AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ

ಅಗ್ನಿಯ ಎದುರು ಸಪ್ತಪದಿ ತುಳಿಯುವುದು ಸಂಪ್ರದಾಯ. ಹೀಗೆ ಸಪ್ತಪದಿ ತುಳಿಯುವಾಗ ಪತಿಯೊಂದಿಗೆ ಆರನೇ ಹೆಜ್ಜೆ ಇಡುತ್ತಿದ್ದಂತೆ ವಧು ಮದುವೆ ಬೇಡ ಎಂದಿದ್ದಾಳೆ. ಯುವತಿ ತೆಗೆದುಕೊಂಡ ಏಕಾಏಕಿ ನಿರ್ಧಾರದಿಂದ ಎರಡೂ ಕುಟುಂಬಗಳು, ಬಂಧುಗಳು, ಸ್ನೇಹಿತರು ಕಕ್ಕಾಬಿಕ್ಕಿಯಾದರು.

ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ
ಪ್ರಾತಿನಿಧಿಕ
TV9 Web
| Edited By: |

Updated on: Jun 28, 2021 | 3:24 PM

Share

ಮಹೋಬಾ: ಈಗಂತೂ ದೇಶಾದ್ಯಂತ ಮದುವೆ ಸೀಸನ್​. ವಿವಾಹಕ್ಕೆ ಸಂಬಂಧಪಟ್ಟ ಒಂದಿಲ್ಲೊಂದು ವಿಷಯಗಳು ಪ್ರತಿದಿನ ಸುದ್ದಿಯಾಗುತ್ತಲೇ ಇವೆ. ಕೆಲವು ಫನ್ನಿ ಅನ್ನಿಸಿದರೆ, ಮತ್ತೆ ಕೆಲವು ವಿಲಕ್ಷಣ ಎನ್ನಿಸುತ್ತವೆ. ಇತ್ತೀಚೆಗೆ ವಧುವೊಬ್ಬಳು ತನ್ನ ಬಾವಿ ಪತಿಗೆ ಕನ್ನಡಕ ಇಲ್ಲದೆ ಓದಲು ಬರುವುದಿಲ್ಲ ಎಂದು ಗೊತ್ತಾಗಿ ಮಂಟಪದಿಂದ ಎದ್ದು ಹೋಗಿದ್ದಳು. ಹಾಗೇ ಇನ್ನೊಬ್ಬಳು, ಮದುವೆಯದಿನ ಮದ್ಯಪಾನ ಮಾಡಿ ಬಂದ ಎಂಬ ಕಾರಣಕ್ಕೆ ಆ ವರನನ್ನು ತಿರಸ್ಕರಿಸಿದ್ದಳು. ಹೀಗೆ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಅದರ ಮಧ್ಯೆ ಉತ್ತರ ಪ್ರದೇಶದ ಮೆಹೋಬಾದಲ್ಲಿ ವಧು ತನ್ನ ಮದುವೆ ದಿನ, ಸಪ್ತಪದಿಯ ಆರನೇ ಹೆಜ್ಜೆ ಮುಕ್ತಾಯವಾಗುತ್ತಿದ್ದಂತೆ ತನಗೆ ಮದುವೆ ಬೇಡ ಎಂದು ಹೊರನಡೆದಿದ್ದಾಳೆ.

ಅಗ್ನಿಯ ಎದುರು ಸಪ್ತಪದಿ ತುಳಿಯುವುದು ಸಂಪ್ರದಾಯ. ಹೀಗೆ ಸಪ್ತಪದಿ ತುಳಿಯುವಾಗ ಪತಿಯೊಂದಿಗೆ ಆರನೇ ಹೆಜ್ಜೆ ಇಡುತ್ತಿದ್ದಂತೆ ವಧು ಮದುವೆ ಬೇಡ ಎಂದಿದ್ದಾಳೆ. ಯುವತಿ ತೆಗೆದುಕೊಂಡ ಏಕಾಏಕಿ ನಿರ್ಧಾರದಿಂದ ಎರಡೂ ಕುಟುಂಬಗಳು, ಬಂಧುಗಳು, ಸ್ನೇಹಿತರು ಕಕ್ಕಾಬಿಕ್ಕಿಯಾದರು. ಪರಿಪರಿಯಾಗಿ ಕಾರಣ ಕೇಳಿದರು. ವಧುವಿನ ಮನವೊಲಿಸಿದರು. ಮಧ್ಯರಾತ್ರಿ ಪಂಚಾಯಿತಿ ಕೂಡ ನಡೆಯಿತು. ಆದರೆ ವಧು ಮಾತ್ರ ತನ್ನ ನಿರ್ಧಾರವನ್ನು ಬದಲಿಸಲೇ ಇಲ್ಲ. ವರ ಮತ್ತು ಆತನ ಸಂಬಂಧಿಕರಿಗೆ ಅಲ್ಲಿಂದ ತೆರಳದೆ ಬೇರೆ ಮಾರ್ಗವೇ ಇರಲಿಲ್ಲ.

ಮದುವೆ ಬೇಡ ಎನ್ನಲು ಕಾರಣವೇನು ಎಂದು ಕೇಳಿದರೆ ವಧು ಹೇಳುವುದು ಒಂದೇ ಮಾತು. ನನಗೆ ಆತ ಇಷ್ಟವಿಲ್ಲ ಎಂದು. ಆದರೆ ಹಾಗೊಮ್ಮೆ ಇಷ್ಟ ಇಲ್ಲದೆ ಇದ್ದರೆ ಮದುವೆಯವರೆಗೂ ಯಾಕೆ ಹೇಳಲಿಲ್ಲ? ಇನ್ನು ಮದುವೆಯಲ್ಲಿ ಬಾಕಿ ಸಂಪ್ರದಾಯ, ಆಚರಣೆಯಲ್ಲಿ ಯಾಕೆ ಮೌನವಾಗಿ ಪಾಲ್ಗೊಂಡೆ ಎಂದು ವರನ ಅಪ್ಪ ಪ್ರಶ್ನೆ ಮಾಡಿದರೆ, ಅದಕ್ಕೂ ವಧು ಸರಿಯಾಗಿ ಉತ್ತರ ಕೊಟ್ಟಿಲ್ಲ. ಉಳಿದ ಆಚರಣೆಯಲ್ಲೂ ಪಾಲ್ಗೊಂಡು, ಹಾರವನ್ನೂ ಬದಲಿಸಿಕೊಂಡು ಸಪ್ತಪದಿಯಲ್ಲಿ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆ ಬೇಡವೇ ಬೇಡ ಎಂದ ವಧು ಎಲ್ಲರಿಗೂ ಒಗಟಾಗಿಯೇ ಇದ್ದಾಳೆ.

ಇದನ್ನೂ ಓದಿ: ವಿಜಯ್​ ಪ್ರಕಾಶ್​ ಅವರ ‘ಕಲಾನಿಧಿ’ ಸಂಗೀತೋತ್ಸವ ಮಿಸ್​ ಮಾಡಿಕೊಂಡ್ರಾ? ಇಲ್ಲಿದೆ ಫುಲ್​ ವಿಡಿಯೋ (Bride Calls Off Wedding After Sixth Phera In Uttar Pradesh)

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!