AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ಬೇಕಂದ್ರೆ 10 ಲಕ್ಷ ಕೊಡಿ ಅಂದಿತ್ತು ಆ ಒಂದು ಧ್ವನಿ! ಹಾಗೆ ಭಯ ಹುಟ್ಸಿದ್ದು ಯಾರು ಗೊತ್ತಾ?

ಚೆನ್ನೈ: ನಿಮ್ಮ ಮಗನನ್ನು ನಾವು ಕಿಡ್ನಾಪ್​ ಮಾಡಿದ್ದೀವಿ. ಅವನನ್ನು ಜೀವಂತವಾಗಿ ನೋಡಬೇಕಂದ್ರೆ 10 ಲಕ್ಷ ರೂಪಾಯಿ ಮೊತ್ತವನ್ನು ಕೊಡಬೇಕು ಅಂತಾ ಚೆನ್ನೈನ ಟ್ರಿಪ್ಲಿಕೇನ್​ ಬಡಾವಣೆಯ ಕುಟುಂಬ ಒಂದಕ್ಕೆ ಕಳೆದ ಬುಧವಾರ ರಾತ್ರಿ ದೂರವಾಣಿ ಕರೆ ಬಂದಿತ್ತು. ಮಗನ ಅಪಹರಣದ ಸುದ್ದಿ ಕೇಳಿ ಕೊಂಚ ಶಾಕ್​ ಆದ ತಂದೆ ಕೂಡಲೇ ಪೊಲೀಸರ ಮೊರೆ ಹೋಗುತ್ತಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಖಾಕಿ ಪಡೆ ಕರೆ ಬಂದ ಮೊಬೈಲ್​ ನಂಬರ್​ನ ಪತ್ತೆ ಹಚ್ಚೋಕೆ ಮುಂದಾದರು. ಮೊಬೈಲ್​ ಟವರ್​ ಲೊಕೇಷನ್​ ಮುಖಾಂತರ ಅಪಹರಣದ ಕರೆ […]

ಮಗ ಬೇಕಂದ್ರೆ 10 ಲಕ್ಷ ಕೊಡಿ ಅಂದಿತ್ತು ಆ ಒಂದು ಧ್ವನಿ! ಹಾಗೆ ಭಯ ಹುಟ್ಸಿದ್ದು ಯಾರು ಗೊತ್ತಾ?
KUSHAL V
| Updated By: ಸಾಧು ಶ್ರೀನಾಥ್​|

Updated on: Oct 09, 2020 | 2:28 PM

Share

ಚೆನ್ನೈ: ನಿಮ್ಮ ಮಗನನ್ನು ನಾವು ಕಿಡ್ನಾಪ್​ ಮಾಡಿದ್ದೀವಿ. ಅವನನ್ನು ಜೀವಂತವಾಗಿ ನೋಡಬೇಕಂದ್ರೆ 10 ಲಕ್ಷ ರೂಪಾಯಿ ಮೊತ್ತವನ್ನು ಕೊಡಬೇಕು ಅಂತಾ ಚೆನ್ನೈನ ಟ್ರಿಪ್ಲಿಕೇನ್​ ಬಡಾವಣೆಯ ಕುಟುಂಬ ಒಂದಕ್ಕೆ ಕಳೆದ ಬುಧವಾರ ರಾತ್ರಿ ದೂರವಾಣಿ ಕರೆ ಬಂದಿತ್ತು. ಮಗನ ಅಪಹರಣದ ಸುದ್ದಿ ಕೇಳಿ ಕೊಂಚ ಶಾಕ್​ ಆದ ತಂದೆ ಕೂಡಲೇ ಪೊಲೀಸರ ಮೊರೆ ಹೋಗುತ್ತಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಖಾಕಿ ಪಡೆ ಕರೆ ಬಂದ ಮೊಬೈಲ್​ ನಂಬರ್​ನ ಪತ್ತೆ ಹಚ್ಚೋಕೆ ಮುಂದಾದರು. ಮೊಬೈಲ್​ ಟವರ್​ ಲೊಕೇಷನ್​ ಮುಖಾಂತರ ಅಪಹರಣದ ಕರೆ ಚೆಪಾಕ್​ ಏರಿಯಾದಿಂದ ಬಂದಿತ್ತು ಎಂದು ಪೊಲೀಸರು ಪತ್ತೆ ಹಚ್ಚುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲಿ 14 ವರ್ಷದ ಹುಡುಗನೊಬ್ಬ ಸಿಕ್ಕ. ಆತ ಮತ್ತು ಏರಿಯಾದ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ತಂದು ಪರಿಶೀಲಿಸಲು ಮುಂದಾದರು.

ಹುಡುಗನನ್ನು ವಿಚಾರಿಸಿದಾಗ ಪೊಲೀಸರಿಗೆ ಗೊತ್ತಾಯ್ತು ಕಿಡ್ನಾಪ್​ ಆದ ಹುಡುಗ ಈತನೇ ಎಂದು. ಏನಪ್ಪಾ ನಿನ್ನ ಲೀಲೆ ಎಂದು ವಿಚಾರಿಸಿದಾಗ ಸಾರ್​ ನಮ್ಮ ತಂದೆ ನನ್ನನ್ನು ಸದಾ ತೆಗಳುತ್ತಿದ್ದರು. ಹಾಗಾಗಿ, ಅವರ ಸಹಾನುಭೂತಿ ಗಿಟ್ಟಿಸಲು ನಾನು ಹೀಗೆ ಮಾಡಿದೆ ಎಂದು ಬಾಯಿಬಿಟ್ಟಿದ್ದಾನೆ. ಅಂದ ಹಾಗೆ, ಫೋನ್​ನಲ್ಲಿ ನಿನ್ನ ವಾಯ್ಸ್​ ಬೇರೆ ಥರನೇ ಇತ್ತಲ್ಲ ಅಂದಿದ್ದಕ್ಕೆ ನನ್ನ ಮೊಬೈಲ್​ನಲ್ಲಿದ್ದ ಌಪ್​ನಿಂದ ದನಿ ಬದಲಾಯಿಸಿಕೊಂಡು ಕಾಲ್​ ಮಾಡ್ದೇ ಸಾರ್​ ಅಂತಾ ಹುಡುಗ ತುಂಟ ನಗೆ ಬೀರಿದ್ದಾನೆ.

ಜೊತೆಗೆ, ಇದು ನಿಜವಾದ ಅಪಹರಣ ಎಂದು ನಮ್ಮ ತಂದೆಯನ್ನ ನಂಬಿಸಲು ಹಣಕ್ಕಾಗಿ ಬೇಡಿಕೆಯಿಟ್ಟೆ ಎಂದು ಹೇಳಿದ್ದಾನೆ. ಮರುಗಿದ ಪೊಲೀಸರು ಮತ್ತೆ ಹೀಗೆ ಮಾಡದಂತೆ ಹುಡುಗನಿಗೆ ವಾರ್ನಿಂಗ್​ ಕೊಟ್ಟು, ಅವನ ಪೋಷಕರಿಂದ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ.

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!