Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?

ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್​ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್​ನಲ್ಲಿ ಜನ ನೋಡಬಹುದು ಎಂದಿದ್ದಾರೆ

Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?
Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ ಏನದು ಸೂರ್ಯನ ಲೀಲೆ?
Follow us
|

Updated on: May 22, 2021 | 2:38 PM

ನಮ್ಮ ತಲೆಯ ಮೇಲೆ ಸೂರ್ಯ-ಚಂದ್ರರು ಇರುವವರೆಗೂ ನೆರಳು ಬೀಳಲೇ ಬೇಕು. ಯಾವುದೇ ಘಳಿಗೆಯೂ ಮಿಸ್ ಆಗೋಕ್ಕೆ ಛಾನ್ಸೇ ಇಲ್ಲ ಅಂತಾ ತಿಳಿದಿದ್ರೆ ಒಡಿಶಾಲ್ಲೊಂದು ನೆರಳು-ಬೆಳಕಿನ ಆಟ ನಡೆದಿದೆ,​ ಗಮನಿಸಿ. ಅಂದಹಾಗೆ ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ.

ಹೌದು ವರ್ಷಕ್ಕೆ ಎರಡು ಬಾರಿ ಭೂಮಿಯ ಮೇಲೆ ನೆರಳು ಬೀಳುವುದೇ ಇಲ್ಲ. ಆಕಾಶದಲ್ಲಿ ನಡೆಯುವ ಚಮತ್ಕಾರ ಅದು ಅಂತಿದ್ದಾರೆ ವಿಜ್ಞಾನಿಗಳು. ಭುವನೇಶ್ವರದಲ್ಲಿ ಇಂತಹ ನೆರಳಿಲ್ಲದ ಚಮತ್ಕಾರ (Zero shadow day) ನಿನ್ನೆ ನಡೆದಿದ್ದರೆ ನಾಳೆ ಕಟಕ್​ನಲ್ಲಿ ನಡೆಯಲಿದೆ ನೋಡಲು ಮರೆಯದಿರಿ ಅಂತಿದ್ದಾರೆ ಇದೇ ವಿಜ್ಞಾನಿಗಳು. ಹೌದು ನಿನ್ನೆ ಭುವನೇಶ್ವರದಲ್ಲಿ ಇಂತಹ ಅಪರೂಪದ ಚಮತ್ಕಾರ ನಡೆದಾಗ ಫೋಟೋಗಳನ್ನು ತೆಗೆಯಲಾಗಿದ್ದು, ದೃಶ್ಯ ಸಾಕ್ಷ್ಯವನ್ನು ಒದಗಿಸಿದ್ದಾರೆ.

ಈ ಬಗ್ಗೆ ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್​ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್​ನಲ್ಲಿ ಜನ ನೋಡಬಹುದು ಎಂದಿದ್ದಾರೆ.

Bhubaneswar Cuttack witness a rare celestial event zero shadow day whats it 3

ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ

ಆಕಾಶದಲ್ಲಿ ಸೂರ್ಯ ಅತ್ಯಂತ ಮೇಲ್ತುದಿಯಲ್ಲಿದ್ದಾಗ (Zenith) ಇಂತಹ ಸೊಬಗು ನೋಡಬಹುದು. ಇಂತಹ ಸಮಯದಲ್ಲಿ ಯಾವುದೇ ವಸ್ತು ಅಥವಾ ಜೀವಿಗಳ ಮೇಲೆ ಸೂರ್ಯನ ಬೆಳಕು ಬಿದ್ದಿದ್ದರೂ ಅದರ ಕೆಳಗೆ ನೆರಳು ಬಿದ್ದಿರುವುದಿಲ್ಲ. ಸಾಮಾನ್ಯವಾಗಿ ಇದು ಮಧ್ಯಾಹ್ನದ ನಂತರ ಘಟಿಸುತ್ತದೆ. ಆದರೆ ಮಧ್ಯಾಹ್ನದ ನಂತರ ಸೂರ್ಯನ ಬೆಳಕು ಬಿದ್ದಾಗ ಅದರ ಪ್ರತಿಫಲವಾಗಿ ನೆರಳು ಉತ್ತರ ದಿಕ್ಕಿನಲ್ಲಿ ಬಿದ್ದಿರುತ್ತದೆ. ಆದರೆ ಈ ಎರಡೂ ದಿನಗಳಂದು ಸೂರ್ಯ ನೇರವಾಗಿ ನಮ್ಮ ಮೇಲೆ ಅಥವಾ ಯಾವುದೇ ವಸ್ತುವಿನ ಮೇಲೆ ಬಿದ್ದಾಗ ಆ ಬೆಳಕಷ್ಟೂ ನಮ್ಮ ದೇಹದ ಮೇಲೆಯೇ ಇರುತ್ತದೆ. ಆದರೆ ಉತ್ತರದ ದಿಕ್ಕಿನತ್ತ ವಾಲಿರುವುದಿಲ್ಲ ಎಂದು ವಿವರಿಸುತ್ತಾರೆ ಪ್ಲಾನಿಟೋರಿಯಂ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು.

(Bhubaneswar Cuttack witness a rare celestial event zero shadow day whats it)

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು