AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್

ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್
ರಸ್ತೆಯಲ್ಲಿ ಜಗಳ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Mar 30, 2022 | 1:43 PM

Share

ಭುವನೇಶ್ವರ: ಭುವನೇಶ್ವರದ (Bhubaneswar ) ಐಜಿ ಪಾರ್ಕ್ ಬಳಿಯ ರಸ್ತೆಯೊಂದರಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ಜಗಳವಾಡುತ್ತಿರುವ ವಿಡಿಯೊ ವೈರಲ್ (Viral)  ಆಗಿದೆ. ವಿಡಿಯೊದಲ್ಲಿ ಹುಡುಗಿ ರಸ್ತೆಬದಿಯಲ್ಲಿ ಪರಿಚಯವಿದ್ದ ಯುವಕನೊಂದಿಗೆ ಬೈದು ಜಗಳವಾಡುತ್ತಾಳೆ. ಬಳಿಕ ಸ್ಕೂಟಿಯಲ್ಲಿ ಕುಳಿತಿದ್ದ ಯುವಕನನ್ನು ಥಳಿಸಲು, ನಿಂದಿಸಲು ಆರಂಭಿಸಿದ್ದಾಳೆ. ಅವನ ಮೇಲೆ ಕಲ್ಲನ್ನೂ ಎಸೆದಿದ್ದಾಳೆ. ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಕೆಲವು ವೀಕ್ಷಕರು ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದರು. ಆದರೆ, ಮಾಧ್ಯಮದವರನ್ನೂ ಹುಡುಗಿ ನಿಂದಿಸಿದ್ದಾಳೆ. ನಂತರ, ಕೆಲವು ಸಾರ್ವಜನಿಕರು ಆಕೆಯ ಕೃತ್ಯವನ್ನು ಪ್ರತಿಭಟಿಸಿದಾಗ, ಆಕೆ ಕೋಪಗೊಂಡು ಮತ್ತಷ್ಟು ಬೈದಿದ್ದಾಳೆ. ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ. ನಂತರ, ರಾಜಧಾನಿಯ ಪೊಲೀಸ್ ಠಾಣೆಯ ಪೊಲೀಸರ ತಂಡವು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿತು. ಯುವತಿ ಹಾಗೂ ಯುವಕನ ನಡುವಿನ ಜಗಳಕ್ಕೆ ಪ್ರೇಮ ಪ್ರಕರಣಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೆ ನ್ಯೂಸ್  ಒಡಿಶಾಅಪ್ಲೋಡ್ ಮಾಡಿರುವ  ಈ ವಿಡಿಯೊಗೆ 5ಸಾವಿರಕ್ಕಿಂತ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. 178 ಮಂದಿ ಕಾಮೆಂಟ್ ಮಾಡಿದ್ದು 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಕೈಲಾಶ್​ ಸಿಂಗ್​ ಸೇರಿ ಇನ್ನೂ ಕೆಲವು ಸದಸ್ಯರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್​

Follow Us
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು