Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್​ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು

ಪಂಜಾಬ್ ನೇಷನಲ್ ಬ್ಯಾಂಕ್​ಗೆ ವಂಚನೆ ಮಾಡಿ ಪರಾರಿ ಆಗಿರುವ ಭಾರತದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರಾಗಿದೆ. ಡೊಮಿನಿಕಾ ದೇಶದ ಸ್ಥಳೀಯ ಕೋರ್ಟ್‌ನಿಂದ ಜಾಮೀನು ನೀಡಲಾಗಿದೆ.

Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್​ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು
ಮೆಹುಲ್ ಚೋಕ್ಸಿ
Follow us
| Updated By: ganapathi bhat

Updated on:Jul 12, 2021 | 9:35 PM

ದೆಹಲಿ: ಪಂಜಾಬ್ ನೇಷನಲ್ ಬ್ಯಾಂಕ್​ಗೆ ವಂಚನೆ ಮಾಡಿ ಪರಾರಿ ಆಗಿರುವ ಭಾರತದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರಾಗಿದೆ. ಡೊಮಿನಿಕಾ ದೇಶದ ಸ್ಥಳೀಯ ಕೋರ್ಟ್‌ನಿಂದ ಜಾಮೀನು ನೀಡಲಾಗಿದೆ. ಆಂಟಿಗುವಾಗೆ ತೆರಳಲು ಅನುಮತಿ ನೀಡಿರುವ ಕೋರ್ಟ್‌ ಜಾಮೀನು ನೀಡಿದೆ. ಪಂಜಾಬ್ ನೇಷನಲ್ ಬ್ಯಾಂಕ್ (ಪಿಎನ್​ಬಿ) ಹಗರಣಕ್ಕೆ ಸಂಬಂಧಿಸಿದಂತೆ ಜೂನ್​ 10ರಂದು ಕೇಂದ್ರೀಯ ತನಿಖಾ ದಳವು ಮೆಹುಲ್ ಚೋಕ್ಸಿ ಮತ್ತು ಇತರ 21 ಜನರ ವಿರುದ್ಧ ಹೊಸ ಚಾರ್ಜ್​ಶೀಟ್​ ದಾಖಲಿಸಿದ್ದು ಭಾರತದಿಂದ ಕಣ್ಮರೆಯಾಗಿರುವ ವಜ್ರ ವ್ಯಾಪಾರಿಯು ಸಾಕ್ಷ್ಯ ನಾಶಪಡಿಸಿರುವ ಅರೋಪನ್ನು ಚಾರ್ಜ್​ಶೀಟ್​ನಲ್ಲಿ ಮೊದಲ ಬಾರಿಗೆ ಸೇರಿಸಿತ್ತು. 2017ರಲ್ಲಿ ಪಿಎನ್​ಬಿ ಅಧಿಕಾರಿಗಳ ಸಹಾಯದಿಂದ ಚೊಕ್ಸಿಯು 165 ಲೆಟರ್ಸ್ ಆಫ್ ಅಂಡರ್​ಸ್ಟ್ಯಾಂಡಿಂಗ್ (ಎಲ್​ಒಯು) 58 ಎಫ್​ಎಲ್​ಸಿಗಳನ್ನು (ಫಾರಿನ್ ಲೆಟರ್ಸ್​ ಆಫ್​ ಕ್ರೆಡಿಟ್) ಮೋಸದಿಂದ ಪಡೆದು ಬ್ಯಾಂಕಿಗೆ ರೂ. 6,097 ಕೋಟಿ ವಂಚನೆ ಎಸಗಿದ ನಂತರ ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದನೆಂದು ತಾನು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸಿಬಿಐ ಆರೋಪಿಸಿತ್ತು.

ಪೂರಕ ಚಾರ್ಜ್​ಶೀಟ್​ಗಳಲ್ಲಿ ಚೋಕ್ಸಿಯ ವಿರುದ್ಧ ಸೆಕ್ಷನ್ 201 (ಸಾಕ್ಷ್ಯ ನಾಶ), ವಂಚನೆ, ಕ್ರಿಮಿನಲ್ ಪತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಅರೋಪಗಳನ್ನು ತನಿಖಾ ದಳ ಮಾಡಿತ್ತು. ಈ ಎಲ್ಲ ಆರೋಪಗಳನ್ನು ಮಾಡಿರುವ ಚಾರ್ಜ್​ಶೀಟ್ ಪ್ರತಿಯನ್ನು ಡೊಮಿನಿಕಾದ ಅಧಿಕಾರಿಗಳು ಮತ್ತು ಕೊರ್ಟ್​ಗೆ ನೀಡಿದರೆ, ಚೋಕ್ಸಿಯನ್ನು ವಶಕ್ಕೆ ಪಡೆಯಲು ನೆರವಾಗುತ್ತದೆ ಎಂದು ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳು ಹೇಳಿದ್ದರು.

ಮೆಹುಲ್​ ಚೋಕ್ಸಿ ಈಗಲೂ ಭಾರತದ ಪ್ರಜೆ ಎಂದು ಡೊಮಿನಿಕಾ ಕೋರ್ಟ್​​ನಲ್ಲಿ ಅಫಿಡಿವಿಟ್​ ಸಲ್ಲಿಸಲು ಅವಕಾಶ ಕೊಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಡೊಮಿನಿಕಾ ಸರ್ಕಾರಕ್ಕೆ ಮನವಿ ಸಲ್ಲಿಸಲು ಎಲ್ಲ ರೀತಿಯ ಸಿದ್ಧತೆಯನ್ನೂ ಈ ಹಿಂದೆ ಮಾಡಿತ್ತು.

ಪಂಜಾಬ್​ ನೇಷನಲ್​ ಬ್ಯಾಂಕ್​ ಹಗರಣ ಆರೋಪಿ ಮೆಹುಲ್ ಚೋಕ್ಸಿ 2018ರಲ್ಲಿ ಭಾರತವನ್ನು ತೊರೆದು ಆಂಟಿಗುವಾಕ್ಕೆ ಪರಾರಿಯಾಗಿದ್ದರು. ಅಲ್ಲಿನ ಪೌರತ್ವ ಪಡೆದಿದ್ದ ಚೋಕ್ಸಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಕ್ರಮವಾಗಿ ಡೊಮಿನಿಕಾ ದ್ವೀಪರಾಷ್ಟ್ರವನ್ನು ನುಸುಳಿ, ಅಲ್ಲಿನ ಪೊಲೀಸರಿಂದ ಬಂಧಿತರಾಗಿದ್ದರು.

ಬಂಧಿತ ಚೋಕ್ಸಿ ವಾಪಸ್​ ಬರಲು ಅವಕಾಶ ಕೊಡುವುದಿಲ್ಲ ಎಂದು ಆಂಟಿಗುವಾ ಪ್ರಧಾನಿ ಹೇಳಿದ್ದರು. ಬಳಿಕ ಭಾರತದ ಜಾರಿ ನಿರ್ದೇಶನಾಲಯ ತನ್ನ ಪ್ರಕ್ರಿಯೆಗಳನ್ನು ಶುರು ಮಾಡಿತ್ತು. ಮೆಹುಲ್ ಚೋಕ್ಸಿ ಒಬ್ಬ ದೇಶಭ್ರಷ್ಟ ವ್ಯಾಪಾರಿ. ಆತ ಭಾರತದ ಪ್ರಜೆ ಎಂದು ಬುಧವಾರ ಡೊಮಿನಿಕಾ ಕೋರ್ಟ್​ನಲ್ಲಿ ಅಫಿಡಿವಿಟ್​ ಸಲ್ಲಿಸಲು ಮುಂದಾಗಿತ್ತು.

ಇದನ್ನೂ ಓದಿ: ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.

Mehul Choksi: ಉದ್ಯಮಿ ಮೆಹುಲ್ ​ಚೋಕ್ಸಿ ಪರಾರಿಯಾಗುವ ಸಾಧ್ಯತೆಯಿದೆ, ಜಾಮೀನು ನೀಡೊಲ್ಲ ಎಂದ ಡೊಮಿನಿಕಾ ಕೋರ್ಟ್​!

Published On - 9:32 pm, Mon, 12 July 21

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ