AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?

ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್​ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್​ನಲ್ಲಿ ಜನ ನೋಡಬಹುದು ಎಂದಿದ್ದಾರೆ

Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?
Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ ಏನದು ಸೂರ್ಯನ ಲೀಲೆ?
Follow us
ಸಾಧು ಶ್ರೀನಾಥ್​
|

Updated on: May 22, 2021 | 2:38 PM

ನಮ್ಮ ತಲೆಯ ಮೇಲೆ ಸೂರ್ಯ-ಚಂದ್ರರು ಇರುವವರೆಗೂ ನೆರಳು ಬೀಳಲೇ ಬೇಕು. ಯಾವುದೇ ಘಳಿಗೆಯೂ ಮಿಸ್ ಆಗೋಕ್ಕೆ ಛಾನ್ಸೇ ಇಲ್ಲ ಅಂತಾ ತಿಳಿದಿದ್ರೆ ಒಡಿಶಾಲ್ಲೊಂದು ನೆರಳು-ಬೆಳಕಿನ ಆಟ ನಡೆದಿದೆ,​ ಗಮನಿಸಿ. ಅಂದಹಾಗೆ ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ.

ಹೌದು ವರ್ಷಕ್ಕೆ ಎರಡು ಬಾರಿ ಭೂಮಿಯ ಮೇಲೆ ನೆರಳು ಬೀಳುವುದೇ ಇಲ್ಲ. ಆಕಾಶದಲ್ಲಿ ನಡೆಯುವ ಚಮತ್ಕಾರ ಅದು ಅಂತಿದ್ದಾರೆ ವಿಜ್ಞಾನಿಗಳು. ಭುವನೇಶ್ವರದಲ್ಲಿ ಇಂತಹ ನೆರಳಿಲ್ಲದ ಚಮತ್ಕಾರ (Zero shadow day) ನಿನ್ನೆ ನಡೆದಿದ್ದರೆ ನಾಳೆ ಕಟಕ್​ನಲ್ಲಿ ನಡೆಯಲಿದೆ ನೋಡಲು ಮರೆಯದಿರಿ ಅಂತಿದ್ದಾರೆ ಇದೇ ವಿಜ್ಞಾನಿಗಳು. ಹೌದು ನಿನ್ನೆ ಭುವನೇಶ್ವರದಲ್ಲಿ ಇಂತಹ ಅಪರೂಪದ ಚಮತ್ಕಾರ ನಡೆದಾಗ ಫೋಟೋಗಳನ್ನು ತೆಗೆಯಲಾಗಿದ್ದು, ದೃಶ್ಯ ಸಾಕ್ಷ್ಯವನ್ನು ಒದಗಿಸಿದ್ದಾರೆ.

ಈ ಬಗ್ಗೆ ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್​ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್​ನಲ್ಲಿ ಜನ ನೋಡಬಹುದು ಎಂದಿದ್ದಾರೆ.

Bhubaneswar Cuttack witness a rare celestial event zero shadow day whats it 3

ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ

ಆಕಾಶದಲ್ಲಿ ಸೂರ್ಯ ಅತ್ಯಂತ ಮೇಲ್ತುದಿಯಲ್ಲಿದ್ದಾಗ (Zenith) ಇಂತಹ ಸೊಬಗು ನೋಡಬಹುದು. ಇಂತಹ ಸಮಯದಲ್ಲಿ ಯಾವುದೇ ವಸ್ತು ಅಥವಾ ಜೀವಿಗಳ ಮೇಲೆ ಸೂರ್ಯನ ಬೆಳಕು ಬಿದ್ದಿದ್ದರೂ ಅದರ ಕೆಳಗೆ ನೆರಳು ಬಿದ್ದಿರುವುದಿಲ್ಲ. ಸಾಮಾನ್ಯವಾಗಿ ಇದು ಮಧ್ಯಾಹ್ನದ ನಂತರ ಘಟಿಸುತ್ತದೆ. ಆದರೆ ಮಧ್ಯಾಹ್ನದ ನಂತರ ಸೂರ್ಯನ ಬೆಳಕು ಬಿದ್ದಾಗ ಅದರ ಪ್ರತಿಫಲವಾಗಿ ನೆರಳು ಉತ್ತರ ದಿಕ್ಕಿನಲ್ಲಿ ಬಿದ್ದಿರುತ್ತದೆ. ಆದರೆ ಈ ಎರಡೂ ದಿನಗಳಂದು ಸೂರ್ಯ ನೇರವಾಗಿ ನಮ್ಮ ಮೇಲೆ ಅಥವಾ ಯಾವುದೇ ವಸ್ತುವಿನ ಮೇಲೆ ಬಿದ್ದಾಗ ಆ ಬೆಳಕಷ್ಟೂ ನಮ್ಮ ದೇಹದ ಮೇಲೆಯೇ ಇರುತ್ತದೆ. ಆದರೆ ಉತ್ತರದ ದಿಕ್ಕಿನತ್ತ ವಾಲಿರುವುದಿಲ್ಲ ಎಂದು ವಿವರಿಸುತ್ತಾರೆ ಪ್ಲಾನಿಟೋರಿಯಂ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು.

(Bhubaneswar Cuttack witness a rare celestial event zero shadow day whats it)

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್