AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟೌಡಿ ಮಹಾಪಂಚಾಯತ್​ನಲ್ಲಿ ಪ್ರಚೋದನಕಾರಿ ಭಾಷಣ; ಜಾಮಿಯಾ ಶೂಟರ್ ವಿರುದ್ಧ ಎಫ್ಐಆರ್

ಖಾಸಗಿ ವ್ಯವಹಾರ ಹೊಂದಿರುವ ಗುರ್ಗಾಂವ್‌ನ ಜಮಾಲ್‌ಪುರ ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಟೌಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜುಲೈ4 ರಂದು ಪಟೌಡಿಯ ರಾಮ್‌ಲೀಲಾ ಮೈದಾನದಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿತ್ತು.

ಪಟೌಡಿ ಮಹಾಪಂಚಾಯತ್​ನಲ್ಲಿ ಪ್ರಚೋದನಕಾರಿ ಭಾಷಣ; ಜಾಮಿಯಾ ಶೂಟರ್ ವಿರುದ್ಧ ಎಫ್ಐಆರ್
ಜಾಮಿಯಾ ಶೂಟರ್
TV9 Web
| Edited By: |

Updated on: Jul 12, 2021 | 7:38 PM

Share

ದೆಹಲಿ: ಪಟೌಡಿಯ ಮಹಾಪಂಚಾಯತ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಮತ್ತು ಧರ್ಮವನ್ನು ಅವಮಾನಿಸಿದ್ದಕ್ಕಾಗಿ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಕಳೆದ ವರ್ಷ ಜಾಮಿಯಾದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಗುಂಪಿನ ಮೇಲೆ ಗುಂಡು ಹಾರಿಸಿದ ಹದಿಹರೆಯದ ಯುವಕನೇ ಈತ ಎಂದು ವರದಿಯಲ್ಲಿ ಹೇಳಿದೆ. ತನ್ನ ಭಾಷಣದಲ್ಲಿ ಹದಿಹರೆಯದ ಆ ಯುವಕ ಮುಸ್ಲಿಂ ಮಹಿಳೆಯರನ್ನು ಅಪಹರಿಸಲು ಹೇಳಿದ್ದಾರೆ. “ಭಯೋತ್ಪಾದಕ ಮನಸ್ಥಿತಿ” ಇರುವವರಿಗೆ “ಸಿಎಎ ಬೆಂಬಲವಾಗಿ ಜಾಮಿಯಾಕ್ಕೆ ಹೋಗಲು ಸಾಧ್ಯವಾದರೆ”, “ಪಟೌಡಿ ತುಂಬಾ ದೂರದಲ್ಲಿಲ್ಲ” ಎಂದು ಆತ ಹೇಳಿದ್ದನ್ನು ಎನ್ನಲಾಗಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ)ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ) ನಮಗೆ ಬಂದ ದೂರಿನಲ್ಲಿ ಆರೋಪಿಗಳನ್ನು ಹೆಸರಿನಿಂದ ಉಲ್ಲೇಖಿಸಲಾಗಿದೆ ”ಎಂದು ಡಿಸಿಪಿ (ಮನೇಸರ್) ವರುಣ್ ಸಿಂಗ್ಲಾ ಹೇಳಿದ್ದಾರೆ.

ಖಾಸಗಿ ವ್ಯವಹಾರ ಹೊಂದಿರುವ ಗುರ್ಗಾಂವ್‌ನ ಜಮಾಲ್‌ಪುರ ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಟೌಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜುಲೈ4 ರಂದು ಪಟೌಡಿಯ ರಾಮ್‌ಲೀಲಾ ಮೈದಾನದಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿತ್ತು. ಅಲ್ಲಿ ಒಬ್ಬ ವ್ಯಕ್ತಿ ಪ್ರಚೋದನಕಾರಿ ಭಾಷಣ ಮಾಡಿದ್ದಾನೆ. ಅದು ಗಲಭೆಗೆ ಕಾರಣವಾಗಬಹುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುತ್ತದೆ ಮತ್ತು ಈ ಭಾಷಣವು ಧಾರ್ಮಿಕ ವನೆಗಳನ್ನು ಪ್ರಚೋದಿಸುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಳೆದ ಭಾನುವಾರ ನಡೆದ ಮಹಾಪಂಚಾಯತ್, ಧಾರ್ಮಿಕ ಮತಾಂತರ, ‘ಲವ್ ಜಿಹಾದ್’, ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ಕುರಿತು ಚರ್ಚಿಸಲು ಆಯೋಜಿಸಲಾಗಿತ್ತು.

ಭಾನುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಭಾಷಣದ ವಿಡಿಯೊ ಹರಿದಾಡಿದ್ದು ವಿಡಿಯೊದಲ್ಲಿ 17 ವರ್ಷದ ಯುವಕ, “ಪಟೌಡಿ ಸೆ ಕೆವಾಲ್ ಇತ್ನಿ ಸಿ ಚೇತವಾನಿ ದೇನಾ ಚಾಹ್ತಾ ಹೂ, ಉನ್… ಜಿಹಾದಿಯಾನ್ ಕೋ, ಆತಂಕ್ ವಾದಿ ಮಾನ್ಸಿಕ್ತಾ ಕೆ ಲೋಗೊನ್ ಕೊ, ಜಬ್ (ಮೇ) ಸೌ ಕಿಲೋಮೀಟರ್ ದೂರ್ ಜಾಮಿಯಾ ಜಾ ಸಕ್ತ ಹೂನ್ ಸಿಎಎ ಕೆ ಸಮರ್ಥನ್ ಮೇ, ತೋಹ್ ಪಟೌಡಿ ಜ್ಯಾದಾ ದೂರ್ ನಹಿನ್ ಹೈ. (, ಜಿಹಾದಿಗಳು, ಭಯೋತ್ಪಾದಕ ಮನಸ್ಥಿತಿಯ ಜನರಿಗೆ ನಾನು ಪಟೌಡಿಯಿಂದ ಈ ಎಚ್ಚರಿಕೆಯನ್ನು ಮಾತ್ರ ನೀಡಲು ಬಯಸುತ್ತೇನೆ. ನಾನು ಸಿಎಎಗೆ ಬೆಂಬಲವಾಗಿ ಜಾಮಿಯಾಕ್ಕೆ 100 ಕಿಲೋಮೀಟರ್ ದೂರ ಹೋಗಬಹುದಾದರೆ ಆಗ ಪಟೌಡಿ ತುಂಬಾ ದೂರದಲ್ಲಿಲ್ಲ) ಎಂಬ ಮಾತುಗಳಿವೆ.

ಮುಸ್ಲಿಮರ ಮೇಲೆ ಹಲ್ಲೆ ನಡೆದಾಗ ಅವರು ‘ರಾಮ್ ರಾಮ್’ ಎಂದು ಕೂಗುತ್ತಾರೆ ಎಂದು ಆ ವ್ಯಕ್ತಿ ಹೇಳಿರುವುದು ವಿಡಿಯೊ ತುಣುಕಿನಲ್ಲಿದೆ.

ಜಾಮಿಯಾ ಘಟನೆ ಜನವರಿ 30, 2020 ರಂದು ನಡೆದಿತ್ತು. ಆಗ ಈ ಹದಿಹರೆಯದ ಯುವರ ಪ್ರತಿಭಟನಾಕಾರರ ಮೇಲೆ ಬಂದೂಕನ್ನು ತೋರಿಸಿ “ಯೆ ಲೋ ಅಜಾದಿ (ಇಗೋ, ಅಜಾದಿ ತೆಗೆದುಕೊಳ್ಳಿ)”, “ದೇಶ್ ಮೇ ಜೋ ರೆಹನಾ ಹೊಗಾ, ವಂದೇ ಮಾತರಂ ಕೆಹ್ನಾ ಹೊಗಾ (ನೀವು ದೇಶದಲ್ಲಿರಬೇಕಾದರೆ ವಂದೇ ಮಾತರಂ ಹೇಳಬೇಕು) ಮತ್ತು ದಿಲ್ಲಿ ಪೊಲೀಸ್ ಜಿಂದಾಬಾದ್ ಎಂದು ಹೇಳಿದ್ದನು. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೆಹಲಿ ಪೊಲೀಸ್ ಅಧಿಕಾರಿಗಳು ಬಾಲಾಪರಾಧಿ ನ್ಯಾಯ ಮಂಡಳಿಗೆ ಆತನನ್ನು ಕಳುಹಿಸಿದ್ದು ಆತನನ್ನು ಕೆಲವು ತಿಂಗಳ ನಂತರ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಕಲ್ಪನೆಯನ್ನು ಶಾಸಕ ರೇಣುಕಾಚಾರ್ಯ ಹೋಗಲಾಡಿಸಿದ್ದಾರೆ: ಮುಸ್ಲಿಂ ಮುಖಂಡ

(Provocative speech at a mahapanchayat in Pataudi FIR against Jamia shooter)

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ