AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ: 6 ವರ್ಷಗಳ ಬಳಿಕ ಭಾರತದ ಪೌರತ್ವ ಪಡೆದ ಮಹಿಳೆ

ಅಸ್ಸಾಂನ ಮಹಿಳೆಯೊಬ್ಬರಿಗೆ 6 ವರ್ಷಗಳ ನಂತರ ಭಾರತೀಯ ಪೌರತ್ವ ಸಿಕ್ಕಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದರೆ ಎಂದು ಹೇಳಲಾಗುತ್ತಿದ್ದ ಈ ಮಹಿಳೆ 6 ವರ್ಷಗಳಿಂದ ಭಾರತದ ಪೌರತ್ವ ಪಡೆಯಲು ಒದ್ದಾಡಿದ್ದಾರೆ.

ಅಸ್ಸಾಂ: 6 ವರ್ಷಗಳ ಬಳಿಕ ಭಾರತದ ಪೌರತ್ವ ಪಡೆದ ಮಹಿಳೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 14, 2023 | 12:26 PM

Share

ಅಸ್ಸಾಂನ ಮಹಿಳೆಯೊಬ್ಬರಿಗೆ 6 ವರ್ಷಗಳ ನಂತರ ಭಾರತೀಯ ಪೌರತ್ವ ಸಿಕ್ಕಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದರೆ ಎಂದು ಹೇಳಲಾಗುತ್ತಿದ್ದ ಈ ಮಹಿಳೆ 6 ವರ್ಷಗಳಿಂದ ಭಾರತದ ಪೌರತ್ವ ಪಡೆಯಲು ಒದ್ದಾಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಪೌರತ್ವ ಪಡೆಯುವುದು ಅಷ್ಟೊಂದು ಸುಲಭವಲ್ಲ, ಅದರಲ್ಲೂ ಅಕ್ರಮವಾಗಿ ಬಂದವರಿಗೆ ಇದು ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ. ಮತದಾರರ ಪಟ್ಟಿಯಲ್ಲಿ ಈ ಮಹಿಳೆಯ ಹೆಸರು ಹೊಂದಿಕೆಯಾಗದ ಕಾರಣ ಬಾಂಗ್ಲಾದೇಶದಿಂದ ಅಕ್ರಮ ವಲಸಿಗ ಎಂದು ಘೋಷಿಸಲಾಗಿತ್ತು. 50 ವರ್ಷದ ಈ ಮಹಿಳೆ ಆರು ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟ ಮಾಡಿದ್ದಾರೆ. ಈ ಹೋರಾಟದ ಫಲವಾಗಿ ಇದೀಗ ಈಕೆಗೆ ಭಾರತದ ಪೌರತ್ವ ಸಿಕ್ಕಿದೆ.

ಕ್ಯಾಚಾರ್ ಜಿಲ್ಲೆಯ ಉದರ್‌ಬಾಂಡ್ ಪ್ರದೇಶದ ನಿವಾಸಿಯಾದ ದುಲುಬಿ ಬೀಬಿಯವರ ಹೆಸರು 2017ರ ಬಹು ಮತದಾರರ ಪಟ್ಟಿಗಳಲ್ಲಿ ಹೊಂದಣಿಕೆಯಾಗದ ಕಾರಣ ಇವರನ್ನು ವಿದೇಶಿ ನ್ಯಾಯಮಂಡಳಿ (foreign tribunal) ವಿದೇಶಿ ವಲಸಿಗ ಎಂದು ಘೋಷಿಸಿತು. ಇದೀಗ ಈ ಮಹಿಳೆಗೆ ಸಾಂದರ್ಭಿಕ ಪುರವೆಯ (circumstantial evidence) ಆಧಾರದ ಮೇಲೆ ಭಾರತದ ಪೌರತ್ವ ಸಿಕ್ಕಿದೆ.

ವಿದೇಶಿ ನ್ಯಾಯಮಂಡಳಿಯ ಅಧಿಕಾರಿಗಳು ಅ.7ರಂದು ಈ ಆದೇಶವನ್ನು ನೀಡಿದ್ದಾರೆ. ಈ ಬಗ್ಗೆ ಎನ್​​ಡಿಟಿವಿ ವರದಿ ಕೂಡ ಮಾಡಿತ್ತು. ಮಹಿಳೆ ನೀಡಿದ ಕೆಲವೊಂದು ದಾಖಲೆ ಹಾಗೂ 1965, 1985 ಮತ್ತು 1997 ರ ಹಿಂದಿನ ಮತ್ತು ಪ್ರಸ್ತುತ ವಿವರಗಳ ಆಧಾರದಲ್ಲಿ ಅವರಿಗೆ ಪೌರತ್ವವನ್ನು ನೀಡಲಾಗಿದೆ. ಇದೀಗ ಆ ಮಹಿಳೆ ಈ ಬಗ್ಗೆ ಸಂತೋಷದ ಮಾತುಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಇಂದು ನಾನು ಭಾರತದಲ್ಲಿ ನನ್ನ ಪೌರತ್ವವನ್ನು ಪಡೆದುಕೊಂಡಿದ್ದೇನೆ, ಪೌರತ್ವ ಪಡೆಯುವ ಮುನ್ನ ನನ್ನನ್ನು ಬಾಂಗ್ಲಾ ಪ್ರಜೆ ಎಂದು ಹೇಳುತ್ತಿದ್ದರು, ನನ್ನ ಅಜ್ಜಿ ಹಾಗೂ ಹಿರಿಯರು ಭಾರತೀಯರು, ನಾನು ಹೇಗೆ ಬಾಂಗ್ಲಾ ಪ್ರಜೆ ಆಗುತ್ತೇನೆ. ನಾನು ಮುಸ್ಲಿಂ ಮಹಿಳೆ, ನಮ್ಮದು ತುಂಬಾ ಸಂಪ್ರದಾಯ ಕುಟುಂಬ, ಎರಡು ವರ್ಷಗಳ ಕಾಲ ನಾನು ಸಿಲ್ಚಾರ್ ಬಂಧನ ಕೇಂದ್ರದಲ್ಲಿದ್ದೆ, ಜೈಲಿಗೆ ಹೋಗುವ ಮೊದಲು ನಾನು ಮನೆ ಮನೆಗೆ ಹೋಗಿ ಅಡುಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ 108 ಮಂದಿ ಪಾಕಿಸ್ತಾನಿ ವಲಸಿಗರಿಗೆ ಭಾರತದ ಪೌರತ್ವ: ಹರ್ಷ ಸಂಘವಿ

ಆದರೆ ಇದೀಗ ನನ್ನ ಪತಿ ಮತ್ತು ಮನೆಯವರು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ. ಇದರ ಜತೆಗೆ ನನ್ನ ಜಿವನ ನಡೆಸಲು ಕೆಲಸ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಎಲ್ಲ ಹೊಣೆಯನ್ನು ಸರ್ಕಾರವೆ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮಹಿಳೆಯನ್ನು ಸುಪ್ರೀಂ ಕೋರ್ಟ್​​ನ ನಿರ್ದೇಶನದ ಮೇಲೆ 2020ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ