ಶಿಕ್ಷೆಗೆ ಸುಪ್ರೀಂ ತಡೆಯಾಜ್ಞೆ: ಸಂಸತ್​​ನ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲು ಸಾಧ್ಯವಾಗಬಹುದೇ?

ಚುನಾವಣಾ ಆಯೋಗವು ವಯನಾಡ್‌ಗೆ ಚುನಾವಣೆಯನ್ನು ಘೋಷಿಸದ ಕಾರಣ ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ಸುಪ್ರೀಂಕೋರ್ಟ್‌ನ ಆದೇಶವು ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಹಿಂತೆಗೆದುಕೊಳ್ಳುತ್ತದೆ. ಹೀಗಾಗಿ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಮರುಸ್ಥಾಪಿಸುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಂವಿಧಾನಿಕ ತಜ್ಞರು ಹೇಳಿದ್ದಾರೆ

ಶಿಕ್ಷೆಗೆ ಸುಪ್ರೀಂ ತಡೆಯಾಜ್ಞೆ: ಸಂಸತ್​​ನ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲು ಸಾಧ್ಯವಾಗಬಹುದೇ?
ರಾಹುಲ್ ಗಾಂಧಿ
Follow us
|

Updated on:Aug 04, 2023 | 9:02 PM

ದೆಹಲಿ ಆಗಸ್ಟ್04: 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ “ಮೋದಿ ಉಪನಾಮ” (Modi Surname Case) ಹೇಳಿಕೆಗೆ ಸಂಬಂಧಿಸಿದ ಶಿಕ್ಷೆಗೆ ಸುಪ್ರೀಂಕೋರ್ಟ್ (Supreme Court) ಶುಕ್ರವಾರ ತಡೆ ನೀಡಿದೆ. ಈ ತೀರ್ಪು ಗಾಂಧಿಯವರ ಸಂಸತ್ತಿನ ಸದಸ್ಯನ ಸ್ಥಾನಮಾನವನ್ನು ಮರುಸ್ಥಾಪಿಸುತ್ತದೆ. ಆದಾಗ್ಯೂ, 2019 ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್‌ನಿಂದ ಗೆದ್ದಿರುವ ಗಾಂಧಿ ಅವರು ಮುಂದಿನ ವಾರ ಕೊನೆಗೊಳ್ಳುವ ಸಂಸತ್ತಿನ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಬಹುದೇ?

ದೋಷಾರೋಪಣೆಯ ನಂತರ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಆದ್ದರಿಂದ, ಅವರು ಈಗ ಸಂಸತ್ತಿನ ಸದಸ್ಯರಾಗಿ ಸ್ವಯಂಚಾಲಿತವಾಗಿ ಮರುಸ್ಥಾಪಿಸಲ್ಪಡಬೇಕು. ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಪಡೆದ ನಂತರ ಸ್ಪೀಕರ್ ಅವರ ಸದಸ್ಯತ್ವದ ಮರುಸ್ಥಾಪನೆಯನ್ನು ಘೋಷಿಸುವ ಸೂಚನೆಯನ್ನು ನೀಡಬೇಕು. ಇದರಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ನ್ಯೂಸ್ 9 ಪ್ಲಸ್‌ಗೆ ತಿಳಿಸಿದ್ದಾರೆ.

ಆಗಸ್ಟ್ 8 ಮತ್ತು 10 ರ ನಡುವೆ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಸಂಸತ್ತು ಸಾಕ್ಷಿಯಾಗಲಿರುವ ಕಾರಣ ಸಮಯವು ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಸದನದ ಕೊನೆಯ ದಿನದಂದು ಪ್ರತಿಪಕ್ಷಗಳಿಗೆ ಉತ್ತರಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಈಗಾಗಲೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಪರ್ಕಿಸಿ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಮರುಸ್ಥಾಪಿಸಲು ಅಧಿಸೂಚನೆಯನ್ನು ಹೊರಡಿಸುವಂತೆ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿಗೆ ರಾಹುಲ್ ಗಾಂಧಿಯವರ ಹಾಜರಾತಿಗಾಗಿ ಔಪಚಾರಿಕ ಸೂಚನೆಯನ್ನು ನೀಡಬೇಕಾಗಿದೆ.

ಚುನಾವಣಾ ಆಯೋಗವು ವಯನಾಡ್‌ಗೆ ಚುನಾವಣೆಯನ್ನು ಘೋಷಿಸದ ಕಾರಣ ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ಸುಪ್ರೀಂಕೋರ್ಟ್‌ನ ಆದೇಶವು ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಹಿಂತೆಗೆದುಕೊಳ್ಳುತ್ತದೆ. ಹೀಗಾಗಿ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಮರುಸ್ಥಾಪಿಸುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಂವಿಧಾನಿಕ ತಜ್ಞರು ಹೇಳಿದ್ದಾರೆ. ಸುಪ್ರೀಂ ಆದೇಶವು ಸ್ವಭಾವತಃ ಸ್ವಯಂ ಬದ್ಧವಾಗಿದೆ. ಯಾವುದೇ ಸಾಂವಿಧಾನಿಕ ಸಂಸ್ಥೆಯು ಗಮನಿಸಬೇಕಾಗುತ್ತದೆ ಎಂದು ಅವರು ಹೇಳಿದರು.

2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ನಂತರ ಗಾಂಧಿ ಅವರನ್ನು ಈ ವರ್ಷ ಮಾರ್ಚ್ 24 ರಂದು ಸಂಸತ್ತಿನಿಂದ ಅನರ್ಹಗೊಳಿಸಲಾಯಿತು. ಈ ಪ್ರಕರಣವು ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರಿಗೆ ಸಂಬಂಧಿಸಿದೆ. ಪೂರ್ಣೇಶ್ ಅವರು 2019 ರಲ್ಲಿ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಲ್ಲಿ ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಯಾಕಿರುತ್ತದೆ? ಎಂದು ಕೇಳಿದ್ದಾರೆ.

ಮಾರ್ಚ್ 23 ರಂದು ಗುಜರಾತ್‌ನ ಸೂರತ್‌ನಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ಅಪರಾಧವನ್ನು ತಡೆಯಲು ಜುಲೈ 7 ರಂದು ಗುಜರಾತ್ ಹೈಕೋರ್ಟ್ ನಿರಾಕರಿಸಿದ ನಂತರ ಮಾಜಿ ವಯನಾಡ್ ಸಂಸದ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.

ಕಾಂಗ್ರೆಸ್ ಪಕ್ಷವು ಸುಪ್ರೀಂಕೋರ್ಟ್ ತೀರ್ಪುನ್ನು ಸ್ವಾಗತಿಸಿದ್ದು, ಈ ಆದೇಶ ಸತ್ಯ ಮತ್ತು ನ್ಯಾಯದ ಬಲವಾದ ಸಮರ್ಥನೆಯಾಗಿದೆ. ಬಿಜೆಪಿಯ ಆಡಳಿತ ಯಂತ್ರದ ಅವಿರತ ಪ್ರಯತ್ನಗಳ ಹೊರತಾಗಿಯೂ, ರಾಹುಲ್ ಗಾಂಧಿ ಅವರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಂಬಿಕೆ ಇಟ್ಟ ರಾಹುಲ್, ಇತರರ ಮುಂದೆ ಬಗ್ಗಲು, ಮುರಿಯಲು ಅಥವಾ ಬಾಗಲು ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್​ ವಿಧಿಸಿದ್ದ ಶಿಕ್ಷೆಗೆ ಸುಪ್ರೀಮ್ ಕೋರ್ಟ್​​ನಿಂದ ತಡೆಯಾಜ್ಞೆ; ಎಐಸಿಸಿ ಕಚೇರಿಯಲ್ಲಿ ಸಂಭ್ರಮಾಚರಣೆ!

ಮರುಸ್ಥಾಪನೆ ಎಂದರೆ ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸಬಹುದು. ಅವರು ವಿರೋಧ ಪಕ್ಷದ I.N.D.I.A ರಚನೆಗೆ ಪ್ರಧಾನಿ ಅಭ್ಯರ್ಥಿಯಾಗಬಹುದು. ಈ ವರ್ಷದ ಆರಂಭದಲ್ಲಿ, ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಲೋಕಸಭೆ ಸೆಕ್ರೆಟರಿಯಟ್ ತನ್ನ ಅನರ್ಹತೆಯ ನೋಟಿಸ್ ಅನ್ನು ಹಿಂತೆಗೆದುಕೊಳ್ಳುವಲ್ಲಿ ವಿಫಲವಾದ “ಕಾನೂನುಬಾಹಿರ ಕ್ರಮ” ವನ್ನು ಪ್ರಶ್ನಿಸಿದ್ದರು. ಎರಡು ತಿಂಗಳ ನಂತರ ಕೇರಳ ಹೈಕೋರ್ಟ್ ಸಂಸದರ ಅಪರಾಧ ಮತ್ತು 10 ವರ್ಷಗಳ ಶಿಕ್ಷೆಗೆ ತಡೆ ನೀಡಿತು. ಲೋಕಸಭೆಯ ಸೆಕ್ರೆಟರಿಯೇಟ್ ಅವರ ಸ್ಥಾನವನ್ನು ಹಿಂದಕ್ಕೆ ನೀಡಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Fri, 4 August 23