ಕೊರೊನಾ ಬಿಕ್ಕಟ್ಟಿನ ಎರಡನೇ ಅಲೆಯ ಹೊಡೆತ ಭಾರತಕ್ಕೆ ಬಹಳ ಗಟ್ಟಿಯಾಗಿ ಬಿದ್ದಿದೆ. ಸ್ಥಳೀಯ ಲಾಕ್ಡೌನ್ಗಳಿಂದಾಗಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿವೆ. ಅಧಿಕೃತವಾಗಿ ಕೊರೊನಾ ಅಲೆಯು ಕಡಿಮೆಯಾಗಿದ್ದರೂ ಹಬ್ಬುತ್ತಿರುವ ವೇಗ ಕಡಿಮೆ ಆಗುತ್ತಿಲ್ಲ. ಆರ್ಥಿಕ ಚೇತರಿಕೆ ಎಂಬುದು ಸದ್ಯಕ್ಕೆ ಗುರುತಿಸಲು ಸಾಧ್ಯವಿಲ್ಲದಷ್ಟು ದೂರಕ್ಕೆ ಸಾಗಿದೆ. ಬಹಳ ವೃತ್ತಿಪರರು ಅಂದಾಜು ಮಾಡುವಂತೆ, ದೇಶದ ಬೆಳವಣಿಗೆ ದರವಯ 2021- 22ನೇ ಸಾಲಿಗೆ ಶೇ 10ಕ್ಕಿಂತ ಕಡಿಮೆ ಇರಲಿದೆ. ಜೆಪಿ ಮೋರ್ಗನ್ ಮತ್ತು ಬಾರ್ಕ್ಲೇಸ್ ಪ್ರಕಾರ ಕ್ರಮವಾಗಿ ಶೇ 9 ಮತ್ತು ಶೇ 9.2 ಅಂದಾಜು ಮಾಡಲಾಗಿದೆ.
ಕೊರೊನಾ ಎರಡನೇ ಅಲೆಯನ್ನು ಸರ್ಕಾರವು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ. ರಾಜಕೀಯ ಸಮಾವೇಶಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟು, ಕೊರೊನಾ ಹಬ್ಬುವುದಕ್ಕೆ ಕಾರಣ ಆಯಿತು. ಇದರಿಂದಾಗಿ ಈ ಹಿಂದೆಂದೂ ಕಾಣದಂಥ ಆರೋಗ್ಯ ಬಿಕ್ಕಟ್ಟನ್ನು ಕಾಣಬೇಕಾಯಿತು. ಇದರ ಜತೆಗೆ ಭಾರತದಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ, ಔಷಧಿಗಳು ಹಾಗೂ ಹೆಲ್ತ್ಕೇರ್ ವ್ಯವಸ್ಥೆಗೆ ಎರಡನೇ ಅಲೆಯಲ್ಲಿ ಸಮಸ್ಯೆ ಆಗಿದೆ ಎಂದು ಟೀಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಈ ಹಿಂದಿನ ವರ್ಷದ ಕೋವಿಡ್- 19ಗಿಂತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ: ಸಿಇಎ ಕೆ.ವಿ. ಸುಬ್ರಮಣಿಯನ್
(World will not be the same after covid-19 and this crisis impact on economy is huge, said by India PM Narendra Modi on the keynote address by him in Buddha Purnima event on Wednesday)