AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಿಎಂನಿಂದ ಇದು ನಿರೀಕ್ಷಿಸಿರಲಿಲ್ಲ; ಮೋದಿ ಬಗ್ಗೆ ಅಖಿಲೇಶ್ ಯಾದವ್ ಟೀಕೆಗೆ ಅನುರಾಗ್ ಠಾಕೂರ್ ಪ್ರತಿಕ್ರಿಯೆ

ಆ ಸಮಯದಲ್ಲಿ, ನಾನು ಸಂಸತ್ತಿನಲ್ಲಿ (ಎಸ್‌ಪಿ ಸಂಸ್ಥಾಪಕ) ಮುಲಾಯಂ ಸಿಂಗ್ ಅವರ ಪಕ್ಕದಲ್ಲಿ ಕುಳಿತಿದ್ದೆ. ಅವರು ಒಬ್ಬರೇ ಕುಳಿತಿದ್ದರಿಂದ ನಾನು ಸಹ ಸಂಸದನಾಗಿ ಅವರೊಂದಿಗೆ ಕುಳಿತಿದ್ದೆ. ಮತ್ತೊಂದೆಡೆ, ಅಖಿಲೇಶ್ ಯಾದವ್ ಜಿ ಅಂತಹ ಕಾಮೆಂಟ್ ಅನ್ನು ನೀಡುತ್ತಾರೆ. ಅದು ಅವರ ಮನಸ್ಥಿತಿ ಮತ್ತು ಪಾಲನೆಯನ್ನು ತೋರಿಸುತ್ತದೆ.

ಮಾಜಿ ಸಿಎಂನಿಂದ ಇದು ನಿರೀಕ್ಷಿಸಿರಲಿಲ್ಲ; ಮೋದಿ ಬಗ್ಗೆ ಅಖಿಲೇಶ್ ಯಾದವ್ ಟೀಕೆಗೆ ಅನುರಾಗ್ ಠಾಕೂರ್ ಪ್ರತಿಕ್ರಿಯೆ
ಅಖಿಲೇಶ್ ಯಾದವ್- ಅನುರಾಗ್ ಕಶ್ಯಪ್
TV9 Web
| Edited By: |

Updated on: Dec 14, 2021 | 5:34 PM

Share

ದೆಹಲಿ: ಜನರು ತಮ್ಮ ಅಂತಿಮ ದಿನಗಳಲ್ಲಿ ವಾರಣಾಸಿಗೆ (Varanasi) ಹೋಗುತ್ತಾರೆ ಎಂದು ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಮಾಜಿ ಮುಖ್ಯಮಂತ್ರಿಯಿಂದ ಇಂತಹ ಭಾಷೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.  ” ಹಿರಿಯರಿಗೆ ಇಂತಹ ಪದಗಳನ್ನು ಬಳಸುವುದು ದುರದೃಷ್ಟಕರ. ಅವರು (ಸಮಾಜವಾದಿ ಪಕ್ಷ) ಕಾಶಿ ಮತ್ತು ರಾಮಮಂದಿರವನ್ನು ಹೇಗೆ ವಿರೋಧಿಸಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಠಾಕೂರ್ ಹೇಳಿದ್ದಾರೆ. ಕೆಲವು ಜನರಿಗೆ ಇಂತಹ ಕಾಮೆಂಟ್‌ಗಳನ್ನು ಮಾಡುವ ಮೊದಲು ನೀವು ಎರಡು ಬಾರಿ ಯೋಚಿಸಬೇಕು. ಮಾಜಿ ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಠಾಕೂರ್ ಹೇಳಿದರು.  ಪ್ರಧಾನಿಯವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಗೆ ಮೋದಿ ಭೇಟಿಯ ಕುರಿತು ಅಖಿಲೇಶ್ ಅವರ “ಕೊನೆಯ ದಿನ” ಟೀಕೆಗಳ ನಂತರ ಠಾಕೂರ್ ಅವರ ಹೇಳಿಕೆ ಬಂದಿದೆ. “ಬಹೋತ್ ಅಚ್ಚಿ ಬಾತ್ ಹೈ. ಏಕ್ ಮಹಿನಾ ನಹಿ, ದೋ ಮಹಿನಾ, ತೀನ್ ಮಹಿನಾ, ವಹಿನ್ ರಹೇಂ. ಅಚ್ಚಿ ಬಾತ್ ಹೈ. ವೋ ಜಗಹ್ ರೆಹನೆ ವಾಲಿ ಹೈ. ಆಖ್ರಿ ಸಮಯ್ ಪೆ ವಹೀಂ ರಹಾ ಜಾತಾ ಹೈ, ಬನಾರಸ್ ಮೇ (ಒಳ್ಳೆಯ ಸಂಗತಿ. ಅವರು ಎರಡು ತಿಂಗಳು, ಮೂರು ತಿಂಗಳು ಅಲ್ಲಿಯೇ ಇರಬೇಕು. ಇದು ತಂಗಲು ಯೋಗ್ಯವಾದ ಸ್ಥಳವಾಗಿದೆ. ಜನರು ತಮ್ಮ ಕೊನೆಯ ದಿನಗಳನ್ನು ಬನಾರಸ್‌ನಲ್ಲಿ ಕಳೆಯುತ್ತಾರೆ) ”ಎಂದು ಅಖಿಲೇಶ್ ಹೇಳಿದ್ದರು.

“ಆ ಸಮಯದಲ್ಲಿ, ನಾನು ಸಂಸತ್ತಿನಲ್ಲಿ (ಎಸ್‌ಪಿ ಸಂಸ್ಥಾಪಕ) ಮುಲಾಯಂ ಸಿಂಗ್ ಅವರ ಪಕ್ಕದಲ್ಲಿ ಕುಳಿತಿದ್ದೆ. ಅವರು ಒಬ್ಬರೇ ಕುಳಿತಿದ್ದರಿಂದ ನಾನು ಸಹ ಸಂಸದನಾಗಿ ಅವರೊಂದಿಗೆ ಕುಳಿತಿದ್ದೆ. ಮತ್ತೊಂದೆಡೆ, ಅಖಿಲೇಶ್ ಯಾದವ್ ಜಿ ಅಂತಹ ಕಾಮೆಂಟ್ ಅನ್ನು ನೀಡುತ್ತಾರೆ. ಅದು ಅವರ ಮನಸ್ಥಿತಿ ಮತ್ತು ಪಾಲನೆಯನ್ನು ತೋರಿಸುತ್ತದೆ. ಇಂತಹ ಭಾಷೆ ಮತ್ತು ಅದರ ಸದಸ್ಯರಲ್ಲಿರುವ ಆತಂಕವನ್ನು ತೋರಿಸುತ್ತದೆ ಎಂದು ಠಾಕೂರ್ ಮಂಗಳವಾರ ಹೇಳಿದ್ದಾರೆ.

ಯಾದವ್ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ವಾಗ್ದಾಳಿ ನಡೆಸಿದ್ದಾರೆ. ಆದಾಗ್ಯೂ, ಎಸ್‌ಪಿ ವಕ್ತಾರ ರಾಜೇಂದ್ರ ಚೌಧರಿ, “ಬಿಜೆಪಿ ಹೇಳಿಕೆಯನ್ನು ತಿರುಚುತ್ತಿದೆ. ಅವರು ಯುಪಿ ಸರ್ಕಾರದ ಕೊನೆಯ ದಿನಗಳ ಬಗ್ಗೆ ಮಾತನಾಡುತ್ತಿದ್ದಾರೆ ಅವರು ನಿರ್ದಿಷ್ಟವಾಗಿ ಯಾರ ಬಗ್ಗೆಯೂ ಮಾತನಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದರೂ, ಯೋಗಿ ಆದಿತ್ಯನಾಥ್ ಮಾಡಲಿಲ್ಲ ಯಾಕೆ?-ಅಖಿಲೇಶ್ ಯಾದವ್ ಹೇಳಿದ ಕಾರಣ ಇದು

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ