ಚುನಾವಣಾ ಬಾಂಡ್​ಗಳ ಮೂಲಕ ಬಿಜೆಪಿಗೆ ಸಂದಾಯವಾದ ಮೊತ್ತ ಬರೋಬ್ಬರಿ 1,300 ಕೋಟಿ ರೂ.

ಆಡಳಿತಾರೂಢ ಬಿಜೆಪಿಯು 2022-23ರಲ್ಲಿ ಚುನಾವಣಾ ಬಾಂಡ್​ಗಳ ಮೂಲಕ ಸುಮಾರು 1,300 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಇದು ಅದೇ ಮಾರ್ಗದಲ್ಲಿ ಕಾಂಗ್ರೆಸ್‌ಗೆ ಅದೇ ಅವಧಿಯಲ್ಲಿ ಪಡೆದಿದ್ದಕ್ಕಿಂತ ಏಳು ಪಟ್ಟು ಹೆಚ್ಚು.

ಚುನಾವಣಾ ಬಾಂಡ್​ಗಳ ಮೂಲಕ ಬಿಜೆಪಿಗೆ ಸಂದಾಯವಾದ ಮೊತ್ತ ಬರೋಬ್ಬರಿ 1,300 ಕೋಟಿ ರೂ.
ಬಿಜೆಪಿ
Follow us
|

Updated on: Feb 11, 2024 | 9:37 AM

ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ವು 2022-23ರ ಆರ್ಥಿಕ ವರ್ಷದಲ್ಲಿ ಚುನಾವಣಾ ಬಾಂಡ್‌(Electoral Bonds)ಗಳ ಮೂಲಕ ಸುಮಾರು 1,300 ಕೋಟಿ ರೂಪಾಯಿಗಳ ರಾಜಕೀಯ ದೇಣಿಗೆ ಸಂಗ್ರಹಿಸಿದೆ. ಈ ಮೊತ್ತವು ಇದೇ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಕಾಂಗ್ರೆಸ್ ಪಡೆದ ದೇಣಿಗೆಗಿಂತ ಏಳು ಪಟ್ಟು ಹೆಚ್ಚು ಎನ್ನಬಹುದು.

ಈ ಪೈಕಿ ಶೇ. 61 ಎಲೆಕ್ಟೋರಲ್ ಬಾಂಡ್ ಮೂಲಕ ಬಂದಿದೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಾರ್ಷಿಕ ಆಡಿಟ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2021-22ರಲ್ಲಿ ಬಿಜೆಪಿಗೆ ಒಟ್ಟು 1775 ಕೋಟಿ ರೂ.ಗಳ ದೇಣಿಗೆ ಹರಿದುಬಂದಿತ್ತು. ಹಣಕಾಸು ವರ್ಷದಲ್ಲಿ ಬಿಜೆಪಿ 237 ಕೋಟಿ ರೂ.ಗಳನ್ನು ಬಡ್ಡಿಯಾಗಿ ಗಳಿಸಿದೆ. 2022-23ರಲ್ಲಿ ಪಕ್ಷದ ಒಟ್ಟು ಆದಾಯವು 2360.8 ಕೋಟಿ ರೂ. ಗಳಷ್ಟಿತ್ತು, 2021-22ರ ಹಣಕಾಸು ವರ್ಷದಲ್ಲಿ 1917 ಕೋಟಿ ರೂ.ಗಳಷ್ಟಿತ್ತು.

ಮತ್ತೊಂದೆಡೆ, ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ 171 ಕೋಟಿ ರೂ. ಗಳಿಸಿದೆ, ಇದು 2021-22ರ ಹಣಕಾಸು ವರ್ಷದಲ್ಲಿ 236 ಕೋಟಿ ರೂ.ಗಿಂತಲೂ ಕಡಿಮೆಯಾಗಿದೆ . ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು ಮಾನ್ಯತೆ ಪಡೆದಿವೆ. ಮಾನ್ಯತೆ ಪಡೆದ ಪಕ್ಷವಾದ ಸಮಾಜವಾದಿ ಪಕ್ಷವು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 3.2 ಕೋಟಿ ರೂ. ಗಳಿಸಿತ್ತು . 2022-23 ರಲ್ಲಿ, ಇದು ಈ ಬಾಂಡ್‌ಗಳಿಂದ ಯಾವುದೇ ಕೊಡುಗೆಗಳನ್ನು ಸ್ವೀಕರಿಸಲಿಲ್ಲ.

ಮತ್ತಷ್ಟು ಓದಿ: ಚುನಾವಣಾ ಬಾಂಡ್​ಗಳ ಮೂಲಕ ಯಾವ ಯಾವ ಪಕ್ಷಗಳಲ್ಲಿ ಎಷ್ಟು ಹಣ ಸಂದಾಯವಾಗಿದೆ? ಇಲ್ಲಿದೆ ಮಾಹಿತಿ

ಮತ್ತೊಂದು ರಾಜ್ಯ ಮಾನ್ಯತೆ ಪಡೆದ ಪಕ್ಷವಾದ ಟಿಡಿಪಿಯು 2022-23ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 34 ಕೋಟಿ ರೂ. ಗಳಿಸಿದೆ, ಇದು ಹಿಂದಿನ ಹಣಕಾಸು ವರ್ಷಕ್ಕಿಂತ 10 ಪಟ್ಟು ಹೆಚ್ಚಾಗಿದೆ.

2021-22ರಲ್ಲಿ 135 ಕೋಟಿ ರೂ.ನಷ್ಟಿದ್ದ ಬಿಜೆಪಿಯು ಕಳೆದ ಹಣಕಾಸು ವರ್ಷದಲ್ಲಿ ಬಡ್ಡಿಯಿಂದ 237 ಕೋಟಿ ರೂ. ಗಳಿಸಿದೆ. ಚುನಾವಣೆ ಮತ್ತು ಸಾಮಾನ್ಯ ಪ್ರಚಾರದ ಒಟ್ಟು ವೆಚ್ಚದಲ್ಲಿ, ಬಿಜೆಪಿಯು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬಳಕೆಗಾಗಿ 78.2 ಕೋಟಿ ರೂ. ಪಾವತಿಸಿದೆ, ಇದು 2021-22ರಲ್ಲಿ 117.4 ಕೋಟಿ ರೂ.ಗಿಂತ ಕಡಿಮೆಯಾಗಿದೆ.

ಪಕ್ಷವು ಅಭ್ಯರ್ಥಿಗಳಿಗೆ 76.5 ಕೋಟಿ ರೂ. ಹಣಕಾಸಿನ ನೆರವು ನೀಡಿದ್ದು, 2021-22ರಲ್ಲಿ 146.4 ಕೋಟಿ ರೂ.ಗೆ ಇಳಿದಿದೆ. ಒಟ್ಟು ಪಾವತಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಪಕ್ಷವು ಈ ವಿಚಾರವನ್ನು ಬಹಿರಂಗಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ