AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವಾರದ ಹಿಂದೆಯೇ ಆ್ಯಪಲ್ ತಂತ್ರಾಂಶಗಳಲ್ಲಿ ಭದ್ರತಾ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದ್ದ ಸರ್ಕಾರ

Apple Alert Notification: ಹಳೆಯ ಆವೃತ್ತಿಯ ಆ್ಯಪಲ್ ತಂತ್ರಾಂಶಗಳಲ್ಲಿ ಹುಳುಕುಗಳು ಕಂಡುಬಂದಿವೆ. 17.1ಗೆ ಮುಂದಿನ ಐಒಸ್ ಮತ್ತು ಐಪ್ಯಾಡ್ ಒಎಸ್ ಆವೃತ್ತಿಗಳು, 14.1ಕ್ಕೆ ಮುಂಚಿನ ಮ್ಯಾಕ್​ಒಎಸ್ ಸೊನೊಮಾ ಆವೃತ್ತಿಗಳು, 13.6.1ಗೆ ಮುಂಚಿನ ವೆಂಟುರಾ ಆವೃತ್ತಿ, 12.7.1ಕ್ಕೆ ಮುಂಚಿನ ಮಾಂಟೆರೆ ಆವೃತ್ತಿಯ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪವನ್ನು ಸಿಇಆರ್​ಟಿ ತನ್ನ ಅಡ್ವೈಸರಿಯಲ್ಲಿ ತೋರಿಸಿತ್ತೆನ್ನಲಾಗಿದೆ.

ಎರಡು ವಾರದ ಹಿಂದೆಯೇ ಆ್ಯಪಲ್ ತಂತ್ರಾಂಶಗಳಲ್ಲಿ ಭದ್ರತಾ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿದ್ದ ಸರ್ಕಾರ
ಆ್ಯಪಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 3:05 PM

Share

ನವದೆಹಲಿ, ನವೆಂಬರ್ 1: ಮಹುವಾ ಮೋಯಿತ್ರಾ, ರಾಹುಲ್ ಗಾಂಧಿ, ಪ್ರಿಯಾಂಕಾ ಚತುರ್ವೇದಿ ಮೊದಲಾದ ವಿಪಕ್ಷ ಮುಖಂಡರು ತಮಗೆ ಆ್ಯಪಲ್​ನಿಂದ ಥ್ರೆಟ್ ನೋಟಿಫಿಕೇಶನ್ (Threat Notification) ಬಂದಿರುವ ಬಗ್ಗೆ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡುವ ಮುನ್ನವೇ ಕೇಂದ್ರ ಸರ್ಕಾರ ಆ್ಯಪಲ್ ಉತ್ಪನ್ನಗಳಲ್ಲಿರುವ ಲೋಪದ ಬಗ್ಗೆ ಅಡ್ವೈಸರಿ ಬಿಡುಗಡೆ ಮಾಡಿತ್ತು. ಅಕ್ಟೋಬರ್ 14ರಂದೇ ಕೇಂದ್ರದ ಕಂಪ್ಯೂಟರ್ ಎಮರ್ಜೆನ್ಸಿ ರಿಸರ್ಚ್ ಟೀಮ್ (CERT-in) ಆ್ಯಪಲ್ ಬಳಕೆದಾರರಿಗೆ ಎಚ್ಚರದ ಸಂದೇಶ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ. ಆ್ಯಪಲ್​ನ ವಿವಿಧ ಆವೃತ್ತಿಯ ತಂತ್ರಾಂಶಗಳಲ್ಲಿ ಹಲವು ದೋಷಗಳನ್ನು ಸರ್ಕಾರದ ಅಡ್ವೈಸರಿಯಲ್ಲಿ ಎತ್ತಿತೋರಿಸಲಾಗಿದೆ.

ಹಳೆಯ ಆವೃತ್ತಿಯ ಆ್ಯಪಲ್ ತಂತ್ರಾಂಶಗಳಲ್ಲಿ ಹುಳುಕುಗಳು ಕಂಡುಬಂದಿವೆ. 17.1ಗೆ ಮುಂದಿನ ಐಒಸ್ ಮತ್ತು ಐಪ್ಯಾಡ್ ಒಎಸ್ ಆವೃತ್ತಿಗಳು, 14.1ಕ್ಕೆ ಮುಂಚಿನ ಮ್ಯಾಕ್​ಒಎಸ್ ಸೊನೊಮಾ ಆವೃತ್ತಿಗಳು, 13.6.1ಗೆ ಮುಂಚಿನ ವೆಂಟುರಾ ಆವೃತ್ತಿ, 12.7.1ಕ್ಕೆ ಮುಂಚಿನ ಮಾಂಟೆರೆ ಆವೃತ್ತಿಯ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪವನ್ನು ಸಿಇಆರ್​ಟಿ ತನ್ನ ಅಡ್ವೈಸರಿಯಲ್ಲಿ ತೋರಿಸಿತ್ತೆನ್ನಲಾಗಿದೆ. ಅದರಲ್ಲೂ ಆ್ಯಪಲ್​ನ ಸಫಾರಿ ಬ್ರೌಸರ್ ಆ್ಯಪ್​ನ 17.1ಕ್ಕೆ ಮುಂಚಿನ ಆವೃತ್ತಿಗಳಲ್ಲಿರುವ ಲೋಪವನ್ನು ಪ್ರಮುಖವಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: ಭಾರತೀಯರ ಖಾಸಗಿ ಡೇಟಾ ಸೋರಿಕೆ ಆರೋಪದ ಕುರಿತು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದೇನು?

ಆ್ಯಪಲ್​ನ ಈ ತಂತ್ರಾಂಶಗಳಲ್ಲಿರುವ ಭದ್ರತಾ ಲೋಪಗಳನ್ನು ಎತ್ತಿತೋರಿಸಿ ಅದರ ಬಳಕೆದಾರರಿಗೆ ಹೈ ಸಿವಿಯಾರಿಟಿ ಅಲರ್ಟ್ ಅನ್ನು ಹೊರಡಿಸಲಾಗಿದೆ.

ಆ್ಯಪಲ್ ಉತ್ಪನ್ನಗಳಲ್ಲಿ ಹಲವು ಭದ್ರತಾ ಲೋಪಗಳು ಕಂಡುಬಂದಿದ್ದು, ಹ್ಯಾಕರ್​ಗಳು ಸಾಧನವನ್ನು ಹ್ಯಾಕ್ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಸಿಇಆರ್​ಟಿ ಅಕ್ಟೋಬರ್ 14ರಂದು ಬಿಡುಗಡೆ ಮಾಡಿದ ಅಡ್ವೈಸರಿಯಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಹಳೆಯ ಆ್ಯಪಲ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಮೊಬೈಲ್​ಗಳಲ್ಲಿ ಈ ಲೋಪಗಳು ಇರಬಹುದು. ಅಂತೆಯೇ, ಹೊಸ ಆವೃತ್ತಿಗೆ ಅಪ್​ಡೇಟ್ ಮಾಡಲು ಕೋರಲಾಗಿದೆ. ಸಿಇಆರ್​ಟಿ ಲೋಪಗಳನ್ನು ಎತ್ತಿತೋರಿಸಿದ ಬಳಿಕ ಆ್ಯಪಲ್ ಅ ಸಂಬಂಧಿತ ತಂತ್ರಾಂಶಗಳನ್ನು ಅಪ್​ಡೇಟ್ ಮಾಡಿದೆ. ಹೀಗಾಗಿ, ಆ್ಯಪಲ್ ಬಳಕೆದಾರರು ತಮ್ಮ ತಂತ್ರಾಂಶಗಳನ್ನು ಹೊಸ ಆವೃತ್ತಿಗೆ ಬದಲಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ‘ತಪ್ಪಾಗಿಯೂ ಅಲರ್ಟ್ ಬಂದಿರಬಹುದು…’- ಆ್ಯಪಲ್ ಸ್ಪಷ್ಟನೆ; ನೋಟಿಫಿಕೇಶನ್ ಬುಡ ಶೋಧಿಸಲು ಸರ್ಕಾರದಿಂದ ತನಿಖೆ

ಸರ್ಕಾರದಿಂದಲೂ ತನಿಖೆ…

ವಿಪಕ್ಷಗಳ ಕೆಲ ನಾಯಕರು, ಪತ್ರಕರ್ತರು, ವಕೀಲರು ಹೀಗೆ ಹಲವು ಮಂದಿಗೆ ಅವರ ಆ್ಯಪಲ್ ಐಫೋನ್​ಗಳಲ್ಲಿ ಸೆಕ್ಯೂರಿಟಿ ಬೆದರಿಕೆಯ ಅಲರ್ಟ್ ಮೆಸೇಜ್​ಗಳು ಬಂದಿವೆ. ಸರ್ಕಾರಿ ಪ್ರಾಯೋಜಿತ ದಾಳಿಗೆ ಪ್ರಯತ್ನವಾಗಿದೆ ಎನ್ನುವಂತಹ ಮೆಸೇಜ್ ಎಲ್ಲರನ್ನೂ ಚಕಿತಗೊಳಿಸಿದೆ. ವಿಪಕ್ಷಗಳ ನಾಯಕರು ಈ ಮೆಸೇಜ್​ನ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಸರ್ಕಾರ ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದ್ದು, ಆ್ಯಪಲ್ ಕಳುಹಿಸಿರುವ ಈ ಅಲರ್ಟ್ ಮೆಸೇಜ್ ಸಂಬಂಧ ತನಿಖೆಗೆ ಆದೇಶಿಸಿದೆ. ಆ್ಯಪಲ್ ಯಾವುದೋ ಅಸ್ಪಷ್ಟ ಸುಳಿವನ್ನು ಆಧರಿಸಿ ಈ ಅಲರ್ಟ್ ಮೆಸೇಜ್ ಕಳುಹಿಸಿರಬಹುದು ಎಂಬುದು ಸರ್ಕಾರದ ಶಂಕೆ. ಹಾಗೆಯೇ, ಅಲರ್ಟ್ ನೋಟಿಫಿಕೇಶನ್​ನಲ್ಲಿ, ಸರ್ಕಾರಿ ಪ್ರಾಯೋಜಿತವೆಂಬ ಪದ ಪ್ರಯೋಗ ಮಾಡಿರುವುದಕ್ಕೂ ಸರ್ಕಾರ ವ್ಯಗ್ರಗೊಂಡಿದ್ದು, ಆ್ಯಪಲ್ ಸಂಸ್ಥೆಯನ್ನು ಪ್ರಶ್ನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು