AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಸರ್ಕಾರದ ಸಚಿವಾಲಯಕ್ಕೆ ಬಾಂಬ್​​​ ಬೆದರಿಕೆ

ಕೇರಳ ಸರ್ಕಾರದ ಸಚಿವಾಲಯಕ್ಕೆ ಇಂದು ಬೆಳಿಗ್ಗೆ ಬಾಂಬ್​​​ ಬೆದರಿಕೆ ಬಂದಿದೆ. ಇದು ಕೆಲಹೊತ್ತು ಅಲ್ಲಿ ಆಂತಕವನ್ನು ಸೃಷ್ಟಿಸಿತ್ತು. ಕೇರಳ ಪೊಲೀಸ್ ಪ್ರಧಾನ ಕಚೇರಿಗೆ ದೂರವಾಣಿ ಕರೆ ಬಂದಿದ್ದು. ಸೆಕ್ರೆಟರಿಯೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ.

ಕೇರಳ ಸರ್ಕಾರದ ಸಚಿವಾಲಯಕ್ಕೆ ಬಾಂಬ್​​​ ಬೆದರಿಕೆ
ಅಕ್ಷಯ್​ ಪಲ್ಲಮಜಲು​​
|

Updated on:Nov 09, 2023 | 2:49 PM

Share

ಕೇರಳ ಸರ್ಕಾರದ ಸಚಿವಾಲಯಕ್ಕೆ ಇಂದು ಬೆಳಿಗ್ಗೆ ಬಾಂಬ್​​​ ಬೆದರಿಕೆ ಬಂದಿದೆ. ಇದು ಕೆಲಹೊತ್ತು ಅಲ್ಲಿ ಆಂತಕವನ್ನು ಸೃಷ್ಟಿಸಿತ್ತು. ಕೇರಳ ಪೊಲೀಸ್ ಪ್ರಧಾನ ಕಚೇರಿಗೆ ದೂರವಾಣಿ ಕರೆ ಬಂದಿದ್ದು. ಸೆಕ್ರೆಟರಿಯೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬೆದರಿಕೆ ಕರೆ ಎಂದು ಪೊಲೀಸರು ಹೇಳಿದ್ದಾರೆ. ಈ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಾಂಬ್​​​ ಬೆದರಿಕೆ ಬಂದ ಕೂಡಲೇ ಎಲೆಕ್ಟ್ರಾನಿಕ್ ಡಿಟೆಕ್ಟರ್‌ಗಳು ಮತ್ತು ಸ್ನಿಫರ್ ಡಾಗ್‌ಗಳಿಂದ ಸಚಿವಾಲಯದ ಕಟ್ಟಡವನ್ನು ಪರಿಶೀಲನೆ ಮಾಡಲಾಗಿದೆ. ಸಚಿವಾಲಯದ ಹೊರಗೆ ನಿಲ್ಲಿಸಿರುವ ವಾಹನಗಳನ್ನು ಕೂಡ ಪರಿಶೀಲನೆ ಮಾಡಲಾಗಿದೆ.

ಇನ್ನು ಭದ್ರತಾ ಸಿಬ್ಬಂದಿಗಳು ಸಚಿವಾಲಯದ ಸುತ್ತ ಬಿಗಿ ಭದ್ರತೆಯನ್ನು ನೀಡಿದ್ದಾರೆ. ಇನ್ನು ಸಾರ್ವಜನಿಕರಿಗೂ ನಿರ್ಬಂಧವನ್ನು ಹೇರಳಲಾಗಿದೆ. ಇದರ ಜತೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆಳಿಗ್ಗೆ 11.10ರ ವೇಳೆ ಪೊಲೀಸ್ ನಿಯಂತ್ರಣ ಕೊಠಡಿ ಬೆದರಿಕೆ ಕರೆ ಬಂದಿದೆ. ಪೊಲೀಸರು ತಿಳಿಸಿರುವಂತೆ ಪ್ರಾಥಮಿಕವಾಗಿ ಇದನ್ನು ನಂಬಲು ಸಾಧ್ಯವಿಲ್ಲ. ಇಂತಹ ಅನೇಕ ಕಾಲ್ ಬರುತ್ತದೆ. ಅದರೂ ಸಚಿವಾಲಯಕ್ಕೆ ಬಾಂಬ್​​ ಬೆದರಿಕೆ ಬಂದಾಗ ಅದನ್ನು ನಿಭಾಯಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದ ಕಳಮಶ್ಶೇರಿ ಬಾಂಬ್ ಸ್ಫೋಟದ ಆರೋಪಿ ಅಸಾಧಾರಣ ಬುದ್ಧಿವಂತ: ಪೊಲೀಸ್

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹತ್ಯೆ ಮಾಡುವುದಾಗಿ ಕರೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರ್ನಾಕುಲಂನಲ್ಲಿ 7 ನೇ ತರಗತಿ ವಿದ್ಯಾರ್ಥಿಯಿಂದ ಈ ಕರೆ ಬಂದಿದೆ. ಇದನ್ನು ವಿದ್ಯಾರ್ಥಿಯ ಕುಟುಂಬದವರು ಚೇಷ್ಠೆಗಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮ್ಯೂಸಿಯಂ ಪೊಲೀಸರು ಕೇರಳ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Thu, 9 November 23