AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತವರ ತಲೆಗಳು ಸ್ಮಶಾನದ ಸಮಾಧಿಗಳಿಂದ ನಾಪತ್ತೆ

ಮೃತರ ತಲೆಗಳು ಸ್ಮಶಾನದ ಸಮಾಧಿಗಳಿಂದ ನಾಪತ್ತೆಯಾಗುತ್ತಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸ್ಮಶಾನದಲ್ಲಿ ಸಮಾಧಿಯಲ್ಲಿ ಸಮಾಧಿ ಮಾಡಲಾದ ಮೃತ ದೇಹಗಳ ತಲೆಗಳು ಕಾಣೆಯಾಗಿರುವುದರಿಂದ ಈ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಮೃತದೇಹಗಳ ತಲೆಯನ್ನು ಕತ್ತರಿಸಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಜನರು ಶಂಕಿಸಿದ್ದಾರೆ. ಸತ್ತವರ ತಲೆ ಇರುವ ಗೋರಿಗಳ ಆ ಭಾಗವನ್ನು ಕಳ್ಳಸಾಗಣೆದಾರರು ಅಗೆಯುತ್ತಾರೆ.

ಸತ್ತವರ ತಲೆಗಳು ಸ್ಮಶಾನದ ಸಮಾಧಿಗಳಿಂದ ನಾಪತ್ತೆ
ಸಮಾಧಿImage Credit source: Texas Standard
ನಯನಾ ರಾಜೀವ್
|

Updated on:Jan 23, 2025 | 9:12 AM

Share

ಬಿಹಾರದಲ್ಲಿ ಅಚ್ಚರಿಯ  ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ಮಶಾನದಲ್ಲಿ ಸಮಾಧಿಯಲ್ಲಿ ಸಮಾಧಿ ಮಾಡಲಾದ ಮೃತ ದೇಹಗಳ ತಲೆಗಳು ಕಾಣೆಯಾಗಿರುವುದರಿಂದ ಈ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಮೃತದೇಹಗಳ ತಲೆಯನ್ನು ಕತ್ತರಿಸಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಜನರು ಶಂಕಿಸಿದ್ದಾರೆ. ಸತ್ತವರ ತಲೆ ಇರುವ ಗೋರಿಗಳ ಆ ಭಾಗವನ್ನು ಕಳ್ಳಸಾಗಣೆದಾರರು ಅಗೆಯುತ್ತಿದ್ದಾರೆ.

ಸ್ಮಶಾನದಲ್ಲಿ ಸಮಾಧಿಯನ್ನು ಅಗೆದಿರುವುದು ಕಂಡು ಬಂದು ಪರಿಶೀಲಿಸಿದಾಗ ಶವಗಳ ರುಂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಒಂದು ಬಾರಿಯಲ್ಲ ಐದು ಬಾರಿ ಇದೇ ರಿತಿಯ ಪ್ರಕರಣಗಳು ನಡೆದಿವೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಎಸ್‌ಡಿಪಿಒಗೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಘಟನೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಲಾಗಿದ್ದು, ಜನರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಮಾಧಿಯಿಂದ ಮೃತದೇಹಗಳ ತಲೆಗಳು ಮಾಯವಾಗುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಹಳೆಯ ಸ್ಮಶಾನವಿದೆ. ಇಲ್ಲಿ ಮುಸ್ಲಿಂ ಸಮುದಾಯದವರ ಶವಗಳನ್ನು ಹೂಳಲಾಗುತ್ತದೆ.

ಮತ್ತಷ್ಟು ಓದಿ: ರಾಜಸ್ಥಾನ: ಗೆಸ್ಟ್​ಹೌಸ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಕಳೆದ ಸೋಮವಾರ, ಕಳ್ಳಸಾಗಾಣಿಕೆದಾರರು ಇಲ್ಲಿನ ಸಮಾಧಿಯಲ್ಲಿ ಹೂತಿಟ್ಟಿದ್ದ ಮಹಿಳೆಯ ತಲೆಯನ್ನು ತೆಗೆದುಕೊಂಡು ಹೋಗಿದ್ದರು ಈ ಶವ ಬದ್ರುಜಮ್ಮನ ತಾಯಿಯದ್ದು, 6 ತಿಂಗಳ ಹಿಂದೆ ಬದ್ರು ತನ್ನ ತಾಯಿಯನ್ನು ಇದೇ ಸಮಾಧಿಯಲ್ಲಿ ಹೂಳಿದ್ದರು. ಈ ಕುರಿತು ಟಿವಿ9 ಹಿಂದಿ ವರದಿ ಪ್ರಕಟಿಸಿದೆ.

ಕಳ್ಳಸಾಗಣೆದಾರರು ಈ ಸ್ಮಶಾನದಿಂದ ಸಮಾಧಿಗಳನ್ನು ಅಗೆದು, ಮುಖ್ತಾರ್ ಅವರ ಅತ್ತೆ, ಮೊಹಿದ್ ಅವರ ಪತ್ನಿ, ಮೊಹಿದ್ ಆಶಿಕ್ ಅಲಿ ಅವರ ಪತ್ನಿಯ ಶಿರಚ್ಛೇದ ಮಾಡಿ ಅದರೊಂದಿಗೆ ಪರಾರಿಯಾಗಿದ್ದಾರೆ. ಆದರೆ, ಇದು ಮಾಂತ್ರಿಕರ ಕೈವಾಡ, ಅವರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎನ್ನುತ್ತಾರೆ ಕೆಲ ಗ್ರಾಮಸ್ಥರು. ಈ ಘಟನೆಯಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್‌ನ ಕೈವಾಡವಿದೆ ಎಂದು ಜನರು ಶಂಕಿಸಿದ್ದಾರೆ. ಸಮಾಧಿಯನ್ನು ಅತ್ಯಂತ ಎಚ್ಚರಿಕೆಯಿಂದ ಅಗೆದು ನಂತರ ಬಿದಿರಿನ ಬತ್ತಿಗಳಿಂದ ಮುಚ್ಚಿ ಅದರ ಮೇಲೆ ಮಣ್ಣನ್ನು ಸುರಿಯಲಾಗುತ್ತದೆ.

ಸ್ಮಶಾನದಲ್ಲಿ ನಿರ್ಮಿಸಲಾಗಿರುವ ಗಡಿ ಗೋಡೆಯನ್ನು ಯಾರೋ ಪದೇ ಪದೇ ಒಡೆಯುತ್ತಿದ್ದಾರೆ, ಮೂರರಿಂದ ನಾಲ್ಕು ಗ್ರಾಮಗಳ ಮುಸ್ಲಿಂ ಸಮುದಾಯದ ಜನರು ಮೃತ ದೇಹಗಳನ್ನು ಹೂಳಲು ಈ ಸ್ಮಶಾನಕ್ಕೆ ಬರುತ್ತಾರೆ, ಈ ಬಗ್ಗೆ ತನಿಖೆ ನಡೆಸುವಂತೆ ಕಹಲ್‌ಗಾಂವ್ ಎಸ್‌ಡಿಪಿಒಗೆ ಸೂಚಿಸಲಾಗಿದೆ ಎಂದು ಭಾಗಲ್ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೃದಯ್ ಕಾಂತ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:04 am, Thu, 23 January 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ