AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ […]

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ
ಸಾಧು ಶ್ರೀನಾಥ್​
|

Updated on:Nov 25, 2019 | 7:53 AM

Share

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ ಹರಿಸೋಕೆ ಮೂರು ಪವರ್ ಫುಲ್ ಪಡೆಯನ್ನ ಜಮ್ಮುಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. ನಿಂತಲ್ಲೇ ಶತ್ರುಗಳ ಎದೆ ನಡುಗಿಸುವ ಸೇನೆ. ನೌಕಾಪಡೆ ಮತ್ತು ವಾಯುಪಡೆಯ ವಿಶೇಷ ಕಮಾಂಡೋ ಫೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ.

ಪ್ಯಾರಾ ಕಮಾಂಡೋಸ್‌ ಪಡೆ, ನೌಕಾಪಡೆಯ ಮಾರ್ಕೋಸ್ ಕಮಾಂಡೋ ಫೋರ್ಸ್ ಮತ್ತು ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಪೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ. ಎಲ್ಲೆಲ್ಲಿ ಹೆಚ್ಚು ಉಗ್ರರು ದಾಳಿ ಮಾಡ್ತಾರೋ, ಉಗ್ರರು ಎಲ್ಲಿ ಹೆಚ್ಚಾಗಿ ಒಳ ನುಗ್ತಾರೋ ಅಂಥಾ ಪ್ರದೇಶಗಳಲ್ಲಿ ಈ ಮೂರು ವಿಶೇಷ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.

ನೌಕಾಪಡೆಯ ಮಾರ್ಕೋಸ್ ಮತ್ತು ಐಎಎಫ್‌ನ ಗರುಡ ಕಮಾಂಡೋಸ್‌ ಪಡೆ ಚಿಕ್ಕ ತಂಡಗಳು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮೂರು ಪಡೆಗಳನ್ನ ಜಂಟಿಯಾಗಿ ಅಲ್ಲಿ ನಿಯೋಜಿಸಿರುವುದು ಇದೇ ಮೊದಲು. ಮಾರ್ಕೋಸ್ ಕಮಾಂಡೋಸ್‌ ವುಲರ್ ಸರೋವರ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ. ಹಾಗೇ, ವಾಯುಪಡೆಯ ಗರುಡ ತಂಡಗಳು ಲೋಲಾಬ್ ಪ್ರದೇಶ ಮತ್ತು ಹಾಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾರ್ಕೋಸ್‌ ಕಮಾಂಡೋ ಫೋರ್ಸ್ ನೀರಿನೂಳಗೆ ನುಗ್ಗಿ ಶತ್ರುಗಳನ್ನ ಉಡೀಸ್ ಮಾಡುವ ಸಾಮರ್ಥ್ಯ ಹೊಂದಿದ್ರೆ, ಗರುಡ ಕಮಾಂಡೋಗಳು ತಮ್ಮ ಚಾಣಾಕ್ಷ ಬುದ್ಧಿಯಿಂದ ಶತ್ರುಗಳ ಎದೆ ಸೀಳುವ ಶಕ್ತಿ ಹೊಂದಿವೆ.

Published On - 7:52 am, Mon, 25 November 19

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ