AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ […]

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 25, 2019 | 7:53 AM

Share

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ ಹರಿಸೋಕೆ ಮೂರು ಪವರ್ ಫುಲ್ ಪಡೆಯನ್ನ ಜಮ್ಮುಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. ನಿಂತಲ್ಲೇ ಶತ್ರುಗಳ ಎದೆ ನಡುಗಿಸುವ ಸೇನೆ. ನೌಕಾಪಡೆ ಮತ್ತು ವಾಯುಪಡೆಯ ವಿಶೇಷ ಕಮಾಂಡೋ ಫೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ.

ಪ್ಯಾರಾ ಕಮಾಂಡೋಸ್‌ ಪಡೆ, ನೌಕಾಪಡೆಯ ಮಾರ್ಕೋಸ್ ಕಮಾಂಡೋ ಫೋರ್ಸ್ ಮತ್ತು ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಪೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ. ಎಲ್ಲೆಲ್ಲಿ ಹೆಚ್ಚು ಉಗ್ರರು ದಾಳಿ ಮಾಡ್ತಾರೋ, ಉಗ್ರರು ಎಲ್ಲಿ ಹೆಚ್ಚಾಗಿ ಒಳ ನುಗ್ತಾರೋ ಅಂಥಾ ಪ್ರದೇಶಗಳಲ್ಲಿ ಈ ಮೂರು ವಿಶೇಷ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.

ನೌಕಾಪಡೆಯ ಮಾರ್ಕೋಸ್ ಮತ್ತು ಐಎಎಫ್‌ನ ಗರುಡ ಕಮಾಂಡೋಸ್‌ ಪಡೆ ಚಿಕ್ಕ ತಂಡಗಳು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮೂರು ಪಡೆಗಳನ್ನ ಜಂಟಿಯಾಗಿ ಅಲ್ಲಿ ನಿಯೋಜಿಸಿರುವುದು ಇದೇ ಮೊದಲು. ಮಾರ್ಕೋಸ್ ಕಮಾಂಡೋಸ್‌ ವುಲರ್ ಸರೋವರ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ. ಹಾಗೇ, ವಾಯುಪಡೆಯ ಗರುಡ ತಂಡಗಳು ಲೋಲಾಬ್ ಪ್ರದೇಶ ಮತ್ತು ಹಾಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾರ್ಕೋಸ್‌ ಕಮಾಂಡೋ ಫೋರ್ಸ್ ನೀರಿನೂಳಗೆ ನುಗ್ಗಿ ಶತ್ರುಗಳನ್ನ ಉಡೀಸ್ ಮಾಡುವ ಸಾಮರ್ಥ್ಯ ಹೊಂದಿದ್ರೆ, ಗರುಡ ಕಮಾಂಡೋಗಳು ತಮ್ಮ ಚಾಣಾಕ್ಷ ಬುದ್ಧಿಯಿಂದ ಶತ್ರುಗಳ ಎದೆ ಸೀಳುವ ಶಕ್ತಿ ಹೊಂದಿವೆ.

Published On - 7:52 am, Mon, 25 November 19

Follow Us
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ