AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವೇಂದು ಅಧಿಕಾರಿಗೆ ಸಿಐಡಿಯಿಂದ ಸಮನ್ಸ್​​; 3ವರ್ಷಗಳ ನಂತರ ಸಾವಿನ ಕೇಸ್​ಗೆ ಬಂತು ಜೀವ !

ಸುವೇಂದು ಅಧಿಕಾರಿ ಅಂಗರಕ್ಷಕ ಸುಭಭ್ರತ ಚಕ್ರವರ್ತಿಯವರು ಮೃತಪಟ್ಟಿದ್ದು ಮೂರು ವರ್ಷಗಳ ಹಿಂದೆ. ಆಗ ಸುವೇಂದು ಟಿಎಂಸಿಯಲ್ಲೇ ಇದ್ದರು.

ಸುವೇಂದು ಅಧಿಕಾರಿಗೆ ಸಿಐಡಿಯಿಂದ ಸಮನ್ಸ್​​; 3ವರ್ಷಗಳ ನಂತರ ಸಾವಿನ ಕೇಸ್​ಗೆ ಬಂತು ಜೀವ !
ಸುವೇಂದು ಅಧಿಕಾರಿ
TV9 Web
| Edited By: |

Updated on: Sep 05, 2021 | 10:52 AM

Share

ಪಶ್ಚಿಮ ಬಂಗಾಳ ಬಿಜೆಪಿ ನಾಯಕ, ನಂದಿಗ್ರಾಮ ಶಾಸಕ ಸುವೇಂದು ಅಧಿಕಾರಿ (Suvendu Adhikari)  ಗೆ ಸಿಐಡಿ ಸಮನ್ಸ್​ (CID Summoned) ನೀಡಿದೆ. ಸುವೇಂದು ಅಧಿಕಾರಿ ಅಂಗರಕ್ಷಕ ಸುಭಭ್ರತ ಚಕ್ರವರ್ತಿ ಅಸಹಜ ಸಾವಿನ ಸಂಬಂಧ ಈ ಸಮನ್ಸ್​ ನೀಡಲಾಗಿದ್ದು, ಅದರ ಅನ್ವಯ ಸೋಮವಾರ (ನಾಳೆ) ಅವರು ವಿಚಾರಣೆಗೆ ಹಾಜರಾಗಬೇಕಿದೆ. ಚಕ್ರವರ್ತಿ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಅದರ ಭಾಗವಾಗಿ ಜುಲೈನಲ್ಲಿ ಸಿಐಡಿಯ ನಾಲ್ವರು ಅಧಿಕಾರಿಗಳಿರುವ ನಿಯೋಗ ಪುರ್ಬಾ ಮೇದಿನಿಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸುವೇಂದು ಅಧಿಕಾರಿ ಅಂಗರಕ್ಷಕ ಸುಭಭ್ರತ ಚಕ್ರವರ್ತಿಯವರು ಮೃತಪಟ್ಟಿದ್ದು ಮೂರು ವರ್ಷಗಳ ಹಿಂದೆ. ಆಗ ಸುವೇಂದು ಟಿಎಂಸಿಯಲ್ಲೇ ಇದ್ದರು. ಮಮತಾ ಬ್ಯಾನರ್ಜಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಚಕ್ರವರ್ತಿ ಸಾವು ಸಹಜವಾಗಿರಲಿಲ್ಲ. ಆದರೆ ಆಗ ಆ ಪ್ರಕರಣ ದೊಡ್ಡದಾಗಿರಲಿಲ್ಲ. ಪುರ್ಬಾ ಮೇದಿನಿಪುರದ ಕಾಂತಿ ಪೊಲೀಸ್​ ಠಾಣೆಯಲ್ಲಿ , ಸುಭಭ್ರತ ಚರ್ಕವರ್ತಿ ಪತ್ನಿ ಸುಪರ್ಣಾ ಕಂಜಿಲಾಲ್​ ದೂರು ದಾಖಲಿಸಿದ್ದರು. ಆದರೆ ಈ ಬಾರಿಯ ಜುಲೈನಲ್ಲಿ ಸಿಐಡಿ ಅದನ್ನು ಕೈಗೆತ್ತಿಕೊಂಡಿದೆ. ಸುಭಭ್ರತ ಚಕ್ರವರ್ತಿ ಸಾವಿಗೆ ಸಂಬಂಧಪಟ್ಟಂತೆ ಕಾಂಟೈ ಠಾಣೆಯಿಂದ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಭಭ್ರತ ಚಕ್ರವರ್ತಿ ರಾಜ್ಯ ಸಶಸ್ತ್ರ ಪೊಲೀಸ್​ ಪಡೆಯ ಸಿಬ್ಬಂದಿಯಾಗಿದ್ದರು. ಸುವೇಂದು ಅಧಿಕಾರಿ ಸಂಸದರಾಗಿದ್ದಾಗಿನಿಂದಲೂ ಅವರ ಬೆಂಗಾವಲು ಪಡೆಯಲ್ಲಿ ಇದ್ದರು. 2015ರಲ್ಲಿ ಸಚಿವರಾಗಿದ್ದಾಗಲೂ ಸುಭಭ್ರತ ಅವರೊಂದಿಗೇ ಇದ್ದರು. ಆದರೆ 2018ರ ಅಕ್ಟೋಬರ್​ನಲ್ಲಿ ತಮಗೆ ತಾವೇ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದರು. ಹಾಗೇ ಸಾಯಲು ಕಾರಣ ಗೊತ್ತಾಗಿರಲಿಲ್ಲ. ನಂತರ ಅವರ ಪತ್ನಿ ದೂರು ದಾಖಲಿಸಿ, ನನ್ನ ಪತಿಯ ಸಾವು ತೀರ ಅಸಹಜ ಎನ್ನಿಸುತ್ತಿದೆ. ತನಿಖೆ ನಡೆಯಬೇಕು ಎಂದಿದ್ದರು.

ಬಿಜೆಪಿ ಅಚ್ಚರಿ 2018ರಲ್ಲೇ ಸುಭಭ್ರತ ಚಕ್ರವರ್ತಿಯವರು ಮೃತಪಟ್ಟಿದ್ದಾರೆ. ಆದರೆ ಈಗ್ಯಾಕೆ ಆ ಪ್ರಕರಣ ಸಿಐಡಿಗೆ ವಹಿಸಲ್ಪಟ್ಟಿದೆ ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ಅಚ್ಚರಿ ವ್ಯಕ್ತಪಡಿಸಿದೆ. ಸುವೇಂದು ಅಧಿಕಾರಿ ಟಿಎಂಸಿಯಲ್ಲಿದ್ದಾಗ ಪೊಲೀಸ್​ ಸ್ಟೇಶನ್​ಗೆ ಸೀಮಿತವಾಗಿದ್ದ ಕೇಸ್​ ಇದೀಗ ಒಮ್ಮೆಲೆ ಸಿಐಡಿಗೆ ಹೋಗಿದೆ. ಸುವೇಂದು ಅಧಿಕಾರಿ ಟಿಎಂಸಿಯಿಂದ ಬಿಜೆಪಿಗೆ ಬಂದು, ಕಳೆದ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗೆದ್ದಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಪಕ್ಷ ನಾಯಕರಾಗಿದ್ದಾರೆ.

ಇದನ್ನೂ ಓದಿ: ‘ಉರಿ’ ಸಿನಿಮಾದ ಚೆಲುವೆ ಯಾಮಿ ಗೌತಮ್​ ಫಿಟ್ನೆಸ್​ ಹಿಂದಿದೆ ಎರಡು ಗುಟ್ಟುಗಳು​

Viral Video: ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು