AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬಿಎಸ್​ಎಫ್​ ಮಹಿಳಾ ಬೈಕರ್​ಗಳ ರೋಮಾಂಚನಕಾರಿ ಸಾಹಸ ಪ್ರದರ್ಶನ

ಗಣರಾಜ್ಯೋತ್ಸವದಲ್ಲಿ ಭಾರತದ ಮಿಲಿಟರಿ ಶಕ್ತಿಯ ಜತೆ ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶನ ನಡೆಯಿತು. ಅದರೊಂದಿಗೆ ಸ್ವಾತಂತ್ರ್ಯ ಬಂದು 75ವರ್ಷ ಆದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಲವು ಉಪಕ್ರಮಗಳನ್ನು ಸೇರಿಸಲಾಗಿತ್ತು.

Video: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬಿಎಸ್​ಎಫ್​ ಮಹಿಳಾ ಬೈಕರ್​ಗಳ ರೋಮಾಂಚನಕಾರಿ ಸಾಹಸ ಪ್ರದರ್ಶನ
ಬಿಎಸ್​ಎಫ್​ ಮಹಿಳಾ ಬೈಕರ್​ಗಳಿಂದ ಸಾಹಸ ಪ್ರದರ್ಶನ
TV9 Web
| Edited By: |

Updated on:Jan 26, 2022 | 5:11 PM

Share

ದೆಹಲಿ: ಇಂದು ಗಣರಾಜ್ಯೋತ್ಸವ ಪರೇಡ್ (Republic Day Parade 2022)​ ಅತ್ಯಂತ ಆಕರ್ಷಕವಾಗಿತ್ತು. ದೇಶದ ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ಧ ಚಿತ್ರಗಳ ಜತೆ, ಗಡಿ ಭದ್ರತಾ ಪಡೆಯ ಮಹಿಳಾ ಯೋಧರ (BSF) ಬೈಕ್​ ಸಾಹಸ ಪ್ರದರ್ಶನ ದೇಶದ ಗಮನ ಸೆಳೆದಿದೆ. ಬಿಎಎಸ್​ಎಫ್​​ನ ಸೀಮಾ ಭವಾನಿ ನೇತೃತ್ವದ ಮೋಟಾರ್​ಸೈಕಲ್​ ತಂಡ ರಾಷ್ಟ್ರಪತಿಯವರಿಗೆ ವಂದನೆ ಸಲ್ಲಿಸಿದ್ದು, ಅತ್ಯಂತ ರೋಮಾಂಚನಕಾರಿಯಾಗಿತ್ತು. ಈ ವಿಡಿಯೋವನ್ನು ಕೂಡ ನೋಡಬಹುದಾಗಿದೆ.  

ಇಂದು ಈ ಬೈಕ್​ ತಂಡ ಕಮಾಂಡ್​ ಇನ್​ಸ್ಪೆಕ್ಟರ್​ ಹಿಮಾಂಶು ಸಿರೋಹಿ ಕಮಾಂಡ್​​ನಡಿ ರಾಷ್ಟ್ರಪತಿ ವಂದನೆ ಸಲ್ಲಿಸಿದೆ. ಸಬ್​ ಇನ್ಸ್​ಪೆಕ್ಟರ್​ ಸೋನಿಯಾ ಬನ್ವಾರಿ ಆದೇಶದಡಿ, ಬೈಕ್​​ಮೇಲೆ ಏಕಮಂಡಿಯೂರಿ ಸಾಹಸ ಪ್ರದರ್ಶನ ನಡೆಸಿತು. ಕಾನ್​ಸ್ಟೆಬಲ್​ ಅನಿಮಾ ನೇತೃತ್ವದಲ್ಲಿ ಕುರ್ಚಿ ರೈಡಿಂಗ್​ ನಡೆಯಿತು ಹಾಗೂ ಕಾನ್​​ಸ್ಟೆಬಲ್​ ಪುಷ್ಪಾ ಮತ್ತೊಬ್ಬರು ಸೇರಿ ಫಿಶ್​ ರೈಡಿಂಗ್  ನಡೆಸಿದರು. ಅಷ್ಟೇ ಅಲ್ಲ, ಕಾನ್​ಸ್ಟೆಬಲ್​ ರಜ್ವಿಂದರ್ ಕೌರ್​ ಹಾಗೂ ಇನ್ನೊಬ್ಬರು ಸೇರಿ ಒಂದು ಬದಿಯಿಂದ ಡಬಲ್​ ಬ್ಯಾಕ್​ ರೈಡಿಂಗ್​ ಮಾಡಿದರೆ, ಇನ್ನೊಂದು ಬೈಕ್​​ನಲ್ಲಿ ಕಾನ್​ಸ್ಟೆಬಲ್​ ಅನುಪಮಾ ಕುಮಾರಿ ಮತ್ತು ಇನ್ನೊಬ್ಬರು ಇದೇ ಮಾದರಿಯಲ್ಲಿ ಸಾಹಸ ಪ್ರದರ್ಶಿಸಿದರು. ಏಣಿಯ ಮೇಲೆ ನಿಂತು ಮಾಡುವ ಸಾಹಸವನ್ನು ಕಾನ್​​ಸ್ಟೆಬಲ್​ ಸಂಗೀತಾ ಕುಮಾರಿ ನೇತೃತ್ವದಲ್ಲಿ ಮಾಡಲಾಯಿತು. ಇಲ್ಲಿ ಐದು ಮಹಿಳಾ ಯೋಧರು ಬ್ಯಾಲೆನ್ಸ್​ ಮಾಡಿದ್ದು ರೋಚಕವಾಗಿತ್ತು. ಹಾಗೇ, ಕಾನ್​ಸ್ಟೆಬಲ್​ ಸುಮಿತಾ ಸಿಖ್ದರ್​ ನೇತೃತ್ವದಲ್ಲಿ ನಾಲ್ವರು ರೈಡರ್​ಗಳು ಬ್ಯಾಲೆನ್ಸ್​ ಮಾಡಿದರು. ಈ ವೇಳೆ ಮಹಿಳಾ ಕಾನ್​ಸ್ಟೆಬಲ್​ಗಳು ಬೇಟಿ ಪಡಾವೋ, ಬೇಟಿ ಬಚಾವೋ ಎಂಬಿತ್ಯಾದಿ ಸಂದೇಶಗಳ ಬೋರ್ಡ್​ಗಳನ್ನು ಪ್ರದರ್ಶಿಸಿದರು.

ಇದರೊಂದಿಗೆ ಇನ್ನೂ ವಿಧದ ಸ್ಟಂಟ್​ಗಳನ್ನು ಬಿಎಸ್​ಎಫ್​ ಮಹಿಳಾ ಸಿಬ್ಬಂದಿ ಮಾಡಿದರು. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾರತದ ಮಿಲಿಟರಿ ಶಕ್ತಿಯ ಜತೆ ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶನ ನಡೆಯಿತು. ಅದರೊಂದಿಗೆ ಸ್ವಾತಂತ್ರ್ಯ ಬಂದು 75ವರ್ಷ ಆದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಲವು ಉಪಕ್ರಮಗಳನ್ನು ಸೇರಿಸಲಾಗಿತ್ತು. ಕೊವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯೋತ್ಸವಕ್ಕೆ ಆಗಮಿಸಿದವರ ಸಂಖ್ಯೆ ಕಡಿಮೆ ಆಗಿದ್ದು, ಅನೇಕರು ಆನ್​ಲೈನ್​ ಮೂಲಕವೇ ಸಮಾರಂಭ ವೀಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ, ಸಲ್ಯೂಟ್ ಮಾಡಿದ ಸಚಿವ; ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ

Published On - 5:07 pm, Wed, 26 January 22

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ