AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಕೊವ್ಯಾಕ್ಸಿನ್​ ಕೊಡಬಾರದಂತೆ.. ಇದೆಂಥ ವರಸೆ!

ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಕೊವ್ಯಾಕ್ಸಿನ್​ ಕೊರೊನಾ ಲಸಿಕೆ ನೀಡುವಂತಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ. ಆದರೆ, ವಾಸ್ತವವಾಗಿ ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಲಸಿಕೆಯ ಅವಶ್ಯಕತೆ ಹೆಚ್ಚಿರುತ್ತದೆ ಅಲ್ಲವೇ?

ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಕೊವ್ಯಾಕ್ಸಿನ್​ ಕೊಡಬಾರದಂತೆ.. ಇದೆಂಥ ವರಸೆ!
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on: Jan 19, 2021 | 6:29 PM

Share

ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ನಿರೀಕ್ಷಿತ ಮಟ್ಟ ತಲುಪುತ್ತಿಲ್ಲ ಎಂಬ ವರದಿಗಳ ಬೆನ್ನಲ್ಲೇ, ಭಾರತ್ ಬಯೋಟೆಕ್​ ಸಂಸ್ಥೆ ಹೊಸ ಪ್ರಕಟಣೆ ಹೊರಡಿಸಿದೆ. ನೂತನ ಪ್ರಕಟಣೆಯಲ್ಲಿ ಯಾರಿಗೆ ಲಸಿಕೆ ನೀಡಬಾರದು ಎನ್ನುವುದನ್ನು ತಿಳಿಸಲಾಗಿದೆ. ಕೆಲ ದಿನಗಳ ಹಿಂದೆ ನೀಡಲಾಗಿದ್ದ ಪ್ರಕಟಣೆಯಲ್ಲಿ ಇರದ ಹೊಸ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ.

ಆದರೆ, ರೋಗ ನಿರೋಧಕ ಶಕ್ತಿಯ ಕೊರತೆ ಇರುವವರು ಲಸಿಕೆ ಪಡೆಯಬಹುದು ಎನ್ನುವುದಾಗಿ ಅಂದು ಹೇಳಿದ್ದವರು ಈಗ ಉಲ್ಟಾ ಹೊಡೆದಿರುವುದು ಕೆಲ ಗೊಂದಲಗಳಿಗೆ ಕಾರಣವಾಗಿದೆ. ನೂತನ ಪ್ರಕಟಣೆಯ ಪ್ರಕಾರ ರೋಗ ನಿರೋಧಕ ಶಕ್ತಿಯ ಕೊರತೆ ಉಳ್ಳವರು, ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಔಷಧಿಗಳನ್ನು ಪಡೆಯುತ್ತಿರುವವರು ಮತ್ತು ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿರುವವರು ಕೊವ್ಯಾಕ್ಸಿನ್​ ಲಸಿಕೆ ಪಡೆಯಬೇಡಿ ಎಂದು ತಿಳಿಸಲಾಗಿದೆ.

ವಿಪರ್ಯಾಸವೆಂದರೆ ಈ ಕುರಿತು ಕೆಲ ದಿನಗಳ ಹಿಂದೆಯಷ್ಟೇ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ ರೋಗ ನಿರೋಧಕ ಶಕ್ತಿಯ ಕೊರತೆ ಇರುವವರು ಕೊರೊನಾ ಲಸಿಕೆ ಪಡೆಯಬೇಕು. ಅವರಲ್ಲಿ ಲಸಿಕೆಯ ಪರಿಣಾಮ ಕಡಿಮೆ ಆಗಬಹುದು. ಆದರೂ ಲಸಿಕೆ ಪಡೆಯಲು ಅಭ್ಯಂತರವಿಲ್ಲ ಎಂದು ಹೇಳಿತ್ತು. ಸದ್ಯ ಲಸಿಕೆ ವಿತರಣೆ ಆರಂಭವಾದ 2 ದಿನದಲ್ಲೇ ಭಾರತ್ ಬಯೋಟೆಕ್​ ಹೊಸ ಪ್ರಕಟಣೆ ಹೊರಡಿಸುವುದು ಚರ್ಚೆಗೆ ಗ್ರಾಸವಾಗಿದೆ. ಮೊದಲೇ 3 ಹಂತದ ಪರೀಕ್ಷೆ ಮುಗಿಸದ ಕೊರೊನಾ ಲಸಿಕೆ ಎಂಬ ಹಣೆಪಟ್ಟಿ ಕೊವ್ಯಾಕ್ಸಿನ್​ಗೆ ಇರುವ ಕಾರಣ ಜನರು ಮತ್ತೆ ಗೊಂದಲಕ್ಕೀಡಾಗಿದ್ದಾರೆ.

ಭಾರತ್​ ಬಯೋಟೆಕ್​ ತಿಳಿಸಿರುವಂತೆ ಈ ಕೆಳಗಿನವರು ಕೊರೊನಾ ಲಸಿಕೆ ಸ್ವೀಕರಿಸುವಂತಿಲ್ಲ 1. ಅಲರ್ಜಿ ಸಮಸ್ಯೆ ಉಳ್ಳವರು 2. ಜ್ವರದಿಂದ ಬಳಲುತ್ತಿರುವವರು 3. ರಕ್ತಸ್ರಾವಕ್ಕೆ ಸಂಬಂಧಿಸಿದ ದೋಷ ಹೊಂದಿದವರು ಅಥವಾ ರಕ್ತವನ್ನು ತೆಳುಗೊಳಿಸಲು (ಬ್ಲಡ್​ ಥಿನ್ನರ್) ಔಷಧಿ ತೆಗೆದುಕೊಳ್ಳುತ್ತಿರುವವರು 4. ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹೊಂದಿರುವವರು 5. ಗರ್ಭಿಣಿಯರು 6. ಎದೆಹಾಲು ಉಣಿಸುತ್ತಿರುವ ತಾಯಂದಿರು 7. ಬೇರೆ ಕೊರೊನಾ ಲಸಿಕೆ ಪಡೆದವರು 8. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆ ಉಳ್ಳವರು

ಕೊರೊನಾ ಲಸಿಕೆ ಪಡೆಯುವ ಮುನ್ನ ಫಲಾನುಭವಿಗಳು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ವೈದ್ಯರಿಗೆ ತೋರಿಸುವಂತೆ ಭಾರತ್ ಬಯೋಟೆಕ್​ ಸಲಹೆ ನೀಡಿದೆ. ಇದರಲ್ಲಿ ಕೆಲ ಅಂಶಗಳನ್ನು ಮೊದಲೇ ತಿಳಿಸಲಾಗಿತ್ತಾದರೂ ಲಸಿಕೆ ವಿತರಣೆ ಆರಂಭವಾದ 2 ದಿನದಲ್ಲೇ ಪ್ರಕಟಣೆ ಹೊರಡಿಸಿರುವುದು ಒಂದಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಕೇಳುತ್ತಿರುವ ಕೆಲ ಪ್ರಮುಖ ಪ್ರಶ್ನೆಗಳಿವು..

1. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಕೊವ್ಯಾಕ್ಸಿನ್​ ಕೊರೊನಾ ಲಸಿಕೆ ನೀಡುವಂತಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ. ಆದರೆ, ವಾಸ್ತವವಾಗಿ ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಲಸಿಕೆಯ ಅವಶ್ಯಕತೆ ಹೆಚ್ಚಿರುತ್ತದೆ ಅಲ್ಲವೇ? 2. ಕೇವಲ ಆರೋಗ್ಯವಂತರಿಗೆ ಮಾತ್ರ ಕೊರೊನಾ ಲಸಿಕೆ ನೀಡುವುದಾದರೆ ಅದರಿಂದಾಗುವ ಪ್ರಯೋಜನ ಏನು? 3. ಆರಂಭದಲ್ಲಿ ಕೇಂದ್ರ ಸರ್ಕಾರ ಬೇರೆಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯ ಮೇಲೆ ನೀಡುವುದಾಗಿ ಹೇಳಿತ್ತು. ಆದರೆ, ಈಗ ಭಾರತ್ ಬಯೋಟೆಕ್​ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಲಸಿಕೆಯಿಂದ ದೂರ ಇಡುವಂತೆ ಹೇಳಿದೆ. ಇದು ಯೋಜನೆಯ ಉದ್ದೇಶವನ್ನೇ ಬುಡಮೇಲು ಮಾಡಿದಂತಲ್ಲವೇ? 4. ಮೂರನೇ ಹಂತ ಮುಗಿಸುವ ಮೊದಲೇ ಲಸಿಕೆ ವಿತರಣೆಗೆ ಅವಕಾಶ ನೀಡಲಾಗಿದೆ ಎಂಬ ಕಾರಣಕ್ಕೆ ಕೊವ್ಯಾಕ್ಸಿನ್ ಕುರಿತು ಈಗಾಗಲೇ ಅಪಸ್ವರಗಳಿವೆ. ಈಗ ಹೊಸ ನಿಯಮಾವಳಿಗಳನ್ನು ಹೊರಡಿಸಿರುವುದು ಜನರಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸಲೂ ಕಾರಣವಾಗಿದೆ. ಈ ವಿಚಾರವನ್ನು ಸಂಸ್ಥೆ ಮೊದಲೇ ಪರಿಶೀಲಿಸಿರಲಿಲ್ಲವೇ?

ಈ ಗೊಂದಲಗಳಿಗೆ ವೈದ್ಯಕೀಯ ಭಾಷೆಯ ಉತ್ತರಗಳಿಗಿಂತಲೂ ಮಿಗಿಲಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಣೆ ನೀಡುವ ಅವಶ್ಯಕತೆ ಇದೆ. ಇದನ್ನು ಭಾರತ್​ ಬಯೋಟೆಕ್ ಸಂಸ್ಥೆಯೇ ನಿರ್ವಹಿಸುತ್ತದೋ? ಅಥವಾ ಕೇಂದ್ರ ಸರ್ಕಾರವೇ ಮಾಡಲಿದೆಯೋ? ಎಂದು ಕಾದು ನೋಡಬೇಕಿದೆ.

ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ