Mango Price: ಮಾವು ಪ್ರಿಯರಿಗೆ ಕಹಿ ಸುದ್ದಿ, ಈ ಬಾರಿ ಬೆಲೆ ದುಬಾರಿ: ದರ ಏರಿಕೆಯ ಸತ್ಯ ಇಲ್ಲಿದೆ

Mango price hike: ಹವಾಮಾನ ಬದಲಾವಣೆ, ಅಕಾಲಿಕ ಮಳೆ ಮತ್ತು ಕೀಟಾಣುಗಳ ದಾಳಿಯಿಂದಾಗಿ ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಹಾಗಾಗಿ ಋತುವಿನಲ್ಲಿ ಮಾವಿನ ಹಣ್ಣಿನ ಬೆಲೆ  ದುಬಾರಿಯಾಗಿದೆ.

Mango Price: ಮಾವು ಪ್ರಿಯರಿಗೆ ಕಹಿ ಸುದ್ದಿ, ಈ ಬಾರಿ ಬೆಲೆ ದುಬಾರಿ: ದರ ಏರಿಕೆಯ ಸತ್ಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
|

Updated on:Apr 26, 2023 | 4:05 PM

ಮಾವಿನ ಹಣ್ಣನ್ನು ಎಲ್ಲಾ ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣು (Mango) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಬೇಸಿಗೆಯ ದಿನಗಳಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಈ ಮಾವಿನ ಹಣ್ಣು ಸದ್ಯ ಜನ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಕಾರಣ ಹಠಾತ್ ಹವಾಮಾನ ಬದಲಾವಣೆ, ಅಕಾಲಿಕ ಮಳೆ ಮತ್ತು ಕೀಟಾಣುಗಳ ದಾಳಿಯಿಂದಾಗಿ ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಹಾಗಾಗಿ ಋತುವಿನಲ್ಲಿ ಮಾವಿನ ಹಣ್ಣಿನ ಬೆಲೆ  ದುಬಾರಿಯಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಹಾಪುಸ್​,  ಕೊಂಕಣ ಮಾವು ಸೇರಿದಂತೆ ಇತರೆ ಮಾವು ತಳಿಗಳಲ್ಲಿ 40-50% ದುಬಾರಿ ಕಂಡುಬಂದಿದೆ. ಕೆಲ ಕಾರಣಗಳಿಂದ ಕಡಿಮೆ ಪ್ರಮಾಣ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಉತ್ಪಾದನೆಯ ಪ್ರಮಾಣ ಕಡಿಮೆ ಆಗಿದ್ದು, ಸಹಜವಾಗಿಯೇ ಬೆಲೆಯಲ್ಲಿ ಏರಿಕೆಯಾಗಿ ಸಾಮಾನ್ಯ ವರ್ಗದ ಜನರ ಕೈಗೆಟುಕದಂತಾಗಿದೆ.

ಮಾವಿನ ಹಣ್ಣಿನ ದುಬಾರಿ ಬೆಲೆ ಏರಿಕೆ ಕುರಿತಾಗಿ ಟಿವಿ9 ಡಿಜಿಟಲ್​ ಜೊತೆ ಬೆಂಗಳೂರಿನ ಸಗಟು ವ್ಯಾಪಾರಿ ಸಮೀರ್​ ಮಾತನಾಡಿ, ಮಹಾರಾಷ್ರ ಭಾಗದಲ್ಲಿ ಜನವರಿ, ಫೆಬ್ರುವರಿಯಲ್ಲಿ ಉಂಟಾದ ಅಕಾಲಿಕ ಮಳೆಯಿಂದಾಗಿ ಈ ವರ್ಷ ಮಾವು ಬೆಳೆಯುವುದೇ ಕಡಿಮೆ ಆಗಿದೆ. ಈ ಹಿನ್ನೆಲೆ ಆರಂಭದಲ್ಲಿ ಮಾವು ಬೆಲೆ ದುಬಾರಿ ಆಗಿತ್ತು. ಅಕ್ಷಯ ತೃತೀಯ ಮುಗಿದ ಬಳಿಕ ಮಾವು ಬೆಲೆಯಲ್ಲಿ ಕುಸಿತ ಉಂಟಾಗಿದೆ. ಮೇ ತಿಂಗಳಲ್ಲಿ ಬೆಲೆ ಮತ್ತಷ್ಟು ಕಡಿಮೆ ಆಗುವುದರೊಂದಿಗೆ ಮಾವು ಸಿಗುವುದು ಕೂಡ ಕಷ್ಟ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯಾದ್ಯಂತ ಶಾಲೆಗಳಲ್ಲಿ ಪಠ್ಯ ವಿಷಯವಾಗಿ ಕೃಷಿಯನ್ನು ಸೇರಿಸಲು ಆದೇಶ

ಸದ್ಯ ಬೆಂಗಳೂರಿನಲ್ಲಿ ಒಂದು ಡಜನ್​ ಮಾವಿಗೆ (ಸಾಮಾನ್ಯ 250 ಗ್ರಾಂ) 1000, 1200 ಬೆಲೆ ಇದೆ. ಅದೇ ಒಂದು ವೇಳೆ ನೀವು ಮಹಾರಾಷ್ಟ, ಪುಣೆ ಭಾಗಗಳಲ್ಲಿ ಒಂದು ಡಜನ್​ 700-800 ಬೆಲೆ ಇರಬಹುದು. ಬೆಂಗಳೂರಿನಲ್ಲಿ ಸಿಗುವಂತಹ ಮಾವನ್ನು ಹೆಚ್ಚಾಗಿ ಮಹಾರಾಷ್ಟ್ರದ ರತ್ನಗಿರಿಯಿಂದ ರಫ್ತು ಮಾಡಲಾಗುತ್ತದೆ ಎಂದು ಸಮೀರ್​ ಅವರು ತಿಳಿಸಿದರು.

ಇದನ್ನೂ ಓದಿ: Operation Kaveri: 72 ಗಂಟೆಗಳ ಕದನ ವಿರಾಮದ ನಡುವೆ ಸುಡಾನ್‌ನಿಂದ 534 ನಾಗರಿಕರನ್ನು ಸ್ಥಳಾಂತರಿಸಿದ ಭಾರತ

ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿನ ಮಾವಿನ ಹಣ್ಣಿನ ಬೆಲೆ ಹೀಗಿದೆ 

ದಾವಣಗೆರೆ: ಮಾವು- ಕನಿಷ್ಠ ಬೆಲೆ- 4000 ಗರಿಷ್ಠ- 5000

ಹಳಿಯಾಳ: ಹಾಪುಸ್​- ಕನಿಷ್ಠ ಬೆಲೆ- 4000 ಗರಿಷ್ಠ- 4000

ಕಲಬುರಗಿ: ಮಾವು- ಕನಿಷ್ಠ ಬೆಲೆ- 5200 ಗರಿಷ್ಠ- 7680

ಮೈಸೂರು: ಇತರೆ- ಕನಿಷ್ಠ ಬೆಲೆ- 2500 ಗರಿಷ್ಠ- 5000

ರಾಮನಗರ: ಬಾದಾಮಿ- ಕನಿಷ್ಠ ಬೆಲೆ- 3000 ಗರಿಷ್ಠ- 8300 ಇತರೆ- ಕನಿಷ್ಠ ಬೆಲೆ- 1400 ಗರಿಷ್ಠ- 3300 ರಸಪುರಿ- ಕನಿಷ್ಠ ಬೆಲೆ- 4400 ಗರಿಷ್ಠ-8000 ತೋತಾಪುರಿ- ಕನಿಷ್ಠ ಬೆಲೆ- 1000 ಗರಿಷ್ಠ-1600

ಉಡುಪಿ: ಮಾವು- ಕನಿಷ್ಠ ಬೆಲೆ- 4500 ಗರಿಷ್ಠ- 10000

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:59 pm, Wed, 26 April 23

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ