ಆರ್ಥಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೀರಿ, ಈಗೇನಾಯ್ತು?: ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆ ಕೇಳಿದ ಕಾಂಗ್ರೆಸ್

"ಅದಾನಿ ಗ್ರೂಪ್ ವಿರುದ್ಧ ವರ್ಷಗಳಿಂದ ಬಂದಿರುವ ಗಂಭೀರ ಆರೋಪಗಳ ತನಿಖೆಗೆ ಎಂದಾದರೂ ಏನು ಕ್ರಮ ತೆಗೆದುಕೊಳ್ಳಲಾಗಿದೆ? ನಿಮ್ಮ ಅಧಿಕಾರದಡಿಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಭರವಸೆ ಇದೆಯೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಆರ್ಥಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೀರಿ, ಈಗೇನಾಯ್ತು?: ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆ ಕೇಳಿದ ಕಾಂಗ್ರೆಸ್
ಗೌತಮ್ ಅದಾನಿ

Updated on: Feb 05, 2023 | 7:05 PM

ಪನಾಮಾ ಪೇಪರ್ಸ್ (Panama Papers) ಮತ್ತು ಪಂಡೋರಾ ಪೇಪರ್ಸ್‌ನಲ್ಲಿ(Pandora Papers) ಹೆಸರಿಸಲಾದ ಗೌತಮ್ ಅದಾನಿ (Gautam Adani) ಅವರ ಸಹೋದರ ವಿನೋದ್ ಅದಾನಿ ವಿಷಯವನ್ನು ಎತ್ತಿ ಭಾನುವಾರ ಕಾಂಗ್ರೆಸ್ (Congress) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಹಲವಾರು ವೇದಿಕೆಗಳಲ್ಲಿ ನೀವು ಹೇಳಿದ್ದ, ಆರ್ಥಿಕ ಅಪರಾಧಿಗಳ ವಿರುದ್ಧ ತನ್ನ ದೃಢವಾದ ನಿಲುವು ಏನಾಯಿತು ಎಂದು ಕಾಂಗ್ರೆಸ್ ಭಾನುವಾರ ಕೇಳಿದೆ. ಅದಾನಿ ಬಿಕ್ಕಟ್ಟಿನ ನಡುವೆ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್, “ನೀವು ಮತ್ತು ನಿಮ್ಮ ಸರ್ಕಾರವು ಹಮ್ ಅದಾನಿ ಕೆ ಹೈ ಕೌನ್ ಎಂದು ಹೇಳುವುದನ್ನು ಮರೆಮಾಡಲು ಸಾಧ್ಯವಿಲ್ಲ” ಎಂದಿದೆ. ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಅಥವಾ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಿದ್ದರಿಂದ ಕಳೆದ ಕೆಲವು ದಿನಗಳಿಂದ ಸಂಸತ್ತಿನ ಅಧಿವೇಶನದಲ್ಲಿ ಗದ್ದಲವುಂಟಾಗಿದೆ. ಅದಾನಿಯಲ್ಲಿ ಎಸ್‌ಬಿಐ, ಎಲ್‌ಐಸಿ, ಪಿಎನ್‌ಬಿ ಹೂಡಿಕೆಯ ಕಳವಳಗಳ ಕುರಿತು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅದಾನಿ ಷೇರುಗಳಿಗೆ ತಮ್ಮ ಮಾನ್ಯತೆ ಮಿತಿಯಲ್ಲಿದೆ ಎಂದು ಹೇಳಿಕೆ ನೀಡಿದ್ದರು.

ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ, ಗೌತಮ್ ಅದಾನಿನ ಸಹೋದರ ವಿನೋದ್ ಅದಾನಿ ಪನಾಮ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್‌ನಲ್ಲಿ ಸಾರಗೋತ್ತರದಲ್ಲಿ ಬಹಾಮಾಸ್ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿನ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿ ಎಂದು ಹೆಸರಿಸಲ್ಪಟ್ಟಾಗ ಯಾವುದೇ ಕೇಂದ್ರೀಯ ಸಂಸ್ಥೆ ಇನ್ನೂ ಏಕೆ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಿಲ್ಲ ಎಂದು ಕಾಂಗ್ರೆಸ್ ಭಾನುವಾರ ಕೇಳಿದೆ.

ಇದನ್ನೂ ಓದಿ: ಹೈದರಾಬಾದ್ ವಿದ್ಯಾರ್ಥಿಗಳಿಂದ ಕಾಶ್ಮೀರ್ ಫೈಲ್ಸ್; ವೀಕ್ಷಣೆ; ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ ಫೋಟೊ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳದ್ದು

ವಿನೋದ್ ಅದಾನಿ ಬ್ರಾಝನ್ ಸ್ಟಾಕ್ ಮ್ಯಾನಿಪ್ಯುಲೇಷನ್’ ನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಕಡಲಾಚೆಯ ಶೆಲ್ ಘಟಕಗಳ ವಿಶಾಲ ಚಕ್ರವ್ಯೂಹದ ಮೂಲಕ ‘ಲೆಕ್ಕಪತ್ರ ವಂಚನೆ’ ಮಾಡಿದ್ದಾರೆ. ನಿಮಗೆ ಚೆನ್ನಾಗಿ ಪರಿಚಯವಿರುವ ವ್ಯಾಪಾರ ಸಂಸ್ಥೆಯು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ ಎಂಬ ಅಂಶವು ನಿಮ್ಮ ತನಿಖೆಯ ಗುಣಮಟ್ಟ ಮತ್ತು ಪ್ರಾಮಾಣಿಕತೆಯ ಬಗ್ಗೆ ನಮಗೆ ಏನು ಹೇಳುತ್ತದೆ?” ಎಂದು ಕಾಂಗ್ರೆಸ್ ಹೇಳಿದೆ.

“ಅದಾನಿ ಗ್ರೂಪ್ ವಿರುದ್ಧ ವರ್ಷಗಳಿಂದ ಬಂದಿರುವ ಗಂಭೀರ ಆರೋಪಗಳ ತನಿಖೆಗೆ ಎಂದಾದರೂ ಏನು ಕ್ರಮ ತೆಗೆದುಕೊಳ್ಳಲಾಗಿದೆ? ನಿಮ್ಮ ಅಧಿಕಾರದಡಿಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಭರವಸೆ ಇದೆಯೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ಭಾರತದ ಅತಿದೊಡ್ಡ ವ್ಯಾಪಾರ ಗುಂಪುಗಳಲ್ಲಿ ಒಂದಾದ, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಏಕಸ್ವಾಮ್ಯವನ್ನು ನಿರ್ಮಿಸಲು ಅನುಮತಿಸಲಾಗಿದೆ, ನಿರಂತರವಾದ ಆರೋಪಗಳ ಹೊರತಾಗಿಯೂ ದೀರ್ಘಕಾಲದವರೆಗೆ ಗಂಭೀರ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ? ಇತರ ವ್ಯಾಪಾರ ಗುಂಪುಗಳು ಕಿರುಕುಳ ಮತ್ತು ದಾಳಿಯನ್ನು ಕಡಿಮೆ ಮಾಡಲಾಗಿದೆ. ಇಷ್ಟು ವರ್ಷಗಳ ಕಾಲ ‘ಭ್ರಷ್ಟಾಚಾರ-ವಿರೋಧಿ’ ವಾಕ್ಚಾತುರ್ಯದಿಂದ ಲಾಭ ಗಳಿಸಿದ ಆಡಳಿತಕ್ಕೆ ಅದಾನಿ ಗ್ರೂಪ್ ಅತ್ಯಗತ್ಯವೇ?” ಎಂದು ಕಾಂಗ್ರೆ ಮೂರು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Sun, 5 February 23