AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ಬೇಕಂದ್ರೆ 10 ಲಕ್ಷ ಕೊಡಿ ಅಂದಿತ್ತು ಆ ಒಂದು ಧ್ವನಿ! ಹಾಗೆ ಭಯ ಹುಟ್ಸಿದ್ದು ಯಾರು ಗೊತ್ತಾ?

ಚೆನ್ನೈ: ನಿಮ್ಮ ಮಗನನ್ನು ನಾವು ಕಿಡ್ನಾಪ್​ ಮಾಡಿದ್ದೀವಿ. ಅವನನ್ನು ಜೀವಂತವಾಗಿ ನೋಡಬೇಕಂದ್ರೆ 10 ಲಕ್ಷ ರೂಪಾಯಿ ಮೊತ್ತವನ್ನು ಕೊಡಬೇಕು ಅಂತಾ ಚೆನ್ನೈನ ಟ್ರಿಪ್ಲಿಕೇನ್​ ಬಡಾವಣೆಯ ಕುಟುಂಬ ಒಂದಕ್ಕೆ ಕಳೆದ ಬುಧವಾರ ರಾತ್ರಿ ದೂರವಾಣಿ ಕರೆ ಬಂದಿತ್ತು. ಮಗನ ಅಪಹರಣದ ಸುದ್ದಿ ಕೇಳಿ ಕೊಂಚ ಶಾಕ್​ ಆದ ತಂದೆ ಕೂಡಲೇ ಪೊಲೀಸರ ಮೊರೆ ಹೋಗುತ್ತಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಖಾಕಿ ಪಡೆ ಕರೆ ಬಂದ ಮೊಬೈಲ್​ ನಂಬರ್​ನ ಪತ್ತೆ ಹಚ್ಚೋಕೆ ಮುಂದಾದರು. ಮೊಬೈಲ್​ ಟವರ್​ ಲೊಕೇಷನ್​ ಮುಖಾಂತರ ಅಪಹರಣದ ಕರೆ […]

ಮಗ ಬೇಕಂದ್ರೆ 10 ಲಕ್ಷ ಕೊಡಿ ಅಂದಿತ್ತು ಆ ಒಂದು ಧ್ವನಿ! ಹಾಗೆ ಭಯ ಹುಟ್ಸಿದ್ದು ಯಾರು ಗೊತ್ತಾ?
KUSHAL V
| Edited By: |

Updated on: Oct 09, 2020 | 2:28 PM

Share

ಚೆನ್ನೈ: ನಿಮ್ಮ ಮಗನನ್ನು ನಾವು ಕಿಡ್ನಾಪ್​ ಮಾಡಿದ್ದೀವಿ. ಅವನನ್ನು ಜೀವಂತವಾಗಿ ನೋಡಬೇಕಂದ್ರೆ 10 ಲಕ್ಷ ರೂಪಾಯಿ ಮೊತ್ತವನ್ನು ಕೊಡಬೇಕು ಅಂತಾ ಚೆನ್ನೈನ ಟ್ರಿಪ್ಲಿಕೇನ್​ ಬಡಾವಣೆಯ ಕುಟುಂಬ ಒಂದಕ್ಕೆ ಕಳೆದ ಬುಧವಾರ ರಾತ್ರಿ ದೂರವಾಣಿ ಕರೆ ಬಂದಿತ್ತು. ಮಗನ ಅಪಹರಣದ ಸುದ್ದಿ ಕೇಳಿ ಕೊಂಚ ಶಾಕ್​ ಆದ ತಂದೆ ಕೂಡಲೇ ಪೊಲೀಸರ ಮೊರೆ ಹೋಗುತ್ತಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಖಾಕಿ ಪಡೆ ಕರೆ ಬಂದ ಮೊಬೈಲ್​ ನಂಬರ್​ನ ಪತ್ತೆ ಹಚ್ಚೋಕೆ ಮುಂದಾದರು. ಮೊಬೈಲ್​ ಟವರ್​ ಲೊಕೇಷನ್​ ಮುಖಾಂತರ ಅಪಹರಣದ ಕರೆ ಚೆಪಾಕ್​ ಏರಿಯಾದಿಂದ ಬಂದಿತ್ತು ಎಂದು ಪೊಲೀಸರು ಪತ್ತೆ ಹಚ್ಚುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲಿ 14 ವರ್ಷದ ಹುಡುಗನೊಬ್ಬ ಸಿಕ್ಕ. ಆತ ಮತ್ತು ಏರಿಯಾದ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ತಂದು ಪರಿಶೀಲಿಸಲು ಮುಂದಾದರು.

ಹುಡುಗನನ್ನು ವಿಚಾರಿಸಿದಾಗ ಪೊಲೀಸರಿಗೆ ಗೊತ್ತಾಯ್ತು ಕಿಡ್ನಾಪ್​ ಆದ ಹುಡುಗ ಈತನೇ ಎಂದು. ಏನಪ್ಪಾ ನಿನ್ನ ಲೀಲೆ ಎಂದು ವಿಚಾರಿಸಿದಾಗ ಸಾರ್​ ನಮ್ಮ ತಂದೆ ನನ್ನನ್ನು ಸದಾ ತೆಗಳುತ್ತಿದ್ದರು. ಹಾಗಾಗಿ, ಅವರ ಸಹಾನುಭೂತಿ ಗಿಟ್ಟಿಸಲು ನಾನು ಹೀಗೆ ಮಾಡಿದೆ ಎಂದು ಬಾಯಿಬಿಟ್ಟಿದ್ದಾನೆ. ಅಂದ ಹಾಗೆ, ಫೋನ್​ನಲ್ಲಿ ನಿನ್ನ ವಾಯ್ಸ್​ ಬೇರೆ ಥರನೇ ಇತ್ತಲ್ಲ ಅಂದಿದ್ದಕ್ಕೆ ನನ್ನ ಮೊಬೈಲ್​ನಲ್ಲಿದ್ದ ಌಪ್​ನಿಂದ ದನಿ ಬದಲಾಯಿಸಿಕೊಂಡು ಕಾಲ್​ ಮಾಡ್ದೇ ಸಾರ್​ ಅಂತಾ ಹುಡುಗ ತುಂಟ ನಗೆ ಬೀರಿದ್ದಾನೆ.

ಜೊತೆಗೆ, ಇದು ನಿಜವಾದ ಅಪಹರಣ ಎಂದು ನಮ್ಮ ತಂದೆಯನ್ನ ನಂಬಿಸಲು ಹಣಕ್ಕಾಗಿ ಬೇಡಿಕೆಯಿಟ್ಟೆ ಎಂದು ಹೇಳಿದ್ದಾನೆ. ಮರುಗಿದ ಪೊಲೀಸರು ಮತ್ತೆ ಹೀಗೆ ಮಾಡದಂತೆ ಹುಡುಗನಿಗೆ ವಾರ್ನಿಂಗ್​ ಕೊಟ್ಟು, ಅವನ ಪೋಷಕರಿಂದ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ.

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ