AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.

ಭಾರತದ ಮಟ್ಟಿಗೆ ಅಪರೂಪದ ಪ್ರಕರಣ ಇದು. ತನಿಖಾ ಸಂಸ್ಥೆಗಳು ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಹಾಗೂ ನೀರವ್​ ಮೋದಿಯಿಂದ ವಶಪಡಿಸಿಕೊಂಡಿದ್ದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈ ಆರೋಪಿಗಳಿಂದ ನಷ್ಟಕ್ಕೀಡಾದ ಸಾರ್ವಜನಿಕ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಿವೆ.

ಮಲ್ಯ, ಚೋಕ್ಸಿ, ನೀರವ್​ರಿಂದ ನಷ್ಟ ಅನುಭವಿಸಿದ ಸಾರ್ವಜನಿಕ ಬ್ಯಾಂಕ್​ಗಳಿಗೆ 8441 ಕೋಟಿ ರೂ. ಆಸ್ತಿ ವರ್ಗಾಯಿಸಿದ ಇ.ಡಿ.
ನೀರವ್ ಮೋದಿ (ಎಡಕ್ಕೆ), ಮೆಹುಲ್ ಚೋಕ್ಸಿ (ಬಲಭಾಗದಲ್ಲಿ) ಸಂಗ್ರಹ ಚಿತ್ರ
TV9 Web
| Edited By: |

Updated on: Jun 23, 2021 | 12:38 PM

Share

ಜಾರಿ ನಿರ್ದೇಶನಾಲಯದಿಂದ (ಇ.ಡಿ.) ವಿಜಯ್​ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ತನಿಖಾ ಸಂಸ್ಥೆಗಳು ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಿವೆ. ಈ ಆರೋಪಿಗಳು ತಮ್ಮ ಕಂಪೆನಿಗಳ ಮೂಲಕವಾಗಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೆ ವಂಚನೆ ಮಾಡಿದ್ದರಿಂದ ಒಟ್ಟಾರೆ 22,585.83 ಕೋಟಿ ರೂಪಾಯಿ ನಷ್ಟವಾಗಿದೆ. ಆ ನಂತರ ಸಿಬಿಐನಿಂದ ಎಫ್​ಐಆರ್ ಆಗಿ, ಜಾರಿ ನಿರ್ದೇಶನಾಲಯದಿಂದ ಆರೋಪಿಗಳ ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಹಾಗೂ ವಿದೇಶಗಳಲ್ಲಿ ಇರುವ ಆಸ್ತಿಗಳನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದವು. ಈ ಮೂವರು ಆರೋಪಿಗಳು ತಮ್ಮ ಡಮ್ಮಿ ಸಂಸ್ಥೆಗಳನ್ನು ಬ್ಯಾಂಕ್​ಗಳಿಂದ ನೀಡುವ ಹಣವನ್ನು ಕೈ ಬದಲಾವಣೆಗೆ ಮತ್ತು ವಂಚಿಸುವುದಕ್ಕೆ ಬಳಸಿಕೊಂಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿತ್ತು.

ತಕ್ಷಣವೇ ಕ್ರಮ ಕೈಗೊಂಡ ಇ.ಡಿ., ವಿದೇಶಗಳಲ್ಲಿ ಇರುವ 969 ಕೋಟಿ ರೂಪಾಯಿ ಆಸ್ತಿಯನ್ನೂ ಸೇರಿಸಿ, 18,170.02 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು/ಜಪ್ತಿ ಮಾಡಿಕೊಂಡವು. ಅಲ್ಲಿಗೆ ಒಟ್ಟಾರೆಯಾಗಿ ಬ್ಯಾಂಕ್​ಗಳಿಗೆ ಆದ 22,585.83 ಕೋಟಿ ರೂಪಾಯಿಯಲ್ಲಿ ಶೇ 80.45ರಷ್ಟು ಮೊತ್ತವನ್ನು ವಶಪಡಿಸಿಕೊಂಡಂತೆ ಆಯಿತು. ಅಂದಹಾಗೆ ಈ ಆಸ್ತಿಯಲ್ಲಿ ಬಹುಪಾಲು ಡಮ್ಮಿ ಸಂಸ್ಥೆಗಳು/ಟ್ರಸ್ಟ್​ಗಳು/ಮೂರನೇ ವ್ಯಕ್ತಿಗಳು/ಸಂಬಂಧಿಕರ ಹೆಸರಲ್ಲಿದ್ದವವು. ಈ ಎಲ್ಲ ಸಂಸ್ಥೆಗಳನ್ನು ಬಳಸಿಕೊಂಡು, ಆರೋಪಿಗಳು ಆ ಆಸ್ತಿಯನ್ನು ಇರಿಸಲು ಬಳಸಿದ್ದರು. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆ ಪೂರ್ತಿಯಾದ ಮೇಲೆ ಮೂವರೂ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಯಿತು.

ಈ ಮೂವರ ಹಸ್ತಾಂತರಕ್ಕೆ ಕೋರಿ, ಯು.ಕೆ., ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಮನವಿ ಮಾಡಲಾಯಿತು. ಆ ನಂತರ ವಿಜಯ್ ಮಲ್ಯ ಹಸ್ತಾಂತರದ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಯು.ಕೆ. ಕೋರ್ಟ್​ನಲ್ಲಿ ತಿರಸ್ಕೃತಗೊಂಡಿದೆ. ಇನ್ನು ನೀರವ್ ಮೋದಿ ಹಸ್ತಾಂತರಕ್ಕೆ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಕಳೆದ ಎರಡು ವರ್ಷ ಹಾಗೂ ಮೂರು ತಿಂಗಳಿಂದ ನೀರವ್ ಮೋದಿ ಲಂಡನ್​ ಜೈಲಿನಲ್ಲಿದ್ದು, ವಿಜಯ್ ಮಲ್ಯರನ್ನು ಸಹ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಮುಂಬೈನ ಪಿಎಂಎಲ್​ಎ ಕೋರ್ಟ್ ಘೋಷಿಸಿದೆ.

ಈಚೆಗೆ ಜಾರಿ ನಿರ್ದೇಶನಾಲಯದಿಂದ ಅಂದಾಜು 6600 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟಕ್ಕೆ ವರ್ಗಾವಣೆ ಮಾಡಲಾಯಿತು. ಎಸ್​ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಯುನೈಟೆಡ್ ಬ್ರಿವರೀಸ್​ನ 5824.50 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಡಿಆರ್​ಟಿ ಮಾರಾಟ ಮಾಡಿದೆ. ಜೂನ್ 25ನೇ ತಾರೀಕಿನಂದು ಇನ್ನೂ 800 ಕೋಟಿ ರೂಪಾಯಿ ಮೊತ್ತ ಷೇರಿನ ಮಾರಾಟದ ಮೂಲಕವೇ ಬರಬಹುದು ಎಂಬ ಅಂದಾಜಿದೆ. ಈ ಹಿಂದೆ ಇ.ಡಿ. ಸಹಾಯದಿಂದಲೇ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಷೇರುಗಳ ಮಾರಾಟದಿಂದ 1357 ಕೋಟಿ ರೂಪಾಯಿ ವಸೂಲು ಮಾಡಿವೆ. ಇನ್ನು ಇ.ಡಿ.ಯಿಂದ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಒಂದಿಷ್ಟು ಭಾಗ ಮಾರಾಟ ಮಾಡಿ 9041.5 ಕೋಟಿ ರೂಪಾಯಿ ಸಂಗ್ರಹಿಸಬಹುದು.

ಇಲ್ಲಿಯ ತನಕ ಪಿಎಂಎಲ್​ಎ ಅಡಿಯಲ್ಲಿ 18,170.02 ಕೋಟಿ ರೂಪಾಯಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 329.67 ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಲಾಗಿದೆ. 9041.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು, ಅಂದರೆ ಒಟ್ಟು ನಷ್ಟದ ಶೇ 40ರಷ್ಟನ್ನು ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ವಿಜಯ್ ಮಲ್ಯ ಆಸ್ತಿ, ಸೆಕ್ಯೂರಿಟೀಸ್ ಹರಾಜಿಗೆ ಬ್ಯಾಂಕ್​ಗಳಿಗೆ ಅನುಮತಿ ನೀಡಿದ ಪಿಎಂಎಲ್ಎ ಕೋರ್ಟ್

(Enforecement Directorate transferred assets worth Rs 8441 Crore to PSBs who suffered loss by Vijay Mallya, Nirav Modi and Mehul Choksi)

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?