AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ; ಟಿಆರ್​​ಎಸ್​ಗಿಂತ ಕೇವಲ 10 ಸಾವಿರ ಮತಗಳ ಹಿನ್ನಡೆ

ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬಿಜೆಪಿ ಇದೆ. ಅಚ್ಚರಿ ವಿಚಾರ ಎಂದರೆ, ಎರಡೂ ಪಕ್ಷಗಳ ನಡುವಣ ಒಟ್ಟು ಮತಗಳ ಅಂತರ ಕೇವಲ 10 ಸಾವಿರ ಮಾತ್ರ!

ಹೈದರಾಬಾದ್ ಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ; ಟಿಆರ್​​ಎಸ್​ಗಿಂತ ಕೇವಲ 10 ಸಾವಿರ ಮತಗಳ ಹಿನ್ನಡೆ
ಹೈದರಾಬಾದ್​​ ಚುನಾವಣಾ ಫಲಿತಾಂಶದ ನಂತರ ಸಂಭ್ರಮಿಸಿದ ಬಿಜೆಪಿ ನಾಯಕರು
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 06, 2020 | 3:08 PM

Share

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬಿಜೆಪಿ ಇದೆ. ಅಚ್ಚರಿ ವಿಚಾರ ಎಂದರೆ, ಎರಡೂ ಪಕ್ಷಗಳ ನಡುವಣ ಒಟ್ಟು ಮತಗಳ ಅಂತರ ಕೇವಲ 10 ಸಾವಿರ ಮಾತ್ರ!

150 ಸ್ಥಾನಗಳು ಇರುವ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್​ನಲ್ಲಿ, ಟಿಆರ್​ಎಸ್​ ಗಳಿಸಿದ್ದು 55 ಸ್ಥಾನ, ಬಿಜೆಪಿಗೆ ಸಿಕ್ಕಿದ್ದು 48 ಸ್ಥಾನ. ಎಐಎಮ್​ಐಎಮ್​ 44 ಮತ್ತು ಕಾಂಗ್ರೆಸ್​ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಸುಪ್ರೀಂಕೋರ್ಟ್​​ ಆದೇಶದ ಮೇರೆಗೆ ಒಂದು ಸ್ಥಾನದ ಎಣಿಕೆ ನಿಲ್ಲಿಸಲಾಗಿದೆ. ಬಿಜೆಪಿ ಹಾಗೂ ಟಿಆರ್​ಎಸ್​​ ನಡುವಣ ಸ್ಥಾನಗಳ ಅಂತರ ಏಳಿದ್ದರೂ, ಮತಗಳ ಅಂತರ ತುಂಬಾನೇ ಕಡಿಮೆ ಇರುವುದು ಕಮಲ ಪಾಳಯಕ್ಕೆ ಹೊಸ ಹುರುಪು ನೀಡಿದೆ.

ಒಟ್ಟು ಚಲಾವಣೆಯಾದ ಮತಗಳ ಪೈಕಿ ಟಿಆರ್​ಎಸ್​​ಗೆ 12.06 ಲಕ್ಷ ಅಥವಾ ಶೇ.35.81 ಸಿಕ್ಕರೆ, ಬಿಜೆಪಿಗೆ 11.95 ಲಕ್ಷ ಅಥವಾ ಶೇ.35.56 ಮತಗಳು ಸಿಕ್ಕಿವೆ. ಇದು ನಿಜಕ್ಕೂ ಟಿಆರ್​ಎಸ್​ಗೆ ಆಘಾತ ನೀಡುವ ವಿಚಾರವಾಗಿದೆ.

ನಮಗೆ ಸಮುಯವಿರಲಿಲ್ಲ: ಚುನಾವಣೆಯಲ್ಲಿ ಸಾಧಾರಣ ಗೆಲುವು ದಾಖಲಿಸಿದ ನಂತರ ಟಿಆರ್​ಎಸ್​ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಟಿಆರ್​ಎಸ್​​ ರಾಜ್ಯಾಧ್ಯಕ್ಷ ಸಂಜಯ್​ ಬಂದಿ ಮಾತನಾಡಿ, ನಮಗೆ ಚುನಾವಣೆ ಎದುರಿಸೋಕೆ ಸಮಯ ಸಿಗಲಿಲ್ಲ. ಹೀಗಾಗಿ ಸೂಕ್ತ ಅಭ್ಯರ್ಥಿ ಆಯ್ಕೆ ಕೂಡ ನಮ್ಮಿಂದ ಸಾಧ್ಯವಾಗಿಲ್ಲ. ಒಂದೊಮ್ಮೆ ನಮಗೆ ಸಮಯಾವಕಾಶ ಸಿಕ್ಕಿದ್ದರೆ 100 ಸ್ಥಾನವನ್ನು ಸುಲಭವಾಗಿ ಗೆಲ್ಲುತ್ತಿದ್ದೆವು ಎಂದಿದ್ದಾರೆ.

ಬಿಜೆಪಿಗೆ ವರದಾನವಾದ ಪ್ರವಾಹ?: ಹೈದರಾಬಾದ್​ನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪ್ರವಾಹ ಎದುರಾಗಿತ್ತು. ಸಾಕಷ್ಟು ಜನರು ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ವೇಳೆ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಅಲ್ಲಿನ ಸರ್ಕಾರ ಎಡವಿತ್ತು. ಇದರಿಂದ ಕೋಪ ಗೊಂಡಿರುವ ಸಂತ್ರಸ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ವಾದವನ್ನು ಕೆಲ ರಾಜಕೀಯ ಪಂಡಿತರು ಮುಂದಿಡುತ್ತಿದ್ದಾರೆ.

ಬಿಜೆಪಿಗೆ ಹೆಚ್ಚಿದ ಆತ್ಮವಿಶ್ವಾಸ: ತೆಲಂಗಾಣದಲ್ಲಿ ಸ್ಥಾನ ಭದ್ರಮಾಡಿಕೊಳ್ಳಲು ಹವಣಿಸುತ್ತಿದ್ದ ಬಿಜೆಪಿಗೆ ಈ ಚುನಾವಣಾ ಫಲಿತಾಂಶ ದೊಡ್ಡ ಬಲ ನೀಡಿದೆ. ವಿಳಾಸಕ್ಕೆ ಇಲ್ಲದ ಪಕ್ಷ ಎಂದು ಕರೆಯಲ್ಪಡುತ್ತಿದ್ದ ಬಿಜೆಪಿ ನಿಧಾನವಾಗಿ ಪ್ರಾಬಲ್ಯ ಸಾಧಿಸುತ್ತಿದೆ. ಹೀಗಾಗಿ, 2023ರ ವಿಧಾನಸಭಾ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಲು ಬಿಜೆಪಿಗೆ ಇದು ಸಹಕಾರಿಯಾಗಿದೆ.

ಅಮಿತ್ ‘ಪಟೇಲ್’ ಶಾ ಆದ GHMC ಚುನಾವಣೆ

ಇನ್ನಷ್ಟು… GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಆರ್​ಎಸ್​-ಎಐಎಂ​ಐಎಂ ನ ಹೈದರಾಬಾದ್ ನಡುವೆ ಯುದ್ಧ ಹೈದರಾಬಾದ್​ ಪಾಲಿಕೆ ಚುನಾವಣೆ: ಸಚಿವ ಸುಧಾಕರ್ ಉಸ್ತುವಾರಿಯಲ್ಲಿ ರೆಡಿಯಾಯ್ತು ರಣತಂತ್ರ

Published On - 3:06 pm, Sun, 6 December 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!