AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್

ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್
ರಸ್ತೆಯಲ್ಲಿ ಜಗಳ
TV9 Web
| Edited By: |

Updated on: Mar 30, 2022 | 1:43 PM

Share

ಭುವನೇಶ್ವರ: ಭುವನೇಶ್ವರದ (Bhubaneswar ) ಐಜಿ ಪಾರ್ಕ್ ಬಳಿಯ ರಸ್ತೆಯೊಂದರಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ಜಗಳವಾಡುತ್ತಿರುವ ವಿಡಿಯೊ ವೈರಲ್ (Viral)  ಆಗಿದೆ. ವಿಡಿಯೊದಲ್ಲಿ ಹುಡುಗಿ ರಸ್ತೆಬದಿಯಲ್ಲಿ ಪರಿಚಯವಿದ್ದ ಯುವಕನೊಂದಿಗೆ ಬೈದು ಜಗಳವಾಡುತ್ತಾಳೆ. ಬಳಿಕ ಸ್ಕೂಟಿಯಲ್ಲಿ ಕುಳಿತಿದ್ದ ಯುವಕನನ್ನು ಥಳಿಸಲು, ನಿಂದಿಸಲು ಆರಂಭಿಸಿದ್ದಾಳೆ. ಅವನ ಮೇಲೆ ಕಲ್ಲನ್ನೂ ಎಸೆದಿದ್ದಾಳೆ. ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಕೆಲವು ವೀಕ್ಷಕರು ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದರು. ಆದರೆ, ಮಾಧ್ಯಮದವರನ್ನೂ ಹುಡುಗಿ ನಿಂದಿಸಿದ್ದಾಳೆ. ನಂತರ, ಕೆಲವು ಸಾರ್ವಜನಿಕರು ಆಕೆಯ ಕೃತ್ಯವನ್ನು ಪ್ರತಿಭಟಿಸಿದಾಗ, ಆಕೆ ಕೋಪಗೊಂಡು ಮತ್ತಷ್ಟು ಬೈದಿದ್ದಾಳೆ. ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ. ನಂತರ, ರಾಜಧಾನಿಯ ಪೊಲೀಸ್ ಠಾಣೆಯ ಪೊಲೀಸರ ತಂಡವು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿತು. ಯುವತಿ ಹಾಗೂ ಯುವಕನ ನಡುವಿನ ಜಗಳಕ್ಕೆ ಪ್ರೇಮ ಪ್ರಕರಣಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೆ ನ್ಯೂಸ್  ಒಡಿಶಾಅಪ್ಲೋಡ್ ಮಾಡಿರುವ  ಈ ವಿಡಿಯೊಗೆ 5ಸಾವಿರಕ್ಕಿಂತ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. 178 ಮಂದಿ ಕಾಮೆಂಟ್ ಮಾಡಿದ್ದು 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಕೈಲಾಶ್​ ಸಿಂಗ್​ ಸೇರಿ ಇನ್ನೂ ಕೆಲವು ಸದಸ್ಯರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್​

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು