ಎನ್ಸಿಡಬ್ಲ್ಯೂ ಮುಖ್ಯಸ್ಥರ ವಿರುದ್ಧ ಮಹುವಾ ಮೊಯಿತ್ರಾ ಹೇಳಿಕೆಗೆ ಬಿಜೆಪಿ ವಾಗ್ದಾಳಿ
"ಸಂದೇಶ್ ಖಾಲಿ, ಚೋಪ್ರಾದಲ್ಲಿ ತಾಲಿಬಾನಿ ರೀತಿ ಥಳಿಸುವಾಗ, ಸ್ವಾತಿ ಮಲಿವಾಲ್ ಬಗ್ಗೆ ಮೌನವಾಗಿದ್ದ ಸಂಸದೆ ಮಹುವಾ ಮೊಯಿತ್ರಾ ಈಗ ಎನ್ಸಿಡಬ್ಲ್ಯೂ ಮುಖ್ಯಸ್ಥೆ ಮಹಿಳೆಯ ಮೇಲೆ ಅಸಹ್ಯಕರ ಕಾಮೆಂಟ್ ಮಾಡಿದ್ದಾರೆ". ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಚತುರ್ವೇದಿ, ಎಎಪಿ ಇದರ ಬಗ್ಗೆ ಏನಂತಾರೆ ಎಂದು ಬಿಜೆಪಿ ಕೇಳಿದೆ.

ದೆಹಲಿ ಜುಲೈ 05: ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ (Rekha Sharma) ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ (Mahua Moitra) ವಿರುದ್ಧ ಬಿಜೆಪಿ ಶುಕ್ರವಾರ ವಾಗ್ದಾಳಿ ನಡೆಸಿದೆ. ಉತ್ತರ ಪ್ರದೇಶದ ಹಾಥರಸ್ ಕಾಲ್ತುಳಿತ (Hathras stampede) ಸಂಭವಿಸಿದ ಸ್ಥಳಕ್ಕೆ ಎನ್ಸಿಡಬ್ಲ್ಯೂ ಮುಖ್ಯಸ್ಥರ ಆಗಮನವನ್ನು ತೋರಿಸುವ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಬಗ್ಗೆ ಮಹುವಾ ಮೊಯಿತ್ರಾ ಗುರುವಾರ ಕಾಮೆಂಟ್ ಮಾಡಿದ್ದಾರೆ. ರೇಖಾ ಶರ್ಮಾ ಕೈ ಬೀಸಿ ನಡೆಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಅವರ ಹಿಂದೆ ಯಾರೋ ಛತ್ರಿ ಹಿಡಿದುಕೊಂಡು ನಡೆಯುತ್ತಿರುವುದು ಕಾಣುತ್ತದೆ.
ಈ ವಿಡಿಯೊ ಬಗ್ಗೆ ಕಾಮೆಂಟ್ ಮಾಡಿರುವ ಮಹುವಾ ಮೊಯಿತ್ರಾ, ಆಕೆ ತನ್ನ ಬಾಸ್ನ ಪೈಜಾಮಾವನ್ನು ಹಿಡಿದುಕೊಳ್ಳುವಲ್ಲಿ ತುಂಬಾ ನಿರತಳಾಗಿದ್ದಾಳೆ”ಎಂದಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಮಹುವಾ ಕಾಮೆಂಟ್ಗೆ ಪ್ರತಿಕ್ರಿಯಿಸಿದ್ದು, ಇದು “ಅತ್ಯಂತ ಅಸಭ್ಯ, ಆಕ್ಷೇಪಾರ್ಹ ಮತ್ತು ನಾಚಿಕೆಗೇಡಿನದು” ಎಂದು ಹೇಳಿದ್ದಾರೆ.
ಮೊಯಿತ್ರಾ ಅವರ ಕಾಮೆಂಟ್ನ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿದ ಪೂನವಾಲಾ, ಇದು ಟಿಎಂಸಿ ಮತ್ತು ವಿರೋಧ ಪಕ್ಷದ “ನಿಜವಾದ ಮುಖ” ಎಂದು ಪ್ರತಿಪಾದಿಸಿ ಅವರನ್ನು ಪಕ್ಷದಿಂದ ಹೊರಹಾಕುವಂತೆ ಕೋರಿದ್ದಾರೆ.
“ಸಂದೇಶ್ ಖಾಲಿ, ಚೋಪ್ರಾದಲ್ಲಿ ತಾಲಿಬಾನಿ ರೀತಿ ಥಳಿಸುವಾಗ, ಸ್ವಾತಿ ಮಲಿವಾಲ್ ಬಗ್ಗೆ ಮೌನವಾಗಿದ್ದ ಸಂಸದೆ ಮಹುವಾ ಮೊಯಿತ್ರಾ ಈಗ ಎನ್ಸಿಡಬ್ಲ್ಯೂ ಮುಖ್ಯಸ್ಥೆ ಮಹಿಳೆಯ ಮೇಲೆ ಅಸಹ್ಯಕರ ಕಾಮೆಂಟ್ ಮಾಡಿದ್ದಾರೆ”. ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಚತುರ್ವೇದಿ, ಎಎಪಿ ಇದರ ಬಗ್ಗೆ ಏನಂತಾರೆ ಎಂದು ಎಂದು ಮೊಯಿತ್ರಾ ಅವರ ಹೇಳಿಕೆಯ ಬಗ್ಗೆ ಮೌನವಾಗಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧವೂ ಪೂನಾವಾಲಾ ವಾಗ್ದಾಳಿ ನಡೆಸಿದರು.
“ಮಮತಾ ದೀದಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆಯೇ? ಇಲ್ಲ, ಅವರು ಸಂದೇಶ್ಖಾಲಿ ಮತ್ತು (ಪಶ್ಚಿಮ ಬಂಗಾಳ) ಚೋಪ್ರಾದಲ್ಲಿ (ದಂಪತಿಗಳನ್ನು ಹೊಡೆಯುವುದು) ಮೌನವಾಗಿರುವಂತೆ ಇಲ್ಲಿಯೂ ಮೌನವಾಗಿರುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಹಾಗೂ ನನ್ನ ತಂದೆ ರಾಮ್ ವಿಲಾಸ್ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಎನ್ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರು ಹಾಥರಸ್ಗೆ ಭೇಟಿಯ ಸಂದರ್ಭದಲ್ಲಿ ತಮ್ಮ ವಿರುದ್ಧ ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಅವರ ಹೇಳಿಕೆಗಳ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ಪತ್ರ ಬರೆದಿದ್ದಾರೆ.
ಎನ್ಸಿಡಬ್ಲ್ಯೂ ಶರ್ಮಾ ವಿರುದ್ಧ ಮಾಡಿದ ಟೀಕೆಗಳನ್ನು ಖಂಡಿಸಿದ್ದು, ಮೊಯಿತ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ಯೋಜಿಸಿದ್ದಾರೆ ಎಂದು ಹೇಳಿದ್ದಾರೆ. “ಈ ಹೇಳಿಕೆಗಳು ಅತಿರೇಕದ ಮತ್ತು ಮಹಿಳೆಯ ಘನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಈ ಹೇಳಿಕೆಗೆ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 79 ವಿಧಿಸಬಹುದು. NCW ಈ ಮಾನಹಾನಿಕರ ಟೀಕೆಗಳನ್ನು ಬಲವಾಗಿ ಖಂಡಿಸುತ್ತದೆ. ಮೊಯಿತ್ರಾ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದೆ ಎಂದು ಎನ್ಸಿಡಬ್ಲ್ಯೂ ಟ್ವೀಟ್ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ