AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ದಿನ ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ

ಬ್ಯೂಟಿ ಪಾರ್ಲರ್​ಗೆ ಬಂದ ಮಾಜಿ ಪ್ರಿಯತಮೆಯನ್ನು ಯುವಕನೊಬ್ಬ ಗುಂಡು ಹಾರಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಯುವಕ ಬೆನ್ನಿಗೊಂದು ಬ್ಯಾಗ್ ಹಾಗೂ ಕೈಯಲ್ಲಿ ಪಿಸ್ತೂಲ್ ಹಿಡಿದು ಬ್ಯೂಟಿ ಪಾರ್ಲರ್​ ಒಳಗೆ ಬಂದು ಗುಂಡು ಹಾರಿಸಿದ್ದಾನೆ.

ಮದುವೆ ದಿನ ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ
ಗುಂಡಿನ ದಾಳಿ
ನಯನಾ ರಾಜೀವ್
|

Updated on: Jun 25, 2024 | 2:15 PM

Share

ಮದುವೆ ದಿನ ಸಿಂಗರಿಸಿಕೊಳ್ಳಲೆಂದು ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಯನ್ನು ಮಾಜಿ ಪ್ರಿಯಕರ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಯುವಕ ಬೆನ್ನಿಗೊಂದು ಬ್ಯಾಗ್ ಹಾಗೂ ಕೈಯಲ್ಲಿ ಪಿಸ್ತೂಲ್ ಹಿಡಿದು ಬ್ಯೂಟಿ ಪಾರ್ಲರ್​ ಒಳಗೆ ಬಂದಿದ್ದಾನೆ.

ಆತ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ, ನಂತರ 32 ಸೆಕೆಂಡುಗಳಲ್ಲಿ ಯುವಕ ಯುವತಿಯ ಎದೆಗೆ ಎರಡು ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಧ್ಯಪ್ರದೇಶದ ದಾತಿಯಾ ನಿವಾಸಿ 20 ವರ್ಷದ ಕಾಜಲ್ ಭಾನುವಾರ ವಿವಾಹವಾಗಬೇಕಿತ್ತು, ಪಕ್ಕದ ಮನೆಯ ಯುವಕ ದೀಪಕ್ ಎಂಬಾತ ಆಕೆಯನ್ನು ಇಷ್ಟಪಟ್ಟಿದ್ದ, ಇಬ್ಬರೂ ಮದುವೆಯಾಗಲು ಬಯಸಿದ್ದರು. ಮದುವೆಗೆ ಸ್ವಲ್ಪ ಸಮಯದ ಮೊದಲು ಕಾಜಲ್ ಕೂಡ ದೀಪಕ್ ಜೊತೆ ಓಡಿ ಹೋಗಿದ್ದಳು. ಆದರೆ ನಂತರ ಅವಳು ತನ್ನ ಕುಟುಂಬ ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದಳು.

ನಂತರ ಕುಟುಂಬವು ಕಾಜಲ್ ಮದುವೆಯನ್ನು ಝಾನ್ಸಿಯ ಚಿರ್ಗಾಂವ್‌ನ ಸಿಂತಾರಿ ಗ್ರಾಮದ ನಿವಾಸಿ ರಾಜ್ ಅವರೊಂದಿಗೆ ನಿಶ್ಚಯಿಸಿತು. ಕಾಜಲ್ ತಂದೆ ವರನಿಗೆ 8 ಲಕ್ಷದ 41 ಸಾವಿರ ರೂಪಾಯಿ ಮೌಲ್ಯದ ಕಾರನ್ನು ಸಹ ನೀಡಿದ್ದರು.

ಮತ್ತಷ್ಟು ಓದಿ: ಪ್ರಿಯತಮೆಗೆ ಬಾಡಿಗೆ ಮನೆ ಮಾಡಿಟ್ಟಿದ್ದ: ಆಗಾಗ ಬಂದು ಹೋಗುತ್ತಿದ್ದವ ನಿನ್ನೆ ಕೊಂದು ಹೋದ

ಆದರೆ ಮದುವೆಗೂ ಮುನ್ನ ಕಾಜಲ್ ದೀಪಕ್ ನಿಂದ ಕೊಲೆಯಾಗಿದ್ದಾಳೆ. ಭಾನುವಾರ ಮದುವೆ ಮೆರವಣಿಗೆಗೂ ಮುನ್ನ ರೆಡಿಯಾಗಲು ಕಾಜಲ್ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರು. ಅಷ್ಟರಲ್ಲಿ ದೀಪಕ್ ಅಲ್ಲಿಗೆ ಬಂದು ತನ್ನ ಜತೆ ಬರುವಂತೆ ಕೇಳಿದ್ದಾನೆ.

ಆಕೆ ನಿರಾಕರಿಸಿದಾಗ ಎದೆಗೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ನೀನು ನನ್ನವಳಾಗದಿದ್ದರೆ ಬೇರೆಯವರಿಗೂ ನಿನ್ನನ್ನು ಸಿಗಲು ಬಿಡುವುದಿಲ್ಲ ಎಂದು ಹೇಳಿ ಹತ್ಯೆ ಮಾಡಿದ್ದಾನೆ, ಕಾಜಲ್ ಅಲ್ಲಿಯೇ ಸಾವನ್ನಪ್ಪಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK