AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ

Covid- 19 impact on economy: ಕೋವಿಡ್- 19 ಬಿಕ್ಕಟ್ಟು ಮುಗಿದ ಮೇಲೆ ಈ ಜಗತ್ತು ಹೀಗಿರುವುದಿಲ್ಲ. ಆರ್ಥಿಕತೆ ಮೇಲೆ ಇದರ ಪ್ರಭಾವ ಅಗಾಧವಾದದ್ದು ಎಂದು ಬುದ್ಧ ಪೌರ್ಣಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ
ನರೇಂದ್ರ ಮೋದಿ
Follow us
Srinivas Mata
|

Updated on: May 27, 2021 | 11:14 AM

ಆರ್ಥಿಕತೆಯ ಮೇಲೆ ಕೋವಿಡ್- 19 ಪರಿಣಾಮ ಅಗಾಧವಾದದ್ದು. ಈ ಜಾಗತಿಕ ಬಿಕ್ಕಟ್ಟು ಮುಗಿದ ಮೇಲೆ ಈ ಜಗತ್ತು ಹೀಗಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. “ಜೀವಿತಾವಧಿಯಲ್ಲಿ ಒಂದು ಸಲ ಬರುವಂಥ ಈ ಜಾಗತಿಕ ಬಿಕ್ಕಟ್ಟು ಹಲವರ ಮನೆ ಬಾಗಿಲಿಗೆ ದುರಂತ ಮತ್ತು ದುಃಖವನ್ನು ತಂದಿದೆ. ಆರ್ಥಿಕ ಪರಿಣಾಮ ಕೂಡ ಅಗಾಧವಾಗಿದೆ. ಕೋವಿಡ್- 19 ನಂತರ ಈ ಭೂಮಿ ಹೀಗಿರುವುದಿಲ್ಲ. ಮುಂದಿನ ಕಾಲಘಟ್ಟದಲ್ಲಿ ಖಂಡಿತಾ ನಾವು ಕೋವಿಡ್ ಮುಂಚಿನ ಹಾಗೂ ಕೋವಿಡ್ ನಂತರ ಎಂದೇ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ. ಬುದ್ಧ ಪೌರ್ಣಮಿ ಅಂಗವಾಗಿ ಅವರು ಮಾತನಾಡುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2020ರಲ್ಲಿ ಕೊರೊನಾದಿಂದ ಒಂದೇ ರೀತಿಯಲ್ಲಿ ಪೆಟ್ಟು ತಿಂದ ವಿಶ್ವದ ಆರ್ಥಿಕತೆಯು 2021ರಲ್ಲಿ ವಿಭಿನ್ನವಾದ ಅದೃಷ್ಟವನ್ನು ನೋಡುವಂತಾಗಿದೆ. ಮುಂದುವರಿದ ಆರ್ಥಿಕತೆ ಮತ್ತು ಕೆಲವು ಮುಂದುವರಿಯುತ್ತಿರುವ ಆರ್ಥಿಕತೆಗಳು ಪ್ರಬಲವಾದ ಚೇತರಿಕೆ ಕಾಣುತ್ತಿದ್ದರೆ, ಭಾರತವೂ ಸೇರಿದಂತೆ ವಿಶ್ವದ ಇತರ ದೇಶಗಳು ಹಿಂದೆ ಉಳಿದಿವೆ.

ಕೊರೊನಾ ಬಿಕ್ಕಟ್ಟಿನ ಎರಡನೇ ಅಲೆಯ ಹೊಡೆತ ಭಾರತಕ್ಕೆ ಬಹಳ ಗಟ್ಟಿಯಾಗಿ ಬಿದ್ದಿದೆ. ಸ್ಥಳೀಯ ಲಾಕ್​ಡೌನ್​ಗಳಿಂದಾಗಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿವೆ. ಅಧಿಕೃತವಾಗಿ ಕೊರೊನಾ ಅಲೆಯು ಕಡಿಮೆಯಾಗಿದ್ದರೂ ಹಬ್ಬುತ್ತಿರುವ ವೇಗ ಕಡಿಮೆ ಆಗುತ್ತಿಲ್ಲ. ಆರ್ಥಿಕ ಚೇತರಿಕೆ ಎಂಬುದು ಸದ್ಯಕ್ಕೆ ಗುರುತಿಸಲು ಸಾಧ್ಯವಿಲ್ಲದಷ್ಟು ದೂರಕ್ಕೆ ಸಾಗಿದೆ. ಬಹಳ ವೃತ್ತಿಪರರು ಅಂದಾಜು ಮಾಡುವಂತೆ, ದೇಶದ ಬೆಳವಣಿಗೆ ದರವಯ 2021- 22ನೇ ಸಾಲಿಗೆ ಶೇ 10ಕ್ಕಿಂತ ಕಡಿಮೆ ಇರಲಿದೆ. ಜೆಪಿ ಮೋರ್ಗನ್ ಮತ್ತು ಬಾರ್​ಕ್ಲೇಸ್​ ಪ್ರಕಾರ ಕ್ರಮವಾಗಿ ಶೇ 9 ಮತ್ತು ಶೇ 9.2 ಅಂದಾಜು ಮಾಡಲಾಗಿದೆ.

ಕೊರೊನಾ ಎರಡನೇ ಅಲೆಯನ್ನು ಸರ್ಕಾರವು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ. ರಾಜಕೀಯ ಸಮಾವೇಶಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟು, ಕೊರೊನಾ ಹಬ್ಬುವುದಕ್ಕೆ ಕಾರಣ ಆಯಿತು. ಇದರಿಂದಾಗಿ ಈ ಹಿಂದೆಂದೂ ಕಾಣದಂಥ ಆರೋಗ್ಯ ಬಿಕ್ಕಟ್ಟನ್ನು ಕಾಣಬೇಕಾಯಿತು. ಇದರ ಜತೆಗೆ ಭಾರತದಲ್ಲಿ ಮೆಡಿಕಲ್ ಆಕ್ಸಿಜನ್​ ಕೊರತೆ, ಔಷಧಿಗಳು ಹಾಗೂ ಹೆಲ್ತ್​ಕೇರ್ ವ್ಯವಸ್ಥೆಗೆ ಎರಡನೇ ಅಲೆಯಲ್ಲಿ ಸಮಸ್ಯೆ ಆಗಿದೆ ಎಂದು ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಈ ಹಿಂದಿನ ವರ್ಷದ ಕೋವಿಡ್- 19ಗಿಂತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ: ಸಿಇಎ ಕೆ.ವಿ. ಸುಬ್ರಮಣಿಯನ್

(World will not be the same after covid-19 and this crisis impact on economy is huge, said by India PM Narendra Modi on the keynote address by him in Buddha Purnima event on Wednesday)

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ