AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ […]

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ
ಸಾಧು ಶ್ರೀನಾಥ್​
|

Updated on:Nov 25, 2019 | 7:53 AM

Share

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ ಹರಿಸೋಕೆ ಮೂರು ಪವರ್ ಫುಲ್ ಪಡೆಯನ್ನ ಜಮ್ಮುಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. ನಿಂತಲ್ಲೇ ಶತ್ರುಗಳ ಎದೆ ನಡುಗಿಸುವ ಸೇನೆ. ನೌಕಾಪಡೆ ಮತ್ತು ವಾಯುಪಡೆಯ ವಿಶೇಷ ಕಮಾಂಡೋ ಫೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ.

ಪ್ಯಾರಾ ಕಮಾಂಡೋಸ್‌ ಪಡೆ, ನೌಕಾಪಡೆಯ ಮಾರ್ಕೋಸ್ ಕಮಾಂಡೋ ಫೋರ್ಸ್ ಮತ್ತು ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಪೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ. ಎಲ್ಲೆಲ್ಲಿ ಹೆಚ್ಚು ಉಗ್ರರು ದಾಳಿ ಮಾಡ್ತಾರೋ, ಉಗ್ರರು ಎಲ್ಲಿ ಹೆಚ್ಚಾಗಿ ಒಳ ನುಗ್ತಾರೋ ಅಂಥಾ ಪ್ರದೇಶಗಳಲ್ಲಿ ಈ ಮೂರು ವಿಶೇಷ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.

ನೌಕಾಪಡೆಯ ಮಾರ್ಕೋಸ್ ಮತ್ತು ಐಎಎಫ್‌ನ ಗರುಡ ಕಮಾಂಡೋಸ್‌ ಪಡೆ ಚಿಕ್ಕ ತಂಡಗಳು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮೂರು ಪಡೆಗಳನ್ನ ಜಂಟಿಯಾಗಿ ಅಲ್ಲಿ ನಿಯೋಜಿಸಿರುವುದು ಇದೇ ಮೊದಲು. ಮಾರ್ಕೋಸ್ ಕಮಾಂಡೋಸ್‌ ವುಲರ್ ಸರೋವರ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ. ಹಾಗೇ, ವಾಯುಪಡೆಯ ಗರುಡ ತಂಡಗಳು ಲೋಲಾಬ್ ಪ್ರದೇಶ ಮತ್ತು ಹಾಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾರ್ಕೋಸ್‌ ಕಮಾಂಡೋ ಫೋರ್ಸ್ ನೀರಿನೂಳಗೆ ನುಗ್ಗಿ ಶತ್ರುಗಳನ್ನ ಉಡೀಸ್ ಮಾಡುವ ಸಾಮರ್ಥ್ಯ ಹೊಂದಿದ್ರೆ, ಗರುಡ ಕಮಾಂಡೋಗಳು ತಮ್ಮ ಚಾಣಾಕ್ಷ ಬುದ್ಧಿಯಿಂದ ಶತ್ರುಗಳ ಎದೆ ಸೀಳುವ ಶಕ್ತಿ ಹೊಂದಿವೆ.

Published On - 7:52 am, Mon, 25 November 19

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ