು ಎಲ್ಲಾ ಏಜೆನ್ಸಿಗಳನ್ನು ಕೇಳಿದ್ದಾರೆ ಎಂದಿದ್ದಾರೆ ಚಡ್ಡಾ

ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ 'ಪ್ರೇಮ ಪತ್ರ' ಎಂದ ಆಮ್ ಆದ್ಮಿ ಪಕ್ಷ 
ರಾಘವ್ ಚಡ್ಡಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 13, 2021 | 5:36 PM

ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ (Pankaj Gupta) ಅವರಿಗೆ ಜಾರಿ ನಿರ್ದೇಶನಾಲಯದ  (Enforcement Directorate) ನೋಟಿಸ್ ನೀಡಲಾಗಿದೆ ಎಂದು ಪಕ್ಷದ ವಕ್ತಾರ ರಾಘವ್ ಚಡ್ಡಾ (Raghav Chadha) ಸೋಮವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪಕ್ಷದ ಮಾಜಿ ಪಂಜಾಬ್ ಶಾಸಕ ಸುಖ್‌ಪಾಲ್ ಸಿಂಗ್ ಖೈರಾ ಒಳಗೊಂಡ ಪ್ರಕರಣದಲ್ಲಿ ಗುಪ್ತಾ ಅವರನ್ನು ಪ್ರಶ್ನಿಸಲು ಇಡಿ ಶುಕ್ರವಾರ ಪ್ರಯತ್ನಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸೆಪ್ಟೆಂಬರ್ 22 ರಂದು ಗುಪ್ತಾ ಅವರ ತನಿಖೆ ನಡೆಯಲಿದೆ.

ಕಾನೂನು ಜಾರಿ ಸಂಸ್ಥೆ ಖೈರಾ ಅವರವ್ವ  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ನಕಲಿ ಪಾಸ್‌ಪೋರ್ಟ್ ನೀಡುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಖೈರಾ ಅವರು ಆಮ್ ಆದ್ಮಿ ಪಕ್ಷಕ್ಕಾಗಿ ಅಮೆರಿಕದಿಂದ 1,00,000 ಡಾಲರ್ ಮೌಲ್ಯದ ದೇಣಿಗೆ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನಿಗಾದಲ್ಲಿದ್ದಾರೆ.

ಆದಾಗ್ಯೂ, ಖೈರಾ ಮೇಲೆ ನಡೆಯುತ್ತಿರುವ ತನಿಖೆಯಲ್ಲಿ ಗುಪ್ತಾ ಏಕೆ ಬೇಕು ಎಂದು ಬಹಿರಂಗಪಡಿಸಲಾಗಿಲ್ಲ. ಗುಪ್ತಾ ಅವರಿಗೆ ಇಡಿ ನೋಟಿಸ್ ಸಿಕ್ಕಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದಎಎಪಿ ವಕ್ತಾರ ರಾಘವ್ ಚಡ್ಡಾ ಬಿಜೆಪಿ ಪಕ್ಷವು ಇತರ ಪಕ್ಷದ ನಾಯಕರನ್ನು ಗುರಿಯಾಗಿಸಲು ಇಡಿಯನ್ನು ಬಳಸುತ್ತಿದೆ ಎಂದು ಟೀಕಿಸಿದರು. ಅವರು ಈ ನೋಟಿಸ್ ಅನ್ನು ನರೇಂದ್ರ ಮೋದಿ ಸರ್ಕಾರದ “ನೆಚ್ಚಿನ ಸಂಸ್ಥೆ” ಯಿಂದ ಬಂದ “ಪ್ರೇಮ ಪತ್ರ” ಎಂದು ವಿವರಿಸಿದ್ದಾರೆ.

ಬಿಜೆಪಿಗೆ ಒಂದು ಸಂಘಟನೆಯನ್ನು “ಚುನಾವಣೆ ಮೂಲಕ ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೆ, ಅದು “ಅಲ್ಲಿರುವ ನಾಯಕರನ್ನು ನಿರ್ಮೂಲನೆ ಮಾಡುತ್ತದೆ. ನಿಮ್ಮ ತತ್ವವು ಕೆಲಸ ಮಾಡುವುದಿಲ್ಲ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ. ನರೇಂದ್ರ ಮೋದಿ ಎಎಪಿಯ ಯಶಸ್ಸಿಗೆ ಹೆದರುತ್ತಾರೆ, ಅದಕ್ಕಾಗಿಯೇ ಅವರು ಎಎಪಿಯನ್ನು ಹಿಂಸಿಸಲು ಎಲ್ಲಾ ಏಜೆನ್ಸಿಗಳನ್ನು ಕೇಳಿದ್ದಾರೆ ಎಂದಿದ್ದಾರೆ ಚಡ್ಡಾ.

ಇಡಿ ಕೇವಲ “ರಾಜಕೀಯ ಸೇಡು ತೀರಿಸುವ ಯಂತ್ರ” ಎಂದು ಕರೆದ ಚಡ್ಡಾ ಇದನ್ನು ಪ್ರಧಾನಿ ಮೋದಿಯವರು ಮತ್ತು ಇತರ ಏಜೆನ್ಸಿಗಳು ಸಕ್ರಿಯಗೊಳಿಸಿದ್ದಾರೆ, ಏಕೆಂದರೆ ಅವರು “ಎಎಪಿಯ ಯಶಸ್ಸಿಗೆ ಹೆದರುತ್ತಿದ್ದರು” ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 2014 ರಿಂದ ಯಾವುದಾದರೂ ಬಿಜೆಪಿ ನಾಯಕನಿಗೆ ಇಡಿ ನೋಟಿಸ್ ನೀಡಲಾಗಿದೆಯೇ ಎಂದು ಚಡ್ಡಾ ಕೇಳಿದ್ದಾರೆ.

ಇದಲ್ಲದೆ, ಗುಪ್ತಾ ಅವರಿಗೆ ಇಡಿ ನೋಟಿಸ್ ತನ್ನ ಪಕ್ಷದ ವಿರುದ್ಧ ಬಿಜೆಪಿ ಆರಂಭಿಸಿದ “ಮಾಟಗಾತಿ ಬೇಟೆಯ ಸರಣಿಯ” ಒಂದು ಭಾಗವಾಗಿದೆ ಎಂದು ಚಡ್ಡಾ ಹೇಳಿದರು. ಆಮ್ ಆದ್ಮಿ ಪಕ್ಷವು 2015 ಮತ್ತು 2016 ರಲ್ಲೂ ಆದಾಯ ತೆರಿಗೆ ನೋಟಿಸ್ ಸ್ವೀಕರಿಸಿದೆ ಎಂದು ಅವರು ಹೇಳಿದ್ದಾರೆ. ಇದಾದನಂತರ ಚುನಾವಣಾ ಆಯೋಗವು ಎಎಪಿಯು ವಿದೇಶಿ ನಿಧಿಯನ್ನು ಬಳಸಿದೆ ಎಂದು ಆರೋಪಿಸಿ ಪಕ್ಷದ ನೋಂದಣಿಯನ್ನು ರದ್ದುಗೊಳಿಸಲು ಬಯಸಿದೆ ಎಂದು ಅವರು ಹೇಳಿದರು.

ಎಎಪಿ ಸ್ಥಾಪಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಇದು “ಬಿಜೆಪಿಯ ತಂತ್ರ” ಎಂದು ಕರೆದಿದ್ದಾರೆ. “ದೆಹಲಿಯಲ್ಲಿ ಅವರು ನಮ್ಮನ್ನು ಐಟಿ ಇಲಾಖೆ, ಸಿಬಿಐ, ಪೋಲಿಸ್ ಮೂಲಕ ಸೋಲಿಸಲು ಪ್ರಯತ್ನಿಸಿದರು – ಆದರೆ ನಾವು 62 ಸ್ಥಾನಗಳನ್ನು ಗೆದ್ದಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. “ನಾವು ಪಂಜಾಬ್, ಗೋವಾ, ಉತ್ತರಾಖಂಡ್, ಗುಜರಾತ್‌ನಲ್ಲಿ ಬೆಳೆಯುತ್ತಿದ್ದಂತೆ ನಮಗೆ ಇಡಿ ನೋಟಿಸ್ ಸಿಗುತ್ತದೆ. ಭಾರತದ ಜನರು ಪ್ರಾಮಾಣಿಕ ರಾಜಕೀಯವನ್ನು ಬಯಸುತ್ತಾರೆ. ಬಿಜೆಪಿಯ ಈ ತಂತ್ರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ, ಅವರು ನಮ್ಮನ್ನು ಬಲಪಡಿಸುತ್ತಾರೆ ಎಂದಿದ್ದಾರೆ ಕೇಜ್ರಿವಾಲ್.

ಇದನ್ನೂ ಓದಿ: Pegasus row ಪೆಗಾಸಸ್ ವಿವಾದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಿಲ್ಲ: ಸುಪ್ರೀಂಕೋರ್ಟ್​​ನಲ್ಲಿ ಕೇಂದ್ರ ಹೇಳಿಕೆ

(AAP leader Pankaj Gupta gets ED notice party calls it love letter from Narendra Modi governments favourite agency)

Published On - 5:35 pm, Mon, 13 September 21

ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ