AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ […]

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ
ಸಾಧು ಶ್ರೀನಾಥ್​
|

Updated on:Nov 25, 2019 | 7:53 AM

Share

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ ಹರಿಸೋಕೆ ಮೂರು ಪವರ್ ಫುಲ್ ಪಡೆಯನ್ನ ಜಮ್ಮುಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. ನಿಂತಲ್ಲೇ ಶತ್ರುಗಳ ಎದೆ ನಡುಗಿಸುವ ಸೇನೆ. ನೌಕಾಪಡೆ ಮತ್ತು ವಾಯುಪಡೆಯ ವಿಶೇಷ ಕಮಾಂಡೋ ಫೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ.

ಪ್ಯಾರಾ ಕಮಾಂಡೋಸ್‌ ಪಡೆ, ನೌಕಾಪಡೆಯ ಮಾರ್ಕೋಸ್ ಕಮಾಂಡೋ ಫೋರ್ಸ್ ಮತ್ತು ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಪೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ. ಎಲ್ಲೆಲ್ಲಿ ಹೆಚ್ಚು ಉಗ್ರರು ದಾಳಿ ಮಾಡ್ತಾರೋ, ಉಗ್ರರು ಎಲ್ಲಿ ಹೆಚ್ಚಾಗಿ ಒಳ ನುಗ್ತಾರೋ ಅಂಥಾ ಪ್ರದೇಶಗಳಲ್ಲಿ ಈ ಮೂರು ವಿಶೇಷ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.

ನೌಕಾಪಡೆಯ ಮಾರ್ಕೋಸ್ ಮತ್ತು ಐಎಎಫ್‌ನ ಗರುಡ ಕಮಾಂಡೋಸ್‌ ಪಡೆ ಚಿಕ್ಕ ತಂಡಗಳು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮೂರು ಪಡೆಗಳನ್ನ ಜಂಟಿಯಾಗಿ ಅಲ್ಲಿ ನಿಯೋಜಿಸಿರುವುದು ಇದೇ ಮೊದಲು. ಮಾರ್ಕೋಸ್ ಕಮಾಂಡೋಸ್‌ ವುಲರ್ ಸರೋವರ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ. ಹಾಗೇ, ವಾಯುಪಡೆಯ ಗರುಡ ತಂಡಗಳು ಲೋಲಾಬ್ ಪ್ರದೇಶ ಮತ್ತು ಹಾಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾರ್ಕೋಸ್‌ ಕಮಾಂಡೋ ಫೋರ್ಸ್ ನೀರಿನೂಳಗೆ ನುಗ್ಗಿ ಶತ್ರುಗಳನ್ನ ಉಡೀಸ್ ಮಾಡುವ ಸಾಮರ್ಥ್ಯ ಹೊಂದಿದ್ರೆ, ಗರುಡ ಕಮಾಂಡೋಗಳು ತಮ್ಮ ಚಾಣಾಕ್ಷ ಬುದ್ಧಿಯಿಂದ ಶತ್ರುಗಳ ಎದೆ ಸೀಳುವ ಶಕ್ತಿ ಹೊಂದಿವೆ.

Published On - 7:52 am, Mon, 25 November 19

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ