AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್

ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್
ರಸ್ತೆಯಲ್ಲಿ ಜಗಳ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 30, 2022 | 1:43 PM

ಭುವನೇಶ್ವರ: ಭುವನೇಶ್ವರದ (Bhubaneswar ) ಐಜಿ ಪಾರ್ಕ್ ಬಳಿಯ ರಸ್ತೆಯೊಂದರಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ಜಗಳವಾಡುತ್ತಿರುವ ವಿಡಿಯೊ ವೈರಲ್ (Viral)  ಆಗಿದೆ. ವಿಡಿಯೊದಲ್ಲಿ ಹುಡುಗಿ ರಸ್ತೆಬದಿಯಲ್ಲಿ ಪರಿಚಯವಿದ್ದ ಯುವಕನೊಂದಿಗೆ ಬೈದು ಜಗಳವಾಡುತ್ತಾಳೆ. ಬಳಿಕ ಸ್ಕೂಟಿಯಲ್ಲಿ ಕುಳಿತಿದ್ದ ಯುವಕನನ್ನು ಥಳಿಸಲು, ನಿಂದಿಸಲು ಆರಂಭಿಸಿದ್ದಾಳೆ. ಅವನ ಮೇಲೆ ಕಲ್ಲನ್ನೂ ಎಸೆದಿದ್ದಾಳೆ. ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಕೆಲವು ವೀಕ್ಷಕರು ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದರು. ಆದರೆ, ಮಾಧ್ಯಮದವರನ್ನೂ ಹುಡುಗಿ ನಿಂದಿಸಿದ್ದಾಳೆ. ನಂತರ, ಕೆಲವು ಸಾರ್ವಜನಿಕರು ಆಕೆಯ ಕೃತ್ಯವನ್ನು ಪ್ರತಿಭಟಿಸಿದಾಗ, ಆಕೆ ಕೋಪಗೊಂಡು ಮತ್ತಷ್ಟು ಬೈದಿದ್ದಾಳೆ. ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ. ನಂತರ, ರಾಜಧಾನಿಯ ಪೊಲೀಸ್ ಠಾಣೆಯ ಪೊಲೀಸರ ತಂಡವು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿತು. ಯುವತಿ ಹಾಗೂ ಯುವಕನ ನಡುವಿನ ಜಗಳಕ್ಕೆ ಪ್ರೇಮ ಪ್ರಕರಣಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೆ ನ್ಯೂಸ್  ಒಡಿಶಾಅಪ್ಲೋಡ್ ಮಾಡಿರುವ  ಈ ವಿಡಿಯೊಗೆ 5ಸಾವಿರಕ್ಕಿಂತ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. 178 ಮಂದಿ ಕಾಮೆಂಟ್ ಮಾಡಿದ್ದು 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಕೈಲಾಶ್​ ಸಿಂಗ್​ ಸೇರಿ ಇನ್ನೂ ಕೆಲವು ಸದಸ್ಯರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್​

ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್