AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಬಳಿ 5 ರೂ. ಪಡೆದು ಹೋಗಿದ್ದ ಬಾಲಕಿ ಮತ್ತೆ ಪತ್ತೆಯಾಗಿದ್ದು ಶವವಾಗಿ; ಪಕ್ಕದ ಮನೆಯಿಂದಲೇ ಬರುತ್ತಿತ್ತು ಕೆಟ್ಟ ವಾಸನೆ !

ಬಾಲಕಿ ಗುರುವಾರ ಸಂಜೆ ಸುಮಾರು 5.30ರ ಹೊತ್ತಿಗೆ ನಾಪತ್ತೆಯಾಗಿದ್ದಳು. ಅದಕ್ಕೂ ಮೊದಲು ತನ್ನ ತಂದೆಯ ಬಳಿ 5 ರೂಪಾಯಿ ಕೇಳಿದ್ದಳು. 5 ರೂಪಾಯಿ ಕೊಟ್ಟ ತಕ್ಷಣ ಮನೆಯಿಂದ ಹೊರ ನಡೆದಿದ್ದಳು.

ಅಪ್ಪನ ಬಳಿ 5 ರೂ. ಪಡೆದು ಹೋಗಿದ್ದ ಬಾಲಕಿ ಮತ್ತೆ ಪತ್ತೆಯಾಗಿದ್ದು ಶವವಾಗಿ; ಪಕ್ಕದ ಮನೆಯಿಂದಲೇ ಬರುತ್ತಿತ್ತು ಕೆಟ್ಟ ವಾಸನೆ !
ಮನೆಯ ಬಾಗಿಲನ್ನು ಮುರಿದ ಪೊಲೀಸರು
TV9 Web
| Edited By: |

Updated on:Dec 04, 2021 | 8:19 PM

Share

ಉತ್ತರಪ್ರದೇಶದ ಹಾಪುರ್​ ಪಟ್ಟಣದಲ್ಲಿ ನಾಪತ್ತೆಯಾದ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಅದೂ ಕೂಡ ಪಕ್ಕದ ಮನೆಯ ಟ್ರಂಕ್​​ (ಬಟ್ಟೆಗಳನ್ನು ಇಡುವ ಕಬ್ಬಿಣದ ಪೆಟ್ಟಿಗೆ)ನಲ್ಲಿ. ಈಕೆ ಗುರುವಾರ (ಡಿ. 2ರಂದು ಮನೆಯಿಂದ ಕಾಣೆಯಾಗಿದ್ದಳು. ಇಂದು ಬೆಳಗ್ಗೆ ನೆರೆಮನೆಯ ಟ್ರಂಕ್​​ನಲ್ಲಿ ಆಕೆಯ ಶವ ಇತ್ತು. ಮೃತ ದೇಹವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಲಾಗಿದೆ ಎಂದು ಹಾಪುರ್ ಠಾಣೆಯ ಸರ್ವೇಶ್​ ಕುಮಾರ್ ತಿಳಿಸಿದ್ದಾರೆ. ಹಾಗೇ, ಶವಪರೀಕ್ಷೆ ವರದಿಗಳು ಬರುವವರೆಗೂ ಇದು ರೇಪ್​ ಕೇಸ್​ ಹೌದೋ? ಅಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. 

ನಿನ್ನೆ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ದೂರು ಬಂದಿತ್ತು. ನಾವು ಹೋಗಿ ವಿಚಾರಣೆ ನಡೆಸಿ, ಆಕೆ ಕಾಣೆಯಾದ ಸ್ಥಳದಿಂದ ತನಿಖೆ ಶುರು ಮಾಡಿದೆವು. ಬಾಲಕಿಯ ಪಕ್ಕದ ಮನೆಯಿಂದ ಒಂದು ಕೆಟ್ಟ ವಾಸನೆ ಬರುತ್ತಿತ್ತು. ಅಲ್ಲಿಗೆ ನಮ್ಮ ಪೊಲೀಸ್ ತಂಡ ಹೋಯಿತು. ಆದರೆ ಮನೆಯ ಮುಂದಿನ ಬಾಗಿಲು ಹಾಕಲ್ಪಟ್ಟಿತ್ತು. ಅದು ಲಾಕ್​ ಕೂಡ ಆಗಿತ್ತು. ನಮ್ಮ ತಂಡ ಬಾಗಿಲನ್ನು ಮುರಿದು ಒಳಹೋಯಿತು.  ಇಡೀ ಕಟ್ಟಡದೊಳಗೆ ಹುಡುಕಿದಾಗ ಟ್ರಂಕ್​​ನಲ್ಲಿ ಬಾಲಕಿಯ ಶವ ಪತ್ತೆಯಾಯಿತು. ಅದನ್ನು ವಶಪಡಿಸಿಕೊಂಡು ಪೋಸ್ಟ್​ ಮಾರ್ಟಮ್​​ಗೆ ಕಳಿಸಲಾಗಿದೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಮನೆಯ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆತನನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸರ ಎದುರೇ ಸ್ಥಳೀಯ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿದೆ.  ಬಳಿಕ ಪೊಲೀಸರು ಆತನಿಗೆ ರಕ್ಷಣೆ ನೀಡಿ, ಕರೆದುಕೊಂಡು ಹೋಗಿ ಜೈಲಿಗೆ ಹಾಕಿದ್ದಾರೆ.

5ರೂಪಾಯಿ ಕೇಳಿದ್ದ ಬಾಲಕಿ ! ಇನ್ನು ಬಾಲಕಿ ಗುರುವಾರ ಸಂಜೆ ಸುಮಾರು 5.30ರ ಹೊತ್ತಿಗೆ ನಾಪತ್ತೆಯಾಗಿದ್ದಳು. ಅದಕ್ಕೂ ಮೊದಲು ತನ್ನ ತಂದೆಯ ಬಳಿ 5 ರೂಪಾಯಿ ಕೇಳಿದ್ದಳು. 5 ರೂಪಾಯಿ ಕೊಟ್ಟ ತಕ್ಷಣ ಮನೆಯಿಂದ ಹೊರ ನಡೆದಿದ್ದಳು. ಬಳಿಕ ವಾಪಸ್​ ಬಂದಿರಲಿಲ್ಲ. ಈ ಬಗ್ಗೆ ಬಾಲಕಿಯ ತಂದೆಯೇ ಪೊಲೀಸರ ಎದುರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಡೀ ರಾತ್ರಿ ಆಕೆಗಾಗಿ ಹುಡುಕಿದ್ದೇನೆ. ಬಳಿಕ ಆ ಪ್ರದೇಶದಲ್ಲಿ ಹಾಕಿದ ಸಿಸಿಟಿವಿ ಕ್ಯಾಮರಾ ಫೂಟೇಜ್ ನೋಡಿದಾಗ ಪಕ್ಕದ ಮನೆಯಾತ ಅವಳನ್ನು ಬೈಕ್​ ಮೇಲೆ ಕರೆದುಕೊಂಡು ಹೋಗಿದ್ದು ಕಂಡುಬಂದಿದೆ ಎಂದು ಕೂಡ ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಧಾರವಾಡ: ಶಾಲಾ‌ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟಕ್ಕೆ ಮಠಾಧೀಶರ ನಿರ್ಧಾರ

Published On - 8:19 pm, Sat, 4 December 21

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​