AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲಾಕೋಟ್​ ದಾಳಿಯಿಂದ ಬದಲಾಗಿದ್ದಾದರೂ ಏನು? ಬಿಜೆಪಿ ರಾಜಕೀಯ ಮೈಲೇಜ್​ ಪಡೆಯುವ ವಿಷಯವಷ್ಟೇ ಅದು’-ಫಾರೂಕ್​ ಅಬ್ದುಲ್ಲಾ

ಬಿಜೆಪಿ ಸರ್ಕಾರ ಇಂದಿಗೂ ಬಾಲಾಕೋಟ್​ ದಾಳಿಯ ಬಗ್ಗೆ ಮಾತನಾಡುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಗಾಗಿ ಮತ್ತಷ್ಟು ದ್ವೇಷವನ್ನೇ ಹರಡುತ್ತಿದ್ದಾರೆ ಎಂದು ಫಾರೂಕ್​ ಅಬ್ದುಲ್ಲಾ ಹೇಳಿದರು. 

‘ಬಾಲಾಕೋಟ್​ ದಾಳಿಯಿಂದ ಬದಲಾಗಿದ್ದಾದರೂ ಏನು? ಬಿಜೆಪಿ ರಾಜಕೀಯ ಮೈಲೇಜ್​ ಪಡೆಯುವ ವಿಷಯವಷ್ಟೇ ಅದು’-ಫಾರೂಕ್​ ಅಬ್ದುಲ್ಲಾ
ಫಾರೂಕ್​ ಅಬ್ದುಲ್ಲಾ
Follow us
TV9 Web
| Updated By: Lakshmi Hegde

Updated on:Oct 22, 2021 | 2:17 PM

ಜಮ್ಮು: 2019ರಲ್ಲಿ ಭಾರತೀಯ ವಾಯುಸೇನೆ (Indian Air Force) ಪಾಕಿಸ್ತಾನದ ಬಾಲಾಕೋಟ್​​​ ಮೇಲೆ ನಡೆಸಿದ ಏರ್​​ಸ್ಟ್ರೈಕ್(Balakot Airstrike) ನಿಜಕ್ಕೂ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ಆದರೆ ಈ ಬಾಲಾಕೋಟ್​ ವಾಯುದಾಳಿಯನ್ನು ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election)ಯಲ್ಲಿ ರಾಜಕೀಯ ಮೈಲೇಜ್​ ಪಡೆಯಲು ಬಿಜೆಪಿ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಜಮ್ಮು-ಕಾಶ್ಮೀರದ ನ್ಯಾಶನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ (Farooq Abdullah) ಆರೋಪಿಸಿದ್ದಾರೆ. 

ಮಾಧ್ಯಮಗಳೆದುರು ಮಾತನಾಡಿದ ಅವರು, ಬಾಲಾಕೋಟ್​ !, ಬಾಲಾಕೋಟ್​ ! ಕೇವಲ ಇದನ್ನೊಂದು ಹೇಳುತ್ತಿದ್ದಾರೆ. ಏನಾದರೂ ಬದಲಾಗಿದೆಯಾ? ಗಡಿನಿಯಂತ್ರಣ ರೇಖೆ (ಎಲ್​ಒಸಿ) ಬದಲಾಯಿತಾ? ಪಾಕಿಸ್ತಾನದಿಂದ ಒಂದು ಸಣ್ಣ ತುಂಡು ಭೂಮಿಯನ್ನು ವಾಪಸ್​ ಪಡೆಯಲು ಸಾಧ್ಯವಾಯಿತಾ? ಆ ರೇಖೆ ಅಲ್ಲಿಯೇ ಇದೆ. ಬಾಲಾಕೋಟ್​​ನಲ್ಲಿ ವಾಯುದಾಳಿಯಾಯಿತು..ಆದರೆ ನಾವೇನು ಪಡೆಯಲು ಸಾಧ್ಯವಾಯಿತು? ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ಇಂದಿಗೂ ಬಾಲಾಕೋಟ್​ ದಾಳಿಯ ಬಗ್ಗೆ ಮಾತನಾಡುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಗಾಗಿ ಮತ್ತಷ್ಟು ದ್ವೇಷವನ್ನೇ ಹರಡುತ್ತಿದ್ದಾರೆ ಎಂದು ಹೇಳಿದರು.

ಭಾರತೀಯರು ಬಾಲಾಕೋಟ್​ ದಾಳಿ ನಡೆದದ್ದನ್ನು ಮರೆಯುವಂತಿಲ್ಲ. 2019ರ ಫೆಬ್ರವರಿ 14ರಂದು ಪುಲ್ವಾಮಾದ ಜಮ್ಮು-ಶ್ರೀನಗರ ಹೆದ್ದಾರಿ ಬಳಿ ಜೈಶ್​ ಎ ಮೊಹಮ್ಮದ್​ ಉಗ್ರರು ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದರಲ್ಲಿ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಭಾರತದ ಪಾಲಿಗೆ ಅದು ಕರಾಳ ದಿನ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಫೆಬ್ರವರಿ 26ರಂದು ಮುಂಜಾನೆ ಪಾಕಿಸ್ತಾನದ ಖೈಬರ್​ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್​ ಉಗ್ರರ ತಾಣದ ಮೇಲೆ ಏರ್​ಸ್ಟ್ರೈಕ್​ ನಡೆಸಿತ್ತು.

ಇದನ್ನೂ ಓದಿ: Hungama: ಹಂಗಾಮದಿಂದ ‘ಹಂಗಾಮ ಮ್ಯೂಸಿಕ್ ಕ್ವಿಜ್ ಅಲೆಕ್ಸಾ ಸ್ಕಿಲ್’ ಲಾಂಚ್: ಸಂಗೀತ ಜ್ಞಾನ ಪರೀಕ್ಷಿಸಲು ವಿವಿಧ ಆಟ

Meghana Raj: ಪುತ್ರ ರಾಯನ್​ ಜನ್ಮದಿನಕ್ಕೆ ಮೇಘನಾ ನೀಡಿರುವ ಸಂದೇಶವೇನು?

Published On - 2:16 pm, Fri, 22 October 21

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?