ಶಂಕರ ಸುಬ್ರಮಣಿಯನ್; ಐತಿಹಾಸಿಕ ಆದಿತ್ಯ ಎಲ್ -1 ಯೋಜನೆಯ ರೂವಾರಿ ಇವರೇ ನೋಡಿ

| Updated By: Ganapathi Sharma

Updated on: Sep 02, 2023 | 4:17 PM

Dr Sankarasubramanian K; ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಪ್ರಮುಖ ವಿಜ್ಞಾನಿಗಳಲ್ಲಿ ಡಾ ಶಂಕರ ಸುಬ್ರಮಣಿಯನ್ ಕೆ ಒಬ್ಬರು. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಪಿಹೆಚ್​​ಡಿ ಪದವಿಯನ್ನು ಪಡೆದುಕೊಂಡರು. ಸಂಶೋಧನಾ ಕ್ಷೇತ್ರದಲ್ಲಿ ಸೋಲಾರ್ ಮ್ಯಾಗ್ನೆಟಿಕ್ ಫೀಲ್ಡ್, ಆಪ್ಟಿಕ್ಸ್ ಹಾಗೂ ಇನ್​​ಸ್ಟ್ರುಮೆಂಟೇಶನ್ ಇವರ ಆಸಕ್ತಿ ವಿಷಯಗಳಾಗಿವೆ.

ಶಂಕರ ಸುಬ್ರಮಣಿಯನ್; ಐತಿಹಾಸಿಕ ಆದಿತ್ಯ ಎಲ್ -1 ಯೋಜನೆಯ ರೂವಾರಿ ಇವರೇ ನೋಡಿ
ಡಾ. ಶಂಕರ ಸುಬ್ರಮಣಿಯನ್ ಕೆ
Follow us on

ಬೆಂಗಳೂರು, ಸೆಪ್ಟೆಂಬರ್ 2: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್ ಲ್ಯಾಂಡರ್’ ಅನ್ನು ಇಳಿಸುವ ಮೂಲಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿಯೇ ವಿಶೇಷ ಮೈಲಿಗಲ್ಲು ಸಾಧಿಸಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO). ಇದರ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 2) ‘ಆದಿತ್ಯ ಎಲ್-1 (Aditya L1) ಬಾಹ್ಯಾಕಾಶ ನೌಕೆಯ ಉಡಾವಣೆಯೂ ಯಶಸ್ವಿಯಾಗಿದೆ. ಇದು ಸೂರ್ಯನ ಸಂಶೋಧನೆಯ ನಿಟ್ಟಿನಲ್ಲಿ ಭಾರತದ ಮೊದಲ ಹೆಜ್ಜೆಯಾಗಿದೆ. ಈ ಬಾಹ್ಯಾಕಾಶ ನೌಕೆಯು ಸೂರ್ಯನ ಬಗೆಗಿನ ಹಲವು ವಿಷಯಗಳ ಅಧ್ಯಯನ ನಡೆಸಲಿದ್ದು, ಭೂಮಿಯಲ್ಲಿ ಜೀವನಕ್ಕೆ ಪೂರಕವಾದ ಸೂರ್ಯನ ಕಿರಣಗಳ ಬಗ್ಗೆಯೂ ಸಂಶೋಧನೆ ನಡೆಸಲಿದೆ.

ಆದಿತ್ಯ ಎಲ್-1 ಯೋಜನೆಯ ನೇತೃತ್ವ ವಹಿಸಿದವರು ಯಾರು?

ಇಸ್ರೋದ ಪ್ರಮಖ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಶಂಕರ ಸುಬ್ರಮಣಿಯನ್ ಕೆ ಈ ಯೋಜನೆಯ ನೇತೃತ್ವವಹಿಸಿಕೊಂಡಿದ್ದಾರೆ.

ಯಾರು ಡಾ. ಶಂಕರ ಸುಬ್ರಮಣಿಯನ್?

ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಪ್ರಮುಖ ವಿಜ್ಞಾನಿಗಳಲ್ಲಿ ಡಾ ಶಂಕರ ಸುಬ್ರಮಣಿಯನ್ ಕೆ ಒಬ್ಬರು. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಪಿಹೆಚ್​​ಡಿ ಪದವಿಯನ್ನು ಪಡೆದುಕೊಂಡರು. ಸಂಶೋಧನಾ ಕ್ಷೇತ್ರದಲ್ಲಿ ಸೋಲಾರ್ ಮ್ಯಾಗ್ನೆಟಿಕ್ ಫೀಲ್ಡ್, ಆಪ್ಟಿಕ್ಸ್ ಹಾಗೂ ಇನ್​​ಸ್ಟ್ರುಮೆಂಟೇಶನ್ ಇವರ ಆಸಕ್ತಿ ವಿಷಯಗಳಾಗಿವೆ.

ಇವರು ‘ಚಂದ್ರಯಾನ-1’, ‘ಚಂದ್ರಯಾನ -2’ ಹಾಗೂ ‘ಆಸ್ಟ್ರೋಸ್ಯಾಟ್’ ಉಪಗ್ರಹಗಳಿಗೆ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಇವರು ಯುಆರ್ ರಾವ್ ಉಪಗ್ರಹ ಕೇಂದ್ರದ ಸ್ಪೇಸ್ ಆಸ್ಟ್ರೋನಾಮಿ ಗ್ರೂಪ್ (ಎಸ್ಎಜಿ) ನ ಮುಖ್ಯಸ್ಥರೂ ಆಗಿದ್ದಾರೆ. ಆದಿತ್ಯ ಎಲ್​1 ಮಿಷನ್​​ನ ಪೇಲೋಡ್​ ಅನ್ನು ಎಸ್​​​ಎಜಿ ಅಭಿವೃದ್ಧಿಪಡಿಸಿತ್ತು ಎಂಬುದು ಗಮನಾರ್ಹ. ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಇವರ ನೇತೃತ್ವದಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಎಕ್ಸ್​​​ಪೊಸ್ಯಾಟ್ ಪೇಲೋಡ್ ಅಭಿವೃದ್ಧಿಪಡಿಸುವಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

ಶಂಕರ ಸುಬ್ರಮಣಿಯನ್ ಅವರು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯ ಎಕ್ಸ್ ರೇ ಪೇಲೋಡ್​​ನ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್ ಕೂಡಾ ಹೌದು. ಅಷ್ಟೇ ಅಲ್ಲದೆ ಸೌರ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿರುವ ಪ್ರಮುಖ ಭಾರತೀಯ ಸಂಸ್ಥೆಗಳ ಸದಸ್ಯರನ್ನೊಳಗೊಂಡ ‘ಆದಿತ್ಯ ಎಲ್-1 ಸೈನ್ಸ್ ವರ್ಕಿಂಗ್ ಗ್ರೂಪ್’ನ ಮುಖ್ಯಸ್ಥರೂ ಆಗಿದ್ದಾರೆ.

ಏನಿದು ಆದಿತ್ಯ ಎಲ್ -1 ಮಿಷನ್?

ಆದಿತ್ಯ ಎಲ್ -1 ಮಿಷನ್ ಸೂರ್ಯನ ಅಧ್ಯಯನಕ್ಕೆ ತೆರಳಿದ ಮೊಟ್ಟ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಇದರಲ್ಲಿ 7 ಬಗೆಯ ಪೇಲೋಡ್​ಗಳಿವೆ. ಇವು ಕ್ರೋಮೊಸ್ಪೇರ್, ಫೋಟೋಸ್ಪೇರ್ ಹಾಗೂ ಸೂರ್ಯನ ಹೊರ ಮೇಲ್ಮೈ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿವೆ. ಇವುಗಳು ಸೂರ್ಯನಲ್ಲಿಗೆ ತೆರಳುವುದಿಲ್ಲ, ಬದಲಾಗಿ ಸೂರ್ಯನ ಸುತ್ತ ಇರುವ ಎಲ್ -1 ಹ್ಯಾಲೋ ಆರ್ಬಿಟ್​​ನಿಂದ ಸೂರ್ಯನ ಅಧ್ಯಯನ ಮಾಡುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ