AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಮತ್ತು ಅವರ ಕೋಟ್ಯಾಧಿಪತಿ ಗೆಳೆಯರು ಮಾತ್ರ ದೇಶದಲ್ಲಿ ಸುರಕ್ಷಿತರು: ಪ್ರಿಯಾಂಕಾ ಗಾಂಧಿ ವಾದ್ರಾ

Priyanka Gandhi Vadra ಈ ದೇಶದಲ್ಲಿ ಕೇವಲ ಎರಡು ಗುಂಪುಗಳ ಜನರು ಮಾತ್ರ ಸುರಕ್ಷಿತರಾಗಿದ್ದಾರೆ.  ಬಿಜೆಪಿ ನಾಯಕರು ಮತ್ತು ಅವರ ಕೋಟ್ಯಧಿಪತಿ ಸ್ನೇಹಿತರು. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಯಾರೂ ಸುರಕ್ಷಿತವಾಗಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಬಿಜೆಪಿ ಮತ್ತು ಅವರ ಕೋಟ್ಯಾಧಿಪತಿ ಗೆಳೆಯರು ಮಾತ್ರ ದೇಶದಲ್ಲಿ ಸುರಕ್ಷಿತರು: ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 11, 2021 | 1:44 PM

ದೆಹಲಿ: ಲಖಿಂಪುರ್ ಖೇರಿ (Lakhimpur Kheri) ಪ್ರಕರಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಶ್ ಅವರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಭಾನುವಾರ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಪಕ್ಷದ 2022 ಯುಪಿ ಚುನಾವಣಾ ಪ್ರಚಾರವನ್ನು ಆರಂಭಿಸಿದ ಅವರು, ಬಿಜೆಪಿ ನಾಯಕರು ಮತ್ತು ಅವರ “ಕೋಟ್ಯಾಧಿಪತಿ” ಸ್ನೇಹಿತರು ಮಾತ್ರ ದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ಪಕ್ಷದ ಕಿಸಾನ್ ನ್ಯಾಯ ರ್ಯಾಲಿಯಲ್ಲಿ ದುರ್ಗಾ ದೇವಿಯನ್ನು ಸ್ತುತಿಸಿ ಭಾಷಣವನ್ನು ಆರಂಭಿಸಿದರು. “ನಾನು ಉಪವಾಸದಲ್ಲಿದ್ದೇನೆ ಮತ್ತು ಮಾ ಅವರ ಸ್ತುತಿ (ಪ್ರಾರ್ಥನೆ) ಯೊಂದಿಗೆ ನಾನು ನನ್ನ ಭಾಷಣವನ್ನು ಪ್ರಾರಂಭಿಸುತ್ತೇನೆ” ಎಂದು ಅವರು ಹೇಳಿದರು. ಸಂಸ್ಕೃತದಲ್ಲಿ ಎರಡು ಶ್ಲೋಕಗಳನ್ನು ಪಠಿಸಿದ ಅವರು ‘ಜೈ ಮಾತಾ ದಿ’ ಎಂದು ಘೋಷಣೆ ಕೂಗಿದ್ದಾರೆ. ರೈತರ ಚಳವಳಿ,ಹಣದುಬ್ಬರ ಮತ್ತು ನಿರುದ್ಯೋಗ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಪ್ರಿಯಾಂಕಾ,  ಯೋಗಿ ಆದಿತ್ಯನಾಥ ಸರ್ಕಾರವನ್ನು ಬದಲಿಸುವ ಮೂಲಕ ರಾಜ್ಯದಲ್ಲಿ “ಪರಿವರ್ತನ್” (ಬದಲಾವಣೆ) ಯನ್ನು ಜಾರಿಗೆ ತರುವಂತೆ ಜನರನ್ನು ಒತ್ತಾಯಿಸಿದರು.

ಈ ದೇಶದಲ್ಲಿ ಕೇವಲ ಎರಡು ಗುಂಪುಗಳ ಜನರು ಮಾತ್ರ ಸುರಕ್ಷಿತರಾಗಿದ್ದಾರೆ.  ಬಿಜೆಪಿ ನಾಯಕರು ಮತ್ತು ಅವರ ಕೋಟ್ಯಧಿಪತಿ ಸ್ನೇಹಿತರು. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಯಾರೂ ಸುರಕ್ಷಿತವಾಗಿಲ್ಲ. ಕಾರ್ಮಿಕರಾಗಲಿ, ದೋಣಿಯವರು, ದಲಿತರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರು ಸುರಕ್ಷಿತವಾಗಿಲ್ಲ. ಈ ದೇಶದಲ್ಲಿ ಪ್ರಧಾನಿ, ಅವರ ಸಚಿವರು , ಅಧಿಕಾರದಲ್ಲಿರುವವರು ಮತ್ತು ಅವರ ಎಲ್ಲ ಕೋಟ್ಯಾಧಿಪತಿ ಸ್ನೇಹಿತರನ್ನು ರಕ್ಷಿಸಲಾಗಿದೆ”ಎಂದು ಪ್ರಿಯಾಂಕಾ ಹೇಳಿದರು.

ಆಶಿಶ್ ಮಿಶ್ರಾ ಅವರನ್ನು ಬಿಜೆಪಿ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕಾ, “ಕಳೆದ ವಾರ, ಕೇಂದ್ರ ರಾಜ್ಯ ಸಚಿವ (ಗೃಹ) ಮಗ ಅಜಯ್ ಮಿಶ್ರಾ ತಮ್ಮ ವಾಹನವನ್ನು ರೈತರ ಮೇಲೆ ಹರಿಸಿದರು . ಎಲ್ಲಾ ಸಂತ್ರಸ್ತರ ಕುಟುಂಬಗಳು ತಮಗೆ ನ್ಯಾಯ ಬೇಕು ಎಂದು ಕೇಳಿದರು. ಸರ್ಕಾರವು ಮಂತ್ರಿ ಮತ್ತು ಆತನ ಮಗನನ್ನು ರಕ್ಷಿಸುವಲ್ಲಿ ಹೇಗೆ ನಿರತವಾಗಿದೆ ಎಂಬುದನ್ನು ನೀವು ನೋಡಿರಬೇಕು. ಆಡಳಿತವು ಪ್ರತಿಪಕ್ಷ ನಾಯಕರನ್ನು ನಿಲ್ಲಿಸುವಲ್ಲಿ ನಿರತರಾಗಿದ್ದಾಗ  ರಾತ್ರಿಯಲ್ಲಿ ನನ್ನನ್ನು ತಡೆಯಲು ಮತ್ತು ಸಂತ್ರಸ್ತರ ಕುಟುಂಬ ಸದಸ್ಯರನ್ನು ಗೃಹಬಂಧನದಲ್ಲಿರಿಸಲು ಪೋಲಿಸರನ್ನು ನಿಯೋಜಿಸಲಾಯಿತು. ಒಬ್ಬನೇ ಒಬ್ಬ ಪೊಲೀಸರು ಆರೋಪಿಯನ್ನು ಹಿಡಿಯಲು ಹೋಗಲಿಲ್ಲ. ಬದಲಾಗಿ ವಿಚಾರಣೆಗಾಗಿ ಆತನಿಗೆ ಪೊಲೀಸರಿಂದ ಆಹ್ವಾನವನ್ನು ಕಳುಹಿಸಲಾಯಿತು.”ಉತ್ತರ ಪ್ರದೇಶ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ) ಅವರು ಸಾರ್ವಜನಿಕ ವೇದಿಕೆಯಿಂದ ಸಚಿವರನ್ನು ಬೆಂಬಲಿಸುತ್ತಿದ್ದಾರೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.

ಕೊಲೆಯಾದ ರೈತರ ಕುಟುಂಬಗಳನ್ನು ಭೇಟಿ ಮಾಡಲು ಲಖಿಂಪುರ್ ಖೇರಿಗೆ ಭೇಟಿ ನೀಡದ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ “ಪ್ರಧಾನಿ ಪ್ರಪಂಚದ ಮೂಲೆ ಮೂಲೆಗೂ ಭೇಟಿ ನೀಡಬಹುದು . ಅಮೆರಿಕ, ಜಪಾನ್ ಗೆ ಹೋಗಬಹುದು. ಆದರೆ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತನಾಡಲು ದೆಹಲಿ ಗಡಿಭಾಗಕ್ಕೆ ಹೋಗಲು ಸಾಧ್ಯವಾಗಿಲ್ಲ. ಪ್ರಧಾನಿ ಲಖನೌಗೆ ಬಂದರು ಆದರೆ ಲಖಿಂಪುರ್ ಖೇರಿಯಲ್ಲಿ ರೈತರ ಕುಟುಂಬಗಳನ್ನು ಭೇಟಿ ಮಾಡಲು ಅವರ ಕಣ್ಣೀರು ಒರೆಸಲು ಮತ್ತು ಅವರ ಕೈಗಳನ್ನು ಹಿಡಿಯಲು ಇನ್ನೂ ಎರಡು ಗಂಟೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಲಖಿಂಪುರ್ ಖೇರಿಯಲ್ಲಿ ಹತ್ಯೆಯಾದ ರೈತರ ಎಲ್ಲಾ ಕುಟುಂಬಗಳು ತಮಗೆ ನ್ಯಾಯದ ನಿರೀಕ್ಷೆಯಿಲ್ಲ ಎಂದು ಹೇಳಿದರು. ಈ ದೇಶದಲ್ಲಿ ಯಾರಾದರೂ ದೌರ್ಜನ್ಯವನ್ನು ಎದುರಿಸಿದರೆ, ಸರ್ಕಾರ, ಸಿಎಂ, ಪಿಎಂ, ಗೃಹಸಚಿವಾಲದ ರಾಜ್ಯಸಚಿವರು , ಶಾಸಕರು, ಎಲ್ಲರೂ ಕೈ ಜೋಡಿಸಿದ್ದಾರೆ ಮತ್ತು ನ್ಯಾಯ ಕೇಳಲು ಹೋದರೆ ಜನರಿಗೆ ಬೆನ್ನು ಹಾಕಿದ್ದಾರೆ ಎಂದಿದ್ದಾರೆ.

ಜೈ ಮಾತಾ ದಿ ಘೋಷಣೆಯೊಂದಿಗೆ ಪ್ರಿಯಾಂಕಾ ಭಾಷಣ ಮುಗಿಸಿ, ಜನರಿಗೆ ನವರಾತ್ರಿಯ ಶುಭಾಶಯ ಹೇಳಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಪ್ರಿಯಾಂಕಾ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಇತರ ಕಾಂಗ್ರೆಸ್ ನಾಯಕರು ‘ಹರ್ ಹರ್ ಮಹದೇವ್’ ಎಂದು ಘೋಷಣೆ ಕೂಗಿದರು. ಅದರ ನಂತರ ಕುರಾನ್ ಮತ್ತು ಗುರ್ಬಾನಿಯ ಆಯ್ದ ಭಾಗಗಳ ಓದುವ ಕಾರ್ಯ ನಡೆಯಿತು.

ಇದನ್ನೂ ಓದಿ: ಪ್ರಧಾನಿ ಲಖನೌಗೆ ಭೇಟಿ ನೀಡಿದ್ದರು, ಲಖಿಂಪುರ್​ಗೆ ಅಲ್ಲ: ಉತ್ತರ ಪ್ರದೇಶ ರೈತರ ಸಾವಿನ ಹಿನ್ನೆಲೆ ಬಿಜೆಪಿಯನ್ನು ಟೀಕಿಸಿದ ಪ್ರಿಯಾಂಕಾ ಗಾಂಧಿ

ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್
Daily Devotional: ಶನಿ ಅಥವಾ ಸಾಡೇಸಾತಿಯಿಂದ ಪಾರಾಗಲು ಏನು ಮಾಡಬೇಕು?
Daily Devotional: ಶನಿ ಅಥವಾ ಸಾಡೇಸಾತಿಯಿಂದ ಪಾರಾಗಲು ಏನು ಮಾಡಬೇಕು?
Daily Horoscope: ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ತಿಳಿಯಿರಿ
Daily Horoscope: ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ತಿಳಿಯಿರಿ
ಹೆಂಡತಿ, ಮಕ್ಕಳು ಇರುವ ಮನು ಹಿಂದೆ ಯಾಕೆ ಹೋದೆ? ಉತ್ತರಿಸಿದ ಸಂತ್ರಸ್ತ ಮಹಿಳೆ
ಹೆಂಡತಿ, ಮಕ್ಕಳು ಇರುವ ಮನು ಹಿಂದೆ ಯಾಕೆ ಹೋದೆ? ಉತ್ತರಿಸಿದ ಸಂತ್ರಸ್ತ ಮಹಿಳೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​